ಶಿವಮೊಗ್ಗ | ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ: ಅರ್ಜಿ ಆಹ್ವಾನ

ಅರ್ಹ ವಿದ್ಯಾರ್ಥಿಗಳು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕೃತ ವೆಬ್‌ಸೈಟ್ www.klwbapps.karnataka.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ.ಅರ್ಜಿ ಸಲ್ಲಿಸಲು ದಿನಾಂಕ: 31-12-2026 ಕಡೆಯ ದಿನವಾಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು “ಕಾರ್ಮಿಕ ಅಧಿಕಾರಿಗಳವರ ಕಚೇರಿ ಶಿವಮೊಗ್ಗ ಉಪವಿಭಾಗ, ಶಿವಮೊಗ್ಗ ಕಚೇರಿಗೆ ಅಥವಾ ದೂ.ಸಂಖ್ಯೆ 080-234751888277291175 / 82771205059141585402 ನ್ನು ಸಂಪರ್ಕಿಸಬಹುದು ಎಂದು ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ಎಂ ಪಿ ತಿಳಿಸಿದ್ದಾರೆ.

Continue Reading

ಶಿವಮೊಗ್ಗ | ತಹಶೀಲ್ದಾರ್ ಕಾರ್ಯಾಲಯದ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ,ಪರಿಶೀಲನೆ

ಸರ್ಕಾರಿ ಜಮೀನಿನಲ್ಲಿ ಸದ್ಯ 33 ತಾತ್ಕಾಲಿಕ ಶೆಡ್ ಹಾಗೂ ಗುಡಿಸಲುಗಳನ್ನು ನಿರ್ಮಿಸಲಾಗಿದ್ದು, ಇವುಗಳಿಗೆ ಕಡತಗಳಲ್ಲಿ ಕೇವಲ ಮೇಲ್ಛಾವಣಿ ಖಾತೆ ಎಂದು ತಿದ್ದುಪಡಿ ಮಾಡಿ, ಆನಂತರ ಅಮಾಯಕ ಜನರಿಗೆ ಸೈಟ್ ಹಂಚಿಕೆ ಮಾಡಿ ಖಾತೆ ಮಾಡಿಸಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಲು ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ಈ ದಂಧೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಕಚೇರಿಯಿಂದಲೇ ಒಳಗೊಳಗೇ ದಾಖಲೆಗಳನ್ನು ಸಿದ್ಧಪಡಿಸಿಕೊಡಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈ ಒತ್ತುವರಿಯನ್ನು ಸಂಪೂರ್ಣವಾಗಿ ತೆರವುಗೊಳಿಸುವ ನಿಟ್ಟಿನಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಂದಾಯ ಇಲಾಖೆಯ ಪ್ರತಿಯೊಂದು […]

Continue Reading

ಶಿವಮೊಗ್ಗ ಎಸ್ ಪಿ ಹೆಸರಲ್ಲಿ‌ ನಕಲಿ ಫೇಸಬುಕ್ ಅಕೌಂಟ್ ; ಪ್ರತಿಕ್ರಿಯಿಸದಿರಲು ಮನವಿ

ಈ ಕುರಿತು ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ. ಅವರು ಸ್ಪಷ್ಟನೆ ನೀಡಿದ್ದು, ತಮ್ಮ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಫೇಸ್‌ಬುಕ್ ಖಾತೆ ನಕಲಿಯಾಗಿದ್ದು, ಸಾರ್ವಜನಿಕರು ಆ ಖಾತೆಯನ್ನು ಫಾಲೋ ಮಾಡಬಾರದು ಹಾಗೂ ಅಲ್ಲಿಂದ ಬರುವ ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ ಅನುಮಾನಾಸ್ಪದ ಖಾತೆಗಳ ಕುರಿತು ಸಂಬಂಧಿತ ಸಾಮಾಜಿಕ ಜಾಲತಾಣದಲ್ಲಿ ದೂರು ದಾಖಲಿಸುವುದು ಹಾಗೂ ಅಗತ್ಯವಿದ್ದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ‌ ಮಾಡಿದ್ದಾರೆ.

Continue Reading

ಶಿವಮೊಗ್ಗ | ಶಶಿಧರ ಕೆ.ಎಲ್ ಅವರಿಗೆ ಪಿಎಚ್‌ಡಿ ಪದವಿ

ಅವರ ಈ ಶೈಕ್ಷಣಿಕ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಣ್ಣಹನುಮಪ್ಪ ಜಿ., ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಕುಟುಂಬ ವರ್ಗದವರು ಮತ್ತು ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Continue Reading

ಶಿವಮೊಗ್ಗ | ಗಾಂಧೀಜಿಯವರನ್ನು ಮರೆತರೆ, ದೇಶವನ್ನು ಮರೆತಂತೆ | ಎಂ.ಎನ್ ಸುಂದರರಾಜ್

ಅವರು ಹೊಸನಗರ ತಾಲೂಕು ಹಲಗೆರಿ ಮಂಡ್ರಿ ಶ್ರೀ ಚನ್ನಮ್ಮ ಪ್ರೌಢಶಾಲೆಯಲ್ಲಿ ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲ ಮತ್ತು ತಾಲೂಕು ಸರ್ವೋದಯ ಮಂಡಲ ಹೊಸನಗರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಜಿಲ್ಲಾ ಸರ್ವೋದಯ ಮಂಡಲದ ಅಧ್ಯಕ್ಷರಾದ ಆರ್ ಮನೋಹರ ರವರು ಗಾಂಧೀಜಿಯವರು ತಮ್ಮ ವಿದ್ಯಾಭಾಸವನ್ನು ಕಡೆಗಣಿಸದೆ ಬ್ಯಾರಿಸ್ಟರ್ ಆಗಿದನ್ನು ನೆನಪಿಸುತ್ತ ಜೀವನದಲ್ಲಿ ನೀವು ಏನಾದರೂ ಆಗಿ ಆದರೆ ಮೊದಲು ವಿದ್ಯಾವಂತರಾಗಿ ಎಂದು ವಿದ್ಯೆಗೆ ಇರುವ ಮಹತ್ವವನ್ನು ಸಾರಿ ಹೇಳಿದರು. ಶಾಲೆಯ ಮುಖ್ಯೋಪಾಧ್ಯಾಯ ಶಿವಣ್ಣನವರು ಮಾತನಾಡಿ […]

Continue Reading

ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದ ಅವ್ಯವಸ್ಥೆ ತಕ್ಷಣ ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಶಾಸಕರ ಖಡಕ್ ಸೂಚನೆ

ಮೊದಲ ಮಹಡಿಯಲ್ಲಿರುವ ಮಹಾನಗರ ಪಾಲಿಕೆ ಸುಪರ್ದಿಯ ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಇಲ್ಲದಿರುವುದು ಹಾಗೂ ಮಹಿಳಾ ಶೌಚಾಲಯಗಳಿಗೆ ಬಾಗಿಲುಗಳೇ ಇಲ್ಲದಿರುವುದು ಗಂಭೀರ ನಿರ್ಲಕ್ಷ್ಯವೆಂದು ಹೇಳಲಾಗಿದೆ.ಇದಲ್ಲದೆ, ನಿಲ್ದಾಣದಲ್ಲಿರುವ ಲಾಡ್ಜ್ ಸಾರ್ವಜನಿಕರ ಬಳಕೆಗೆ ಯೋಗ್ಯವಾಗದೆ ಸಂಪೂರ್ಣ ಅವ್ಯವಸ್ಥೆಯಲ್ಲಿದ್ದು, ಬಳಕೆಯಾಗದೆ ಇರುವ ಟಾಯ್ಲೆಟ್ ಬಾಕ್ಸ್‌ಗಳನ್ನು ಅಗತ್ಯವಿರುವ ಸ್ಥಳಗಳಿಗೆ ಸ್ಥಳಾಂತರಿಸಬೇಕೆಂಬ ಸಲಹೆಯೂ ವ್ಯಕ್ತವಾಯಿತು. ಸಾರ್ವಜನಿಕರಿಗಾಗಿ ನಿರ್ಮಿಸಿರುವ ಕುಡಿಯುವ ನೀರಿನ ವ್ಯವಸ್ಥೆ ಕಾರ್ಯನಿರ್ವಹಿಸದಿರುವುದು ಮತ್ತು ಹೊಸದಾಗಿ ನಿರ್ಮಿಸಿದ ಕೆಲವು ಶೌಚಾಲಯಗಳಿಗೆ ಬೀಗ ಹಾಕಿ ಸಾರ್ವಜನಿಕ ಬಳಕೆಗೆ ತೆರೆಯದಿರುವುದೂ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.ಪ್ಲಾಟ್‌ಫಾರ್ಮ್ ಮೇಲೆಯೇ ದ್ವಿಚಕ್ರ ವಾಹನಗಳನ್ನು […]

Continue Reading