ಶಿವಮೊಗ್ಗ | ಟ್ರಾಫಿಕ್ ಪೊಲೀಸರ ವಿಶೇಷ ಕಾರ್ಯಾಚರಣೆ : ನಂಬರ್ ಪ್ಲೇಟ್ ಇಲ್ಲದೆ ಸಂಚಾರ ; ಇದು ಕೊನೆಯ ಎಚ್ಚರಿಕೆ : ಎಸ್ಪಿ ನಿಖಿಲ್. ಬಿ

ಮುಂದಿನ ದಿನಗಳಲ್ಲಿಯೂ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಲಾಯಿಸುವ ಸವಾರರ ವಿರುದ್ಧ ಇಂತಹ ವಿಶೇಷ ಕಾರ್ಯಾಚರಣೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಪೊಲೀಸ್ ಇಲಾಖೆ ತಿಳಿಸಿದೆ. ಸಾರ್ವಜನಿಕರು ಕಡ್ಡಾಯವಾಗಿ ನಿಯಮಾನುಸಾರ ನಂಬರ್ ಪ್ಲೇಟ್ ಅಳವಡಿಸಿಕೊಂಡು ಸಂಚಾರ ನಿಯಮಗಳನ್ನು ಪಾಲಿಸುವಂತೆ ಕೋರಲಾಗಿದೆ. ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ, “ಇದು ಕೊನೆಯ ಎಚ್ಚರಿಕೆ. ಸದ್ಯಕ್ಕೆ ವಾಹನ ಮಾಲೀಕರಿಗೆ ದಂಡ ವಿಧಿಸಿ, ನೋಟಿಸ್ ನೀಡಿ ವಾಹನಗಳನ್ನು ಹಿಂತಿರುಗಿಸಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಇದೇ ರೀತಿಯ ಉಲ್ಲಂಘನೆ ಕಂಡುಬಂದರೆ ನೇರವಾಗಿ […]

Continue Reading

ಶಿವಮೊಗ್ಗ | ಕಮಲಾ ನೆಹರು ಕಾಲೇಜು ರಸ್ತೆ‌ಯಲ್ಲಿ ಸಂಚಾರ ಈಗ ಸುಗಮ

ಈ ಮೂಲಕ ಹೋಗುವ ಹಾಗು ಬರುವ ವಾಹನಗಳಿಗೆ ದಾರಿ ಸ್ಪಷ್ಟವಾಗಿ ತೋರಿಸಲಾಗಿದೆ. ಶಿವಮೊಗ್ಗ ಟ್ರಾಫಿಕ್​ ಪೊಲೀಸರು ಈ ರಸ್ತೆಯಲ್ಲಿ ನೋ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಿದ್ದಾರೆ. ಹಾಗಾಗಿ ಯಾವುದೇ ವಾಹನ ಸವಾರರು ತಮ್ಮ ವಾಹನಗಳನ್ನು ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡಬಾರದು. ಹಾಗೊಂದು ವೇಳೆ ಮಾಡಿದರೆ ಕ್ಯಾಮರಾ ಫೈನ್​ ಹಾಕೋದು ಗ್ಯಾರಂಟಿ. ಸಂಚಾರಿ ಪೊಲೀಸರ ಈ ಕ್ರಮ ವಾಹನ ಸವಾರರ ಶ್ಲಾಘನೆಗೆ ಕಾರಣವಾಗಿದೆ.

Continue Reading

ಶಿವಮೊಗ್ಗ | ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ಆಡಳಿತ ಮಂಡಳಿಯ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರೊಂದಿಗೆ ಟ್ರಾಫಿಕ್ ಪೊಲೀಸ್ ಸಭೆ

ಶಿವಮೊಗ್ಗ ಇ-ಪೇಪರ್ನಗರದಲ್ಲಿ ಅಪ್ರಾಪ್ತರು ವಾಹನ ಚಾಲನೆ ಮಾಡುತ್ತಿರುವುದು ಕಂಡುಬಂದಲ್ಲಿ, ಸಾರ್ವಜನಿಕರು ಆ ಕುರಿತಾದ ಫೋಟೋ, ವಿಡಿಯೋ ಹಾಗೂ ವಾಹನಕ್ಕೆ ಸಂಬಂಧಿಸಿದ ನಿಖರ ಮಾಹಿತಿಯನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಕಳುಹಿಸುವ ಮೂಲಕ ಮಾಹಿತಿ ನೀಡಬೇಕು. ಇಂತಹ ಪ್ರಕರಣಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

Continue Reading

ಶಿವಮೊಗ್ಗ | ಶಾಲಾ, ಕಾಲೇಜು ವಾಹನಗಳ ತಪಾಸಣೆ ; ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ ನಾಲ್ವರು ಚಾಲಕರ ವಿರುದ್ಧ ಪ್ರಕರಣ ದಾಖಲು

ಇದೇ ವೇಳೆ ಶಾಲಾ ವಾಹನದ ವಿಮೆ, ಎಮಿಷನ್ ರಿಪೋರ್ಟ್ ಹಾಗೂ ಫಿಟ್‌ನೆಸ್ ಸರ್ಟಿಫಿಕೇಟ್ ಅನ್ನು ಕಡ್ಡಾಯವಾಗಿ ಚಾಲ್ತಿಯಲ್ಲಿ ಇಟ್ಟುಕೊಳ್ಳುವಂತೆ ಸೂಚಿಸಿದರು. ಅಲ್ಲದೆ ವಾಹನಗಳ ಸುಸ್ಥಿತಿಯ ಕುರಿತು ಪರಿಶೀಲನೆ ನಡೆಸಿದರು.

Continue Reading

ಶಿವಮೊಗ್ಗ | Auto ದಬ್ಬಾಳಿಕೆ ; ಟ್ರಾಫಿಕ್ ಪೊಲೀಸ್ ಇಲಾಖೆಗೆ ಇಲ್ಲಿದೆ ಪರಿಹಾರ..!

ಆದರೆ ಏನಾದರು ಬದಲಾವಣೆ ಆಯಿತಾ ಎಂದರೆ ಉತ್ತರ ಮಾತ್ರ ಏನು ಬದಲಾವಣೆಯಿಲ್ಲದಾಗಿದೆ. ಇದಕ್ಕೆಲ್ಲ ಕಾರಣಗಳೇನು?ನಗರದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳಾದರು ಏನು? ಸಂಪೂರ್ಣ ಮಾಹಿತಿ ನಿಮ್ಮ ಮುಂದೆ, ಶಿವಮೊಗ್ಗ ನಗರದಲ್ಲಿ ನಿನ್ನೆ ದಿವಸ ನಡೆದ ಒಂದು ಘಟನೆಯ ಪ್ರಯಾಣಿಕರು ಮಾಡಿರುವ ಆರೋಪ ಗಂಭೀರವಾಗಿದೆ. ಅದೇನಂದರೆ ನಿನ್ನೆ ದಿವಸ ದಾವಣಗೆರೆ ಜಿಲ್ಲೆಯ ಯಾವದೋ ಹಳ್ಳಿಯಿಂದ ರೋಗಿ ಹಾಗೂ ಅವರೊಟ್ಟಿಗೆ ಮತ್ತೊಬ್ಬರು ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ನಂಜಪ್ಪ ಆಸ್ಪತ್ರೆಗೆ ಚಿಕಿತ್ಸೆಗೆ ಬರಬೇಕಿತ್ತು.ಆದರೆ ಅವರು ಹಳ್ಳಿಯವರು ಹಾಗೂ ಶಿವಮೊಗ್ಗದ ಪರಿಚಯವಿಲ್ಲದ ಕಾರಣ ನಗರದ […]

Continue Reading

ಶಿವಮೊಗ್ಗ | ಹೆಲ್ಮೆಟ್ ಹಾಕಲ್ಲ ಏನು ಮಾಡುತ್ತೀರಾ? ಪೊಲೀಸರಿಗೆ ಅವಾಜ್ ಮತ್ತು ಬೆದರಿಕೆ ಹಾಕಿದ ಪುಂಡರು ಅಂದರ್

ನಿಯಮ ಪಾಲಿಸುವಂತೆ ಹೇಳಿದ ಅಧಿಕಾರಿಗಳ ಜೊತೆ ಸಯ್ಯದ್ ಮುಜಾಮಿಲ್ ರಸ್ತೆಯ ಮಧ್ಯೆಯೇ ವಾಗ್ವಾದಕ್ಕಿಳಿದಿದ್ದಾನೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಜಬಿವುಲ್ಲಾ ಎಂಬಾತನು ಸೇರಿಕೊಂಡು, ನಾವು ಹೆಲ್ಮೆಟ್ ಹಾಕುವುದಿಲ್ಲ, ನೀವು ಏನು ಮಾಡುತ್ತೀರಾ? ಎಂದು ಅವಾಚ್ಯವಾಗಿ ಮಾತನಾಡಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಸಮವಸ್ತ್ರದಲ್ಲಿದ್ದ ಅಧಿಕಾರಿಗಳನ್ನು ದೂಡಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಬಳಿಕ ಬೈಕ್ ಕೀ ಕಿತ್ತುಕೊಂಡು ಪೊಲೀಸರಿಗೆ ಬೆದರಿಕೆ ಹಾಕಿ ಪರಾರಿಯಾಗಲು ಯತ್ನಿಸಿದ ಆರೋಪಿಗಳ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಯ್ಯದ್ ಮುಜಾಮಿಲ್ ಮತ್ತು […]

Continue Reading

ಶಿವಮೊಗ್ಗ | ಸಂಚಾರಿ ಪೊಲೀಸರಿಂದ ಜನಸಾಮಾನ್ಯರಿಗೆ, ಆಟೋಗಳ ದಬ್ಬಾಳಿಕೆಯಿಂದ ಈ ಒಂದು ಮುಕ್ತಿ ಬೇಕಿದೆ..!

ಆಟೋ ಮೀಟರ್ ಕಡ್ಡಾಯವಾಗಿ ಬಳಸಬೇಕು ಎಂಬುದೇನೋ ನಗರದಲ್ಲಿ ಜಾರಿಯಲ್ಲಿದೆ ಆದರೆ ಯಾವ ಆಟೋಗಳು ಕಡ್ಡಾಯವಾಗಿ ಮೀಟರ್ ಅಳವಡಿಸಿ ಚಾಲನೆ ಮಾಡುತ್ತಿಲ್ಲವೆಂಬುದು ಕೂಡ ಟ್ರಾಫಿಕ್ ಪೊಲೀಸ್ ಇಲಾಖೆಯ ಗಮನಕ್ಕೆ ತಿಳಿದಿರುವುದೇ ಆಗಿದೆ. ಹಾಗೂ ಎಷ್ಟೋ ಆಟೋಗಳ ಬಳಿ ಸರಿಯಾದ ದಾಖಲೆಗಳೆ ಇಲ್ಲದಾಗಿದೆ.ಆದರೆ ಅದೇನೋ ಗೊತ್ತಿಲ್ಲ ಟ್ರಾಫಿಕ್ ಪೊಲೀಸ್ ಇಲಾಖೆ ಮಾತ್ರ ದಾಖಲೆ ಪರಿಶೀಲನೆಗೆ ಮುಂದಾಗುತ್ತಿಲ್ಲ ಅದು ಯಾವ ಒತ್ತಡ ಇದೆಯೋ ಅವರೇ ತಿಳಿಸಬೇಕಾಗಿದೆ. ಶಿವಮೊಗ್ಗದಲ್ಲಿರುವ ಆಸ್ಪತ್ರೆಗಳ ಬಳಿ ಇರುವ ಆಟೋ ಸ್ಟಾಂಡ್ ಗಳು ರೋಗಿಗಳು ಆಸ್ಪತ್ರೆಯಲ್ಲಿ ಒಂದು ಕಡೆ […]

Continue Reading

ಶಿವಮೊಗ್ಗ | ಮಹಿಳೆಯ ಕಾರಿಗೆ ದಾರಿ ಬಿಡದೆ, ತೊಂದರೆ ನೀಡಿದ ಆಟೋ ಚಾಲಕರಿಬ್ಬರಿಗೆ ದಂಡ, ಎಚ್ಚರಿಕೆ..!

ಈ ಹಿನ್ನೆಲೆಯಲ್ಲಿ ತಕ್ಷಣ ಆಕ್ಷನ್​ ತೆಗೆದುಕೊಂಡ ಟ್ರಾಫಿಕ್ ಪೊಲೀಸರು ಇಬ್ಬರೂ ಆಟೋ ಚಾಲಕರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಮಹಿಳೆಯ ಕಾರಿಗೆ ದಾರಿ ಬಿಡದೆತಡೆಯೊಡ್ಡಿದ್ದಲ್ಲದೆ, ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಆಟೋ ಚಾಲಕರಿಗೆ ಭಾರತೀಯ ಮೋಟಾರು ವಾಹನಕಾಯ್ದೆಯ (ಐ.ಎಂ.ವಿ ಕಾಯ್ದೆ)ಅಡಿಯಲ್ಲಿ ದಂಡ ವಿಧಿಸಿರುವ ಪೊಲೀಸರು, ಇನ್ನೊಮ್ಮೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

Continue Reading

ಶಿವಮೊಗ್ಗ ನಗರದಲ್ಲಿ ಟ್ರಾಫಿಕ್ ದಂಡದ ‘ಕ್ಯಾಮೆರಾ ಯುಗ’: ಸುರಕ್ಷತೆಯ ಹೆಸರಲ್ಲಿ ಸಮಸ್ಯೆಗಳನ್ನು ಮರೆಮಾಚುವ ಪ್ರಯತ್ನವೇ?

ನಗರದ ಟ್ರಾಫಿಕ್ ವ್ಯವಸ್ಥೆಯಲ್ಲಿ ಅರಾಜಕತೆಯ ಸತ್ಯ. ಶಿವಮೊಗ್ಗ ನಗರವು ಶಾಂತಿ, ಶಿಕ್ಷಣ ಮತ್ತು ಸಂಸ್ಕೃತಿಯ ತಾಣವಾಗಿ ಹೆಸರಾದರೂ ಇತ್ತೀಚಿನ ವರ್ಷಗಳಲ್ಲಿ ಸಂಚಾರ ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ. ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಮಿತಿ ಮೀರಿದೆ. ಅಶೋಕ ವೃತ್ತ, ಗೋಪಿ ವೃತ್ತ, ಸರ್ಕಿಟ್ ಹೌಸ್, ಪೊಲೀಸ್ ಚೌಕಿ ಸೇರಿದಂತೆ ಪ್ರಮುಖ ಸಂಧಿಗಳಲ್ಲಿ ಸಿಗ್ನಲ್ ಲೈಟ್‌ಗಳು ಕೇವಲ 10-15 ಸೆಕೆಂಡ್‌ಗಳಷ್ಟು ಹಸಿರು ಬೆಳಕು ನೀಡುತ್ತವೆ. ಸೆಕೆಂಡ್ ಕೌಂಟ್‌ಡೌನ್ ವ್ಯವಸ್ಥೆಯೇ ಇಲ್ಲದ ಕಾರಣ ಸವಾರರು ಗೊಂದಲಕ್ಕೊಳಗಾಗುತ್ತಾರೆ. ಜೀಬ್ರಾ ಕ್ರಾಸಿಂಗ್‌ಗಳು ಮಸುಕಾಗಿವೆ ಅಥವಾ […]

Continue Reading