ಶಿವಮೊಗ್ಗ | ಬೊಲೆರೋ ಪಿಕಪ್​ ವಾಹನ ಕಳ್ಳತನ

ತಕ್ಷಣವೇ ಅಂಗಡಿ ಸಿಬ್ಬಂದಿ ಮೊಹಮದ್ ಅಬ್ದುಲಾ ಈ ವಿಷಯವನ್ನು ವಾಹನ ಮಾಲೀಕರಿಗೆ ತಿಳಿಸಿದ್ದಾರೆ. ಕಳುವಾದ ವಾಹನಕ್ಕಾಗಿ ಅಕ್ಕಪಕ್ಕ ಹಾಗೂ ಎಲ್ಲೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ, ಮಾಲೀಕರು ತುಂಗಾನಗರ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

Continue Reading

ತೀರ್ಥಹಳ್ಳಿ | ಕುಡಿಯುವ ನೀರಿನ ಮೋಟರ್​ ಕಳ್ಳತನ

ಯಾರೋ ಅಪರಿಚಿತ ಕಳ್ಳರು ರಾತ್ರೋರಾತ್ರಿ ಬಾವಿಗೆ ಇಳಿದು ಮೋಟಾರ್‌ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಖಾತ್ರಿಯಾದ ತಕ್ಷಣ, ನೀರುಗಂಟೆಯು ಈ ವಿಷಯವನ್ನು ಪಿ,ಡಿ,ಒ ಅವರಿಗೆ ತಿಳಿಸಿದ್ದಾರೆ. ಕಳ್ಳತನವಾಗಿರುವ ಎರಡು ಮೋಟಾರ್‌ಗಳ ಒಟ್ಟು ಅಂದಾಜು ಮಾರುಕಟ್ಟೆ ಬೆಲೆ ಸುಮಾರು 70,000 ರೂಪಾಯಿಗಳಾಗಬಹುದು ಎಂದು ಅಂದಾಜಿಸಲಾಗಿದೆ. ಮೋಟರ್​​ನ್ನು ಕಳ್ಳತನ ಮಾಡಿರುವ ದುಷ್ಕರ್ಮಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಾನೂನು ರೀತ್ಯ ಕಠಿಣ ಕ್ರಮ ಕೈಗೊಳ್ಳಬೇಕೆಂದು pdo ತೀರ್ಥಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Continue Reading

ಶಿವಮೊಗ್ಗಕ್ಕೆ ನೀಡಬೇಕಿದ್ದ ಹೈಕೋರ್ಟ್ ಪೀಠ ಮಂಗಳೂರಿಗೆ? ; ತೀವ್ರಗೊಂಡ ಹೋರಾಟ

ಇದೇ ವೇಳೆ ರೈತ ಸಂಘದ ನಾಯಕ ಬಸವರಾಜ್ ಮಾತನಾಡಿ, “ಶಿವಮೊಗ್ಗ ಜಿಲ್ಲೆ ಆಡಳಿತಾತ್ಮಕ ಹಾಗೂ ನ್ಯಾಯಾಂಗದ ದೃಷ್ಟಿಯಿಂದ ಪ್ರಮುಖ ಕೇಂದ್ರವಾಗಿದೆ. ಇಲ್ಲಿನ ಜನರ ಅನುಕೂಲತೆ ಪರಿಗಣಿಸದೇ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ನಾವು ಒಪ್ಪುವುದಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಜಿ.ಆರ್. ರಾಘವೇಂದ್ರ ಮಾತನಾಡಿ, “ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಜೂನ್ 1ರಂದು ಮಾನ್ಯ ಮುಖ್ಯಮಂತ್ರಿಗಳು ಶಿವಮೊಗ್ಗ ಭೇಟಿ ನೀಡುವ ಸಂದರ್ಭದಲ್ಲಿ ಮನವಿ ಸಲ್ಲಿಸಿ ಹೈಕೋರ್ಟ್ ಪೀಠವನ್ನು ಶಿವಮೊಗ್ಗದಲ್ಲೇ ಸ್ಥಾಪಿಸುವಂತೆ ಆಗ್ರಹಿಸಲಿದ್ದೇವೆ,” ಎಂದು ತಿಳಿಸಿದರು. […]

Continue Reading

ಶಿವಮೊಗ್ಗ | ಒಂದೇ ಕುಟುಂಬದ ನಾಲ್ವರು Missing..!

ಮೋಹಮ್ಮದ್ ಫಾಜಿಲ್: 35 ವರ್ಷ, 5.6 ಅಡಿ ಎತ್ತರ, ತೆಳ್ಳನೆ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿದ್ದು, ಎದೆಯಲ್ಲಿ ಚರ್ಮಗಂಟು ಇರುತ್ತದೆ. ಮೊಹಮ್ಮದ್ ಆದಿಲ್; 32 ವರ್ಷ, 5.4 ಅಡಿ ಎತ್ತರ, ದಪ್ಪ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿರುತ್ತಾರೆ. ಈ ನಾಲ್ಕು ಜನಗಳ ಬಗ್ಗೆ ಸುಳಿವು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು 08182-261414/ 9972426144 /9480803345/ 6264571710 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Continue Reading

ಶಿವಮೊಗ್ಗ | ನಾಡಿದ್ದು ಮೇ 20ರಂದು ರಾಜ್ಯದಾದ್ಯಂತ ಔಷಧಿ ಅಂಗಡಿಗಳು ಬಂದ್

ನಕಲಿ ಪ್ರಿಸ್ಕ್ರಿಪ್ಷನ್‌ಗಳ ಬಳಕೆ, ಅಸುರಕ್ಷಿತ ಔಷಧಿಗಳ ವಿತರಣೆ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕವನ್ನು ವ್ಯಕ್ತಪಡಿಸಿದರು. ನಕಲಿ, ಕಳಪೆ ಗುಣಮಟ್ಟದ ಔಷಧಗಳು, ಸರಿಯಾದ ರೀತಿಯಲ್ಲಿ ಸಂಗ್ರಹಿಸದ ಔಷಧಿಗಳು ಸರಬರಾಜು ಸರಪಳಿಗೆ ಪ್ರವೇಶಿಸುವ ಅಪಾಯ ಹೆಚ್ಚಾಗಿದೆ. ಇದರಿಂದ ರೋಗಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಯುವಕರು ಆನ್ಲೈನ್ ವೇದಿಕೆಗಳ ಮೂಲಕ ಮಾದಕ ಔಷಧಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತಿಸಬೇಕಿದೆ. ತಮ್ಮ ಸಂಘವು ಸಹ ಈ ಬಗ್ಗೆ ಮಾಹಿತಿ ನೀಡಿದೆ. ಈ ಮೂಲಕ ಸೃಷ್ಟಿಸಲಾದ ಅಥವಾ […]

Continue Reading

ಶಿವಮೊಗ್ಗ | ಫ್ಲವರ್ ಮಾರ್ಕೆಟ್ ಒತ್ತುವರಿ ತೆರವು ಕುರಿತಾದ INSIDE STORY

ಅದೇನಂದರೆ,ಮಹಾನಗರ ಪಾಲಿಕೆ ಪಕ್ಕದ ರಸ್ತೆಯಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿದ್ದ ಹೂವಿನ ಮಾರುಕಟ್ಟೆಯನ್ನು ದಿನಾಂಕ 16 ಮೇ 2026 ರ ಬೆಳಿಗ್ಗೆ ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಸಂಚಾರಿ ಪೊಲೀಸ್ ಸಹಯೋಗದಲ್ಲಿ ಒತ್ತುವರಿ ತೆರುವುಗೊಳಿಸುವ ಮೂಲಕ ಜನಸಾಮಾನ್ಯರು ಸಾರ್ವಜನಿಕರು ಹಾಗೂ ವಾಹನ ಸವರಾರು ಪಾದಚಾರಿಗಳಿಗೆ ಅನುಕೂಲ ಮಾಡಿದರು ಎಂಬ ರೀತಿಯಲ್ಲಿ ಸುದ್ದಿಗಳು ಪ್ರಸಾರಗೊಂಡವು ಆದರೆ ವಾಸ್ತವದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಈ ಒಂದು ಪ್ರಚಾರ ಆಗುತ್ತಿದ್ದರು ಸಹ ವಾಸ್ತವ ವಿಚಾರ ಮುಚ್ಚಿಟ್ಟು ನಮ್ಮ ಕರ್ತವ್ಯ ಶ್ಲಾಘನೇ ಎಂಬಂತೆ ಬಿಂಬಿಸಿದನ್ನ […]

Continue Reading

ಶಿವಮೊಗ್ಗ | ಪರಿಸರ ಪ್ರೇಮ ತಂಡದಿಂದ ಶಾಲೆಗೆ ಬಣ್ಣ ಹಚ್ಚುವ ಕಾರ್ಯಕ್ರಮ

ವಿದ್ಯಾಭ್ಯಾಸವು ವ್ಯಕ್ತಿಯ ಬದುಕನ್ನು ರೂಪಿಸುವ ಶಕ್ತಿ ಹೊಂದಿದ್ದು, ನಿರಂತರ ಪರಿಶ್ರಮ ಮತ್ತು ಶಿಸ್ತಿನಿಂದ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬಹುದೆಂದು ಕಿವಿಮಾತು ಹೇಳಿದರು. ಗ್ರಾಮೀಣ ಭಾಗದ ಮಕ್ಕಳಲ್ಲಿಯೂ ಅಪಾರ ಪ್ರತಿಭೆ ಅಡಗಿದ್ದು, ಸೂಕ್ತ ಮಾರ್ಗದರ್ಶನ ದೊರೆತರೆ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬಹುದೆಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಅವರು ಮಾತನಾಡಿ, ಶಿಕ್ಷಕರು ಕನ್ನಡ ಸಾಹಿತ್ಯದ ಅಧ್ಯಯನಕ್ಕೆ ಹೆಚ್ಚಿನ ಮಹತ್ವ ನೀಡಿ ಮಕ್ಕಳಿಗೆ ಭಾಷೆಯ ಸೊಗಡು, […]

Continue Reading

ಶಿವಮೊಗ್ಗ | ಕನ್ನಡ ರಂಗಭೂಮಿ ಕಲಾವಿದರ ಮಾಹಿತಿ ಸಂಗ್ರಹಕ್ಕೆ ಕರ್ನಾಟಕ ನಾಟಕ ಅಕಾಡೆಮಿ ಆಹ್ವಾನ

ಕಲಾವಿದರು ತಮ್ಮ ಇತ್ತೀಚಿನ ಪಾಸ್ ಪೋರ್ಟ್ ಸೈಜಿನ ಭಾವಚಿತ್ರ,ನಾಟಕದಲ್ಲಿ ಅಭಿನಯಿಸುತ್ತಿರುವ/ಕೆಲಸ ಮಾಡುತ್ತಿರುವ ಶೈಲಿಯ ಛಾಯಾಚಿತ್ರ.ಗರಿಷ್ಠ 300 ಪದಗಳಿಗೆ ಮೀರದಂತೆ (2 ಪುಟಗಳು) ತಮ್ಮ ಸ್ವ-ವಿವರ ಮಾಹಿತಿಯನ್ನು ಸಲ್ಲಿಸಲು ಜೂನ್ 10 ಕೊನೆಯ ದಿನವಾಗಿದೆ. ಆಸಕ್ತರು ತಮ್ಮ ಸಂಪೂರ್ಣ ವಿವರಗಳನ್ನು ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ನೆಲ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ. ರಸ್ತೆ, ಬೆಂಗಳೂರು – 560 002.ದೂರವಾಣಿ ಸಂಖ್ಯೆ: 080 – 22244176 ಈ ವಿಳಾಸಕ್ಕೆ ಅಥವಾ ಇಮೇಲ್ academy.nataka@gmail.com ಮೂಲಕ ಕಳುಹಿಸಬಹುದಾಗಿದೆ […]

Continue Reading