ಶಿವಮೊಗ್ಗ | ವಶಕ್ಕೆ ಪಡೆದಿದ್ದ ದಾಖಲೆ ಇಲ್ಲದ ಆಟೋಗಳು ಮರಳಿ ಆಟೋ ಚಾಲಕರು ಮತ್ತು ಮಾಲೀಕರ ಸುಪರ್ದಿಗೆ : ಟ್ರಾಫಿಕ್ ಇನ್ಸ್ಪೆಕ್ಟರ್ ಗೆ ಧನ್ಯವಾದ ತಿಳಿಸಿದ ಆಟೋ ಚಾಲಕರು ಮತ್ತು ಮಾಲೀಕರು

ಈ ಸಂಬಂಧ ಆಟೋ ಯೂನಿಯನ್ ಅಧ್ಯಕ್ಷ ಅನ್ನು ಹಾಗೂ ಶಾಂತಿನಗರದ ವಾರ್ಡ್ ಅಧ್ಯಕ್ಷ ಇರ್ಫಾನ್ ಖಾನ್ ಹಾಗೂ ಆಟೋ ಮುಖಂಡರು ಈ ವೇಳೆ ಟ್ರಾಫಿಕ್ ಇನ್ಸ್ಪೆಕ್ಟರ್ ಹಾಗೂ ಇಲಾಖೆಗೆ ಮತ್ತು ಎಸ್ಪಿ ನಿಖಿಲ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಶಿವಮೊಗ್ಗದ ನಾಗರಿಕರು ವಾಹನ ಸವಾರರು ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.ಎಲ್ಲ ವಾಹನಗಳಿಗೂ ಇದೇ ರೀತಿ ಗಡುವು ನೀಡುತ್ತಾರ? ಎಂಬ ಪ್ರಶ್ನೆ ಕೇಳಿಬರುತ್ತಿದೆ.ದಾಖಲೆ ಸರಿಯಾಗಿ ಇಟ್ಟುಕೊಳ್ಳಿ ಅಂತ ತಪಾಸಣೆ ಮಾಡಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವುದು […]

Continue Reading

ಶಿವಮೊಗ್ಗ | ಅಧ್ಯಾತ್ಮದ ಶಕ್ತಿಯ ಮೂಲಕವೇ ಭಾರತವು ವಿಶ್ವಗುರುವಾಗಲು ಸಾಧ್ಯ : ಸದ್ಗುರು ಶ್ರೀ ಮಧುಸೂದನ ಸಾಯಿ

ಮಕ್ಕಳು ಆತ್ಮಹತ್ಯೆಗೆ ಯತ್ನಿಸುತ್ತಿರುವುದನ್ನು ನೋಡಿದಾಗ ನನ್ನ ಮನಸ್ಸು ಕಲಕುತ್ತದೆ. ಅಮೆರಿಕದಂಥ ದೇಶದಲ್ಲಿ ಆಸ್ಪತ್ರೆಗಳ ತುರ್ತುನಿಗಾ ಘಟಕಗಳಲ್ಲಿ ಮಕ್ಕಳೇ ತುಂಬಿದ್ದಾರೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯವಾಗಿ ಎದುರಿಸುವ ಶಿಕ್ಷಣ ಕೊಡದೆ ಈ ಪರಿಸ್ಥಿತಿ ಬದಲಾಗುವುದು ಕಷ್ಟ ಎಂದು ಅಭಿಪ್ರಾಯಪಟ್ಟರು.ದೊಡ್ಡವರಾದ ಮೇಲೆ ಏನಾಗಬೇಕು ಎನ್ನುವುದನ್ನು ಮಕ್ಕಳು ನಿರ್ಧರಿಸಬೇಕು. ಎಲ್ಲ ಮಕ್ಕಳಿಗೂ ಒಂದಲ್ಲ ಒಂದು ಪ್ರತಿಭೆ ಕೊಟ್ಟೇ ದೇವರು ಭೂಮಿಗೆ ಕಳಿಸಿರುತ್ತಾನೆ. ಅದನ್ನು ಅವರು ಕಂಡುಕೊಳ್ಳಲು, ಅದೇ ಪ್ರತಿಭೆಯ ಮೂಲಕ ಅವರ ಬೆಳಗಲು ಸಮಾಜ ಅವಕಾಶ ಮಾಡಿಕೊಡಬೇಕು. ಎಲ್ಲರೂ ವೈದ್ಯರೇ ಆಗಬೇಕು […]

Continue Reading

ಬೆಂಗಳೂರು | ನಾಗರಪಂಚಮಿ ಹಬ್ಬದ ಪ್ರಯುಕ್ತ ಕೂಲಿ ಕಾರ್ಮಿಕರ ಮಕ್ಕಳಿಗೆ ಹಾಲು, ಹಣ್ಣು, ಮೊಸರು, ವಿತರಣೆ

ಈ ಕಾರ್ಯಕ್ರಮವನ್ನು ಆಯೋಜಿಸಿದ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್ಎಂ ವೆಂಕಟೇಶ್ ರವರು ಹಾಲು, ಮೊಸರು, ಹಣ್ಣನ್ನು ಮಕ್ಕಳಿಗೆ ವಿತರಿಸಿದ್ದ ನಂತರ ಮಕ್ಕಳ ಮುಖದಲ್ಲಿ ಮೂಡುವ ಮಂದಹಾಸ ವರ್ಣಿಸಲಸಾಧ್ಯ ಎಂದು ಹೇಳಿದರು, ಹಾಗೂ ಮೂಡನಂಬಿಕೆಗಳಿಂದ ಜನರು ದೂರವಿದ್ದು ವಿಜ್ಞಾನದಡೆಗೆ ಹೆಜ್ಜೆ ಹಾಕಬೇಕೆಂದು ತಿಳಿಸಿದರು. ನಾಗರಪಂಚಮಿ ವಿಭಿನ್ನ ರೀತಿಯಲ್ಲಿ ಆಚರಿಸುತ್ತಿರುವುದು ಸಂತೋಷವಾಗಿದೆ ಎಂದು ಕಾನೂನು ಮಾಪನ ಶಾಸ್ತ್ರದ ವಿಶ್ರಾಂತ ಅಧಿಕಾರಿ ಜಿ. ಏನ್ ನರಸಿಂಹಮೂರ್ತಿಯವರು ಹರ್ಷ ವ್ಯಕ್ತಪಡಿಸಿದರು.

Continue Reading

ಶಿವಮೊಗ್ಗ | ಕಳೆದು ಹೋದ ಮಕ್ಕಳನ್ನು ತಾಯಿಯ ಮಡಲಿಗೆ ಒಪ್ಪಿಸಿದ ಗೃಹರಕ್ಷಕ ಸಿಬ್ಬಂದಿಗಳು..!

ಗೃಹರಕ್ಷಕ ಸಿಬ್ಬಂದಿಯವರು ಕರೆ ಮಾಡಿದಾಗಲೇ ಅವರ ಮಕ್ಕಳು ಬಹಳ ಹೊತ್ತಿನಿಂದ ಕಾಣೆಯಾಗಿದ್ದು ಅವರಿಗೆ ತಿಳಿದಿದ್ದು, ನಂತರ ಗೃಹರಕ್ಷಕ ಸಿಬ್ಬಂದಿಯವರು ಮೇಲಾಧಿಕಾರಿಗಳ ಮೂಲಕ ಅವರ ತಾಯಿಗೆ ಮಕ್ಕಳನ್ನು ಒಪ್ಪಿಸಿಸಿದ್ದಾರೆ ಅವರಿಂದ ಮಕ್ಕಳನ್ನು ಪಡೆದ ತಾಯಿ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳು ಹೇಳಿದರು. ಇನ್ನೊಂದು ಕುಟುಂಬ ಗಂಡ ಹೆಂಡತಿ ಹಾಗೂ ಅವರ ಮೂರು ವರ್ಷದ ಹೆಣ್ಣು ಮಗು ಪಾರ್ಕ್ ಒಳಗೆ ಬಂದು ಆಟ ಆಡಲು ಬಿಟ್ಟು ಮಾತಾಡುತ್ತಾ ಇರುವಾಗ ಮಗುವಿನ ಜ್ಞಾನ ಮರತೆ ಹೋಗಿದೆ, ಮಗುವಿನ ನೆನೆಪು ಬಂದು ನೋಡಿದಾಗ ಮಗು […]

Continue Reading

ಶಿವಮೊಗ್ಗವೇ ನನ್ನ ಕರ್ಮಭೂಮಿ, ನನ್ನ ಸಾರ್ವಜನಿಕ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಜಿಲ್ಲೆಯ ಜನತೆ ಬೆನ್ನೆಲುಬಾಗಿ ನಿಂತಿದ್ದಾರೆ : ಬಿ. ಎಸ್. ವೈ

ಯಾವುದೇ ಮಗು ವಸತಿ ಅಥವಾ ಊಟದ ಕೊರತೆಯಿಂದ ಶಿಕ್ಷಣ ಊರುಗಳಿಂದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಯಡಿಯೂರಪ್ಪ, ಜೀವನದಲ್ಲಿ ಕಷ್ಟಗಳು ಬಂದಾಗ ಧೃತಿಗೆಡಬೇಡಿ, ಪರಿಶ್ರಮ, ನಿಷ್ಠೆ ಮತ್ತು ಸಮಾಜಮುಖಿ ಆಲೋಚನೆ ಇದ್ದಾಗ ನೀವು ಖಂಡಿತವಾಗಿಯೂ ಉನ್ನತ ಮಟ್ಟಕ್ಕೆ ಏರಬಹುದು ಎಂದು ಹೇಳಿದರು. ಶಿವಮೊಗ್ಗದಲ್ಲಿ ಶತಮಾನ ಪೂರೈಸಿರುವ ವಿದ್ಯಾರ್ಥಿನಿಲಯದ ನೂತನ ಕಟ್ಟಡಕ್ಕೆ ತಮ್ಮ ಹೆಸರನ್ನು ಇಟ್ಟಿರುವುದು ವೈಯಕ್ತಿಕವಾಗಿ ತಮಗೆ ದೊರೆತ ದೊಡ್ಡ ಗೌರವ ಎಂದು ಭಾವಿಸುವುದಾಗಿ ಅವರು ಹೇಳಿದರು. ಆದರೆ ಈ ಗೌರವವನ್ನು ತಮ್ಮ ವೈಯಕ್ತಿಕ ಹೆಸರಿಗಿಂತಲೂ ಹೆಚ್ಚಾಗಿ ಜನರು […]

Continue Reading

ಶಿವಮೊಗ್ಗ | ಜಿಲ್ಲಾ ಮೋಚಿಗರ ಸಂಘದಿಂದ ಮೊದಲನೇ ವರ್ಷದ ಪ್ರತಿಭಾ ಪುರಸ್ಕಾರ

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಎಸ್ ರಾಜು ರವರು 25,000/-₹ ಗಳನ್ನು ಸಂಘದ ಕಟ್ಟಡದ ಅಭಿವೃದ್ಧಿಗಾಗಿ ದೇಣಿಗೆ ನೀಡಿದರು ಈ ಸಂದರ್ಭದಲ್ಲಿ ಅಧ್ಯಕ್ಷರು ಮಾತನಾಡಿ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ಕರೆ ನೀಡಿದರು. ಹಾಗೂ ಈ ಒಂದು ಕಾರ್ಯಕ್ರಮದಲ್ಲಿ ಪ್ರೋತ್ಸಾಹ ಧನ ಪಡೆದ ವಿದ್ಯಾರ್ಥಿಗಳ ಪೋಷಕರು ಸಂಘದ ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.

Continue Reading

ಶಿವಮೊಗ್ಗ | ಗೋವುಗಳ ಕಳ್ಳಸಾಗಾಟವನ್ನು ಗಂಭೀರವಾಗಿ ಪರಿಗಣಿಸಿ- ಬಿ.ವೈ.ವಿಜಯೇಂದ್ರ ಆಗ್ರಹ

ಜಾಮೀನು ಆಗದಂತೆ ಕಠಿಣ ಕ್ರಮ ಕೈಗೊಳ್ಳಬೇಕು; ಇದು ಮರುಕಳಿಸದಂತೆ ಸರ್ಕಾರ ಎಚ್ಚತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು. ಇಂಥ ಘಟನೆಗಳು ಮರುಕಳಿಸಿದರೆ ಕಾನೂನು- ಸುವ್ಯವಸ್ಥೆ ಕೈಮೀರಿ ಹೋಗಲಿದೆ ಎಂದು ತಿಳಿಸಿದರು. ಘಟನೆ ವಿವರ: ನಿನ್ನೆ ಮಧ್ಯರಾತ್ರಿ ಹರತಾಳು ಹತ್ತಿರ ಕೆಲವು ದುಷ್ಕರ್ಮಿಗಳು ಚಂದನ್ ಅವರ ಮನೆಯಿಂದ ಗೋವುಗಳನ್ನು ಹೇರಿಕೊಂಡು ಹೋಗುವ ಸಂದರ್ಭದಲ್ಲಿ ಬಜರಂಗದಳದ ಅಲ್ಲಿನ ಕಾರ್ಯಕರ್ತ ಚಂದನ್ ಮತ್ತು ಇತರರು ಜಾಗೃತರಾದರು. ಚಂದನ್, ಕಿರಣ್, ಅಭಿಲಾಷ್ ಅವರು ಆ ವಾಹನವನ್ನು ಬೆನ್ನಟ್ಟಿದರು. ಪಿಕಪ್ ವಾಹನದಲ್ಲಿ ಗೋವುಗಳನ್ನು ಕದ್ದು ಸಾಗಿಸುತ್ತಿದ್ದರು. ಪೊಲೀಸ್ […]

Continue Reading

ಶಿವಮೊಗ್ಗ | ಸಂಸದ ರಾಘವೇಂದ್ರ ಹುಟ್ಟುಹಬ್ಬದ ಪ್ರಯುಕ್ತ ರವೀಂದ್ರನಗರ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಅಭಿಮಾನಿಗಳಿಂದ ವಿಶೇಷ ಪೂಜೆ ಹಾಗೂ ಪ್ರಾರ್ಥನೆ

ದೇಶ ಮತ್ತು ರಾಜ್ಯದ ಅಭಿವೃದ್ಧಿಯಲ್ಲಿ ಅವರು ಮತ್ತಷ್ಟು ಪ್ರಮುಖ ಪಾತ್ರ ವಹಿಸಬೇಕು. ಶಿವಮೊಗ್ಗ ಜಿಲ್ಲೆಗೆ ಹೆಚ್ಚಿನ ಅನುದಾನ, ಕೈಗಾರಿಕೆ, ಉದ್ಯೋಗ, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯ ಸಮಗ್ರ ಪ್ರಗತಿಗೆ ಶ್ರಮಿಸಬೇಕು ಎಂದು ಅವರು ಆಶಿಸಿದರು. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಗಣಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಸಂಸದ ಬಿ.ವೈ. ರಾಘವೇಂದ್ರ ಅವರ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ರಾಜಕೀಯ ಜೀವನದಲ್ಲಿ ಮತ್ತಷ್ಟು ಯಶಸ್ಸು ದೊರೆಯಲಿ ಎಂದು ಪ್ರಾರ್ಥಿಸಲಾಯಿತು.

Continue Reading