ಶಿವಮೊಗ್ಗ | ಹವಾಮಾನ ಬದಲಾವಣೆ ಕುರಿತು ವೈಜ್ಞಾನಿಕ, ಸುಸ್ಥಿರ ಕ್ರಿಯಾ ಯೋಜನೆ ರೂಪಿಸಬೇಕು : ಅಪರ ಜಿಲ್ಲಾಧಿಕಾರಿ ಅಭಿಷೇಕ್.ವಿ

ಮಂಗಳೂರು, ಮುಂಬೈನಂತಹ ನಗರಗಳು ಸಹ ಮುಳುಗುತ್ತಿರುವುದನ್ನು ಕಾಣುತ್ತಿದ್ದೇವೆ ಹಾಗೂ ಹವಾಮಾನ ಬದಲಾವಣೆಯಿಂದ ಮಲೆನಾಡು ಬಯಲುಸೀಮೆಯಾಗಿ, ಮರಳುಗಾಡು ಮಳೆ ಪಡೆಯುವ ನಾಡಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಹವಾಮಾನ ಬದಲಾವಣೆಯಿಂದ ತುಂಬಾ ತೊಂದರೆಗೀಡಾಗುವವರು ರೈತರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗವಾಗಿದೆ. ಆದ್ದರಿಂದ ಹವಾಮಾನ ಬದಲಾವಣೆ, ವೈಪರೀತ್ಯ ನಿಯಂತ್ರಿಸುವ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯವಶ್ಯವಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಸಣ್ಣ ಸಣ್ಣ ಬದಲಾವಣೆ ಮಾಡಿಕೊಳ್ಳುವ ಮೂಲಕ ಪರಿಸರಕ್ಕೆ ಉತ್ತಮ ಕೊಡುಗೆ ನೀಡಬಹುದಾಗಿದೆ. ಹಾಗೂ ಮುಖ್ಯವಾಗಿ ಯಾವುದೇ ಒಂದು ಉತ್ತಮ ಹಾಗೂ ಗುಣಮಟ್ಟದ ಕ್ರಿಯಾ ಯೋಜನೆಯನ್ನು ತಯಾರಿಸಲು […]

Continue Reading

ಶಿವಮೊಗ್ಗ | ಜು.5 ರಿಂದ 11ರ ವರೆಗೆ ಶ್ರೀ ಶ್ರೀಧರ ಸಪ್ತಾಹ ಮಾಲಿಕೆ ವಿಶೇಷ ಪ್ರವಚನ

ಪವಾಡ ಪುರುಷರು, ಸಂತರು, ಮಹಾತ್ಮರೂ, ಶ್ರೇಷ್ಠ ಗುರುಗಳು, ಅವಧೂತರು , ಎಂಬಿತ್ಯಾದಿ ಬಿರುದು ಹೊಂದಿರುವ ಶ್ರೀ ಶ್ರೀಧರ ಸ್ವಾಮಿಗಳವರ ಜೀವನ, ಸಾಧನೆ, ಸಾರ್ಥಕತೆಯ ವಿಚಾರವನ್ನು ಪೂಜ್ಯ ಶ್ರೀ ಶ್ರೀ ಶಿವಾನಂದ ಭಾರತೀ ಸ್ವಾಮಿಗಳ ಮುಖಾಂತರವೇ ಸಪ್ತಾಹ ರೂಪದಲ್ಲಿ ಒಂದು ವಾರದ ಕಾಲ ಕೇಳುವ ವಿಶೇಷ ಅವಕಾಶ ಇದಾಗಿದೆ. ಶಿವಮೊಗ್ಗದ ಹಲವು ಸಂಘ ಸಂಸ್ಥೆಗಳು ಹಾಗೂ ಗುರು ಭಕ್ತರು, ಸಂಗೀತ ಶಾಲೆಗಳು ಎಲ್ಲರೂ ಶ್ರದ್ದೆಯಿಂದ ಕೈ ಜೋಡಿಸಿ ನಡೆಸುತ್ತಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಗುರು ಭಕ್ತರು, ಆಸಕ್ತ […]

Continue Reading

​ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಅವರಿಂದ ಹಾರ್ದಿಕ ಅಭಿನಂದನೆ​

ಇದರೊಂದಿಗೆ, ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗ ನಗರದ ಜ್ವಲಂತ ಅಗತ್ಯತೆಗಳು ಹಾಗೂ ನಾಡಿನ ಸಮಸ್ತ ನಾಗರಿಕರ ಸರ್ವತೋಮುಖ ಕಲ್ಯಾಣಕ್ಕಾಗಿ, ಯಾವುದೇ ತಾರತಮ್ಯವಿಲ್ಲದ ಸಮಾನತೆಯ ಮತ್ತು ಪಾರದರ್ಶಕ ಶುದ್ಧ ಆಡಳಿತ ತತ್ತ್ವಗಳ ಅಡಿಯಲ್ಲಿ ತಾವೊಂದು ಹೊಸ ಭರವಸೆಯ ಮುನ್ನುಡಿ ಬರೆಯುವಿರೆಂದು ಬಯಸುತ್ತೇನೆ,” ಎಂದು ತಿಳಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Continue Reading

ಶಿವಮೊಗ್ಗ | ಜೂ.5 ರ ಸಂಜೆ ವಾಯುದಾಳಿ ಮುನ್ನೆಚ್ಚರಿಕೆ ಅಣಕು ಪ್ರದರ್ಶನ ; ಸಾರ್ವಜನಿಕರೆ ಆತಂಕ ಬೇಡ

ಅಪರ ಜಿಲ್ಲಾಧಿಕಾರಿಗಳಾದ ಅಭಿಷೇಕ್ ವಿ ಮಾತನಾಡಿ, 2026 ನೇ ಸಾಲಿನಲ್ಲಿ ರಾಷ್ಟçಮಟ್ಟದಲ್ಲಿ ನಾಗರೀಕ ರಕ್ಷಣೆ, ವೈಮಾನಿಕ ದಾಳಿ ಮತ್ತು ಕರಾಳ ರಾತ್ರಿ ಅಣಕು ಪ್ರದರ್ಶನ ನಡೆಸಲು ಕೇಂದ್ರ ಗೃಹ ಸಚಿವಾಲಯವು ಸೂಚನೆ ನೀಡಿದ್ದು ಈ ನಿರ್ದೇಶನದಂತೆ ಜಿಲ್ಲಾ ಮಟ್ಟದಲ್ಲಿಯೂ ಶುಕ್ರವಾರ ಸಂಜೆ 5 ಗಂಟೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಮಾಕ್ ಡ್ರಿಲ್ ಏರ್ಪಡಿಸಲಾಗಿದೆ. ಆಕಸ್ಮಿಕ ವಾಯುದಾಳಿ ಅಥವಾ ತುರ್ತು ಪರಿಸ್ಥಿತಿ ಎದುರಾದಾಗ ಸಾರ್ವಜನಿಕರನ್ನು ಹೇಗೆ ಸುರಕ್ಷಿತ ಸ್ಥಳಗಳಿಗೆ ರವಾನಿಸಬೇಕು, ಗಾಯಾಳುಗಳಿಗೆ ತಕ್ಷಣದ ವೈದ್ಯಕೀಯ ನೆರವು ಹೇಗೆ ಒದಗಿಸಬೇಕು […]

Continue Reading

‘ಕಾಯಕ ಸೇತು’ ಮೂಲಕ ಮಹಿಳೆಯರಿಗೆ ಬೃಹತ್ ಉದ್ಯೋಗವಕಾಶ ; ಶಿವಮೊಗ್ಗದಲ್ಲಿ ಜೂನ್ 08, 09, 10, 11, ಮತ್ತು 12 ರಂದು ಸಂದರ್ಶನ

ಕೇವಲ 7 ತಿಂಗಳ ಅಲ್ಪಾವಧಿಯಲ್ಲೇ ಈ ಪೋರ್ಟಲ್ ಮೂಲಕ ನೂರಾರು ಯುವಕ-ಯುವತಿಯರು ಯಶಸ್ವಿಯಾಗಿ ಉದ್ಯೋಗ ಪಡೆದುಕೊಂಡಿದ್ದಾರೆ. ಇದರ ಮುಂದುವರಿದ ಭಾಗವಾಗಿ, ಇದೀಗ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.ಬೆಂಗಳೂರಿನಲ್ಲಿರುವ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿಯು ಮಹಿಳಾ ಅಭ್ಯರ್ಥಿಗಳನ್ನು ಮಾತ್ರ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದು, ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ನೀಡಲಾಗುವುದು. ಈ ಹುದ್ದೆಗಳು ಮಹಿಳೆಯರಿಗೆ ಸುರಕ್ಷಿತ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅತ್ಯುತ್ತಮ ವೇದಿಕೆಯಾಗಿವೆ.10ನೇ ತರಗತಿ, ಪಿಯುಸಿ (PUC), ಡಿಪ್ಲೊಮಾ, ಐಟಿಐ (ITI) ಅಥವಾ ಯಾವುದೇ ಪದವಿ (ಪಾಸ್ […]

Continue Reading

ಶಿವಮೊಗ್ಗ | ಕರವೇ ಸ್ವಾಭಿಮಾನಿ ಬಣದಿಂದ ನಿರಂತರ ಕನ್ನಡ ಸೇವೆ ನೂತನ ಧ್ವಜಸ್ಥಂಬ ಉದ್ಘಾಟನೆ ಮತ್ತು ಅನ್ನದಾಸೋಹ

ದೊಡ್ಡಪೇಟೆ ಮಂಜುನಾಥ್ ರವರು ಮಾತನಾಡಿ, ಕನ್ನಡ ಸಂಘಟನೆಗಳ ಏಳಿಗೆಗಾಗಿ ನಿರಂತರ ಪರಿಶ್ರಮದ ಫಲವಾಗಿ ಕನ್ನಡವು ರಾಷ್ಟಾçದ್ಯಂತ ಗಮನ ಸೆಳೆಯುತ್ತಿದೆ. ಇಂದಿನ ಧ್ವಜಾರೋಹಣ ಅರ್ಥಪೂರ್ಣವಾಗಿದ್ದು, ಪ್ರತಿಯೊಂದು ರಸ್ತೆಗಳಲ್ಲಿ ಕನ್ನಡ ಧ್ವಜಸ್ಥಂಬ ಸ್ಥಾಪನೆ ಇಂದಿನ ಅವಶ್ಯಕತೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ಹೆಚ್.ಎಸ್.ಕಿರಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಪತ್ರಕರ್ತರು ಮತ್ತು ಸಾಹಿತಿಗಳಾದ ಗಾ.ರಾ.ಶ್ರೀನಿವಾಸ್, ರಘುರಾಜ್ ಮಲ್ನಾಡ್, ಕಾನೂನು ಸಲಹೆಗಾರರಾದ ಅನಿಲ್ ಕುಮಾರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶಂಕರ ಚೀಲೂರು, ರೋಟರಿ ವಲಯ ಸೇನಾನಿ ಕಿರಣ್ […]

Continue Reading

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂದು ಭವಿಷ್ಯ ನುಡಿದಿದ್ದ ಸಾಗರದ ಖ್ಯಾತ ಜ್ಯೋತಿಷಿ ಡಾ.ಸಿ.ಕೊಟ್ರೇಶಯ್ಯ ಕಲ್ಯಾಣಮಠ

ರಾಷ್ಟ್ರ ರಾಜ್ಯಕಾರಣದಲ್ಲಿ ಪಕ್ಷವನ್ನು ಸರ್ವಾಗೀಣ ಅಭಿವೃದ್ಧಿ ಮಾಡುವುದರ ಮೂಲಕ ದಿನಾಂಕ : 26-11-2025 ರಿಂದ 28-06-2027ವರೆಗೆ 2027-2028ರಲ್ಲಿ ರಾಜ್ಯದ ಪ್ರಬಲ ಮುಖ್ಯಮಂತ್ರಿಯಾಗಿ ಮೆರೆಯುವ ಯೋಗವಿದೆ.ದಿನಾಂಕ : 15-10-2021 ರಿಂದ 14-12-2024 ರವರೆಗೆ ಶನಿದಶಾ ಶುಕ್ರಭುಕ್ತಿ ಮೇಷ ಲಗ್ನಕ್ಕೆ ಮಾರಕ ಭುಕ್ತಿಯಾಗಿದ್ದು ಲಗ್ನಾತ್ 12 ರಲ್ಲಿ ಉಚ್ಚನಾಗಿದ್ದು ಸ್ವಲ್ಪದರಲ್ಲಿ ಮುಖ್ಯಮಂತ್ರಿ ಪದವಿ ತಪ್ಪಿ ಉಪಮುಖ್ಯಮಂತ್ರಿಗಳಾಗಿದ್ದಾರೆ. ಶುಕ್ರಭುಕ್ತಿ ಮೇಷ ಲಗ್ನಕ್ಕೆ ಮಾರಕವಾಗಿದ್ದು ಶಾಸ್ತ್ರಕ್ಕೋವಾಗಿ ಮಹಾಮೃತ್ಯಂಜಯಜಪಸಹಿತ 5 ಮೇಕೆ (ಆಡು) ಗುರುಮಠಕ್ಕೆ ದಾನ ಕೊಡಬೇಕು ಮತ್ತು ವಾಹನ ಸ್ತ್ರೀ ವಿಚಾರದಲ್ಲಿ ಹಾಗೂ […]

Continue Reading

ವಿಚ್ಛೇದನಕ್ಕೆ ಮೊರೆ ಹೋದ ಖ್ಯಾತ ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಶುಭಾ ಪೂಂಜಾ

ಈಗ ಇವರಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ಪ್ರಕ್ರಿಯೆಯ ಭಾಗವಾಗಿ ಇಂದು ಅಥವಾ ಮುಂದಿನ ವಿಚಾರಣೆಯ ದಿನದಂದು ಶುಭಾ ಪೂಂಜಾ ಮತ್ತು ಸುಮಂತ್ ಬಿಲ್ಲವ ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚಾರಣೆಗೆ ಖುದ್ದಾಗಿ ಹಾಜರಾಗುವ ಸಾಧ್ಯತೆಯಿದೆ. ನಾಲ್ಕು ವರ್ಷಗಳ ಸುಂದರ ಸಂಸಾರದಲ್ಲಿ ಹಠಾತ್ತನೆ ಇಂತಹ ಬಿರುಕು ಮೂಡಲು ನಿಖರವಾದ ಕಾರಣವೇನು ಎಂಬುದು ಇನ್ನು ಅಧಿಕೃತವಾಗಿ ಹೊರಬಂದಿಲ್ಲ. ಮೊಗ್ಗಿನ ಮನಸ್ಸು, ಚಂಡ ಸೇರಿದಂತೆ ಹಲವು ಯಶಸ್ವಿ ಕನ್ನಡ ಸಿನಿಮಾಗಳಲ್ಲಿ ನಟಿಸಿ, ಬಿಗ್ ಬಾಸ್ […]

Continue Reading

ಪರಿಷತ್ತಿನ ದ್ವೈವಾರ್ಷಿಕ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ರಾಜ್ಯ ಕಾಂಗ್ರೆಸ್ ಘಟಕದಿಂದ ಕಳುಹಿಸಲಾದ ಸಂಭಾವ್ಯ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ನಾಲ್ವರ ಹೆಸರನ್ನು ಅಂತಿಮಗೊಳಿಸಿದ್ದಾರೆ. ಪಕ್ಷದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಮತ್ತೊಮ್ಮೆ ಪರಿಷತ್ ಪ್ರವೇಶಕ್ಕೆ ಅವಕಾಶ ನೀಡುವ ಮೂಲಕ ಅವರ ಅನುಭವವನ್ನು ಬಳಸಿಕೊಳ್ಳಲು ಹೈಕಮಾಂಡ್ ನಿರ್ಧರಿಸಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಬಲವಾದ ಬಹುಮತವನ್ನು ಹೊಂದಿರುವುದರಿಂದ, ಈ ನಾಲ್ವರೂ ಅಭ್ಯರ್ಥಿಗಳು ಸುಲಭವಾಗಿ ಜಯಗಳಿಸುವ ಸಾಧ್ಯತೆಯಿದೆ.

Continue Reading