ಜಾಲತಾಣದಲ್ಲಿ ಮಾನಹಾನಿ, ಪ್ರಚೋದನೆ, ಆಕ್ಷೇಪಾರ್ಹ ಹೇಳಿಕೆ ವಿರುದ್ಧ ದೂರು ದಾಖಲು ; ಪೊಲೀಸರಿಗೆ ಮಾರ್ಗಸೂಚಿ

ವ್ಯಕ್ತಿಗಳ ವಿರುದ್ಧ ಮಾನಹಾನಿಯಾಗಿದೆ ಎಂದು‌ ದೂರುವ ವ್ಯಕ್ತಿಯಿಂದ ಪ್ರಕರಣ ದಾಖಲಿಸಿಕೊಳ್ಳಬೇಕು. ಗಂಭೀರ ಅಪಾದನೆಗಳು ಬಂದಾಗ ಮಾತ್ರ ಅನ್ಯರಿಂದ ದೂರು ಬಂದರೆ ಪರಿಗಣಿಸಬಹುದು.ದೂರಿನಲ್ಲಿ ಉಲ್ಲೇಖಿತ ಆಪಾದನೆಗಳು ಮೇಲ್ನೋಟಕ್ಕೆ ನಿಜವಾಗಿರಬೇಕು.‌ ಈ ಬಗ್ಗೆ ಪ್ರಾಥಮಿಕ ವಿಚಾರಣೆಯ ಬಳಿಕವಷ್ಟೇ ಪ್ರಕರಣ ದಾಖಲಿಸಬೇಕು. ದ್ವೇಷ ಬಿತ್ತುವುದು, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವುದು ಅಥವಾ ದೇಶದ್ರೋಹದಂತಹ ಆರೋಪಗಳಿದ್ದಾಗ, ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ಸ್ಪಷ್ಟ ಸಾಕ್ಷ್ಯಗಳಿದ್ದರೆ ಮಾತ್ರ ಪ್ರಕರಣ ದಾಖಲಿಸಬೇಕು. ರಾಜಕೀಯವಾಗಿ ಕಟುಟೀಕೆ, ಆಕ್ಷೇಪಾರ್ಹ ಹೇಳಿಕೆ ಆಧರಿಸಿ ಯಾಂತ್ರಿಕವಾಗಿ ಕೇಸ್ ಮಾಡಬಾರದು. ಸಂವಿಧಾನದ 19 (1) […]

Continue Reading

ಶಿವಮೊಗ್ಗ | PhD ನಕಲಿ ಸರ್ಟಿಫಿಕೇಟ್ ಜಾಲ ಪತ್ತೆ

ಬೆಂಗಳೂರು ವಿವಿಯ ಪ್ರೊಫ್ ಡಾ. ವಿಜಯಲಕ್ಷ್ಮಿ ಅವರ ಇತಿಹಾಸ ವಿಭಾಗದಲ್ಲಿ PhD ಪಡೆದಿರುವುದಾಗಿ ಶ್ರೀದೇವಿ ತಿಳಿಸಿದ್ದಾರೆ, ಆದರೆ ಡಾ. ವಿಜಯಲಕ್ಷ್ಮಿ ಅವರು ಸುವರ್ಣ ನ್ಯೂಸ್ ಗೆ ನನ್ನ ಮಾರ್ಗದರ್ಶನದಲ್ಲಿ ಈ ವಿದ್ಯಾರ್ಥಿನಿ PhD ಮಾಡಿಲ್ಲ ಎಂದು ದೃಡೀಕರಿಸಿದ್ದಾರೆ. 2025ರ ಡಿಸೆಂಬರ್ 11 ರಂದು ಶಿವಮೊಗ್ಗದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಅತಿಥಿ ಉಪನ್ಯಾಸಕರಾಗಿ ಕೆಲಸಕ್ಕೆ ಸೇರ್ಪಡೆಯಾಗಿದ್ದರು. ಇನ್ನು ಈ ಪಿ ಎಚ್ ಡಿ, ಸರ್ಟಿಫಿಕೇಟ್ ನೈಜತೆ ದೃಡೀಕರಿಸಲು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಕಳಿಸಿದ ಪತ್ರಕ್ಕೆ ಇದೊಂದು ನಕಲಿ […]

Continue Reading

ಬೆಂಗಳೂರು | ಮನೆಯಲ್ಲಿ ಬೈದ್ರು ಅಂತ KSRTC ಉಚಿತ ಬಸ್ ಹತ್ತಿಕೊಂಡು ಭದ್ರಾವತಿಗೆ ಬಂದ ಮಕ್ಕಳ ರಕ್ಷಿಸಿದ ಪೊಲೀಸರು

ಶಕ್ತಿ ಯೋಜನೆಯ ಅಡಿಯಲ್ಲಿ ಆಧಾರ್ ಕಾರ್ಡ್ ತೋರಿಸಿ ತನಗೆ ಉಚಿತ ಟಿಕೆಟ್ ಮಾಡಿಸಿಕೊಂಡ ಬಾಲಕಿ, ತಮ್ಮನಿಗೆ ಉಚಿತ ಪ್ರಯಾಣದ ಟಿಕೆಟ್ ಮಾಡಿಸಿದ್ದಳು. ತಮ್ಮನ ಜೊತೆಗೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರೆಗೂ ಪ್ರಯಾಣ ಬೆಳೆಸಿದ್ದಳು. ಈ ಮಧ್ಯೆ ಪೋಷಕರು ಮಕ್ಕಳು ಕಾಣದೇ ಪೊಲೀಸರ ಮೊರೆ ಹೋಗಿದ್ದರು. ಇನ್ನೂ ಪೊಲೀಸರು ಸಹ ತಡಮಾಡದೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಕ್ಕಳು ಬ್ಯಾಗ್ ಹಿಡಿದುಕೊಂಡು ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೋಗಿರುವುದು ಕಾಣಿಸಿದೆ. ಬಸ್​ನಿಲ್ದಾಣದ ದೃಶ್ಯಗಳನ್ನ ಪರಿಶೀಲಿಸಿದ ಅವರಿಗೆ ಇಬ್ಬರು ಮಕ್ಕಳು ಶಿವಮೊಗ್ಗದ ಬಸ್ ಹತ್ತಿರುವುದು […]

Continue Reading

ಭದ್ರಾ ಅಣೆಕಟ್ಟಿನ ಆಡಳಿತವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಡಿಸಿಎಂ ಡಿ.ಕೆ.ಶಿಗೆ ಮನವಿ

ರೈತ ಸಂಘದ ರಾಜ್ಯಾಧ್ಯಕ್ಷರಾದ ಹೆಚ್.ಆರ್. ಬಸವರಾಜಪ್ಪ, ಶಾಸಕರಾದ ಶಾಂತನಗೌಡ (ಹೊನ್ನಾಳಿ), ಬಸವರಾಜ್ ಶಿವಗಂಗಾ (ಚನ್ನಗಿರಿ), ಬಸವಂತಪ್ಪ (ಮಾಯಕೊಂಡ), ಲತಾ ಮಲ್ಲಿಕಾರ್ಜುನ (ಹರಪನಹಳ್ಳಿ) ಅವರು ಈ ನಿಯೋಗದಲ್ಲಿದ್ದರು. ಈ ಬಗ್ಗೆ ಸಭೆ ನಡೆಸುವುದಾಗಿ ಹೇಳಿದ ಡಿಸಿಎಂ ಅವರಿಗೆ ನಿಯೋಗವು ಧನ್ಯವಾದ ತಿಳಿಸಿತು.

Continue Reading

ಬೆಂಗಳೂರು | ಪ್ರಾದೇಶಿಕ ಅಭಿವೃದ್ಧಿ ಮಂಡಳಿಗಳನ್ನು ರದ್ದುಗೊಳಿಸಿ ; ಗೋವಿಂದ ರಾವ್ ಸಮಿತಿ ಶಿಫಾರಸು

ಮಂಡಳಿಗಳ ರದ್ದತಿಯೊಂದಿಗೆ, ಬಜೆಟ್ ಹಣವನ್ನು ಜಿಲ್ಲಾ ಪಂಚಾಯತ್‌ಗಳ ಮೂಲಕ ಪರಿಣಾಮಕಾರಿ-ಫಲಿತಾಂಶ ಆಧಾರಿತ ಕಾರ್ಯಕ್ರಮಗಳಿಗಾಗಿ ಬಳಸಬೇಕು ಎಂದು ಸಮಿತಿ ತಿಳಿಸಿದೆ. ಕರ್ನಾಟಕ ಸರ್ಕಾರವು ಮಾರ್ಚ್ 2024 ರಲ್ಲಿ ರಚಿಸಿದ ಸಮಿತಿಯು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನ್ನ ವರದಿಯನ್ನು ಸಲ್ಲಿಸಿತು. ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮಂಡಿಸುವ ಮೊದಲು ಫೆಬ್ರವರಿ 11 ರಂದು ಪ್ರಸ್ತುತಿ ಮಾಡುವಂತೆ ಸಿದ್ದರಾಮಯ್ಯ ಸಮಿತಿಯನ್ನು ಕೇಳಿಕೊಂಡರು.

Continue Reading

ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ; ಅಧ್ಯಕ್ಷೆಯಾಗಿ ಜಯಮಾಲಾ ಆಯ್ಕೆ

ಉಪಾಧ್ಯಕ್ಷ, ಖಜಾಂಚಿ ಮುಂತಾದ ಪದಾಧಿಕಾರಿಗಳ ಸ್ಥಾನಗಳಿಗೂ ಚುನಾವಣೆ ನಡೆದಿತ್ತು. ಅದರಂತೆ ಗೌರವ ಉಪಾಧ್ಯಕ್ಷರಾಗಿ ನಿರ್ಮಾಪಕರ ವಲಯದಿಂದ ಸುಂದರ್ ರಾಜ್‌ ಗೆದ್ದು ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ರೆ, ಎಕ್ಸಿಬ್ಯೂಟರ್‌ ವಲಯದಿಂದ ಕಿಶೋರ್, ಡಿಸ್ಟ್ರಿಬ್ಯೂಟರ್ ವಲಯದಿಂದ ಕೆ ಮಂಜು ಉಪಾಧ್ಯಕ್ಷರಾಗಿದ್ದಾರೆ. ನಿರ್ಮಾಪಕರ ವಲಯದಿಂದ ಎ ಗಣೇಶ್, ಡಿಸ್ಟ್ರಿಬ್ಯೂಟರ್ ವಲಯದಿಂದ ರಮೇಶ್, ಎಕ್ಸಿಬ್ಯೂಟರ್ ವಲಯದಿಂದ ಅಶೋಕ್‌ ಕಾರ್ಯದರ್ಶಿ ಸ್ಥಾನಗಳಿಗೆ ಚುನಾಯಿತರಾಗಿದ್ದಾರೆ. ಇನ್ನೂ ನಟ ಜಯಸಿಂಹ ಮುಸುರಿ ಖಜಾಂಚಿಯಾಗಿ ಆಯ್ಕೆ ಆಗಿದ್ದಾರೆ. 2024 – 25ನೇ ಸಾಲಿನ ಚುನಾವಣೆಯಲ್ಲಿ ಎಂ. ನರಸಿಂಹಲು ಗೆದ್ದು ಅಧ್ಯಕ್ಷರಾಗಿದ್ದರು. […]

Continue Reading

ಸಿ.ಜೆ.ರಾಯ್ ಕೇಸ್ ; ಐಟಿ ಅಧಿಕಾರಿಗಳ ಮೇಲೆ ಆರೋಪವಿಲ್ಲ

ಹತ್ತು ನಿಮಿಷಗಳ ನಂತರ ಟಿ.ಎ. ಜೋಸೆಫ್ ಅವರು ಕ್ಯಾಬಿನ್ ಬಳಿ ಹೋಗಿ ನೋಡಿದಾಗ ಸೆಕ್ಯೂರಿಟಿ ಸಿಬ್ಬಂದಿ ರಾಯ್ ಅವರ ಸೂಚನೆಯ ಬಗ್ಗೆ ತಿಳಿಸಿದರು. ಮತ್ತೊಂದು ಹತ್ತು ನಿಮಿಷ ಕಳೆದು ಜೋಸೆಫ್ ಅವರು ಡೋರ್ ತಟ್ಟಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.ಬಾಗಿಲು ಒಳಗಿನಿಂದ ಲಾಕ್ ಆಗಿದ್ದ ಕಾರಣ, ಅನುಮಾನಗೊಂಡು ಬಾಗಿಲು ಒಡೆದು ಒಳಗೆ ಹೋದಾಗ ಸಿ.ಜೆ.ರಾಯ್ ಅವರು ತಮ್ಮ ಚೇರ್ ಮೇಲೆಯೇ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಆಂಬುಲೆನ್ಸ್‌ಗೆ ಕರೆ ಮಾಡಲಾಯಿತು. ಸ್ಥಳಕ್ಕೆ ಬಂದ ವೈದ್ಯಕೀಯ ಸಿಬ್ಬಂದಿ ಪಲ್ಸ್ […]

Continue Reading

ಶಿವಮೊಗ್ಗ | ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ದ ಲೋಕಾಯುಕ್ತದಲ್ಲಿ ಸುಮೋಟೊ ಪ್ರಕರಣ ದಾಖಲು

ಈ ಸಂಬಂಧ ಮಹಾನಗರ ಪಾಲಿಕೆಯು ರಾಜ ಕಾಲವೇ ಒತ್ತುವರಿ ತೆರವುಗೊಳಿಸಲು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಸುದ್ದಿಯನ್ನು ಇ-ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ ಸುದ್ದಿಯನ್ನು ಬಿತ್ತರಿಸಿತ್ತು. ಲೋಕಾಯುಕ್ತದಲ್ಲಿ ಸುಮೋಟೋ ಪ್ರಕರಣ ಲೋಕಾಯುಕ್ತ ನ್ಯಾಯಮೂರ್ತಿಗಳು ಸಾರ್ವಜನಿಕ ಹಿತಾಸಕ್ತಿಯ ಸುದ್ದಿ ಹಾಗೂ ಸಾರ್ವಜನಿಕರ ಅಹವಾಲನ್ನು ಗಮನಿಸಿ ಪಾಲಿಕೆ ಅಧಿಕಾರಿಗಳ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.‌ ಮಾನ್ಯ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಫಣೀಂದ್ರ ಅವರು ಮಹಾನಗರ ಪಾಲಿಕೆಯ ಅಧಿಕಾರಿಗಳಾದ ಶ್ರೀಮತಿ ಜ್ಯೋತಿ ಎಇಇ ಹಾಗೂ ಜೆಇ ವಸಂತ್ ಕುಮಾರ್ ವಿರುದ್ದ ಸುಮೋಟೊ ಪ್ರಕರಣ […]

Continue Reading