ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದ ಅವ್ಯವಸ್ಥೆ ತಕ್ಷಣ ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಶಾಸಕರ ಖಡಕ್ ಸೂಚನೆ

ಮೊದಲ ಮಹಡಿಯಲ್ಲಿರುವ ಮಹಾನಗರ ಪಾಲಿಕೆ ಸುಪರ್ದಿಯ ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಇಲ್ಲದಿರುವುದು ಹಾಗೂ ಮಹಿಳಾ ಶೌಚಾಲಯಗಳಿಗೆ ಬಾಗಿಲುಗಳೇ ಇಲ್ಲದಿರುವುದು ಗಂಭೀರ ನಿರ್ಲಕ್ಷ್ಯವೆಂದು ಹೇಳಲಾಗಿದೆ.ಇದಲ್ಲದೆ, ನಿಲ್ದಾಣದಲ್ಲಿರುವ ಲಾಡ್ಜ್ ಸಾರ್ವಜನಿಕರ ಬಳಕೆಗೆ ಯೋಗ್ಯವಾಗದೆ ಸಂಪೂರ್ಣ ಅವ್ಯವಸ್ಥೆಯಲ್ಲಿದ್ದು, ಬಳಕೆಯಾಗದೆ ಇರುವ ಟಾಯ್ಲೆಟ್ ಬಾಕ್ಸ್‌ಗಳನ್ನು ಅಗತ್ಯವಿರುವ ಸ್ಥಳಗಳಿಗೆ ಸ್ಥಳಾಂತರಿಸಬೇಕೆಂಬ ಸಲಹೆಯೂ ವ್ಯಕ್ತವಾಯಿತು. ಸಾರ್ವಜನಿಕರಿಗಾಗಿ ನಿರ್ಮಿಸಿರುವ ಕುಡಿಯುವ ನೀರಿನ ವ್ಯವಸ್ಥೆ ಕಾರ್ಯನಿರ್ವಹಿಸದಿರುವುದು ಮತ್ತು ಹೊಸದಾಗಿ ನಿರ್ಮಿಸಿದ ಕೆಲವು ಶೌಚಾಲಯಗಳಿಗೆ ಬೀಗ ಹಾಕಿ ಸಾರ್ವಜನಿಕ ಬಳಕೆಗೆ ತೆರೆಯದಿರುವುದೂ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.ಪ್ಲಾಟ್‌ಫಾರ್ಮ್ ಮೇಲೆಯೇ ದ್ವಿಚಕ್ರ ವಾಹನಗಳನ್ನು […]

Continue Reading

ಶಿವಮೊಗ್ಗ | ಇನ್‌ಸ್ಟಾಗ್ರಾಮ್‌ ಜ್ಯೋತಿಷಿ ನಂಬಿ ಯುವತಿ ಕಳೆದುಕೊಂಡಿದ್ದು 1.84 ಲಕ್ಷ ರೂಪಾಯಿ

ತದನಂತರ, ನಮ್ಮ ಮುಖ್ಯ ಗುರೂಜಿ ಎಂದು ಪರಿಚಯಿಸಿ ಮತ್ತೊಂದು ಮೊಬೈಲ್ ಸಂಖ್ಯೆಯನ್ನು ನೀಡಿದ್ದಾರೆ. ಆ ವ್ಯಕ್ತಿಯೂ ಸಹ ತಾಯಿ ಮತ್ತು ಮಗಳ ಹಸ್ತದ ಹಾಗೂ ಮುಖದ ಫೋಟೋಗಳನ್ನು ವಾಟ್ಸಾಪ್‌ಗೆ ತರಿಸಿಕೊಂಡಿದ್ದಾನೆ. ಪೂಜೆ ಮಾಡುತ್ತಿರುವಂತೆ ನಕಲಿ ಫೋಟೋಗಳನ್ನು ಕಳುಹಿಸಿ ಯುವತಿಯನ್ನು ಸಂಪೂರ್ಣವಾಗಿ ನಂಬಿಸಿದ್ದಾನೆ. ತಾಯಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಪದೇ ಪದೇ ಹೆದರಿಸುತ್ತಾ, ಹಂತ ಹಂತವಾಗಿ ಒಟ್ಟು 1,84,302 ಹಣವನ್ನು ವಿವಿಧ ಮೊಬೈಲ್ ನಂಬರ್‌ಗಳಿಗೆ ವರ್ಗಾವಣೆ ಮಾಡಿಸಿಕೊಂಡು ವಂಚನೆ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಕೊನೆಗೆ ತಾನು ಮೋಸ ಹೋಗಿರುವುದನ್ನು […]

Continue Reading

ಶಿವಮೊಗ್ಗ ಜಿಲ್ಲಾ ಪೊಲೀಸ್ ಹಾಗೂ ಆಗುಂಬೆ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ವೃದ್ಧೆಗೆ ದೊರೆಯಿತು “ಲಯನ್ಸ್ ಕುಟೀರ”

ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Continue Reading

ನಟ ಪ್ರಕಾಶ್ ರಾಜ್ ಗೆ ಅರೆಸ್ಟ್ ವಾರಂಟ್ ಜಾರಿ ಮಾಡಿದ ನ್ಯಾಯಾಲಯ ; ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ

ಪೊಲೀಸರು ಕ್ರಮ ಕೈಗೊಳ್ಳದ ಕಾರಣ ಪೊಲೀಸ್ ಆಯುಕ್ತರಿಗೆ ದೂರು ಕೊಟ್ಟಿದ್ದರು. ಬಳಿಕ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದರು. ಎಲ್ಲಿಯೂ ಕ್ರಮ ಕೈಗೊಳ್ಳದ ಕಾರಣ ದಿಲೀಪ್ ಅವರು ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕಾಶ್ ರಾಜ್ ಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ ಪ್ರಕಾಶ್ ರಾಜ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದಾಗಿ ಕೋರ್ಟ್ ಇದೀಗ ಅರೆಸ್ಟ್ ವಾರಂಟ್ ಜಾರಿ ಮಾಡಿದೆ.

Continue Reading

ಶಿವಮೊಗ್ಗ | ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಬಿಜೆಪಿಗೆ ಘರ್ ವಾಪಸಿಯಾದರೆ ಬಿಜೆಪಿಗೆ ನಷ್ಟ..!?

ಈ ಎಲ್ಲಾದರ ನಡುವೆ ಮಾನ್ಯ ಕೆ. ಎಸ್. ಈಶ್ವರಪ್ಪ ನವರು ತಾವೊಬ್ಬ ಕುರುಬ ಸಮುದಾಯದ ನಾಯಕರು ಆಗಲಿ ಅಥವಾ ಹಿಂದುಳಿದ ವರ್ಗದ ಅಥವಾ ಅಹಿಂದ ನಾಯಕರಾಗಿ ತಮ್ಮ ಐಡೆಂಟಿಟಿ ಪಡೆಯಲು ವಿಫಲರಾಗಿದ್ದಾರೆ ಎಂಬುದು ರಾಜಕೀಯವಲಯದ ಮಾತಾಗಿದೆ. ಇನ್ನು ಜನಾಕರ್ಷಣೆ ಪಡೆದಿದ್ದಾರಾ ಈಶ್ವರಪ್ಪ ಅಂದರೆ ಅದು ದೂರದ ಮಾತಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಠೇವಣಿ ಕೂಡ ಕಳೆದುಕೊಂಡರು ಈ ಒಂದು ಪರಿಸ್ಥಿತಿ ಈಶ್ವರಪ್ಪ ಅವರದ್ದಾಗಿದೆ. ಇನ್ನು ರಾಷ್ಟ್ರಭಕ್ತರ ಬಳಗ ಕಟ್ಟಿಕೊಂಡು ದಿನ ನಿತ್ಯ ಪ್ರಚಾರ ಮಾಡಿಕೊಂಡು ಹೊಸದಾಗಿ ಜನ […]

Continue Reading

ಶಿವಮೊಗ್ಗ | ಕೇಂದ್ರ ಕಾರಾಗೃಹ​ದಲ್ಲಿ ಸ್ಟೀಲ್​ ಲೋಟದಿಂದ ಹಲ್ಲೆ ; ಪ್ರಕರಣ ದಾಖಲು

ಪರಿಸ್ಥಿತಿಯನ್ನು ತಿಳಿಗೊಳಿಸಿ ಕಾರಾಗೃಹದ ಆಸ್ಪತ್ರೆಯಲ್ಲಿಯೇ ವಿಚಾರಣಾಧೀನ ಕೈದಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.ಈ ಘಟನೆ ಸಂಬಂಧ ಕಾರಾಗೃಹದ ಸುಗಮ ಆಡಳಿತಕ್ಕೆ ಧಕ್ಕೆ ತಂದು, ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಶಿಕ್ಷಾ ಬಂಧಿ ವಿರುದ್ಧ ಡಾ. ರಂಗನಾಥ್ ಅವರು ನೀಡಿದ ಅಧಿಕೃತ ದೂರನ್ನು ಆಧರಿಸಿ ತುಂಗಾನಗರ ಪೊಲೀಸ್ ಸ್ಟೇಷನ್​ನಲ್ಲಿ ಎಫ್​ಐಆರ್ ದಾಖಲಾಗಿದೆ.

Continue Reading

ಶಿವಮೊಗ್ಗ | ಕಮಲಾ ನೆಹರು ಕಾಲೇಜು ರಸ್ತೆ‌ಯಲ್ಲಿ ಸಂಚಾರ ಈಗ ಸುಗಮ

ಈ ಮೂಲಕ ಹೋಗುವ ಹಾಗು ಬರುವ ವಾಹನಗಳಿಗೆ ದಾರಿ ಸ್ಪಷ್ಟವಾಗಿ ತೋರಿಸಲಾಗಿದೆ. ಶಿವಮೊಗ್ಗ ಟ್ರಾಫಿಕ್​ ಪೊಲೀಸರು ಈ ರಸ್ತೆಯಲ್ಲಿ ನೋ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಿದ್ದಾರೆ. ಹಾಗಾಗಿ ಯಾವುದೇ ವಾಹನ ಸವಾರರು ತಮ್ಮ ವಾಹನಗಳನ್ನು ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡಬಾರದು. ಹಾಗೊಂದು ವೇಳೆ ಮಾಡಿದರೆ ಕ್ಯಾಮರಾ ಫೈನ್​ ಹಾಕೋದು ಗ್ಯಾರಂಟಿ. ಸಂಚಾರಿ ಪೊಲೀಸರ ಈ ಕ್ರಮ ವಾಹನ ಸವಾರರ ಶ್ಲಾಘನೆಗೆ ಕಾರಣವಾಗಿದೆ.

Continue Reading

ಶಿವಮೊಗ್ಗ | ನೀರಿನ ಪಂಪ್ ನ ಕೇಬಲ್ ಕದಿಯುತ್ತಿದ್ದವನು ಈಗ ಪೊಲೀಸರ ಅತಿಥಿ

ಬಂಧಿತ ಆರೋಪಿಯನ್ನು ಶಿವಮೊಗ್ಗದ ರಾಗಿಗುಡ್ಡದ 4ನೇ ಕ್ರಾಸ್ ನಿವಾಸಿ, ಕುಮಾರ ಎಸ್.ಕೆ (31 ವರ್ಷ) ಎಂದು ಗುರುತಿಸಲಾಗಿದೆ. ಬಂಧಿತನಿಂದ ಪೊಲೀಸರು, ಕಳವು ಮಾಡಲಾಗಿದ್ದ ಅಂದಾಜು 93,000 ರೂ. ಮೌಲ್ಯದ ಒಟ್ಟು 750 ಮೀಟರ್ ಉದ್ದದ ಕಾಪರ್ ಮೋಟಾರ್ ಕೇಬಲ್ ವೈರ್‌ಗಳನ್ನು ಜಪ್ತಿ ಮಾಡಿದ್ದಾರೆ. ಇದರೊಂದಿಗೆ ಕಳ್ಳತನದ ಕೃತ್ಯ ಎಸಗಲು ಆತ ಬಳಸುತ್ತಿದ್ದ ಅಂದಾಜು 30,000 ರೂ. ಮೌಲ್ಯದ ಬಜಾಜ್ ಪಲ್ಸರ್ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Continue Reading

ಶಿವಮೊಗ್ಗ | ಮನೆಯಲ್ಲೇ ಯುವಕನ ಹತ್ಯೆ ; ವ್ಯವಹಾರಿಕ ವೈಷಮ್ಯ ಶಂಕೆ

ಪ್ರಾಥಮಿಕ ಮಾಹಿತಿಯಂತೆ ವ್ಯವಹಾರಿಕ ವೈಷಮ್ಯವೇ ಕೊಲೆಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ಕುಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading