ಶಿವಮೊಗ್ಗ | ಸಂಸದರಿಂದ ಸುಳ್ಳು ಮಾಹಿತಿ, ಶಾಸಕರಿಂದ ಮತ್ತೆ ಗುದ್ದಲಿಪೂಜೆ : ಎಚ್. ಸಿ. ಯೋಗೇಶ್ ವಾಗ್ದಾಳಿ

ಸೇತುವೆ ಮಂಜೂರಾತಿ ಜಟಾಪಟಿ: ವಿದ್ಯಾನಗರದ ಶಿಥಿಲಗೊಂಡಿರುವ ತುಂಗಾ ಸೇತುವೆ ಕುರಿತು ೨೦೧೮ ರಿಂದಲೇ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಕಾಂಗ್ರೆಸ್ ವತಿಯಿಂದ ಮಾಡಲಾಗಿದೆ. ಅಂದಿನ ಹಾಗೂ ಹಾಲಿ ಲೋ ಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದು, ಅದರ ಪರಿಣಾಮವಾಗಿ ಸೇತುವೆ ಕಾಮಗಾರಿಗೆ ೪೦ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಸೇತುವೆ ಮಂಜೂರಾತಿಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಅವರ ಶ್ರಮವೂ ಇದೆ. ಆದರೆ ಅನುದಾನ ಬಿಡುಗಡೆಯಾದ ನಂತರವೂ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಶಾಸಕರು […]

Continue Reading

ಶಿಕಾರಿಪುರ | ದಶಕಗಳ ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ತಾರ್ಕಿಕ ಹಾಗೂ ಶಾಶ್ವತ ಪರಿಹಾರ ನಿಟ್ಟಿನಲ್ಲಿ ಸಂಸದರ ನೇತೃತ್ವದಲ್ಲಿ ಮಹತ್ವದ ಜಂಟಿ ಸಭೆ

ಇದರೊಂದಿಗೆ, ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ಅರ್ಹ ಸಾಗುವಳಿ ಜಮೀನುಗಳನ್ನು ಮುಕ್ತಗೊಳಿಸಲು ಮತ್ತು ಮಲೆನಾಡಿನ ರೈತರ ಹಿತರಕ್ಷಣೆಯನ್ನು ಕಾಯ್ದುಕೊಳ್ಳಲು ಸರ್ಕಾರದ ಉನ್ನತ ಮಟ್ಟದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ಸಮಾಲೋಚಿಸಲಾಯಿತು. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ಕಾನೂನಾತ್ಮಕವಾಗಿ ಮತ್ತು ಆಡಳಿತಾತ್ಮಕವಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನು ನಿರಂತರವಾಗಿ ಮುಂದುವರೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಉನ್ನತ ಮಟ್ಟದ ಸಭೆಯು ಶಿಕಾರಿಪುರ ಕ್ಷೇತ್ರದ ಶಾಸಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಮತ್ತು ಪ್ರಮುಖರಾದ ಕೆ.ಎಸ್. ಗುರುಮೂರ್ತಿ ಅವರ ಉಪಸ್ಥಿತಿ ಹಾಗೂ ಜಂಟಿ […]

Continue Reading

ಶಿವಮೊಗ್ಗ | ಅಭಿವೃದ್ಧಿ ಮಂತ್ರಕ್ಕೆ ಜನರ ಭರ್ಜರಿ ಬೆಂಬಲ ; ಪ್ರಜಾಪ್ರಭುತ್ವದ ವಿಜಯ : ಸಂಸದ ಬಿ. ವೈ. ಆರ್

ಈ ಗೆಲುವು ಮುಂಬರುವ ದಿನಗಳಲ್ಲಿ ನಮ್ಮ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಜನಸೇವೆಯಲ್ಲಿ ತೊಡಗಿಸಿಕೊಳ್ಳಲು ನಮಗೆ ಹೊಸ ಸ್ಫೂರ್ತಿಯನ್ನು ನೀಡಿದೆ. ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಭಾರತಕ್ಕೆ ಈ ಫಲಿತಾಂಶವು ಹೊಸ ಚೈತನ್ಯ ತುಂಬಿದೆ ಎಂದರು. ಈ ಸಂಭ್ರಮದಲ್ಲಿ ಜಿಲ್ಲಾ ಅಧ್ಯಕ್ಷರು ಜಗದೀಶ್, ಶಿವಮೊಗ್ಗ ನಗರದ ಶಾಸಕರಾದ ಎಸ್. ಏನ್. ಚೆನ್ನಬಸಪ್ಪ ಸೇರಿದಂತ ಪ್ರಮುಖ ಜನಪ್ರತಿನಿಧಿಗಳು ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

Continue Reading