ಶಿವಮೊಗ್ಗ | ಬೊಲೆರೋ ಪಿಕಪ್​ ವಾಹನ ಕಳ್ಳತನ

ತಕ್ಷಣವೇ ಅಂಗಡಿ ಸಿಬ್ಬಂದಿ ಮೊಹಮದ್ ಅಬ್ದುಲಾ ಈ ವಿಷಯವನ್ನು ವಾಹನ ಮಾಲೀಕರಿಗೆ ತಿಳಿಸಿದ್ದಾರೆ. ಕಳುವಾದ ವಾಹನಕ್ಕಾಗಿ ಅಕ್ಕಪಕ್ಕ ಹಾಗೂ ಎಲ್ಲೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ, ಮಾಲೀಕರು ತುಂಗಾನಗರ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

Continue Reading

ತೀರ್ಥಹಳ್ಳಿ | ಕುಡಿಯುವ ನೀರಿನ ಮೋಟರ್​ ಕಳ್ಳತನ

ಯಾರೋ ಅಪರಿಚಿತ ಕಳ್ಳರು ರಾತ್ರೋರಾತ್ರಿ ಬಾವಿಗೆ ಇಳಿದು ಮೋಟಾರ್‌ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಖಾತ್ರಿಯಾದ ತಕ್ಷಣ, ನೀರುಗಂಟೆಯು ಈ ವಿಷಯವನ್ನು ಪಿ,ಡಿ,ಒ ಅವರಿಗೆ ತಿಳಿಸಿದ್ದಾರೆ. ಕಳ್ಳತನವಾಗಿರುವ ಎರಡು ಮೋಟಾರ್‌ಗಳ ಒಟ್ಟು ಅಂದಾಜು ಮಾರುಕಟ್ಟೆ ಬೆಲೆ ಸುಮಾರು 70,000 ರೂಪಾಯಿಗಳಾಗಬಹುದು ಎಂದು ಅಂದಾಜಿಸಲಾಗಿದೆ. ಮೋಟರ್​​ನ್ನು ಕಳ್ಳತನ ಮಾಡಿರುವ ದುಷ್ಕರ್ಮಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಾನೂನು ರೀತ್ಯ ಕಠಿಣ ಕ್ರಮ ಕೈಗೊಳ್ಳಬೇಕೆಂದು pdo ತೀರ್ಥಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Continue Reading

ಭದ್ರಾವತಿ | ಮದುವೆ ಸಮಾರಂಭಕ್ಕೆ ಹೊರಟ ಯುವಕನಿಗೆ ಚೂರಿ ಇರಿತ

ಯುವಕರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯ ಕ್ಯಾಂಟೀನ್ ಒಂದರ ಮುಂಭಾಗದಲ್ಲಿ ಸಾಗುತ್ತಿದ್ದಾಗ, ಅಲ್ಲೇ ನಿಂತಿದ್ದ ಆಟೋದಲ್ಲಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಇವರನ್ನು ಕೂಗಿ ಕರೆದಿದ್ದಾರೆ. ಪರಿಚಯದವರೇ ಇರಬಹುದೆಂದು ಭಾವಿಸಿ ಯುವಕರು ಹತ್ತಿರ ಹೋದಾಗ, ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಗಳ ಪೈಕಿ ಒಬ್ಬ ನಿಮ್ಮನ್ನು ಇಂದು ಮುಗಿಸುತ್ತೇನೆ ಎಂದು ಕಿರುಚುತ್ತಾ ಚಾಕುವಿನಿಂದ ಪೈಜಾನ್ ಅವರ ಎದೆಯ ಬಲಬದಿಗೆ ಇರಿದಿದ್ದಾನೆ ಎನ್ನಲಾಗಿದೆ. ಘಟನೆಯಿಂದ ಪೈಜಾನ್ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಮತ್ತೊಬ್ಬ ವ್ಯಕ್ತಿ ಕಲ್ಲಿನಿಂದ […]

Continue Reading

ಕುಂದಾಪುರದಲ್ಲಿ ಓದುತ್ತಿರುವ ಶಿವಮೊಗ್ಗದ ವಿದ್ಯಾರ್ಥಿನಿಯಿಂದ Hydrovid ಗಾಂಜಾ ವಶ

ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿತೆ ಚೆನ್ನೈನಿಂದ ಮಾದಕ ವಸ್ತುವನ್ನು ತಂದು ಮಂಗಳೂರಿನಲ್ಲಿ ಅಕ್ರಮವಾಗಿ ಪೂರೈಕೆ ಮಾಡಿ ಹಣಗಳಿಸುವ ಉದ್ದೇಶ ಹೊಂದಿದ್ದಳು ಎಂಬುದು ತಿಳಿದುಬಂದಿದೆ. ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 32/2026ರಡಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(ಸಿ) ಮತ್ತು 20(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಣಂಬೂರು ಎಸಿಪಿ ತಂಡ ಹಾಗೂ ಮುಲ್ಕಿ ಠಾಣೆ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.ಆರೋಪಿತೆಯ ವಿರುದ್ಧ ಈ ಹಿಂದೆ ಕೂಡ ಹಲವು ಪ್ರಕರಣಗಳು ದಾಖಲಾಗಿವೆ

Continue Reading

ಶಿವಮೊಗ್ಗ | ನಾಪತ್ತೆಯಾಗಿದ್ದ ಅಡಿಕೆ ತುಂಬಿದ್ದ ಲಾರಿ ಮಾಲು ಸಹಿತ ಪತ್ತೆ

ಮುಹಿಬುಲ್ಲಾ ಮಾ. ೨೬ ರಂದು ರಾತ್ರಿ ೧೧ ಗಂಟೆಗೆ ಅಡಿಕೆ ತುಂಬಿದ ಲಾರಿಯನ್ನು ಬೆಂಗಳೂರು ಕಡೆಗೆ ಹೋಗಲು ಶಿವಮೊಗ್ಗದಿಂದ ಹೊರಟಿದ್ದನು. ನಂತರ ಈ ಲಾರಿ ಯಶವಂತಪುರಕ್ಕೆ ಹೋಗಿರಲಿಲ್ಲ. ಹುಡುಕಾಡಿದಾಗ ಚಾಲಕ ಮುಹಿಬುಲ್ಲಾ ಮಾರನೆಯ ದಿನ ಶಿವಮೊಗ್ಗದಲ್ಲಿ ಸಿಕ್ಕಿದ್ದು ವಿಚಾರಿಸಲಾಗಿ ಶಿವಮೊಗ್ಗ ವಾಸಿ ಮೊಹಮದ್ ಗೌಸ್ ಮತ್ತು ನೌಶದ್ ತನ್ನ ಜೊತೆ ಲಾರಿಯಲ್ಲಿ ಬಂದು ಹೊಳೆಹೊನ್ನೂರು ಕೈಮರ ಬಳಿ ಪೆಟ್ರೋಲ್ ಬಂಕ್ ಹತ್ತಿರ ರಾತ್ರಿ ೧೨.೨೦ ಗಂಟೆ ವೇಳೆ ಲಾರಿಯಲ್ಲಿದ್ದ ಅಡಿಕೆಯನ್ನು ಮೂವರೂ ಸೇರಿ ಮಾರಾಟ ಮಾಡೋಣ. ಇದರಿಂದ […]

Continue Reading

ಶಿಕಾರಿಪುರ | ಅಡಿಕೆ ಕಳ್ಳತನ ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

ಶಿಕಾರಿಪುರ ಇನ್ಸ್‌ಪೆಕ್ಟರ್‌ ಸಂತೋಷ್‌ ಎಂ.ಪಾಟೀಲ್‌, ಶಿರಾಳಕೊಪ್ಪ ಪಿಎಸ್ಐ ಪ್ರಶಾಂತ ಕುಮಾರ ಟಿ.ಬಿ. ನೇತೃತ್ವದ ತಂಡವು ತನಿಖೆ ನಡೆಸಿತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಕಳುವಾಗಿದ್ದ ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ್ದ ಗೂಡ್ಸ್‌ ವಾಹನವನ್ನು ವಶಕ್ಕೆ ಪಡೆದ ಶಿರಾಳಕೊಪ್ಪ ಠಾಣೆ ಪೊಲೀಸರು. ಆರೋಪಿ 1: ಮಹಮ್ಮದ್ ಮನ್ಸೂರ್ (30), ಕುಂಬಾರ್ ಗುಂಡಿ ಕೊಪ್ಪಲು, ಶಿಕಾರಿಪುರ ಟೌನ್.ಆರೋಪಿ 2: ಷಹಾದ ಉಲ್ಲಾ (35), ಗಬ್ಬೂರು, ಶಿಕಾರಿಪುರ […]

Continue Reading

ಸಾಗರ | ಬೀಗ ಹಾಕಿದ್ದ ಮನೆಯಿಂದ 50 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಕಳ್ಳತನ

ಇಂದು ಮನೆಗೆ ಮರಳಿದ ಕುಟುಂಬಸ್ಥರಿಗೆ ಬಾಗಿಲು ಮುರಿದಿರುವುದು ಮತ್ತು ಮನೆಯೊಳಗಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡುಬಂದಿದೆ. ಕೂಡಲೇ ನಂದನ ಕುಮಾರ್ ಅವರು ಸಾಗರ ಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ರಕ್ಷಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading

ಜೈಲಿಗೆ ಹೋಗಿ ಬಂದ್ರು ಬುದ್ಧಿ ಕಲಿಯದ ರಜತ್!

ಹಿಂದೆ ಬೆಂಕಿ.. ಮುಂದೆ ಮಾಡಿಫೈ ಆಗಿರುವ ಬುಲೆಟ್ ಓಡಿಸುತ್ತಾ ತಾವು ಬರುವ ರೀಲ್ಸ್‌ನ ರಜತ್ ಶೇರ್‌ ಮಾಡಿಕೊಂಡಿದ್ದಾರೆ. ಇದಕ್ಕೆ, ಸುಮ್ಮನೆ ತಮಾಷೆಗೆ ಮಾಡಿರೋ ಶೂಟ್. ಇದಕ್ಕೂ ಒಂದು ಕೇಸ್ ಹಾಕ್ಬೇಡ್ರಪ್ಪಾ ರಾಜ’’ ಎಂದು ರಜತ್ ಬರೆದುಕೊಂಡಿದ್ದಾರೆ.ಜೊತೆಗೆ, ‘’ಈ ಕಂಟೆಂಟ್ ಕ್ರಿಯೇಟ್ ಮಾಡಿರೋದು ಚಿತ್ರೀಕರಣದ ಸಲುವಾಗಿ ಮಾತ್ರ. ಎಲ್ಲಾ ಅವಶ್ಯಕ ಸುರಕ್ಷತಾ ಕ್ರಮಗಳನ್ನ ಕೈಗೊಂಡು, ಪರಿಣತಿ ಹೊಂದಿರುವ ತಜ್ಞರಿಂದ ಮುನ್ನೆಚ್ಚರಿಕಾ ಕ್ರಮಗಳನ್ನ ಪಾಲಿಸಿ ಈ ಚಿತ್ರೀಕರಣ ಮಾಡಿದ್ದೇವೆ. ಇದನ್ನ ಅನುಕರಿಸಬೇಡಿ. ಇದನ್ನ ಮರುಸೃಷ್ಟಿಸಬೇಡಿ. ಬೆಂಕಿ ಅಪಾಯಕಾರಿ. ಚಿತ್ರೀಕರಣದ ವೇಳೆ […]

Continue Reading

ಅಂಗಡಿ ರಜಾ ಎಂದು ಬೋರ್ಡ್ ಹಾಕುವ ಮುನ್ನ ಇರಲಿ ಎಚ್ಚರ..!

ಇದನ್ನೇ ಗಮನಿಸಿದ ಕಳ್ಳರು ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಕೈಚಳಕ ತೋರಿದ್ದಾರೆ. ಲಕ್ಷಾಂತರ ಮೌಲ್ಯದ ದೋಚಿದ ಖದೀಮರು ಏಪ್ರಿಲ್ 26ರಂದು ಕುಟುಂಬವು ಪ್ರವಾಸ ಮುಗಿಸಿ ಹಿಂತಿರುಗಿದಾಗ ಮನೆಯ ಮುಂಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದೆ. ಮನೆಯ ಒಳಗಿದ್ದ ಅಲ್ಮೇರಾವನ್ನು ಒಡೆದ ಕಳ್ಳರು, ಸುಮಾರು 22 ಗ್ರಾಂ ತೂಕದ ಚಿನ್ನದ ಸರ ಹಾಗೂ 90,000 ರೂಪಾಯಿ ನಗದನ್ನು ಅಪಹರಿಸಿದ್ದಾರೆ. ಒಟ್ಟು ನಷ್ಟದ ಮೌಲ್ಯ ಲಕ್ಷಾಂತರ ರೂಪಾಯಿಗಳೆಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಕಾರ್ಗಲ್ ಪಿಎಸ್‌ಐ ನಾಗರಾಜು, ಶ್ವಾನದಳ ಹಾಗೂ ಬೆರಳಚ್ಚು […]

Continue Reading