ಶೃಂಗೇರಿ ಶಾಸಕ ಜೀವರಾಜ್‌ ವಿರುದ್ಧದ ಎಫ್ಐಆರ್‌ಗೆ ಹೈಕೋರ್ಟ್‌ ತಡೆ

ಈ ದೂರಿನ ಅನ್ವಯ ಆರೋಪಿಗಳ ವಿರುದ್ಧ; ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 143 (ಅಕ್ರಮ ಕೂಟ), 465 (ಸುಳ್ಳು ದಾಖಲೆ ಸೃಷ್ಟಿ), 468 (ವಂಚಿಸಲು ಸುಳ್ಳು ದಾಖಲೆ ಸೃಷ್ಟಿ), 471 (ಸುಳ್ಳು ದಾಖಲೆಗಳನ್ನು ಅಸಲಿ ಎಂದು ಬಿಂಬಿಸುವುದು), 120ಬಿ (ಪಿತೂರಿ), ಮತ್ತು 149 (ಸಮಾನ ಉದ್ದೇಶ) ಜೊತೆಗೆ ಪ್ರಜಾಪ್ರತಿನಿಧಿ ಕಾಯ್ದೆ–1951ರ ಕಲಂ 136ರ (ಚುನಾವಣಾ ಅಕ್ರಮ) ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಜೀವರಾಜ್‌ ಪರ ಹೈಕೋರ್ಟ್‌ ವಕೀಲೆ ಡಾ.ವಂದನಾ ರೆಡ್ಡಿ ವಕಾಲತ್ತು ವಹಿಸಿದ್ದಾರೆ.

Continue Reading

ಪುತ್ತೂರು | ಬಿಜೆಪಿ ಮುಖಂಡನ ಮಗನ ಅತ್ಯಾಚಾರ ಪ್ರಕರಣ ; ಸಂತ್ರಸ್ತೆಗೆ ಪ್ರತಿ ತಿಂಗಳು ಪಾಲನೆ ಹಣ ನೀಡಲು ಹೈಕೋರ್ಟ್ ಆದೇಶ

ಇಂದು ಕೃಷ್ಣ ಜೆ. ರಾವ್ ಅವರು ಪ್ರಕರಣ ರದ್ದುಪಡಿಸಲು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಈ ಮಧ್ಯಂತರ ಆದೇಶವನ್ನು ನೀಡಿತು.ಇದೇ ವೇಳೆ, ಮೊದಲ ಕಂತಿನ 75 ಸಾವಿರ ರೂಪಾಯಿಯನ್ನು ಒಂದು ವಾರದೊಳಗೆ ಮಗುವಿನ ತಾಯಿಗೆ ಪಾವತಿಸಿ, ನಂತರ ಪ್ರತೀ ತಿಂಗಳು ಪಾವತಿ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ. ಈ ಷರತ್ತಿನ ಆಧಾರದಲ್ಲಿ, ಮುಂದಿನ ಆದೇಶಗಳವರೆಗೆ ಪ್ರಕರಣದ ಎಲ್ಲಾ ಮುಂದಿನ ವಿಚಾರಣೆಗಳನ್ನು ಹೈಕೋರ್ಟ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

Continue Reading

ವಾಹನ ಮಾರಾಟವಾದರೂ `RC’ ಬದಲಾಗದಿದ್ದರೆ ಅಪಘಾತದ ಹೊಣೆ ಹಳೇ ಮಾಲೀಕರದ್ದು ; ಹೈಕೋರ್ಟ್ ಮಹತ್ವದ ಆದೇಶ

ಮಾರತ್‌ಹಳ್ಳಿ ನಿವಾಸಿಯಾಗಿರುವ ಎ. ಸುನೀಲ್ ಕುಮಾರ್ ಎಂಬುವರು ತಾನು ಖರೀದಿಸಿದ್ದ ಬೈಕ್ ಅನ್ನು ತದನಂತರ ತಬ್ರೇಜ್ ಎಂಬುವರಿಗೆ ಮಾರಾಟ ಮಾಡಿದ್ದರು. 2020ರ ಜೂನ್ 18ರಂದು ಈ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಹನುಮಂತ ಎಂಬುವರು ಮೃತಪಟ್ಟಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಕರಣ ಮೃತನ ಕುಟುಂಬಕ್ಕೆ 33.07 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡುವಂತೆ ಹಾಗೂ ಈ ಮೊತ್ತವನ್ನು ಸುನೀಲ್ ಕುಮಾರ್ ಮತ್ತು ತಬ್ರೇಜ್ ಇಬ್ಬರೂ ಜಂಟಿಯಾಗಿ ಪಾವತಿಸುವಂತೆ ಆದೇಶಿಸಿತ್ತು. ನ್ಯಾಯಾಧೀಕರಣದ ಈ ಆದೇಶವನ್ನು ಪ್ರಶ್ನಿಸಿ ವಾಹನದ ಮಾಲೀಕ […]

Continue Reading

ಶೃಂಗೇರಿ ವಿಧಾನಸಭಾ ಚುನಾವಣೆಯ ಪೋಸ್ಟಲ್ ಬ್ಯಾಲೆಟ್ ಮತಗಳ ಮರು ಪರಿಶೀಲಿಸಿ ; ಹೈಕೋರ್ಟ್ ಆದೇಶ

ಆದೇಶ ಪ್ರಕಟವಾಗುತ್ತಿದ್ದಂತೆ ರಾಜೇಗೌಡ ಪರ ವಕೀಲರು, ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಚುನಾವಣೆ ಫಲಿತಾಂಶವನ್ನು ರದ್ದುಗೊಳಿಸಿಲ್ಲ ಎಂದು ತಿಳಿಸಿತು. ಅಲ್ಲದೆ, ಈ ಆದೇಶಕ್ಕೆ ಎರಡು ವಾರಗಳ ಕಾಲ ತಡೆ ನೀಡಿ ಆದೇಶಿಸಿತು. ಅರ್ಜಿದಾರರ ಪರ ವಕೀಲರಾದ ಪಿ. ಎಲ್. ವಂದನಾ ವಕಾಲತ್ತು ವಹಿಸಿದ್ದರು. ಪ್ರಕರಣದ ಹಿನ್ನೆಲೆ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಿಂದ ಡಿ. ಟಿ. ರಾಜೇಗೌಡ 201 ಮತಗಳಿಂದ ಜಯಶಾಲಿಯಾಗಿದ್ದರು. ಆದರೆ, ಪೋಸ್ಟಲ್ ಬ್ಯಾಲೆಟ್​ನಲ್ಲಿ 1811 ಮತದಾನ ನಡೆದಿದ್ದು, […]

Continue Reading

ಶಿವಮೊಗ್ಗ | ಸುಲ್ತಾನ್ ಡೈಮಂಡ್ & ಗೋಲ್ಡ್ ಜಾಗ ಪಾಲಿಕೆ ವಶಕ್ಕೆ ಪಡೆಯುವಂತೆ ಹೈಕೋರ್ಟ್ ಆದೇಶ

ಆದ್ದರಿಂದ, ಈ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಹೆಚ್ಚಿನ ಮೊಕದ್ದಮೆ ನಡೆಯದಂತೆ ನೋಡಿಕೊಳ್ಳಲು ಪಕ್ಷಗಳು ಷರತ್ತುಗಳನ್ನು ಹಾಕುವುದು ಅವಶ್ಯಕ. ಮೇಲೆ ತಿಳಿಸಲಾದ ಅಲ್ಪವಿರಾಮವನ್ನು ಗಮನದಲ್ಲಿಟ್ಟುಕೊಂಡು, ಈ ನ್ಯಾಯಾಲಯವು ಪ್ರತಿವಾದಿ ಸಂಖ್ಯೆ 4 ರ ಹೆಸರಿನಲ್ಲಿರುವ ಪ್ರಶ್ನಾರ್ಹ ಆಸ್ತಿಯ ಆಸ್ತಿ ರಿಜಿಸ್ಟರ್‌ನಲ್ಲಿ ಸೂಕ್ತ ವಿಚಾರಣೆಗಳನ್ನು ನಡೆಸುವಂತೆ ಮತ್ತು ಅರ್ಜಿದಾರರು ಸ್ವಾಧೀನದಲ್ಲಿದ್ದರೆ ಅವರಿಂದ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸುತ್ತದೆ. ಅರ್ಜಿದಾರರು ಮತ್ತು ಅವರ ಪೂರ್ವವರ್ತಿಗಳು ಯಾವುದೇ ನ್ಯಾಯಾಲಯ ಅಥವಾ ಇತರ ಪ್ರಾಧಿಕಾರದ ಮುಂದೆ ಈ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ […]

Continue Reading