ಶಿವಮೊಗ್ಗ | ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿ ಅಡ್ಡಗಟ್ಟಿ ಕೊಲೆ ಯತ್ನ

ಬೈಕಿನಿಂದ ಕೆಳಗೆ ಬಿದ್ದ ದೂರುದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿ ಮತ್ತು ಆತನ ಮಕ್ಕಳು ಮನಬಂದಂತೆ ಥಳಿಸಿದ್ದಾರೆ. ತದನಂತರ ಆರೋಪಿ ಇವನನ್ನು ಸಾಯಿಸಿಬಿಡಿ ಎಂದು ಕೂಗಿದಾಗ, ಆತನ ಮಗ ಕಾರಿನಿಂದ ಕಬ್ಬಿಣದ ರಾಡ್ ತಂದಿದ್ದಾನೆ. ಅದನ್ನು ಕಸಿದುಕೊಂಡ ಮತ್ತೊಬ್ಬ ಮಗ ದೂರುದಾರರ ತಲೆಯ ಹಿಂಭಾಗ, ಹಣೆಯ ಎಡಭಾಗ ಹಾಗೂ ಎರಡು ಮೊಣಕೈಗಳಿಗೆ ಬಲವಾಗಿ ಹೊಡೆದು ರಕ್ತಗಾಯಗೊಳಿಸಿದ್ದಾನೆ. ದೂರುದಾರರು ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆ, ಸತ್ತಿದ್ದಾನೆ ಎಂದು ಭಾವಿಸಿದ ಹಂತಕರ ಗುಂಪು ಕಾರಿನಲ್ಲಿ ಪರಾರಿಯಾಗಿದೆ.ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುವನ್ನು ತಕ್ಷಣವೇ […]

Continue Reading

ಸರ್ಕಾರದ ಜಂಟಿ ಕಾರ್ಯದರ್ಶಿಯಾಗಿ ತೀರ್ಥಹಳ್ಳಿಯ ಬಿದರಗೋಡಿನ ಶ್ರೀಧರ್ ನೇಮಕ

ಜೊತೆಗೆ ಗ್ಯಾರಂಟಿ ಯೋಜನೆಗಳು ಹಾಗೂ ಸರ್ಕಾರದ ಇನ್ನಿತರ ಜನಪರ ಯೋಜನೆಗಳ ಸಮರ್ಪಕ ಉಸ್ತುವಾರಿ ಮತ್ತು ಅನುಷ್ಠಾನದ ಮೇಲ್ವಿಚಾರಣೆ. ಇವೆಲ್ಲದರ ಜೊತೆಗೆ ನೂತನ ಮುಖ್ಯಮಂತ್ರಿಗೆ ತಮ್ಮ ಆಡಳಿತಾತ್ಮಕ ಅನುಭವದಿಂದ ಪರಿಣಾಮಕಾರಿಯಾದಂತ ಜನಪರ ಸಲಹೆ ನೀಡುವುದು ಮತ್ತು ಮುಖ್ಯವಾಗಿ ನೀತಿ ನಿರೂಪಣೆ ವಿಚಾರದಲ್ಲಿ ರಾಜ್ಯದ ಸಮಗ್ರ ಜನತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮುನ್ನಡೆಯಲು ಬೇಕಾದ ಸಲಹೆ ನೀಡುವುದು ಅವರ ಜವಾಬ್ದಾರಿಯಾಗಲಿದೆ. ಬಿದರಗೋಡು ಶ್ರೀಧರ್ ಲೋಕೋಪಯೋಗಿ ನಿವೃತ್ತ ಮುಖ್ಯ ಇಂಜಿನಿಯರ್ ಬಿ.ಎಸ್. ಬಾಲಕೃಷ್ಣ, ತೀರ್ಥಹಳ್ಳಿ ತುಂಗಾ ಕಾಲೇಜು ನಿವೃತ್ತ ಪ್ರಾಂಶುಪಾಲ ಬಿ.ಎಸ್.ನಾಗರಾಜ್ ಅವರ […]

Continue Reading

ಶಿವಮೊಗ್ಗ | ಜೆಡಿಎಸ್ ರಾಜ್ಯ ವಕ್ತಾರರಾದ ರಾಜು ಗೌಡರಿಂದ BLA ತರಬೇತಿ ಕುರಿತು ಕಾರ್ಯಾಗಾರ

ಹಾಗೂ ಬೇರೆ ದೇಶಗಳಗಿಂದ ಬಂದು ನಮ್ಮ ಹಕ್ಕು ಕಸಿದುಕೊಳ್ಳುವಂತೆ ಆಗಬಾರದು ಎಂದರು. ನಕಲಿ ಮತದಾನ ತಡೆಗಟ್ಟುವಲ್ಲಿಯೂ SIR ಮುಖ್ಯವಾಗಿದೆ ಎಂದು ತಿಳಿಸಿದರು. ಪ್ರತಿ BLO ಅಧಿಕಾರಿಗಳು ಅಂದರೆ ಶಿಕ್ಷಕರು ಅಥವಾ ಅಂಗನವಾಡಿ ಸಹಾಯಕರು ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡುವ ಮೂಲಕ ಮತದಾರ ಪಟ್ಟಿ ಪರಿಷ್ಕರಣೆ ಮಾಡುತ್ತಾರೆ ಹಾಗಾಗಿ ಈ ಸಂದರ್ಭದಲ್ಲಿ BLA ಗಳಾದ ಜೆಡಿಎಸ್ ಬೂತ್ ಮಟ್ಟದ ಕಾರ್ಯಕರ್ತರು ತಮ್ಮ ತಮ್ಮ ಬೂತ್ ಮಟ್ಟದಲ್ಲಿ ತಮ್ಮ ಸ್ಥಳೀಯರು ಯಾರದಾದ್ರೂ ಹೆಸರು ಸೇರ್ಪಡೆ ಅಥವಾ ಬಿಟ್ಟು ಹೋಗಿದಲ್ಲಿ […]

Continue Reading

ಶಿವಮೊಗ್ಗ | ಗೋವಿಂದಾಪುರ ಅಕ್ರಮ ನಿವೇಶನ ; ಅಧಿಕಾರಿಗಳಿಂದ ಸೂಕ್ತ ತನಿಖೆಯಾಗುವುದೇ..?

ಈ ಪ್ರಕರಣ ಸಂಬಂಧ ಸ್ಥಳೀಯರು ಆರೋಪಿಸುವ ವಿಷಯ ಏನಂದರೆ ಪುರಾದಾಳ್ ಗ್ರಾಮ ಪಂಚಾಯತ್ ಸದಸ್ಯರೊಬ್ಬರ ಪತಿಯ ಮೇಲೆ ಗಂಭೀರ ಆರೋಪ ಕೇಳಿ ಬರುತ್ತಿದೆ. ಅದೇನಂದರೆ ಅಗಸವಳ್ಳಿ ಗ್ರಾಮ ಪಂಚಾಯತ್ ಗೋವಿಂದಾಪುರ ಗ್ರಾಮದ ಸರ್ವೇ ನಂಬರ್ 4 ಮತ್ತು 48 ರಲ್ಲಿ ಸರ್ಕಾರಿ ಜಾಗದ ಸರಿ ಸುಮಾರ್ 10 ಕ್ಕು ಹೆಚ್ಚು ಎಕರೆ ಅಕ್ರಮ ನಿವೇಶನ ನಿರ್ಮಿಸಲಾಗಿದೆ. ಒಂದೊಂದ್ ನಿವೇಶನಕ್ಕು ಸರಿ ಸುಮಾರ್ 8 ರಿಂದ 10 ಲಕ್ಷ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಹಾಗೂ ಈ […]

Continue Reading

ಶಿವಮೊಗ್ಗ | ಎಸ್ಡಿಪಿಐ ಪಕ್ಷದ “ಜಿಲ್ಲಾ ಪ್ರತಿನಿಧಿಗಳ ಸಭೆ”

ಇದರ ಸಂಪೂರ್ಣ ಮಾಹಿತಿ. ಹೈಕೋರ್ಟ್ ಸಂಚಾರಿ ಪೀಠವನ್ನು ಶಿವಮೊಗ್ಗಕ್ಕೆ ನೀಡಲು ಎಸ್‌ಡಿಪಿಐ ಆಗ್ರಹ.ಶಿವಮೊಗ್ಗ: ರಾಜ್ಯ ಸರ್ಕಾರವು ಹೈಕೋರ್ಟ್ ಸಂಚಾರಿ ಪೀಠವನ್ನು ಶಿವಮೊಗ್ಗ ಜಿಲ್ಲೆಗೆ ಮಂಜೂರು ಮಾಡಬೇಕು ಎಂದು ಎಸ್‌ಡಿಪಿಐ (SDPI) ಜಿಲ್ಲಾಧ್ಯಕ್ಷರಾದ ಜೀಲಾನ್ ಖಾನ್ ಒತ್ತಾಯಿಸಿದ್ದಾರೆ. ಇಂದು ನಡೆದ ಪಕ್ಷದ ಜಿಲ್ಲಾ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಂಗಳೂರಿಗೆ ಹೈಕೋರ್ಟ್ ಸಂಚಾರಿ ಪೀಠವನ್ನು ನೀಡುವುದು ಹಲವು ಗೊಂದಲಗಳಿಗೆ ದಾರಿ ಮಾಡಿಕೊಡುತ್ತದೆ ಎಂದರು. ಶಿವಮೊಗ್ಗ ನಗರವು ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಸುಲಭವಾಗಿ ತಲುಪಬಹುದಾದ ಕೇಂದ್ರ ಬಿಂದುವಾಗಿದೆ. ಅಕ್ಕಪಕ್ಕದ ಜಿಲ್ಲೆಗಳಿಂದ […]

Continue Reading

ಶಿವಮೊಗ್ಗ | ಕಾರ್ಯನಿರತ ಪತ್ರಕರ್ತರ ಸಂಘದ ಮುಖಾಮುಖಿ ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರು ಸಮಸ್ಯೆಗಳಿಗೆ ಪರಿಹಾರ ತಿಳಿಸಿದಿಷ್ಟು!

ಮತ್ತೆ ಕೆಲವು ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸಿ ಪರಿಹಾರ ಒದಗಿಸುವುದಾಗಿ ತಿಳಿಸಿದರು. ಪರಿಸರ ರಮೇಶ್ ನವುಲೆ ಕರೆಗೆ ಕಲುಷಿತ ನೀರು ಸೇರ್ಪಡೆಯಾಗುತ್ತಿದೆ. ಹೂಳೆತ್ತುವ ಅಭಿವೃದ್ದಿ ಕಾರ್ಯ ವಿಳಂಬ ಪ್ರಸ್ತಾಪಿಸಿದರು. ಸೂಡಾ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಜಂಟಿಯಾಗಿ ಡಿಪಿಆರ್ ಸಿದ್ದಪಡಿಸುತ್ತಿದ್ದು ನವುಲೆ ಕರೆ ಅಭಿವೃದ್ದಿ ಪಡಿಸಲು ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಮುಂದಾಗಿದೆ ಎಂದು ತಿಳಿಸಿದರು. ಕೈಗಾರಿಕಾ ವಾಣಿಜ್ಯ ಸಂಘದ ಗೋಪೀನಾಥ್ ಮಳೆಗಾಲದಲ್ಲಿ ಮನೆಗಳಿಗೆ ಕಲುಷಿತ ನೀರು ಸರಬರಾಜಾಗುತ್ತಿದೆ. ಶುದ್ದ ಕುಡಿಯುವ ನೀರಿನ ಘಟಕಗಳು ಹಳೆಯದಾಗಿದ್ದು ಸರಿಯಾದ ನಿರ್ವಹಣೆ […]

Continue Reading

ಶಿವಮೊಗ್ಗ | ಗೃಹಲಕ್ಷ್ಮೀ ಯೋಜನೆ ; 9,247 ಫಲಾನುಭವಿಗಳು ನಿಧನ, 5,618 ಅನರ್ಹರು : ಸಿ.ಎಸ್.ಚಂದ್ರಭೂಪಾಲ್

ಜಿಲ್ಲೆಯ ವರದಿಯ ಪ್ರಕಾರ ಇಂತಹ 5,618 ಅನರ್ಹರು ಯೋಜನೆಯ ಲಾಭ ಪಡೆಯುತ್ತಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಹೀಗಾಗಿ ಇಂತಹ ಅನರ್ಹರನ್ನು ಫಲಾನುಭವಿಗಳ ಪಟ್ಟಿಯಿಂದ ತಕ್ಷಣವೇ ತೆಗೆದುಹಾಕಲು ಕಟ್ಟುನಿಟ್ಟಿನ ಕ್ರಮ ಅನಿವಾರ್ಯವಾಗಿದೆ ಎಂದು ಸಭೆ ತಿಳಿಸಿದೆ. ಉಚಿತ ವಿದ್ಯುತ್ ದುರ್ಬಳಕೆ – ವಾಣಿಜ್ಯ ಬಳಕೆಗೆ ಬ್ರೇಕ್: ‘ಗೃಹಜ್ಯೋತಿ’ ಯೋಜನೆಯಡಿ ಗೃಹಬಳಕೆಗಾಗಿ ನೀಡಲಾಗುವ 200 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡು, ಕೆಲವರು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವುದು ಕಂಡುಬಂದಿದೆ. ಅಲ್ಲದೆ, ಒಬ್ಬರ ಹೆಸರಲ್ಲೇ ಒಂದಕ್ಕಿಂತ ಹೆಚ್ಚು ಮೀಟರ್‌ಗಳಿರುವುದು ಪತ್ತೆಯಾಗಿದೆ. […]

Continue Reading

ದಾವಣಗೆರೆ | ಜಿಮ್ ಮುಗಿಸಿ ಮನೆಗೆ ಬಂದ ಬಾಡಿ ಬಿಲ್ಡರ್ ಕುಸಿದು ಬಿದ್ದು ಸಾವು

ಸುಶೀಲ್ ಕುಮಾರ್ ಅವರ ತಾಯಿ ದೇವಮ್ಮ ಜಿಲ್ಲಾಸ್ಪತ್ರೆಯಲ್ಲಿ ಡಿ ಗ್ರೂಪ್​ನಲ್ಲಿ ಕೆಲಸ ಮಾಡುತ್ತಿದ್ದು, ಮುಂದೆ ನನಗೆ ಆಸರೆ ಯಾರು ಎಂದು ಗೋಳಾಡುತ್ತಿರುವುದು ಎಲ್ಲರನ್ನೂ ಭಾವುಕರನ್ನಾಗಿಸಿತು.

Continue Reading

ಶಿವಮೊಗ್ಗ | ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಮನವಿ ತಿರಸ್ಕರಿಸಲು ಪ್ರಧಾನಿಗೆ ಈಶ್ವರಪ್ಪ ಆಗ್ರಹ

ಈ ಇಡೀ ವಿಷಯವು ಪ್ರಸ್ತುತ ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಅಷ್ಟೇ ಅಲ್ಲದೆ, ಯಾವುದೇ DPR ಇಲ್ಲದೆಯೇ ಟೆಂಡರ್ ಕರೆದಿರುವ ಮೊದಲ ಯೋಜನೆ ಇದಾಗಿದ್ದು, ಇಲ್ಲಿ ಯಾವುದೇ ನೀತಿ-ನಿಯಮಗಳನ್ನು ಪಾಲಿಸಿಲ್ಲ ಎಂದು ಅವರು ದೂರಿದರು. ಹಾಗೆಯೇ, ಸಿದ್ದರಾಮಯ್ಯ ಅವರ ದಡ್ಡತನಕ್ಕೆ ಮತ್ತು ಡಿ.ಕೆ. ಶಿವಕುಮಾರ್ ಅವರ ಬುದ್ಧಿವಂತಿಕೆಗೆ ಇಲ್ಲಿ ಅವಕಾಶ ನೀಡಬಾರದು.ಮುಖ್ಯಮಂತ್ರಿಗಳು ನೀಡಿರುವ ಈ ಮನವಿಯನ್ನು ಪ್ರಧಾನಿ ಮೋದಿ ಅವರು ಖಂಡಿತವಾಗಿ ತಿರಸ್ಕರಿಸುತ್ತಾರೆ ಎಂಬ ನಂಬಿಕೆ ನಮಗಿದೆ. ಕೇಂದ್ರದ ಅನೇಕ ತಜ್ಞರು ಸಹ ನಮ್ಮ […]

Continue Reading