ಶಿವಮೊಗ್ಗ | ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಜೆಡಿಎಸ್ ಕಾರ್ಯಕರ್ತರು ಶ್ರದ್ಧಾಂಜಲಿ

ಸಭೆಯಲ್ಲಿ ಜಿಲ್ಲಾ ಮತ್ತು ನಗರ ಘಟಕದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ದಿವಂಗತರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಲಾಯಿತು. ಶಿವಮೊಗ್ಗ ನಗರ ಜೆಡಿಎಸ್ ನಿಂದ ಇಂದು ಮಾತೃಶ್ರೀ ಅಮ್ಮ ಚೆನ್ನಮ್ಮದೇವೇಗೌಡರವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಮಾತೃಶ್ರೀ ಅಮ್ಮ ಚೆನ್ನಮ್ಮನವರು ನಮ್ಮನ್ನು ಅಗಲಿದ್ದರೂ, ಅವರ ಪ್ರೀತಿ, ಮಮತೆ ಮತ್ತು ಆದರ್ಶಗಳು ಸದಾ ನಮ್ಮ ಹೃದಯದಲ್ಲಿ ಜೀವಂತವಾಗಿರುತ್ತವೆ.ದೇವರು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುವ ಮೂಲಕ ನಗರ ಜೆಡಿಎಸ್ ಶ್ರದ್ದಾಂಜಲಿ ಅರ್ಪಿಸಿದ್ದಾರೆ. ಹಾಗೂ ಕುಟುಂಬ ಸದಸ್ಯರು […]

Continue Reading

ತಮ್ಮ ತಾಯಿಯನ್ನು ಶಿವನೇ ತನ್ನಲ್ಲಿಗೆ ಕರೆಸಿಕೊಂಡಿದ್ದಾನೆ : ಭಾವುಕ ಟ್ವೀಟ್‌ ಮಾಡಿದ ಕುಮಾರಸ್ವಾಮಿ..!

ಗಂಡ ಮಾಜಿ ಪಿಎಂ, ಒಬ್ಬ ಮಗ ಮಾಜಿ ಸಿಎಂ, ಇನ್ನೊಬ್ಬ ಮಗ ಮಾಜಿ ಸಚಿವ. ಇಡೀ ರಾಜಕೀಯ ನಾಯಕರನ್ನು ತನ್ನ ಅಕ್ಕಪಕ್ಕದಲ್ಲೇ ಇರಿಸಿಕೊಂಡರೂ ಚೆನ್ನಮ್ಮ ದೇವೇಗೌಡರು ಹೊರಗೆ ಕಾಣಿಸಿಕೊಳ್ಳುತ್ತಿದ್ದದ್ದು ಬಹಳ ವಿರಳ. ದೇವೇಗೌಡರ ಜೊತೆ ಒಮ್ಮೊಮ್ಮೆ ಮಗ ಕುಮಾರಸ್ವಾಮಿ ಜೊತೆ ಫೋಟೋದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮೊಮ್ಮಕ್ಕಳು, ಮರಿಮೊಮ್ಮಕ್ಕಳನ್ನು ಎತ್ತಿ ಆಡಿಸಿದ ಹಿರಿಯ ಜೀವ ಅದು. ಎಚ್‌ಡಿ ದೇವೇಗೌಡರ ಜೊತೆ 72 ವರ್ಷಗಳ ತುಂಬು ಸಂಸಾರ ನಡೆಸಿದ್ದ ಚೆನ್ನಮ್ಮ ಶನಿವಾರ ಸಂಜೆ 4 ಗಂಟೆಗೆ ವಿಧಿವಶರಾದರು.

Continue Reading

ಬಿಜೆಪಿ ಮೈತ್ರಿ ಬಿಟ್ಟು ಹೊರಗೆ ಬನ್ರಿ ನೋಡೋಣ? : ಕೇಂದ್ರ ಸಚಿವ ಎಚ್‌ಡಿಕೆಗೆ, ಮಾಜಿ ಸಚಿವ ಚಲುವರಾಯಸ್ವಾಮಿ ಪಂಥಾಹ್ವಾನ..!?

ತಮಿಳುನಾಡು ಮಾಜಿ ಸಿಎಂ ದಿವಂಗತ ಕರುಣಾನಿಧಿ ಮಗನನ್ನು ನೋಡಿ ಕಲಿತುಕೊಳ್ಳಿ. ದೇವೇಗೌಡರ ಮಗನಾಗಿ ಏನ್ರಿ ನಿಮ್ಮ ಸಾಧನೆ? ಇನ್ನು ಮುಂದೆಯಾದರೂ ಗೌರವದಿಂದ ಮಾತನಾಡಿ ಮಿಸ್ಟರ್ ಕುಮಾರಸ್ವಾಮಿಯವರೇ. ನಮಗೆ ಕುಮಾರಸ್ವಾಮಿ ಅಭಿನಂದನೆ ಬೇಕಾಗಿಲ್ಲ, ಅವರ ಸರ್ಟಿಫಿಕೇಟ್ ಬೇಕಾಗಿಲ್ಲ. ರೇವಣ್ಣಗೆ ಇರುವ ಮನಸ್ಸೂ ನಿಮಗೆ ಇಲ್ಲ ಎಂದು ಕಿಡಿಕಾರಿದರು.

Continue Reading

ಇರುಮುಡಿ ಹೊತ್ತು ಮಣಿಕಂಠನ ದರ್ಶನಕ್ಕಾಗಿ ಶಬರಿಮಲೆ ಯಾತ್ರೆ ಕೈಗೊಂಡ ಹೆಚ್‌.ಡಿ. ಕುಮಾರಸ್ವಾಮಿ

ಕೇರಳದ ಅತ್ಯುತ್ತಮ ತೀರ್ಥಯಾತ್ರಾ ಸ್ಥಳ ಶಬರಿಮಲೆ ಆಗಿದೆ. ಭಾರತದ ದಕ್ಷಿಣ ರಾಜ್ಯಗಳು, ದೇಶದ ಮತ್ತು ವಿದೇಶದಲ್ಲಿ ಇತರ ಭಾಗಗಳಿಂದ ಯಾತ್ರಾರ್ಥಿಗಳನ್ನು ಸೆಳೆಯುತ್ತದೆ. ಶಬರಿಮಲೆಗೆ ತೆರಳುವ ಭಕ್ತರು ಕಠಿಣ ವ್ರತ ಆಚರಣೆ ಮಾಡುತ್ತಾರೆ.

Continue Reading

ಶಿವಮೊಗ್ಗ | ನನ್ನದು ತಾಯಿ ಹೃದಯ, ಸಿದ್ದರಾಮಯ್ಯ ಎಂದಿಗೂ ದೇವರಾಜ್ ಅರಸು ಆಗಲು ಸಾಧ್ಯವಿಲ್ಲ : ಎಚ್ ಡಿ ಕುಮಾರಸ್ವಾಮಿ

ಇನ್ನು ಇನ್ನು ಎಲ್ಲಾ ಕಡೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ ಎಂಬ ಸರ್ಕಾರ ಜಾಹಿರಾತು ಜೊತೆಗೆ ಗ್ಯಾರಂಟಿ ಯೋಜನೆಗಳ ಪ್ರಿಂಟ್ ಹಾಕಿಸುತ್ತಾರೆ.ಇದರ ಬಗ್ಗೆ ನನಗೆ ಅಸೂಯೆ ಇಲ್ಲ.ಸರ್ಕಾರದ ಈ ಯೋಜನೆ ಯಶಸ್ವಿ ಆದರೆ ನಾನೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಸರ್ಕಾರದ ಖಜಾನೆಗೆ ಯಾವತ್ತು ಖಜಾನೆ ಖಾಲಿ ಆಗಲು ನಮ್ಮ ಜನರು ಬಿಟ್ಟಿಲ್ಲ, ಆದರೆ ರಾಜ್ಯ ಸರ್ಕಾರ ಸರಿಸಾಮಾನವಾಗಿ ಯೋಜನೆ ಬಳಕೆ ಮಾಡಿಕೊಂಡಿದ್ದಾರ ಅನ್ನುವುದು ಪ್ರಶ್ನೆ? ಈ ಸರ್ಕಾರ ಯಾವಾಗ ಹೋಗತ್ತೋ ಏನೋ ಎಂದು ಅಧಿಕಾರಿಗಳು ಸಹ ತಲೆ […]

Continue Reading

ಶಿವಮೊಗ್ಗ | ಪತ್ರಕರ್ತರನ್ನು ಹೊರಗಿಟ್ಟು ವಿಐಎಸ್ಎಲ್ ಅಧಿಕಾರಿಗಳು ಕೇಂದ್ರ ಸಚಿವರ ಸಭೆ ನಡೆಸಿದರೇ…,!?

ನಂತರ ವಾರ್ತಾ ಇಲಾಖೆ ಅಧಿಕಾರಿ ಮಾರುತಿ ಅವರ ಮಾತಿಗೂ ಬೆಲೆ ಕೊಡದೆ ಪತ್ರಕರ್ತರನ್ನ ತಡೆದ VISL ಸಿಬ್ಬಂದಿಗಳು, ನಂತರ ಭದ್ರಾ ಗೆಸ್ಟ್ ಹೌಸ್ ಬಳಿ ಸಭೆ ನಡೆಯುತ್ತಿರುವ ಮಾಹಿತಿ ಪಡೆದುಕೊಂಡು, ಅಲ್ಲಿಗೆ ಬಂದಾಗಲೂ ಸಹ ಅಲ್ಲಿಯೂ ಗೆಸ್ಟ್ ಹೌಸ್ ನ ಗೇಟ್ ಹೊರಭಾಗದಲ್ಲಿಯೇ ಪತ್ರಕರ್ತರನ್ನ ತಡೆದರು. ನಂತರ ಶಿವಮೊಗ್ಗ ಸಂಸದ ರಾಘವೇಂದ್ರ ಮೀಟಿಂಗ್ ಗೆ ಆಗಮಿಸಿದ್ದರು. ಗೇಟ್ ಹೊರಗೆ ಪತ್ರಕರ್ತರ ವಾಹನವನ್ನು ತಡೆದಿದ್ದನ್ನು ಕಂಡು ಪತ್ರಕರ್ತರನ್ನು ಒಳಗೆ ಬರುವಂತೆ ಹಾಗೂ ಸಿಬ್ಬಂದಿಗಳಿಗೆ ಒಳಗೆ ಬಿಡುವಂತೆ ಸೂಚಿಸಿದರು. ಇಷ್ಟಾದ […]

Continue Reading