ರೈಲುಗಳ ಸಂಚಾರ ರದ್ದು, ಭಾಗಶಃ ರದ್ದು, ನಿಯಂತ್ರಣ ಹಾಗೂ ಮರು ವೇಳಾಪಟ್ಟಿ

ನಿಯಂತ್ರಣ ಮಾ. 10 ರಂದು ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ (16206) ಮಾರ್ಗಮಧ್ಯೆ 25 ನಿಮಿಷ ನಿಯಂತ್ರಣವಾಗಲಿದೆ. ಮಾ. 16 ರಂದು ಮೈಸೂರು–ಅರಸೀಕೆರೆ ಪ್ಯಾಸೆಂಜರ್ (56266) 70 ನಿಮಿಷ ಹಾಗೂ ಮೈಸೂರು–ಯಶವಂತಪುರ ಎಕ್ಸ್‌ಪ್ರೆಸ್ (16208) 30 ನಿಮಿಷ ಮಾರ್ಗಮಧ್ಯೆ ತಡೆಹಿಡಿಯಲಾಗುವುದು. ಸಮಯ ಮರುನಿಗದಿ: ಮಾರ್ಚ್ 10ರಂದು ಅರಸೀಕೆರೆ–ಮೈಸೂರು ಪ್ಯಾಸೆಂಜರ್ (56267) ಮತ್ತು ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (16225) ರೈಲುಗಳು ನಿಗದಿತ ಸಮಯಕ್ಕಿಂತ 90 ನಿಮಿಷ ತಡವಾಗಿ ಹೊರಡಲಿವೆ.ಅದೇ ರೀತಿ, ಮಾರ್ಚ್ 16ರಂದು ಅರಸೀಕೆರೆ–ಮೈಸೂರು ಪ್ಯಾಸೆಂಜರ್ (56265) ಮತ್ತು ಮೈಸೂರು–ಎಸ್‌ಎಂವಿಟಿ ಬೆಂಗಳೂರು […]

Continue Reading

ಶಿವಮೊಗ್ಗ | KSRTC ಇಲಾಖೆಗೆ ಸರ್ಜರಿ ಮಾಡುವ ಮೂಲಕ ಪ್ರಯಾಣಿಕರಿಗೆ ಶಕ್ತಿ ಯೋಜನೆಯ ಸದುಪಯೋಗ ಮಾಡಿಕೊಡಲಿದ್ದಾರೆಯೇ? ಸಚಿವ ರಾಮಲಿಂಗ ರೆಡ್ಡಿ

KSRTC ಬಸ್ ಗಳು ಎಂದಿನಂತೆ ಪ್ರಯಾಣಿಕರು ಶಿವಮೊಗ್ಗ-ಭದ್ರಾವತಿ ದಿನ ನಿತ್ಯ ಸಂಚಾರ ಮಾಡುವ ನಗರ ಸಾರಿಗೆ KSRTC ಬಸ್ ಸ್ಟಾಪ್ ಗಳಲ್ಲಿ ಕಾಯುತ್ತಿದ್ದಾಗ ಸಮಯಕ್ಕೆ ಸರಿಯಾಗಿ ಬಸ್ ಗಳು ಬರುವುದಿಲ್ಲ. ಬಂದಂತ ಬಸ್ ಗಳು ಒಮ್ಮೆಲೇ ಎರಡು ಮೂರು ಒಟ್ಟಿಗೆ ಬಂದರೆ, ಗಂಟೆಗಟ್ಟಲೆ ಬಸ್ ಬಸ್ ಬರುವುದಿಲ್ಲ ಹಾಗೂ ಎಷ್ಟೋ ಹೊತ್ತು ಕಾಯುತ್ತ ನಿಂತಿದ್ದಾಗ ಬರುವಂತ ಬಸ್ ಗಳು ನಿಲ್ಲಿಸುವುದೇ ಇಲ್ಲ. ಈ ಬಿರು ಬೇಸಿಗೆಯಲ್ಲಿ ಮಹಿಳೆಯರು ಮಕ್ಕಳು ವಯೋ ವೃದ್ಧರು ಬಡ ಕೂಲಿ ಕಾರ್ಮಿಕರು ಬಾಣಂತಿಯರು, […]

Continue Reading

ಶಿವಮೊಗ್ಗ | ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಬೈಕ್ ರ‍್ಯಾಲಿ ; ಮನೆಯ ಕುಟುಂಬ ಸದಸ್ಯರಿಗಾಗಿ ಹೆಲ್ಮೆಟ್ ಧರಿಸಿ : ಎಸ್ಪಿ ನಿಖಿಲ್

ಅದರಲ್ಲೂ ಹೆಲ್ಮೆಟ್ ಕಡ್ಡಾಯವಾಗಿ ಎಲ್ಲಾ ವಾಹನ ಸವಾರರು ಧರಿಸಲೇಬೇಕಾಗಿದ್ದು, ಹಿಂದೆ ಕೂರುವವರು ಕೂಡ ಧರಿಸಲೇಬೇಕು. ನಿಮಗಾಗಿ ಅಲ್ಲದೇ, ನಿಮ್ಮ ಮನೆಯ ಕುಟುಂಬ ಸದಸ್ಯರಿಗಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದು ಸೂಕ್ತ ಎಂದರು. ನಿಮ್ಮ ಈ ಜನ ಜಾಗೃತಿ ರ್ಯಾಲಿ ನೋಡಿಯಾದರೂ, ಇತರರು ಹೆಲ್ಮೆಟ್ ಧರಿಸುವಂತಾಗಲಿ ಎಂದು ಹಾರೈಸಿದರು. ಇನ್ನು ಮಹಿಳಾ ದಿನಾಚರಣೆ ದಿನದಂದೇ ಹೆಲ್ಮೆಟ್ ಜಾಗೃತಿ ಅಭಿಯಾನ ನಡೆಸುತ್ತಿರುವುದಕ್ಕೆ ಶ್ಲಾಘಿಸಿದರು. ಅನೇಕ ಅಪಘಾತ ಪ್ರಕರಣಗಳಲ್ಲಿ ಹೆಲ್ಮೆಟ್ ಪ್ರಮುಖ ಪಾತ್ರ ವಹಿಸಿರುವುದು ನಮ್ಮ ಕಣ್ಣ ಮುಂದೆ ಇದೆ. ಜೀವ […]

Continue Reading

ರಾಜ್ಯದ ಜನರ ಆರೋಗ್ಯದ ಜತೆಗೆ ಸರ್ಕಾರ ಚೆಲ್ಲಾಟ : ಡಾ.ಧನಂಜಯ ಸರ್ಜಿ ಆರೋಪ

ಔಷಧಗಳನ್ನು ಪೂರೈಸಬೇಕಾದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (KSMSCL) ಸಂಪೂರ್ಣವಾಗಿ ಹಳಿ ತಪ್ಪಿದೆ. ನಾಳೆಯಿಂದ ಎಲ್ಲಾ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ ಈ ರೀತಿ ಜನರ ಆರೋಗ್ಯದ ಜತೆಗೆ ಸರ್ಕಾರ ಆಟವಾಡುತ್ತಿರುವುದು ಎಷ್ಟು ಸರಿ ಎಂದು ಕೇಳಿದರು. ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ 14 ಕೋಟಿ ಓ.ಪಿ.ಡಿ ಮತ್ತು ಐ.ಪಿ.ಡಿ ರೋಗಿಗಳ ತಪಾಸಣೆ ಆಗಿದೆ, 2024-25ರಲ್ಲಿ 15 ಕೋಟಿ ರೋಗಿಗಳ ತಪಾಸಣೆ ಆಗಿದೆ , 2025-26 ರಲ್ಲಿ 15 ರಿಂದ 16 ಕೋಟಿ ಅಂದಾಜಿಸಲಾಗಿದೆ, ಹಿಂದಿನ ವರ್ಷ ಮತ್ತು […]

Continue Reading

ಮಹಿಳಾ ದಿನಕ್ಕೆ ಕೇಂದ್ರ ಸರ್ಕಾರದಿಂದ LPG ಸಿಲಿಂಡರ್ ದರ ಏರಿಕೆಯ ಉಡುಗೊರೆ : ಡಿಕೆಶಿ ವ್ಯಂಗ್ಯ

ಕೇಂದ್ರ ಸರ್ಕಾರಕ್ಕೆ ಈ ದೇಶದ ‘ಸಹೋದರಿಯರ’ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಕೂಡಲೇ ಈ ಸಿಲಿಂಡರ್ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

Continue Reading

ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ ; ಕಾಂಗ್ರೆಸ್‌ ಉಸ್ತುವಾರಿ ಸಮಿತಿ ರಚನೆ, ಸಚಿವ ಮಧು ಬಂಗಾರಪ್ಪ ಸೇರಿ 31 ಮಂದಿಗೆ ಜವಾಬ್ದಾರಿ

ಶಾಮನೂರು ಶಿವಶಂಕರಪ್ಪ ನಿಧನದ ಬಳಿಕ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ವೈಎಸ್ ಮೇಟಿ ನಿಧನದ ಬಳಿಕ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ತೆರವಾಗಿದ್ದವು. ಮುಂದಿನ 2-3 ತಿಂಗಳಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಮುಂದಾಗಿದೆ. ಈ ಹಿನ್ನೆಲೆ ಉಸ್ತುವಾರಿ ಸಮಿತಿ ನೇಮಕ ಮಾಡಲಾಗಿದೆ. ಈ ಸಮಿತಿಯು ಅಭ್ಯರ್ಥಿಗಳ ಆಯ್ಕೆ, ಅಭ್ಯರ್ಥಿಗಳ ಗೆಲುವಿನ ಕಾರ್ಯತಂತ್ರ ರೂಪಿಸುವ ಬೇಕಿದೆ.ಈ ಬಗ್ಗೆ ಆದೇಶ ಹೊರಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ” ದಾವಣಗೆರೆ ದಕ್ಷಿಣ, ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ, […]

Continue Reading

ನವಜಾತ ಶಿಶುವಿನ ಶವವನ್ನು ರಟ್ಟಿನ ಪೆಟ್ಟಿಗೆಯೊಳಗಿಟ್ಟು ಹಳ್ಳಿಗೆ ತಂದ ಪಾಲಕರು

ಕನಿಷ್ಠ ಪಕ್ಷ ಮಗುವಿನ ಶವವನ್ನು ಗ್ರಾಮಕ್ಕೆ ಸಾಗಿಸಲು ಆಂಬ್ಯುಲೆನ್ಸ್ ಅಥವಾ ಇತರ ವಾಹನದ ವ್ಯವಸ್ಥೆ ಮಾಡಿಕೊಡುವಂತೆ ಅಸಹಾಯಕ ತಂದೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೂ ಆಸ್ಪತ್ರೆ ಸಿಬ್ಬಂದಿ ಕಿವಿಗೊಡಲಿಲ್ಲ. ಬಳಿಕ ತಮ್ಮ ಶಿಶುವಿನ ಶವವನ್ನು ಹತ್ತಿರದಲ್ಲಿದ್ದ ಖಾಲಿ ರಟ್ಟಿನ ಪೆಟ್ಟಿಗೆಯೊಳಗಿಟ್ಟೇ ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಈ ಘಟನೆಯನ್ನು ನೋಡಿದ ಗ್ರಾಮಸ್ಥರು ಕಣ್ಣೀರು ಹಾಕಿದರು. ಆಸ್ಪತ್ರೆ ಸಿಬ್ಬಂದಿ ಮಾನವೀಯ ನೆಲೆಯಲ್ಲಿ ಶವವನ್ನು ಗೌರವಯುತವಾಗಿ ಮನೆಗೆ ಸಾಗಿಸಲು ವ್ಯವಸ್ಥೆ ಮಾಡಬಹುದಿತ್ತು ಎಂದು ಆಕ್ರೋಶ ಹೊರಹಾಕಿದರು. ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆ […]

Continue Reading

ಶಿವಮೊಗ್ಗ | ಬಿಟಿವಿ ಜಿಲ್ಲಾ ವರದಿಗಾರ ಅನಿಲ್ ಇನ್ನಿಲ್ಲ

ಮೃತ ಪತ್ರಕರ್ತ ಅನಿಲ್ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಮತ್ತೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಚಿಂತಾಜನಕ ಸ್ಥಿತಿ ತಲುಪಿದ್ದರು. ಅನಿಲ್ ಅವರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಈ ಮೊದಲು ಟಿವಿ9 ಚಿಕ್ಕಮಗಳೂರು ಜಿಲ್ಲಾ ಕ್ಯಾಮರಾಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅನಿಲ್ ನಂತರ ಬಿಟಿವಿಗೆ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅನಿಲ್ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಘಟಕ ಹಾಗೂ ಪತ್ರಕರ್ತರ ಬಳಗ ತೀವ್ರ ಸಂತಾಪ‌ […]

Continue Reading