ಶಿವಮೊಗ್ಗ | ಸಖಿ ಕೇಂದ್ರದ ಮುಂದೆ ಗದ್ದಲ ಸೃಷ್ಟಿಸಿದ ಮಹಿಳೆ ; ಅಕ್ಕ ಪಡೆಯಿಂದ ಮಾನವೀಯ ಕಾರ್ಯ

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಕ್ಕ ಪಡೆಯ ಸಿಬ್ಬಂದಿ, ಪರಿಸ್ಥಿತಿಯನ್ನು ಅತ್ಯಂತ ಸಂಯಮದಿಂದ ನಿಭಾಯಿಸಿದರು. ಮಹಿಳೆಯ ಸ್ಥಿತಿಯನ್ನು ಕಂಡು ಆಕೆಗೆ ಸಾಂತ್ವನ ಹೇಳಿದ ಪೊಲೀಸರು, ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸು, ನಿನ್ನ ಜೀವನವನ್ನು ಸರಿಪಡಿಸಿಕೊ ಎಂದು ಹಿತವಚನ ನೀಡಿದರು. ಬಳಿಕ ಮಹಿಳೆಯ ವಿಳಾಸವನ್ನು ಪಡೆದು ಅವಳ ಮನೆಗೆ ತಲುಪಿಸಿದರು.

Continue Reading

ಶಿವಮೊಗ್ಗ | ಜೆಡಿಎಸ್ ರಜತ ಮಹೋತ್ಸವ ಹಾಗೂ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಜನತಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್

ಕಾಂತರಾಜ್.ಗೋಪಿ ಮುದಲಿಯಾರ್ ಲೋಹಿತ್ ಗಗನ್.ನಿಖಿಲ್.ಪ್ರಜ್ವಲ್. ಯಶವಂತ್ ಶೆಟ್ಟಿ. ರಮೇಶ್ ನಾಯ್ಕ್. ಆಯನೂರ್ ಶಿವ ನಾಯ್ಕ್ ಸೇರಿದಂತೆ ತಂಡದ ಆಟಗಾರರು ಮತ್ತು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು

Continue Reading

ಶಿವಮೊಗ್ಗ | ತಾಯಂದಿರ ದಿನಾಚರಣೆ – ಭಾವಪೂರ್ಣ ಸಂಭ್ರಮ

ಶ್ರೀಮತಿ ಜಯಶ್ರೀ ಗಣೇಶ್ ರವರು ತಾಯಿಯ ಮಹತ್ವವನ್ನು ಸಾರುವ ಭಾವಪೂರ್ಣ ಕವನವನ್ನು ವಾಚಿಸಿದರು. ಸೇವಾದಳದ ಶ್ರೀಮತಿ ಸಾವಿತ್ರಿ ಮೇಡಂ ರವರು ಸಹ ವೇದಿಕೆಯನ್ನು ಅಲಂಕರಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು. ಕಾರ್ಯಕ್ರಮದಲ್ಲಿ ಮಾತೆಯರಿಗಾಗಿ ಹಲವು ಮನರಂಜನಾ ಆಟಗಳನ್ನು ಆಯೋಜಿಸಿ, ಸಂತೋಷದ ಕ್ಷಣಗಳನ್ನು ಎಲ್ಲರೂ ನೆನಪಿನಂಗಳದಲ್ಲಿ ಕೂಡಿಟ್ಟರು.ಇದೇ ಸಂದರ್ಭದಲ್ಲಿ “ಅಜ್ಜಿ ಮನೆ ಬೇಸಿಗೆ ಶಿಬಿರ”ದ ಮಕ್ಕಳು ಕೇವಲ ಐದು ದಿನಗಳಲ್ಲಿ ಕಲಿತ ತಮ್ಮ ಪ್ರತಿಭೆಯನ್ನು ಅದ್ಭುತವಾಗಿ ಪ್ರದರ್ಶಿಸಿದರು. ನೃತ್ಯ, ಕಥೆ, ಮಂತ್ರಘೋಷ, ಆಧ್ಯಾತ್ಮಿಕತೆ ಹಾಗೂ ಸಂಸ್ಕೃತ ಭಾಷೆಯ ಪರಿಚಯವನ್ನು ಮಕ್ಕಳು […]

Continue Reading

ಸಚಿವ ಸಹೋದ್ಯೋಗಿ ಡಿ. ಸುಧಾಕರ್ ನಿಧನಕ್ಕೆ ಸಚಿವ ಮಧು ಬಂಗಾರಪ್ಪ ತೀವ್ರ ಸಂತಾಪ

ಜನಸೇವೆಯಲ್ಲಿ ಅಪಾರ ಕಾಳಜಿ ಹೊಂದಿದ್ದ ಸುಧಾಕರ್ ಅವರು ಇಂದು ದೈವಾಧೀನರಾಗಿರುವುದು ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ. ಅವರ ಜನಪರ ಕೆಲಸಗಳು ಸದಾ ಜೀವಂತ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬ ವರ್ಗ, ಅಭಿಮಾನಿಗಳು ಹಾಗೂ ಅಪಾರ ಬಂಧುಗಳಿಗೆ ನೋವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಸ್. ಮಧು ಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವರು ಶಿವಮೊಗ್ಗ ಸಂತಾಪಗಳನ್ನ ಸೂಚಿಸಿದ್ದಾರೆ.

Continue Reading

ಶಿವಮೊಗ್ಗ | ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ‘ಅರಿವು’ ಶೈಕ್ಷಣಿಕ ಸಾಲ ಯೋಜನೆ : ಅರ್ಜಿ ಆಹ್ವಾನ

ಭರ್ತಿ ಮಾಡಿದ ಅರ್ಜಿ ಮತ್ತು ದಾಖಲೆಗಳನ್ನು ಮೇ 31 ರೊಳಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ (ನಿ), ಅಚ್ಯುತರಾವ್ ಲೇಔಟ್, 4ನೇ ತಿರುವು, ನಂಜಪ್ಪ ಆಸ್ಪತ್ರೆ ಮುಂಭಾಗ, ಶಿವಮೊಗ್ಗ ಈ ವಿಳಾಸಕ್ಕೆ ಸಲ್ಲಿಸಲು ಕೋರಲಾಗಿದೆ.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-228262 ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

​ಶಿವಮೊಗ್ಗ ಮತ್ತು ವಿಜಯನಗರದಲ್ಲಿ ಕಂಠೀರವ ಸ್ಟುಡಿಯೋದ ನೂತನ ಘಟಕಗಳ ಸ್ಥಾಪನೆ : ಮೆಹಬೂಬ್ ಪಾಷ​

ಶಿವಮೊಗ್ಗ ಆಯ್ಕೆಗೆ ಕಾರಣ: ಶಿವಮೊಗ್ಗ ಜಿಲ್ಲೆಯು ನೈಸರ್ಗಿಕ ಸೌಂದರ್ಯದಿಂದ ಕೂಡಿದ್ದು, ಹೊರಾಂಗಣ ಚಿತ್ರೀಕರಣಕ್ಕೆ (Outdoor Shooting) ಅತ್ಯಂತ ಸೂಕ್ತವಾಗಿದೆ. ಅಲ್ಲದೆ ಕಾರವಾರ, ಉಡುಪಿ, ಮಂಗಳೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಇದು ಹತ್ತಿರವಾಗಿರುವುದರಿಂದ ಚಿತ್ರೀಕರಣಕ್ಕೆ ಪೂರಕವಾದ ವಾತಾವರಣವಿದೆ. ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ ಹೋಬಳಿಯ ಜಾಜುಹಳ್ಳಿ ಗ್ರಾಮದಲ್ಲಿ ಲಭ್ಯವಿರುವ ಜಮೀನಿನಲ್ಲಿ 25 ಎಕರೆ ಜಮೀನನ್ನು ನೀಡುವಂತೆ ಕೋರಲಾಗಿದೆ.​ ಆಧುನಿಕ ಸೌಲಭ್ಯಗಳು: ಹೊಸದಾಗಿ ಸ್ಥಾಪನೆಯಾಗುವ ಸ್ಟುಡಿಯೋದಲ್ಲಿ ಕೇವಲ ಚಿತ್ರೀಕರಣ ಮಾತ್ರವಲ್ಲದೆ, ರೆಕಾರ್ಡಿಂಗ್ ಮತ್ತು ಲ್ಯಾಬ್ ಡೆವಲಪ್‌ಮೆಂಟ್‌ನಂತಹ ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯಗಳನ್ನು ಕಲ್ಪಿಸಲಾಗುವುದು. […]

Continue Reading

ಶಿವಮೊಗ್ಗ | ಕುವೆಂಪು ವಿವಿಯಿಂದ ಐಪಿಎಸ್ ಅಧಿಕಾರಿ ಡಾ!!. ಹರ್ಷ ಅವರಿಗೆ ಪಿಎಚ್.ಡಿ ಪದವಿ ಪ್ರದಾನ

ಅರಣ್ಯ ಅಂಚಿನ ಗ್ರಾಮಗಳಲ್ಲಿ ಎದುರಾಗುತ್ತಿರುವ ಮಾನವ ಮತ್ತು ಹುಲಿಗಳ ನಡುವಿನ ಸಂಘರ್ಷಕ್ಕೆ ಕಾರಣಗಳು ಹಾಗೂ ಅದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅವರು ಪ್ರಬಂಧದಲ್ಲಿ ಮಹತ್ವದ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದ ಪ್ರಾಧ್ಯಾಪಕರಾದ ಡಾ. ವಿಜಯ ಕುಮಾರ್ ಅವರ ಮಾರ್ಗದರ್ಶನದಲ್ಲಿ ಡಾ. ಹರ್ಷ ಪಿ.ಎಸ್ ಅವರು ಐದು ವರ್ಷಗಳ ಕಾಲ ಕ್ಷೇತ್ರ ಆಧಾರಿತ ಅಧ್ಯಯನವನ್ನು ನಡೆಸಿದ್ದಾರೆ. ಪ್ರಸ್ತುತ ಡಾ.ಪಿ.ಎಸ್.ಹರ್ಷರವರು ಬಳ್ಳಾರಿ ವಲಯದ ಐಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Continue Reading

ಶಿವಮೊಗ್ಗ | Auto ದಬ್ಬಾಳಿಕೆ ; ಟ್ರಾಫಿಕ್ ಪೊಲೀಸ್ ಇಲಾಖೆಗೆ ಇಲ್ಲಿದೆ ಪರಿಹಾರ..!

ಆದರೆ ಏನಾದರು ಬದಲಾವಣೆ ಆಯಿತಾ ಎಂದರೆ ಉತ್ತರ ಮಾತ್ರ ಏನು ಬದಲಾವಣೆಯಿಲ್ಲದಾಗಿದೆ. ಇದಕ್ಕೆಲ್ಲ ಕಾರಣಗಳೇನು?ನಗರದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳಾದರು ಏನು? ಸಂಪೂರ್ಣ ಮಾಹಿತಿ ನಿಮ್ಮ ಮುಂದೆ, ಶಿವಮೊಗ್ಗ ನಗರದಲ್ಲಿ ನಿನ್ನೆ ದಿವಸ ನಡೆದ ಒಂದು ಘಟನೆಯ ಪ್ರಯಾಣಿಕರು ಮಾಡಿರುವ ಆರೋಪ ಗಂಭೀರವಾಗಿದೆ. ಅದೇನಂದರೆ ನಿನ್ನೆ ದಿವಸ ದಾವಣಗೆರೆ ಜಿಲ್ಲೆಯ ಯಾವದೋ ಹಳ್ಳಿಯಿಂದ ರೋಗಿ ಹಾಗೂ ಅವರೊಟ್ಟಿಗೆ ಮತ್ತೊಬ್ಬರು ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ನಂಜಪ್ಪ ಆಸ್ಪತ್ರೆಗೆ ಚಿಕಿತ್ಸೆಗೆ ಬರಬೇಕಿತ್ತು.ಆದರೆ ಅವರು ಹಳ್ಳಿಯವರು ಹಾಗೂ ಶಿವಮೊಗ್ಗದ ಪರಿಚಯವಿಲ್ಲದ ಕಾರಣ ನಗರದ […]

Continue Reading

ಶಿವಮೊಗ್ಗ | ಹೆಲ್ಮೆಟ್ ಹಾಕಲ್ಲ ಏನು ಮಾಡುತ್ತೀರಾ? ಪೊಲೀಸರಿಗೆ ಅವಾಜ್ ಮತ್ತು ಬೆದರಿಕೆ ಹಾಕಿದ ಪುಂಡರು ಅಂದರ್

ನಿಯಮ ಪಾಲಿಸುವಂತೆ ಹೇಳಿದ ಅಧಿಕಾರಿಗಳ ಜೊತೆ ಸಯ್ಯದ್ ಮುಜಾಮಿಲ್ ರಸ್ತೆಯ ಮಧ್ಯೆಯೇ ವಾಗ್ವಾದಕ್ಕಿಳಿದಿದ್ದಾನೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಜಬಿವುಲ್ಲಾ ಎಂಬಾತನು ಸೇರಿಕೊಂಡು, ನಾವು ಹೆಲ್ಮೆಟ್ ಹಾಕುವುದಿಲ್ಲ, ನೀವು ಏನು ಮಾಡುತ್ತೀರಾ? ಎಂದು ಅವಾಚ್ಯವಾಗಿ ಮಾತನಾಡಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಸಮವಸ್ತ್ರದಲ್ಲಿದ್ದ ಅಧಿಕಾರಿಗಳನ್ನು ದೂಡಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಬಳಿಕ ಬೈಕ್ ಕೀ ಕಿತ್ತುಕೊಂಡು ಪೊಲೀಸರಿಗೆ ಬೆದರಿಕೆ ಹಾಕಿ ಪರಾರಿಯಾಗಲು ಯತ್ನಿಸಿದ ಆರೋಪಿಗಳ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಯ್ಯದ್ ಮುಜಾಮಿಲ್ ಮತ್ತು […]

Continue Reading