ಶಿವಮೊಗ್ಗ | ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಜಾಗೊಳಿಸಲು ಒತ್ತಾಯಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

ಪ್ರಧಾನಿ ನರೇಂದ್ರ ಮೋದಿಯವರು ಘೋರ ದುರಂತ ನಡೆದಿದ್ದರೂ ಆ ಬಗ್ಗೆ ಇದುವರೆಗೂ ಚಕಾರವೆತ್ತಲಿಲ್ಲ. ಆದರೆ, ಪ್ರಶ್ನೆಪತ್ರಿಕೆ ಸೋರಿಕೆಗೆ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣವಾಗಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ಮೂಲಕ ಸೂತಕದ ವಾತಾವರಣದಲ್ಲೂ ಸಂಭ್ರಮಿಸಿದ್ದಾರೆ. ಕೂಡಲೇ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ನೀಟ್ ಪರೀಕ್ಷೆಯನ್ನು ಸಮರ್ಥವಾಗಿ ನಡೆಸಲಾಗದೇ ಮರುಪರೀಕ್ಷೆ ನೆಡೆಸಿ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣರಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು.ದೇಶದಾದ್ಯಂತ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ, ರಾಜ್ಯಗಳಿಗೆ […]

Continue Reading

ಶಿವಮೊಗ್ಗ | 6 ತಿಂಗಳಲ್ಲಿ 24.50 ಲಕ್ಷ ರೂ. ಮೌಲ್ಯದ ಗಾಂಜಾ ವಶ : ಎಸ್ಪಿ. ನಿಖಿಲ್. ಬಿ ಮಾಹಿತಿ

ಜಿಲ್ಲೆಯಾದ್ಯಂತ ಡ್ರೈ ಕ್ಯಾಮರಾ ಕಾಲನ್ನು ಕೈಗೊಳ್ಳಲಾಗಿದ್ದು, ಹೊರ ಮುಖಗಳಲಿ, ಆ‌ ಪ್ರದೇಶಗಳಲಿ., ಗಾಂಜಾ ಬೆಳೆದಿರುವ ಬಗೆ, ಹಾಗೂ ಶಾಲಾ ಕಾಳಿಯಗಳ ಸುತ್ತ ಮುತ್ರ, ನಗರದ ಖಾಲೀ ಲೇ ಔಟ್ ಗಳ ಹಾಗೂ ಚಾನೆಲ್ ಏರಿಯಾಗಳ ಮೇಲೆ ಡೈಗ್ ಪಾರಿಸಿ, ಪತ್ರೆಗೆ ಕ್ರಮ ಕೈಗೊಳ್ಳಲಾಗಿರುತ್ತದೆ. ಗಾಂಜಾ ಕಿಟ್ನಿಂದ ಪರೀಕ್ಷೆ: ಈ ಬಾರಿ ವಿಶೇಷವಾಗಿ ಪದವಿ ಕಾಲೇಜುಗಳಲಿ, ಯುವ ಜನತೆಯು ಮಾದಕದ್ರವ್ಯ ವ್ಯಸನಕ್ಕೆ ತುತ್ತಾಗುವುದನ್ನು, ತಡೆಯುವ ಹಿನ್ನೆಲೆಯಲಿ,ಗಾಂಜಾ ಸೇವನೆಯ ಬಗ್ಗೆ ಜಿಲ್ಲೆಯಾದ್ಯಂತ 21 ಕಾಲೇಜುಗಳಿಲಿ, ಗಾಯಾ ಟೆನ್ನಿಂಗ್ ಕಿಟ್ ಮುಖೇನ […]

Continue Reading

ಶಿವಮೊಗ್ಗ | ಹಾಡುಹಗಲೇ ಕಾನೂನಿನ ಕಣ್ಣಿಗೆ ಮಣ್ಣೆರೆಚುವ ಕೆಲಸ ; ಕಣ್ಣಿದ್ದು ಕುರುಡರಾದ ಅಧಿಕಾರಿಗಳು..!?

ಮೊದಲು ಗ್ರಿಲ್ ಬೇಲಿಯ ಕಾಂಪೌಂಡ್ ಹೊರಗಿದ್ದ ಮೂರ್ನಾಲ್ಕು ವಿದ್ಯುತ್ ಕಂಬಗಳು ಈಗ ಹೊಸ ಕಾಂಪೌಂಡ್ ಒಳಭಾಗದಲ್ಲಿ ಸೇರಿಕೊಂಡಿದೆ. ಧಿಡೀರನೆ ಈ ರೀತಿಯ ಪವಾಡ ನಡೆಯಲು ಸಾಧ್ಯವಾಗಿದ್ದು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರಿಗೆ ಉದ್ಭವವಾಗಿದೆ ಆದರೆ ಪ್ರಶ್ನೆ ಇರುವುದು ಕಾಂಪೌಂಡ್ ಕಟ್ಟಿರುವ ಬಗ್ಗೆ ಅಲ್ಲ, ಆದರೆ ಚರಂಡಿ ಪಕ್ಕ ಪಾದಚಾರಿ ಮಾರ್ಗ ಒತ್ತುವರಿ ಮಾಡಿ ಹೇಗೆ ಕಟ್ಟಲು ಸಾಧ್ಯ? ಏಕೆಂದರೆ ಆಲ್ಕೊಳದಿಂದ ಗಾಡಿಕೊಪ್ಪ ಕಡೆ ಹಾದು ಹೋಗುವ ರಸ್ತೆಯ ಒಂದು ಕಡೆ ಚರಂಡಿ ಪಕ್ಕದಲ್ಲಿ ಇಂಟೆರ್ ಲಾಕ್ ಅಳವಡಿಸಿರುವ […]

Continue Reading

ಪ್ರಜಾಪ್ರಭುತ್ವದ ಕರಾಳ ದಿನ : ಅಧಿಕಾರ ದಾಹಕ್ಕಾಗಿ ಸಂವಿಧಾನವನ್ನೇ ಹತ್ತಿಕ್ಕಿದ ಕಾಂಗ್ರೆಸ್ ಇತಿಹಾಸವನ್ನು ಮರೆಯಲು ಸಾಧ್ಯವಿಲ್ಲ : ಶಾಸಕ ಎಸ್.ಎನ್. ಚನ್ನಬಸಪ್ಪ ಆಕ್ರೋಶ

ಇದೇ ಸಂದರ್ಭದಲ್ಲಿ, ತುರ್ತು ಪರಿಸ್ಥಿತಿಯ ವಿರುದ್ಧ ದೇಶಾದ್ಯಂತ ಜನಾಂದೋಲನ ರೂಪಿಸುವಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಅತ್ಯಂತ ನಿರ್ಣಾಯಕ ಪಾತ್ರ ವಹಿಸಿತ್ತು . ಆರ್‌ಎಸ್‌ಎಸ್‌ನ ಸಾವಿರಾರು ನಿಷ್ಠಾವಂತ ಕಾರ್ಯಕರ್ತರು ಭೂಗತರಾಗಿ (Underground) ಕಾರ್ಯನಿರ್ವಹಿಸುತ್ತಾ, ಕರಾಳ ಆಡಳಿತದ ಸತ್ಯ ಸಂಗತಿಗಳನ್ನು ಜನರಿಗೆ ತಲುಪಿಸಲು ಪತ್ರಿಕೆಗಳನ್ನು ಮುದ್ರಿಸಿ ಹಂಚಿದರು ಮತ್ತು ದೇಶದ ಸ್ವಾತಂತ್ರ್ಯ ಮರುಸ್ಥಾಪನೆಗಾಗಿ ಬೃಹತ್ ಸತ್ಯಾಗ್ರಹಗಳನ್ನು ಸಂಘಟಿಸಿದರು . ದೆಹಲಿಯಿಂದ ಹಿಡಿದು ಹಳ್ಳಿಹಳ್ಳಿಗಳವರೆಗೆ ಅನೇಕ ಸ್ವಯಂಸೇವಕರು ತಮ್ಮ ಮನೆ ಮಠಗಳನ್ನು ತ್ಯಜಿಸಿ, ಪ್ರಾಣದ ಹಂಗು ತೊರೆದು ಲೂಟಿಗೊಳಗಾದ ನಾಗರಿಕರ […]

Continue Reading

ಶಿವಮೊಗ್ಗದಲ್ಲಿ ಕುಸ್ತಿ ಕ್ರೀಡಾ ಶಾಲೆ ಮುಂದುವರಿಕೆ ಹಾಗೂ ಮಿಳಘಟ್ಟ ಗ್ರಾಮದ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಶಾಸಕ ಎಸ್.ಎನ್. ಚನ್ನಬಸಪ್ಪ ಮನವಿ

ಶಿವಮೊಗ್ಗ ಜಿಲ್ಲೆಯು ಕುಸ್ತಿ ಕ್ರೀಡೆಗೆ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಇಲ್ಲಿನ ನೂರಾರು ಕ್ರೀಡಾಪಟುಗಳು ದೇಶ-ವಿದೇಶಗಳಲ್ಲಿ ಸಾಧನೆ ಮಾಡಿ ಜಿಲ್ಲೆಗೆ ಗೌರವ ತಂದಿದ್ದಾರೆ. ಈ ಕ್ರೀಡೆಯನ್ನು ಜೀವಂತವಾಗಿಡಲು ಮತ್ತು ಮುಂದಿನ ಪೀಳಿಗೆಯ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಲು ಶಿವಮೊಗ್ಗ ನಗರದಲ್ಲಿ ‘ಕುಸ್ತಿ ಕ್ರೀಡಾ ಶಾಲೆ’ಯನ್ನು ಮುಂದುವರಿಸಲು ಅಗತ್ಯ ಅನುದಾನ ಹಾಗೂ ಮೂಲಸೌಕರ್ಯ ಒದಗಿಸಬೇಕು ಎಂದು ಶಾಸಕರು ಕ್ರೀಡಾ ಇಲಾಖೆಯ ಪರವಾಗಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಮಿಳಘಟ್ಟ ನಿವಾಸಿಗಳ ಹಿತರಕ್ಷಣೆ: ಶಿವಮೊಗ್ಗ ತಾಲೂಕು ಕಸಬಾ-01 ಹೋಬಳಿಯ ಮಿಳಘಟ್ಟ ಗ್ರಾಮದ […]

Continue Reading

ಶಿವಮೊಗ್ಗ | ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಆರಂಭ

ಬೆಳೆ ಸಾಲ ಪಡೆದ ರೈತರು: ಬ್ಯಾಂಕ್‌ಗಳ ಮೂಲಕ ಸಾಲ ಪಡೆಯುವ ರೈತರನ್ನು ಕಡ್ಡಾಯವಾಗಿ ಬೆಳೆ ವಿಮೆಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸದಿದ್ದರೆ, ವಿಮೆ ನೋಂದಣಿಯ ಅಂತಿಮ ದಿನಾಂಕಕ್ಕೆ 7 ದಿನ ಮುಂಚಿತವಾಗಿ ಲಿಖಿತ ಮುಚ್ಚಳಿಕೆ ಪತ್ರವನ್ನು ನೀಡುವ ಮೂಲಕ ಯೋಜನೆಯಿಂದ ಹೊರಗುಳಿಯಬಹುದು. ಬೆಳೆ ಸಾಲ ಪಡೆಯದ ರೈತರು: ಸಾಲ ಪಡೆಯದ ರೈತರು ತಮ್ಮ ಪಹಣಿ ಮತ್ತು ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್, ಆರ್ಥಿಕ ಸಂಸ್ಥೆಗಳು ಅಥವಾ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ […]

Continue Reading

ಶಿವಮೊಗ್ಗ | ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ: ಅರ್ಜಿ ಆಹ್ವಾನ

ಅರ್ಹ ವಿದ್ಯಾರ್ಥಿಗಳು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕೃತ ವೆಬ್‌ಸೈಟ್ www.klwbapps.karnataka.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ.ಅರ್ಜಿ ಸಲ್ಲಿಸಲು ದಿನಾಂಕ: 31-12-2026 ಕಡೆಯ ದಿನವಾಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು “ಕಾರ್ಮಿಕ ಅಧಿಕಾರಿಗಳವರ ಕಚೇರಿ ಶಿವಮೊಗ್ಗ ಉಪವಿಭಾಗ, ಶಿವಮೊಗ್ಗ ಕಚೇರಿಗೆ ಅಥವಾ ದೂ.ಸಂಖ್ಯೆ 080-234751888277291175 / 82771205059141585402 ನ್ನು ಸಂಪರ್ಕಿಸಬಹುದು ಎಂದು ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ಎಂ ಪಿ ತಿಳಿಸಿದ್ದಾರೆ.

Continue Reading

ಬಿಜೆಪಿಗೆ ಗುನ್ನ ಇಟ್ಟರ ಈಶ್ವರಪ್ಪ..?!

ಬಿ.ಸಿ ಪಾಟೀಲ್ ವಾರ್ನಿಂಗ್ : ಇನ್ನು ಈ ಸಂಬಂಧ ಈಶ್ವರಪ್ಪಗೆ ವಾರ್ನಿಂಗ್ ಕೊಟ್ಟ ಮಾಜಿ ಸಚಿವ ಬಿ.ಸಿ ಪಾಟೀಲ್ ನಮ್ಮ ಶ್ರಮದಿಂದ ನೀವು ಮಂತ್ರಿಯಾಗಿ ಲಂಚವನ್ನು ಪಡೆದು ಬೆಳಗಾವಿನಲ್ಲಿ ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ಕಾರಣರಾದಿರಿ ಈಗ ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಡಿ. ನಮ್ಮಿಂದ ಬಿಜೆಪಿ ಹಾಳಾಗಲಿಲ್ಲ ನಿಮ್ಮಂತವರಿಂದ ಬಿಜೆಪಿ ಹಾಳಾಗಿದೆ. ನಾವು ಬರದೆ ಹೋಗಿದ್ದರೆ ನೀವು ಮಂತ್ರಿಯಾಗುತ್ತಿರಲಿಲ್ಲ ಮಂತ್ರಿಯಾಗಿ ಎಲ್ಲ ಸೌಲಭ್ಯಗಳನ್ನು ಪಡೆದು ಈಗ ನಮ್ಮಗಳ ಮೇಲೆ ಗೂಬೆ ಕೂರಿಸುತ್ತಿದ್ದೀರಿ ಯಾವಾಗ ಎಷ್ಟು ಹಣ ಕೊಟ್ರು ಅದನ್ನ […]

Continue Reading