ಹುಬ್ಬಳ್ಳಿ | ಬಸ್ಸಿನಲ್ಲೇ ಶಿಕ್ಷಕ ಹೃದಯಾಘಾತದಿಂದ ದುರ್ಮರಣ..!

ಶಿಕ್ಷಕ ಸತೀಶ್ ಅವರು ಕಾರ್ಯ ನಿಮಿತ್ತ ಕಲಬುರಗಿಯಿಂದ ಹುಬ್ಬಳ್ಳಿಗೆ ಬರುತ್ತಿದ್ದರು. ಆದರೆ, ಹುಬ್ಬಳ್ಳಿ ಪಕ್ಕದ ಶಿರಗುಪ್ಪಿ ಬಳಿ ಅಸ್ವಸ್ಥತೆ ರೀತಿ ಸೀಟಿನಲ್ಲಿ ಕುಳಿತಿರುವುದನ್ನು ಗಮನಿದ ನಿರ್ವಾಹಕ ಎಂ.ಹೆಚ್. ರಿತ್ತಿ ಎಂಬುವರು ತಕ್ಷಣ ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ. ಆದರೆ, ಆಂಬ್ಯುಲೆನ್ಸ್ ಸಿಬ್ಬಂದಿ ತಕ್ಷಣ ಕೆ‌ಎಂಸಿಆರ್ಐಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಆಗ ಬಸ್ ಚಾಲಕ ಎ. ಎ. ನವಲಗುಂದ ನೇರವಾಗಿ ಬಸ್‌ ಅನ್ನೇ ಕೆ‌ಎಂಸಿಆರ್ಐಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ, ದುರದೃಷ್ಟವಶಾತ್ ಶಿಕ್ಷಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

Continue Reading

ಹಾವೇರಿ | ಶಾಲೆ ಫೀಸ್ ಕಟ್ಟಿ ವಿದ್ಯೆ ಕಲಿಸಿದ ಗುರುವಿಗೆ ಹೊಸ ಕಾರನ್ನು ಉಡುಗೊರೆಯಾಗಿ ನೀಡಿ ಕೃತಜ್ಞತೆ ಸಲ್ಲಿಸಿದ ವಿದ್ಯಾರ್ಥಿ

ಅವರು ನನಗೆ ಕೇವಲ ಶಿಕ್ಷಕರಲ್ಲ. ನಾನು ಸ್ನಾತಕೋತ್ತರ ಪದವಿ ಪೂರ್ಣಗೊಳಿಸುವವರೆಗೂ ತಂದೆಯಂತೆ ನನ್ನ ಜೊತೆ ನಿಂತಿದ್ದರು. ನನ್ನ ಜೀವನವನ್ನು ಬದಲಿಸಿದ ವ್ಯಕ್ತಿಗೆ ಕೃತಜ್ಞತೆ ಸಲ್ಲಿಸಬೇಕೆಂಬ ಆಸೆ ಇತ್ತು. ಈ ಕಾರು ನನ್ನ ಜೀವಮಾನವಿಡೀ ಇರುವ ಗೌರವ ಮತ್ತು ಕೃತಜ್ಞತೆಯ ಒಂದು ಸಣ್ಣ ಸಂಕೇತ ಮಾತ್ರ ಎಂದು ನವೀನ್ ಹೇಳುತ್ತಾರೆ. ಹಾನಗಲ್ ಕುಮಾರೇಶ್ವರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರ ಸಮ್ಮುಖದಲ್ಲಿ ಈ ಭಾವನಾತ್ಮಕ ಕ್ಷಣ ಅನಾವರಣಗೊಂಡಿತು. ಹೊಸ ಕಾರನ್ನು ವೇದಿಕೆಯ ಬಳಿ ತಂದು ಅದರ ಕೀಗಳನ್ನು […]

Continue Reading

ಹಾವೇರಿ | ಶಾಲೆ ಆವರಣದಲ್ಲೇ ಪುಂಡರಂತೆ ಹೊಡೆದಾಡಿಕೊಂಡ ಅತಿಥಿ ಶಿಕ್ಷಕ, ಎಸ್‌ಡಿಎಂಸಿ ಅಧ್ಯಕ್ಷ

ಶಿಕ್ಷಣ ಸಂಸ್ಥೆಯಲ್ಲಿ ಮಾದರಿಯಾಗಬೇಕಾದ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರ ನಡುವೆಯೇ ಈ ರೀತಿಯ ಮಾರಾಮಾರಿ ನಡೆದಿರುವುದು ಪೋಷಕರು ಮತ್ತು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಇತ್ತ, ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಪರದಾಡುತ್ತಿರುವ ಸ್ಥಿತಿಯೂ ಬಹಿರಂಗವಾಗಿದೆ. ಶೌಚಾಲಯಗಳ ಹದಗೆಟ್ಟ ಸ್ಥಿತಿ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ಅಡಚಣೆಗಳು ಶಾಲೆಯನ್ನು ಕಾಡುತ್ತಿವೆ.

Continue Reading