ಬ್ರಹ್ಮ ಶ್ರೀ ನಾರಾಯಣ ಗುರು ಮತ್ತು ಶರಣ ಶ್ರೀ ನುಲಿಯ ಚಂದಯ್ಯ ಜಯಂತಿ : ಮಾನವನಿಗೆ ಒಂದೇ ಜಾತಿ-ಮತ ಮತ್ತು ಕಾಯಕ ಮುಖ್ಯ ಎಂದು ಸಾರಿದ ದಾರ್ಶನಿಕರು : ಬಿ.ವೈ.ರಾಘವೇಂದ್ರ

ಶಾಸಕರಾದ ಎಸ್ ಎನ್ ಚನ್ನಬಸಪ್ಪ ಮಾತನಾಡಿ, ಅಂದು ಸಮಾಜದಲ್ಲಿ ತಾಂಡವವಾಡುತ್ತಿದ್ದ ಜಾತಿ ಪದ್ಧತಿ, ಅಸ್ಪೃಶ್ಯತೆ ಮತ್ತು ತಾರತಮ್ಯಗಳು ವಿರುದ್ದ ಹೋರಾಡಿದ ನಾರಾಯಣ ಗುರುಗಳು ದೇಶ ಸೇವೆಯೇ ಈಶ ಸೇವೆ ಎಂದು ಅರ್ಥ ಮಾಡಿಸಿದವರು.ಅತ್ಯಂತ ನಿಷ್ಠೆಯಿಂದ ಹಗ್ಗ ಹೆಣೆಯುವ ಕಾಯಕದಲ್ಲಿ ತೊಡಗಿಸಿಕೊಂಡ ನುಲಿಯ ಚಂದಯ್ಯನವರು ಒಂದೇ ನೂಲನ್ನು ಒಟ್ಟುಗೂಡಿಸಿ ಹಗ್ಗ ಹೊಸೆಯುವ ಮೂಲಕ ನಮ್ಮ ಸಾಮೂಹಿಕ ಶಕ್ತಿಯ ಪ್ರಾಮುಖ್ಯತೆಯನ್ನು ತಿಳಿಸಿದ್ದಾರೆ. ಅವರು ಕಾಯಕವೇ ಕೈಲಾಸ ಎಂದು ನಂಬಿ, ಬಸವಣ್ಣನವರೊಂದಿಗೆ ಕೆಲಸ ಮಾಡಿದ ಮಹಾನ್ ಶರಣರು. ಮನುಕುಲಕ್ಕಾಗಿ ಕಾಯಕ ಮಾಡಿದವರು […]

Continue Reading

ಶಿವಮೊಗ್ಗ | ನಗರದ 3 ಇಎಸ್ಐಸಿ ಡಿಸ್ಪೆನ್ಸರಿ ಶಾಸಕ ಎಸ್. ಎನ್. ಚನ್ನಬಸಪ್ಪ ದಿಢೀರ್ ಭೇಟಿ : ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ!

ಔಷಧಿಗಳ ಕೊರತೆ ನೀಗಿಸುವುದು: ಕಾರ್ಮಿಕರಿಗೆ ಅಗತ್ಯವಿರುವ ಪ್ರಮುಖ ಔಷಧಿಗಳ ಕೊರತೆಯಾಗದಂತೆ ಮುಂಚಿತವಾಗಿಯೇ ದಾಸ್ತಾನು ಇಟ್ಟುಕೊಳ್ಳಬೇಕು ಹಾಗೂ ಯಾವುದೇ ರೋಗಿಗಳನ್ನು ಹೊರಗಿನ ಮೆಡಿಕಲ್‌ಗಳಿಗೆ ಕಳುಹಿಸದೆ ಆಸ್ಪತ್ರೆಯಲ್ಲೇ ಉಚಿತವಾಗಿ ಔಷಧ ಒದಗಿಸಬೇಕು. ವೈದ್ಯರ ಕರ್ತವ್ಯ ನಿಷ್ಠೆ: ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸಮಯಪಾಲನೆ ಮಾಡಬೇಕು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಸೂಕ್ತ ಸಮಯದಲ್ಲಿ ಪ್ರಾಥಮಿಕ ಹಾಗೂ ತುರ್ತು ಚಿಕಿತ್ಸೆ ನೀಡಬೇಕು. ಮೂಲಸೌಕರ್ಯ & ನೈರ್ಮಲ್ಯ: ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ, ಕುಡಿಯುವ ನೀರು ಮತ್ತು ಮೂಲಸೌಕರ್ಯಗಳ ಕೊರತೆ ಇರದಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಶಾಸಕರು ತಿಳಿಸಿದರು.

Continue Reading

ಶಿವಮೊಗ್ಗ | ಮಲಯಾಳಿ ಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ನಾಳೆ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಅನ್ನಪ್ರಸಾದ ವಿತರಣೆ

“ಸೇವೆ, ಸಮಾನತೆ ಮತ್ತು ಸಹೋದರತ್ವದ ಮೂಲಕ ಮಾನವೀಯತೆಯನ್ನು ಬೆಳೆಸೋಣ” — ಇದೇ ಗುರುಗಳಿಗೆ ಸಲ್ಲಿಸುವ ನಿಜವಾದ ಗೌರವ.ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ನಾರಾಯಣ ಗುರು ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಸಮಿತಿ ಕೋರಿದೆ.

Continue Reading

ಶಿವಮೊಗ್ಗ | ದುರ್ಗಿಗುಡಿ ಮಠದಲ್ಲಿ ಶ್ರೀ ರಾಯರ ಆರಾಧನೆ

ನಗರದ ಎಲ್ಲಾ ಭಕ್ತರು ಶ್ರದ್ದಾಭಕ್ತಿ ಮತ್ತು ಸೇವಾ ರೂಪಗಳಿಂದ ಶ್ರೀ ಗುರುರಾಯರ ಆರಾಧನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಸೇವಾ ಸಮಿತಿ ವಿನಂತಿಸಿದೆ.

Continue Reading

ಶಿವಮೊಗ್ಗ | ಶ್ರೀ ಗುರುರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ : ಆಗಸ್ಟ್ 29ರಿಂದ 31ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ಆಗಸ್ಟ್ 30 – ಶ್ರೀ ಗುರುರಾಯರ ಮಧ್ಯಾರಾಧನೆಆಗಸ್ಟ್ 30ರ ಭಾನುವಾರ (ದ್ವಿತೀಯ) ಬೆಳಿಗ್ಗೆ 5.30ಕ್ಕೆ ಸುಪ್ರಭಾತ ಹಾಗೂ ನಿರ್ಮಾಲ್ಯ ವಿಸರ್ಜನೆ, ಬೆಳಿಗ್ಗೆ 7 ಗಂಟೆಗೆ ಅಷ್ಟೋತ್ತರದೊಂದಿಗೆ ಕ್ಷೀರಾಭಿಷೇಕ ಸಹಿತ ಪಂಚಾಮೃತ ಅಭಿಷೇಕ, ಬೆಳಿಗ್ಗೆ 10 ಗಂಟೆಗೆ ಪಾದಪೂಜೆಯೊಂದಿಗೆ ಕನಕಾಭಿಷೇಕ ಅರ್ಚನೆ ಹಾಗೂ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಆಗಸ್ಟ್ 31 – ಶ್ರೀ ಗುರುರಾಯರ ಉತ್ತರಾರಾಧನೆ ಹಾಗೂ ಮಹಾರಥೋತ್ಸವಆಗಸ್ಟ್ 31ರ ಸೋಮವಾರ (ತೃತೀಯ) ಬೆಳಿಗ್ಗೆ 5.30ಕ್ಕೆ ಸುಪ್ರಭಾತ ಹಾಗೂ ನಿರ್ಮಾಲ್ಯ […]

Continue Reading

ಶಿವಮೊಗ್ಗ | ತುಂಗೆಯ ತಟದಲ್ಲಿ ಕಣ್ಣೀರಿನಲ್ಲಿ ಇಬ್ಬರು ಮಕ್ಕಳಿಗಾಗಿ ಶೋಧ

ತಾಯಿ ಮತ್ತು ಮಗವನ್ನು ರಕ್ಷಿಸಿದ ದಾದಾಪೀರ್ ಮಾತನಾಡಿ, ”ರೈಲ್ವೆ ಬ್ರಿಡ್ಜ್​ನಿಂದ ತಾಯಿಯೊಬ್ಬಳು ತನ್ನ ಮೂವರು ಮಕ್ಕಳನ್ನು ಹಿಡಿದುಕೊಂಡು ನದಿಗೆ ಹಾರಿದ್ದರು. ಈ ದೃಶ್ಯ ಕಂಡ ತಕ್ಷಣ ನಾವು ನದಿಗೆ ಹಾರಿ ತಾಯಿ ಮತ್ತು ಒಂದು ಮಗುವನ್ನು ಕಾಪಾಡಿದ್ದೇವೆ. ಆದರೆ, ಇಬ್ಬರು ಮಕ್ಕಳನ್ನು ಕಾಪಾಡಲು ಸಾಧ್ಯವಾಗಲಿಲ್ಲ. ನದಿಗೆ ಹಾರಿದ್ದು ಏಕೆ ಎಂಬ ಬಗ್ಗೆ ಕಾರಣ ಗೊತ್ತಿಲ್ಲ. ನಮ್ಮ ಕೈಯಲ್ಲಿ ಎಷ್ಟು ಸಾಧ್ಯವೂ ಅಷ್ಟು ಸಹಾಯ ಮಾಡಿದ್ದೇವೆ. ತಾಯಿ-ಮಗುವನ್ನು ಸೇಫ್ ಮಾಡಿದ್ದೇವೆ. ಮಹಿಳೆ ಚಿತ್ರದುರ್ಗದವರು ಎಂಬ ಮಾಹಿತಿ ಇದೆ” ಎಂದು […]

Continue Reading

ಶಿವಮೊಗ್ಗ | ಅ. 26 ರಿಂದ ಜಮಾಅತೆ ಇಸ್ಲಾಮಿ ಹಿಂದ್‌ ವತಿಯಿಂದ ಪ್ರವಾದಿ ಜನ್ಮ ದಿನದ ಪ್ರಯುಕ್ತ ರಾಜ್ಯಾದ್ಯಂತ ಸೀರತ್‌ ಅಭಿಯಾನ

ಅಭಿಯಾನದ ಪ್ರಯುಕ್ತ ಸಾಹಿತಿ ಹಾಗೂ ಗ್ರಂಥಕರ್ತ ಯೋಗೇಶ್ ಮಾಸ್ಟರ್ ಅವರು ಬರೆದಮುಹಮ್ಮದ ವರ ಈ ಸಂದೇಶಗಳನ್ನು’ಮಾನವ ಮನಸ್ಸಿನ ಕೃಷಿಕ – ಮನದೊಡೆಯ ಪ್ರವಾದಿ ಮುಹಮ್ಮದ್ ಹಾಗೂ ವಾರ್ತಾ ಭಾರತಿಯ ದಿನಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಬರೆದ ‘ಸಮಗ್ರ ಕ್ರಾಂತಿಯ ಜೋತಿ ಬೆಳಗಿದ ಪೈಗಂಬರ್ ಮುಹಮ್ಮದ್ ಎಂಬ ಎರಡು ಕೃತಿಗಳನ್ನು ರಾಜ್ಯಾದ್ಯಂತ ಬಿಡುಗಡೆಗೊಳಿಸಲಾಗುವುದು. ಅಭಿಯಾನದ ಪ್ರಯುಕ್ತ ರಾಜ್ಯಾದ್ಯಂತ ವೈಯಕ್ತಿಕ ಭೇಟಿ, ‘ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ)’ ಎಂಬ ಶೀರ್ಷಿಕೆಯಡಿ ವಿಚಾರಗೋಷ್ಠಿಗಳು, ಸಾರ್ವಜನಿಕ ಸಮಾವೇಶಗಳು, ಸಂವಾದ ಕಾರ್ಯಕ್ರಮ, ಚರ್ಚಾಗೋಷ್ಠಿಗಳು, […]

Continue Reading

ಒಂದು ಕೊಲೆ, 3 ದರೋಡೆ, 12 ಸುಲಿಗೆ ಸೇರಿದಂತೆ 174 ಪ್ರಕರಣ ಭೇದಿಸಿದ ಶಿವಮೊಗ್ಗ ಪೊಲೀಸ್ ಇಲಾಖೆ : ಐಜಿಪಿ ಬಿ.ಆರ್. ರವಿಕಾಂತೇಗೌಡರಿಂದ ಬಹುಮಾನ

2024ರಲ್ಲಿ ಭೇದಿಸಿರುವ ಪ್ರಕರಣಗಳಲ್ಲಿ ಲಾಭದ ಉದ್ದೇಶದಿಂದ ನಡೆದ 1 ಕೊಲೆ ಪ್ರಕರಣ, 3 ದರೋಡೆ ಪ್ರಕರಣ, 17 ಸುಲಿಗೆ ಪ್ರಕರಣ, 7 ಸರಗಳ್ಳತನ ಪ್ರಕರಣ, 34 ಕನ್ನ ಕಳವು ಪ್ರಕರಣ, 14 ಮನೆಗಳ್ಳನತನ, 31 ಸಾಮಾನ್ಯ ಕಳ್ಳತನ ಪ್ರಕರಣ, 14 ಜಾನುವಾರು ಕಳ್ಳತನ ಪ್ರಕರಣ ಹಾಗೂ 21 ವಾಹನ ಕಳ್ಳತನ ಪ್ರಕರಣಗಳು ಸೇರಿವೆ.ಅಲ್ಲದೇ ಹಿಂದಿನ ವರ್ಷಗಳಲಿ., ವರದಿಯಾದ ಪ್ರಕರಣಗಳಲ್ಲಿ, 12 ಮನೆಗಳ್ಳತನ, 11 ಸಾಮಾನ್ಯ ಕಳವು ಮತ್ತು 9 ವಾಹನ ಕಳವು ಸೇರಿದಂತೆ ಒಟ್ಟು 32 ಪ್ರಕರಣಗಳನ್ನು […]

Continue Reading