ಸಿಎಂ ಸಿದ್ದರಾಮಯ್ಯರಿಂದ ರಾಜೀನಾಮೆ ನಿರ್ಧಾರ ಘೋಷಣೆ..!

ಬ್ರೇಕ್​ಫಾಸ್ಟ್​ ಸಭೆಯಲ್ಲಿ ನಾಯಕತ್ವ ಬದಲಾವಣೆ ಸಂಬಂಧ ಚರ್ಚೆ ನಡೆಯಿತು. ಸುಗಮ ಅಧಿಕಾರ ಹಸ್ತಾಂತರ ನಿಟ್ಟಿನಲ್ಲಿ, ಒಗ್ಗಟ್ಟಿನ ಸಂದೇಶ ಸಾರಲು ಹಾಗೂ ಪರಸ್ಪರ ವಿಶ್ವಾಸ ಮೂಡಿಸಲು ಉಭಯ ನಾಯಕರ ಬ್ರೇಕ್ ಫಾಸ್ಟ್ ಸಭೆ ಆಯೋಜನೆಯಾಗಿತ್ತು.ಉಪಹಾರ ಕೂಟದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹಸಚಿವ ಜಿ.ಪರಮೇಶ್ವರ್​, ಸಚಿವರಾದ ಎಂ.ಸಿ.ಸುಧಾಕರ್, ಬೈರತಿ ಸುರೇಶ್, ಸಂತೋಷ್ ಲಾಡ್, ಸಚಿವ ರಾಮಲಿಂಗ ರೆಡ್ಡಿ ಇತರರು ಭಾಗವಹಿಸಿದ್ದರು. ಸಚಿವರ ಉಪಹಾರ ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಸಿದ್ದರಾಮಯ್ಯ ಪ್ರಕಟಿಸಿದರು. ದೆಹಲಿಯಲ್ಲಿ ಹೈಕಮಾಂಡ್ ಜೊತೆ ನಡೆದ ಸಭೆಯ […]

Continue Reading

ಭದ್ರಾವತಿ | ಭೀಕರ ಅಪಘಾತದಲ್ಲಿ ಓರ್ವ ಮೃತ್ಯು

ಕಾರು ವೇಗವಾಗಿ ಮರಕ್ಕೆ ಗುದ್ದಿದ ಪರಿಣಾಮ ಕಾರು ನುಜ್ಜುಗುಜ್ಜಾಗಿದೆ. ಕಾರಿನ ಎಂಜಿನ್ ಮತ್ತಿತರೆ ಭಾಗಗಳು ಮುರಿದು ಹೊರ ಬಂದು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Continue Reading

ದೀದಿಗೆ ಬಿಗ್ ಶಾಕ್! ತೃಣಮೂಲ ಕಾಂಗ್ರೆಸ್ ನ 50 ಶಾಸಕರು, 20 ಸಂಸದರು ಬಿಜೆಪಿ ಸೇರ್ಪಡೆ?

ಬರಾಸತ್ ಕ್ಷೇತ್ರದ ಟಿಎಂಸಿ ಸಂಸದೆಯಾದ ಕಾಕೋಲಿ ಘೋಷ್ ದಸ್ತಿದಾರ್ ಮತ್ತು ಇನ್ನೂ ಸುಮಾರು ಆರು ಟಿಎಂಸಿ ಶಾಸಕರು ರಾಜ್ಯದ ಮುಖ್ಯಮಂತ್ರಿಯಾದ ಸುವೇಂದು ಅಧಿಕಾರಿ ಅವರೊಂದಿಗಿನ ಆಡಳಿತಾತ್ಮಕ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ. ಇದರ ನಂತರ ಪಕ್ಷದೊಳಗೆ ಉದ್ವಿಗ್ನತೆ ಹೆಚ್ಚಾಗಿದೆ. ಕಾಕೋಲಿ ಅವರನ್ನು ಟಿಎಂಸಿ ಲೋಕಸಭೆಯ ಮುಖ್ಯ ಸಚೇತಕರ ಸ್ಥಾನದಿಂದ ತೆಗೆದುಹಾಕಲಾಗಿದೆ. ಕೆಲವೇ ದಿನಗಳಲ್ಲೇ ಕೇಂದ್ರ ಸರ್ಕಾರ ಅವರಿಗೇ ವೈ-ಕೆಟಗರಿ ಭದ್ರತೆ ನೀಡಿದೆ. ಇದು ರಾಜಕೀಯ ವಲಯದಲ್ಲಿ ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ. ಪ್ರಸ್ತುತ, ಪಶ್ಚಿಮ ಬಂಗಾಳದಿಂದ ಟಿಎಂಸಿ 29 […]

Continue Reading

ಎಸ್. ಐ. ಆರ್ | ಚುನಾವಣಾ ಆಯೋಗದ ಅಧಿಕಾರವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್..!

ಎಸ್‌ಐಆ‌ರ್ ಅನ್ನು ಚಲಾಯಿಸುವ ಮೂಲಕ ಚುನಾವಣಾ ಆಯೋಗವು ಶಾಸನಬದ್ಧ ಅಧಿಕಾರಗಳ ಹೊರಗೆ ಕಾರ್ಯನಿರ್ವಹಿಸಿಲ್ಲ ಎಂದು ಪೀಠ ಗಮನಿಸಿತು. ‘ಸಾಮಾನ್ಯವಾಗಿ ನಡೆಸುವುದಕ್ಕಿಂತ ಭಿನ್ನವಾಗಿರುವುದರಿಂದ ಇದನ್ನು ಅಲ್ಮಾ ವೈರ್‌ಗಳು ಎಂದು ಹೇಳಲಾಗುವುದಿಲ್ಲ’ ಎಂದು ನ್ಯಾಯಾಲಯ ಗಮನಿಸಿದೆ. “ಎಸ್‌ಐಆರ್ ಸಾಧಿಸಲು ಬಯಸುವ ಉದ್ದೇಶವು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳ ಸಾಂವಿಧಾನಿಕ ಗುರಿಯೊಂದಿಗೆ ನೇರ ಸಂಬಂಧ ಹೊಂದಿದೆ ಎಂದು ನಾವು ಅಷ್ಟೇ ತೃಪ್ತರಾಗಿದ್ದೇವೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Continue Reading

ಶಿರಾಳಕೊಪ್ಪ | ‘ಸಮೃದ್ಧ ಮಣ್ಣು, ಸುಸ್ಥಿರ ಕೃಷಿ’ : ನೂತನ ಮಣ್ಣು ಪರೀಕ್ಷಾ ಕೇಂದ್ರ ಲೋಕಾರ್ಪಣೆ ಮಾಡಿದ ಸಂಸದ ಬಿ. ವೈ. ರಾಘವೇಂದ್ರ

ನಮ್ಮ ಕೃಷಿ ಇಲಾಖೆ (ಶಿವಮೊಗ್ಗ) ಇವರ ಅನುಷ್ಠಾನದೊಂದಿಗೆ, 2023-24ನೇ ಸಾಲಿನ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS) ಅನುದಾನದ ಅಡಿಯಲ್ಲಿ ಈ ಅತ್ಯಾಧುನಿಕ ಮಣ್ಣು ಪರೀಕ್ಷಾ ಕೇಂದ್ರವನ್ನು ನಿರ್ಮಿಸಲಾಗಿದೆ. ಧ್ಯೇಯ: “ನಿಮ್ಮ ಮಣ್ಣನ್ನು ತಿಳಿಯಿರಿ” (Know Your Soil) ಎಂಬ ಮಂತ್ರದೊಂದಿಗೆ ನಮ್ಮ ತಾಲ್ಲೂಕಿನ ಪ್ರತಿಯೊಬ್ಬ ರೈತನಿಗೂ ಡಿಜಿಟಲ್ ಹಾಗೂ ವೈಜ್ಞಾನಿಕ ಕೃಷಿಯ ಸೌಲಭ್ಯವನ್ನು ಹತ್ತಿರವಾಗಿಸುವುದು ನಮ್ಮ ಮೂಲ ಉದ್ದೇಶವಾಗಿದೆ ಎಂದರು . ರೈತರ ಆದಾಯ ದ್ವಿಗುಣಗೊಳಿಸಲು ಮತ್ತು ಮಣ್ಣಿನ ಗುಣಮಟ್ಟ ಕಾಪಾಡಲು ಇಂತಹ ತಾಂತ್ರಿಕ ಸೌಲಭ್ಯಗಳು […]

Continue Reading

ಶಿಕಾರಿಪುರ | ದಶಕಗಳ ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ತಾರ್ಕಿಕ ಹಾಗೂ ಶಾಶ್ವತ ಪರಿಹಾರ ನಿಟ್ಟಿನಲ್ಲಿ ಸಂಸದರ ನೇತೃತ್ವದಲ್ಲಿ ಮಹತ್ವದ ಜಂಟಿ ಸಭೆ

ಇದರೊಂದಿಗೆ, ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ಅರ್ಹ ಸಾಗುವಳಿ ಜಮೀನುಗಳನ್ನು ಮುಕ್ತಗೊಳಿಸಲು ಮತ್ತು ಮಲೆನಾಡಿನ ರೈತರ ಹಿತರಕ್ಷಣೆಯನ್ನು ಕಾಯ್ದುಕೊಳ್ಳಲು ಸರ್ಕಾರದ ಉನ್ನತ ಮಟ್ಟದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ಸಮಾಲೋಚಿಸಲಾಯಿತು. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ಕಾನೂನಾತ್ಮಕವಾಗಿ ಮತ್ತು ಆಡಳಿತಾತ್ಮಕವಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನು ನಿರಂತರವಾಗಿ ಮುಂದುವರೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಉನ್ನತ ಮಟ್ಟದ ಸಭೆಯು ಶಿಕಾರಿಪುರ ಕ್ಷೇತ್ರದ ಶಾಸಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಮತ್ತು ಪ್ರಮುಖರಾದ ಕೆ.ಎಸ್. ಗುರುಮೂರ್ತಿ ಅವರ ಉಪಸ್ಥಿತಿ ಹಾಗೂ ಜಂಟಿ […]

Continue Reading

ಮಲೆನಾಡಿಗೆ ಕಳಂಕ ತರುತ್ತಿರುವ Spa ಅಡ್ಡೆಗಳು..!?

ಶಿವಮೊಗ್ಗದಲ್ಲಿ ಸ್ಪಾಗಳನ್ನು ಪೊಲೀಸ್ ಇಲಾಖೆ ಬಂದ್ ಮಾಡಿಸುತ್ತಿದ್ದಂತೆ ಇಲ್ಲಿರುವ ದಂಧೆಕೋರರು ಮಲೆನಾಡಿನ ಸಾಗರ ಮತ್ತು ತೀರ್ಥಹಳ್ಳಿಗೆ ಹೋಗಿ ಬರುವಂತೆ ನೋಡಿಕೊಳ್ಳಗುತ್ತಿತ್ತಂತೆ. ಇನ್ನು ಈ Spa ಗಳ ಬಗ್ಗೆ ಮತ್ತೊಂದಿಷ್ಟು ಮಾಹಿತಿ ಏನಂದರೆ ಇಲ್ಲಿ ಕೆಲಸಕ್ಕೆ ಬರುವ ಕಾರ್ಮಿಕರಿಗೆ ಸಂಬಳವಿರುವುದಿಲ್ಲ ಎಂಬುದಾಗಿದೆ. ಇನ್ನು ಮುಖ್ಯ ವಿಚಾರವೇನೆಂದರೆ ಭದ್ರಾವತಿ ಕಿಂಗ್ ಪಿನ್ ಗಳು ಶಿವಮೊಗ್ಗದಲ್ಲಿ ಸಾಮಾಜಿಕ ಸ್ವಾಸ್ತ್ಯ ಹಾಳುಮಡುತ್ತಿರುವ ಆರೋಪಗಳು ಕೇಳಿ ಬರುತ್ತಿದೆ. ಇನ್ನು ವಿದ್ಯಾನಗರದ ಎವರ್ಗ್ರೀನ್ Spa ಮೇಲೆ ವ್ಯಕ್ತಿ ಒಬ್ಬನಿಂದ ಬೇರೆ ಜಿಲ್ಲೆಯಿಂದ ಯುವತಿಯರು ಹಾಗೂ ನಗರದಲ್ಲಿರುವ […]

Continue Reading

ಶಿವಮೊಗ್ಗ | ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಪೋಸ್ಟ್ : ಶರತ್ ಕಲ್ಯಾಣಿ ನೇತೃತ್ವದಲ್ಲಿ ದೂರು

ಇತನ ಕೃತ್ಯ ಸಮಾಜದಲ್ಲಿ ರಾಜಕೀಯ ಪಕ್ಷಗಳ ಗುಂಪುಗಳ ನಡುವೆ ಘರ್ಷಣೆಯನ್ನು ಉಂಟು ಮಾಡಲು ಪ್ರೇರೇಪಿಸುತ್ತಿರುವುದು ಸ್ಪಷ್ಟವಾಗಿರುತ್ತದೆ ಎಂದು ಉಲ್ಲೇಖಸಿದ್ದಾರೆ . ಆದ್ದರಿಂದ, ನಂಜೇಗೌಡ ಎಂಬ ವ್ಯಕ್ತಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮನವಿ.ಈ ದೂರಿನೊಂದಿಗೆ ಮಾನ್ಯ ಪ್ರಧಾನಮಂತ್ರಿಗಳ ವಿರುದ್ಧ ಮಾಡಿರುವ ಸುಳ್ಳು ಪೋಸ್ಟ್ ಅನ್ನು ಲಗ್ಗತಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶರತ್ ಎಸ್. ವಿ. ಕಲ್ಯಾಣಿ, ದಿನೇಶ್ ಆಚಾರ್ಯ, ವಕೀಲರಾದ ಸುರೇಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು.

Continue Reading