ಶಿವಮೊಗ್ಗ | ಪೇಸ್ ಕಾಲೇಜಿನ ಮಹಿನ್ ಖಾನ್ ಜಿಲ್ಲೆಗೆ ಪ್ರಥಮ

ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ ತಂದೆ ಜಬೀರ್, “ತುಂಬಾ ಸಂತೋಷವಾಗಿದೆ. ಅವಳು ಬಹಳ ಪರಿಶ್ರಮ ಪಟ್ಟಿದ್ದಾಳೆ. ವೈದ್ಯೆಯಾಗುವ ಕನಸು ಕಂಡಿದ್ದು, ಅದಕ್ಕೆ ನಾವು ಸಂಪೂರ್ಣ ಪ್ರೋತ್ಸಾಹ ನೀಡುತ್ತಿದ್ದೇವೆ. ಓದಿನ ಮೇಲೆ ಅವಳ ಶ್ರದ್ದೆ ಈ ಸಾಧನೆಗೆ ಕಾರಣವಾಗಿದೆ,” ಎಂದಿದ್ದಾರೆ. ವಿಷಯವಾರು ಅಂಕಗಳು:ಇಂಗ್ಲಿಷ್ – 98,ಹಿಂದಿ- 100,ಫಿಜಿಕ್ಸ್ – 100,ಕೆಮಿಸ್ಟ್ರಿ – 99,ಗಣಿತ – 100 -ಜೀವಶಾಸ್ತ್ರ – 99 ಅಂಕ ಪಡೆದಿದ್ದಾರೆ.

Continue Reading

ಶಿವಮೊಗ್ಗ | ಹಿಂದಿ ವಿಷಯಕ್ಕೆ ಗ್ರೇಡ್​​ ಪದ್ಧತಿ ಬೇಡ, ಅಂಕಗಳೇ ಇರಲಿ ; ಶಿಕ್ಷಕರ ಸಂಘದ ಮನವಿ

ಕರ್ನಾಟಕದಲ್ಲಿ ಈ ನಿರ್ಧಾರದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯಿಂದ ಸರ್ಕಾರವು ತನ್ನ ನಿರ್ಧಾರವನ್ನು ಹಿಂಪಡೆದು, ಮೊದಲಿನಂತೆಯೇ ಅಂಕ ಆಧಾರಿತ ಮೌಲ್ಯಮಾಪನ ಪದ್ಧತಿಯನ್ನು ಮುಂದುವರಿಸಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.

Continue Reading

ವಾಹನ ಮಾರಾಟವಾದರೂ `RC’ ಬದಲಾಗದಿದ್ದರೆ ಅಪಘಾತದ ಹೊಣೆ ಹಳೇ ಮಾಲೀಕರದ್ದು ; ಹೈಕೋರ್ಟ್ ಮಹತ್ವದ ಆದೇಶ

ಮಾರತ್‌ಹಳ್ಳಿ ನಿವಾಸಿಯಾಗಿರುವ ಎ. ಸುನೀಲ್ ಕುಮಾರ್ ಎಂಬುವರು ತಾನು ಖರೀದಿಸಿದ್ದ ಬೈಕ್ ಅನ್ನು ತದನಂತರ ತಬ್ರೇಜ್ ಎಂಬುವರಿಗೆ ಮಾರಾಟ ಮಾಡಿದ್ದರು. 2020ರ ಜೂನ್ 18ರಂದು ಈ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಹನುಮಂತ ಎಂಬುವರು ಮೃತಪಟ್ಟಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಕರಣ ಮೃತನ ಕುಟುಂಬಕ್ಕೆ 33.07 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡುವಂತೆ ಹಾಗೂ ಈ ಮೊತ್ತವನ್ನು ಸುನೀಲ್ ಕುಮಾರ್ ಮತ್ತು ತಬ್ರೇಜ್ ಇಬ್ಬರೂ ಜಂಟಿಯಾಗಿ ಪಾವತಿಸುವಂತೆ ಆದೇಶಿಸಿತ್ತು. ನ್ಯಾಯಾಧೀಕರಣದ ಈ ಆದೇಶವನ್ನು ಪ್ರಶ್ನಿಸಿ ವಾಹನದ ಮಾಲೀಕ […]

Continue Reading

ಶಿವಮೊಗ್ಗ | ತೋಟದ ಬಳಿ ಯುವಕನ ಶವ ಪತ್ತೆ

ಘಟನಾ ಸ್ಥಳಕ್ಕೆ ಸೋಕೋ ತಂಡ ಹಾಗೂ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಘಟನೆಯ ಕುರಿತಾಗಿ ಮುಂಜುನಾಥ್​ ಅಕ್ಕ ಲಕ್ಷ್ಮೀದೇವಿ ಸುದ್ದಿಗಾರರೊಂದಿಗೆ ಮಾತನಾಡಿ ನನ್ನ ತಮ್ಮನ ಸಾವಿಗೆ ಆತನ ಗೆಳೆಯ ಸಂತೋಷ್​ ಕಾರಣ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಮಂಜುನಾಥ್ ಬಳಿ ಸುಮಾರು 20 ರಿಂದ 30 ಸಾವಿರ ಹಣವಿದ್ದು, ಅದನ್ನು ಖರ್ಚು ಮಾಡಿಸುವ ಉದ್ದೇಶದಿಂದ ಆತನ ಗೆಳೆಯ ಸಂತೋಷ್ ನಿನ್ನೆ ಬೆಳಿಗ್ಗೆ ಮನೆಗೆ ಬಂದು ಆತನನ್ನು ಕರೆದುಕೊಂಡು ಹೋಗಿದ್ದನು ಎಂದು ಅವರು ತಿಳಿಸಿದ್ದಾರೆ. ಮಂಜುನಾಥ್ ಬಳಿ […]

Continue Reading

ಹೊಸಪೇಟೆ ಯುವಕರಿಗೆ ಸಿಕ್ಕ RCB ಚೆಂಡು

ಇವುಗಳ ಆರಂಭದ ಬೆಲೆಯೇ 15,000 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಈ ಕೂಕಬುರ್ರಾ ಟರ್ಫ್ ವೈಟ್ ಬಾಲ್‌ಗಳು T20 ಪಂದ್ಯಗಳಲ್ಲಿ ಕಣ್ಣಿಗೆ ಸ್ಪಷ್ಟವಾಗಿ ಕಾಣುವಂತೆ ವಿಶೇಷವಾಗಿ ವಿನ್ಯಾಸ ಮಾಡಲಾಗಿರುತ್ತದೆ. ಈ ಚೆಂಡುಗಳಿಗೆ ನಾಲ್ಕು ಬಾರಿ ಚರ್ಮದಿಂದ ಆವೃತ ಮಾಡಲಾಗಿದ್ದು ತುಂಬಾ ಬಲಿಷ್ಠವಾಗಿರುತ್ತವೆ. ಐಪಿಎಲ್‌ ಪಂದ್ಯಗಳಲ್ಲಿ ಬಳಕೆ ಮಾಡುವ ಚೆಂಡುಗಳು ಅತ್ಯಂತ ದುಬಾರಿ ಆಗಿದ್ದರೂ ಕಡಿಮೆ ಗುಣಮಟ್ಟದಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ. 450 ರಿಂದ 1,500 ರೂಪಾಯಿಗಳಿಗೆ ಲಭ್ಯ ಇರುವ ಈ ಬಾಲ್‌ಗಳನ್ನು ಕೇವಲ ಅಭ್ಯಾಸದ ಸಮಯದಲ್ಲಿ ಉಪಯೋಗಿಸಲಾಗುತ್ತದೆ. ಅಧಿಕೃತವಾಗಿ ಪಂದ್ಯಗಳಿಗೆ […]

Continue Reading

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ

2025-26ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ- 1 ಫೆಬ್ರವರಿ 28ರಿಂದ ಆರಂಭವಾಗಿ ಮಾರ್ಚ್ 17ರವರೆಗೆ ನಡೆಯಿತು. ರಾಜ್ಯದ 1,217 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದವು. 5,174 ಕಾಲೇಜುಗಳ 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿ ಕೊಂಡಿದ್ದರು. ಕಲಾ ವಿಭಾಗದಲ್ಲಿ 1.42 ಲಕ್ಷ, ವಿಜ್ಞಾನ ವಿಷಯದಲ್ಲಿ 2.92 ಲಕ್ಷ, ವಾಣಿಜ್ಯದಲ್ಲಿ 2.11 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆಳ್ವಾಸ್ಗೆ ಮೊದಲ ರ್ಯಾಂಕ್ ಇದೇ ಪ್ರಥಮ ಬಾರಿಗೆ ದಾಖಲೆಯ ಶೇ. 86ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ. ರಾಜ್ಯಕ್ಕೆ ಮೂಡಬಿದರೆಯ ಆಳ್ವಾಸ್ […]

Continue Reading

ಶಿವಮೊಗ್ಗದಲ್ಲಿ ಅಪ್ಪ ಮಂತ್ರಿ ..!!?? ಮಗ ಎಂಎಲ್ಎ…!!??

ಅಧಿಕಾರಿಗಳಿಗೆ ಈ ರೀತಿ ರಸ್ತೆಯಲ್ಲಿ ಅವಮಾನವಾಗುತ್ತಿದ್ದರು ಶಿವಮೊಗ್ಗ ಪಾಲಿಕೆ ಆಯುಕ್ತರು ತಮಗೇನು ಸಂಬಂಧವಿಲ್ಲದ ಹಾಗೆ ಸುಮ್ಮನಿದ್ದಾರೆ. ಪಾಲಿಕೆ ಆಯುಕ್ತರಿಗೆ ಕಟ್ಟುನಿಟ್ಟಾಗಿ ಉಸ್ತುವಾರಿ ಸಚಿವರು ಕಟ್ಟುನಿಟ್ಟಾಗಿ ಈ ಸಂಬಂಧ ತಿಳುವಳಿಕೆ ನೀಡಬೇಕಾಗಿದೆ. ಇನ್ನು ಮಹಾನಗರ ಪಾಲಿಕೆ ಇಂಜಿನಿಯರ್, ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆ ತಿಳಿದು ಕೆಲಸ ಮಾಡುವುದಿಲ್ಲವೇ? ಅವರ ಕೆಲಸ ಅವರು ಮಾಡುತ್ತಾರೆ ಆದರೆ ಈ ರೀತಿ ಕಾಂತೇಶ್ ತಮ್ಮ ರಾಜಕೀಯ ಬೇಳೆಕಾಳು ಬೇಯಿಸಿಕೊಳ್ಳುವುದಕ್ಕಾಗಿ ನಡೆಸುತ್ತಿರುವ ಅವರ ವರ್ತನೆ ಅಧಿಕಾರಿಗಳ ವಲಯದಲ್ಲಿ ಬೇಸರ ತರಿಸಿದೆ. ಯಾರೋ ಅಧಿಕಾರಿಯು ಅಲ್ಲದೆ ಜನಪ್ರತಿನಿಧಿಯು […]

Continue Reading

ಶಿವಮೊಗ್ಗ | ತುಂತುರು ರೆಸಾರ್ಟ್ ಮಾಲೀಕ ಸೇರಿ ಮೂವರ ವಿರುದ್ಧ ದಾಖಲಾಯಿತು FIR

ಕಳೆದ ಸೋಮವಾರ ರೆಸಾರ್ಟ್‌ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ನಾಗಮ್ಮ ಅವರು ಅಡುಗೆ ಬಡಿಸುವ ಮತ್ತು ಶುಚಿಗೊಳಿಸುವ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಸ್ಟೇಜ್ ಅಲಂಕಾರ ಮತ್ತು ಲೈಟಿಂಗ್ ವ್ಯವಸ್ಥೆಯಲ್ಲಿನ ನಿರ್ಲಕ್ಷ್ಯದಿಂದಾಗಿ ಹರಿದ ವಿದ್ಯುತ್, ರೆಸಾರ್ಟ್‌ನ ಮುಳ್ಳುತಂತಿ ಬೇಲಿಗೆ ಪ್ರವಹಿಸಿತ್ತು. ಕೆಲಸ ಮಾಡುತ್ತಿದ್ದ ನಾಗಮ್ಮ ಅವರು ಆಕಸ್ಮಿಕವಾಗಿ ಮುಳ್ಳುತಂತಿ ಮುಟ್ಟಿದಾಗ ತೀವ್ರವಾಗಿ ವಿದ್ಯುತ್ ಶಾಕ್ ತಗುಲಿದೆ.ತಕ್ಷಣ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ರೆಸಾರ್ಟ್ ಮಾಲೀಕರು ಮತ್ತು ಅಲಂಕಾರಿಕ ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ […]

Continue Reading

ಶಿವಮೊಗ್ಗ | ಸಂಚಾರಿ ಪೊಲೀಸರಿಂದ ಜನಸಾಮಾನ್ಯರಿಗೆ, ಆಟೋಗಳ ದಬ್ಬಾಳಿಕೆಯಿಂದ ಈ ಒಂದು ಮುಕ್ತಿ ಬೇಕಿದೆ..!

ಆಟೋ ಮೀಟರ್ ಕಡ್ಡಾಯವಾಗಿ ಬಳಸಬೇಕು ಎಂಬುದೇನೋ ನಗರದಲ್ಲಿ ಜಾರಿಯಲ್ಲಿದೆ ಆದರೆ ಯಾವ ಆಟೋಗಳು ಕಡ್ಡಾಯವಾಗಿ ಮೀಟರ್ ಅಳವಡಿಸಿ ಚಾಲನೆ ಮಾಡುತ್ತಿಲ್ಲವೆಂಬುದು ಕೂಡ ಟ್ರಾಫಿಕ್ ಪೊಲೀಸ್ ಇಲಾಖೆಯ ಗಮನಕ್ಕೆ ತಿಳಿದಿರುವುದೇ ಆಗಿದೆ. ಹಾಗೂ ಎಷ್ಟೋ ಆಟೋಗಳ ಬಳಿ ಸರಿಯಾದ ದಾಖಲೆಗಳೆ ಇಲ್ಲದಾಗಿದೆ.ಆದರೆ ಅದೇನೋ ಗೊತ್ತಿಲ್ಲ ಟ್ರಾಫಿಕ್ ಪೊಲೀಸ್ ಇಲಾಖೆ ಮಾತ್ರ ದಾಖಲೆ ಪರಿಶೀಲನೆಗೆ ಮುಂದಾಗುತ್ತಿಲ್ಲ ಅದು ಯಾವ ಒತ್ತಡ ಇದೆಯೋ ಅವರೇ ತಿಳಿಸಬೇಕಾಗಿದೆ. ಶಿವಮೊಗ್ಗದಲ್ಲಿರುವ ಆಸ್ಪತ್ರೆಗಳ ಬಳಿ ಇರುವ ಆಟೋ ಸ್ಟಾಂಡ್ ಗಳು ರೋಗಿಗಳು ಆಸ್ಪತ್ರೆಯಲ್ಲಿ ಒಂದು ಕಡೆ […]

Continue Reading

ಜ್ಯೋತಿಷಿ ಕಮಲಾಕರ್‌ ಭಟ್‌ ಶಿವಮೊಗ್ಗ ಪೊಲೀಸರ ವಶಕ್ಕೆ

ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯನ್ನು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ. ​ನ್ಯಾಯಾಲಯದ ಆದೇಶದ ಬೆನ್ನಲ್ಲೇ ತುಂಗಾನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Continue Reading