ಶಿವಮೊಗ್ಗ | ನರಸಿಂಹ ಹತ್ಯೆ ಪ್ರಕರಣ ; ಆರೋಪಿ ಕಾಲಿಗೆ ಪೊಲೀಸರ ಗುಂಡೇಟು

ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ನರಸಿಂಹ ಯಾನೆ ದಾಸ ಹತ್ಯೆ ಪ್ರಕರಣದ ಸಂಪೂರ್ಣ ಸಂಚು ರೂಪಿಸಿದ್ದ ವ್ಯಕ್ತಿ ಮಧುವಾಗಿದ್ದು, ಪ್ರಕರಣದ ಪ್ರಮುಖ ರೂವಾರಿ ಎಂದು ತಿಳಿಸಿದ್ದಾರೆ. ಮಹಜರ್ ವೇಳೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದರಿಂದ ಕಾನೂನುಬದ್ಧ ಕ್ರಮವಾಗಿ ಗುಂಡು ಹಾರಿಸಲಾಗಿದೆ ಎಂದರು. ಪ್ರಕರಣದಲ್ಲಿ ಅಂಬು ಯಾನೆ ಅನಿಲ್, ಮಧು ಯಾನೆ ಹನುಮಂತು, ರವಿ, ಕತ್ತೆ ಕಾರ್ತಿಕ್ ಹಾಗೂ ಶಬರೀಶ್ ಸೇರಿದಂತೆ ಐವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಹೊಳೆಬೆನವಳ್ಳಿಯ ಸುಬ್ಬಯ್ಯ ಆಸ್ಪತ್ರೆ […]

Continue Reading

ಶಿಕಾರಿಪುರ | ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ; ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಈ ಸಂದರ್ಭದಲ್ಲಿ ಶಿವು ಹುಲ್ಮಾರ್ ಯುವ ಕಾಂಗ್ರೆಸ್ ಅಧ್ಯಕ್ಷರು ಶಿಕಾರಿಪುರ ಬ್ಲಾಕ್, ಯುವ ಕಾಂಗ್ರೆಸ್ ಮುಖಂಡ ಶರತ್ MH ಮತ್ತು ವಸತಿ ನಿಲಯದ ವಿದ್ಯಾರ್ಥಿಗಳಾದ ಗಿರೀಶ್ ಮತ್ತು ಇನ್ನೂ ಮುಂತಾದವರು ಇದ್ದರು.

Continue Reading

ಧಾರವಾಡ | ಅಮಾನತಾಗಿದ್ದ ಕೇಂದ್ರ ಕಾರಾಗೃಹದ ಜೈಲರ್ ಆತ್ಮಹತ್ಯೆಗೆ ಶರಣು

ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಮೃತ ಸಿದ್ದರಾಮಪ್ಪ ಪತ್ನಿ ಲಕ್ಷ್ಮಿ ಪ್ರತಿಕ್ರಿಯಿಸಿದ್ದು, ಕಾರಾಗೃಹದ ಮೇಲಾಧಿಕಾರಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. “ಮೇಲಾಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇಲಾಧಿಕಾರಿ ಅವರೇ ನನ್ನ‌ ಗಂಡನ ಜೀವ ಪಡೆದವರು. ಅಮಾನತು ಮಾಡಿದ್ದಾರೆ. ಜೈಲಿಗೆ ಹಾಕುತ್ತಾರೆ ಎಂದು ಆತ್ಮಹತ್ಯೆ ಮಾಡಕೊಂಡಿದ್ದಾರೆ. ಸಸ್ಪೆಂಡ್ ‌ಮಾಡಿ ಮೈಸೂರಿಗೆ ವರ್ಗಾವಣೆ ‌ಮಾಡಿದ್ರು. ಮೈಸೂರಿಗೆ ಕರ್ತವ್ಯಕ್ಕೆ ಹಾಜರಾಗಲು ಹೊರಟ್ಟಿದ್ದರು. ಆದ್ರೆ ತಂದೆ, ತಾಯಿ ಮುಖ ನೋಡಿ ಹೋಗ್ತೀನಿ ಅಂತ ಹೇಳಿ ಹೀಗೆ ಮಾಡಿಕೊಂಡ್ರು. ತಮ್ಮ‌ ಮೇಲೆ […]

Continue Reading

ಸರ್ಕಾರಿ ಅಧಿಕಾರಿಯೊಬ್ಬರಿಗೆ ಲೈಂಗಿಕ ಕಿರುಕುಳ, ಬೆದರಿಕೆ ; ಗುತ್ತಿಗೆದಾರನ ವಿರುದ್ಧ ದೂರು

ದೂರಿನ ಅನ್ವಯ, ಆರೋಪಿ ನಾಗರಾಜ್ (A1) ಎಂಬ ಗುತ್ತಿಗೆದಾರನು ಕಳೆದ 2023ರ ಜೂನ್ ತಿಂಗಳಿನಿಂದ 2026ರ ಜೂನ್ 8ರ ಅವಧಿಯಲ್ಲಿ ಸಾಗರ ನಗರಸಭೆಯ ಆವರಣದಲ್ಲಿ ದೂರುದಾರರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. “ನಿನ್ನ ಗಂಡ ಕುಡುಕ, ಅವನಿಂದ ನಿನಗೆ ದೈಹಿಕ ಸುಖ ಸಿಗುವುದಿಲ್ಲ. ನಾನು ನಿನಗೆ ಆಭರಣಗಳನ್ನು ಕೊಡುತ್ತೇನೆ, ನನ್ನೊಂದಿಗೆ ಸಹಕರಿಸು” ಎಂದು ಹೇಳಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಅಷ್ಟೇ ಅಲ್ಲದೆ, ಸಂತ್ರಸ್ತೆ ಮಾರುಕಟ್ಟೆಗೆ ಅಥವಾ ಹೊರಗಡೆ ಹೋದಾಗಲೂ ಹಿಂದೆ ಬಂದು ದೈಹಿಕವಾಗಿ ಹಾಗೂ ಮಾನಸಿಕವಾಗಿ ಪೀಡಿಸಿ, ತನಗೆ ಸಹಕರಿಸದಿದ್ದರೆ […]

Continue Reading

ವಿಧಾನ ಪರಿಷತ್ ಸದಸ್ಯ,ಕಾಂಗ್ರೆಸ್ ಮುಖಂಡ ನಸೀರ್‌ ಅಹ್ಮದ್‌ ದಿವಾಳಿ

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಿಂದ ತೀರ್ಪುಸಾಲ ಮರು ಪಾವತಿಯಾಗದ ಕಾರಣ ಬ್ಯಾಂಕುಗಳು ದಿವಾಳಿತನ ಸಂಹಿತೆ – 2016ರಡಿ ಎನ್‌ಎಸ್‌ಎಲ್‌ಟಿ ಬೆಂಗಳೂರು ವಿಭಾಗದ ಮೊರೆ ಹೋಗಿದ್ದವು. ಆ ಅರ್ಜಿಗಳ ವಿಚಾರಣೆ ನಡೆಸಿದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಬೆಂಗಳೂರು ಪೀಠ ಈ ತೀರ್ಪು ನೀಡಿದೆ. 2023 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಇವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವನ್ನು ನೀಡಲಾಗಿತ್ತು. ದಾವಣಗೆರೆ ಉಪ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದಾರೆ ಎಂಬ ಆರೋಪ […]

Continue Reading

ಶಿವಮೊಗ್ಗ | ಸಂಸದರಿಂದ ಸುಳ್ಳು ಮಾಹಿತಿ, ಶಾಸಕರಿಂದ ಮತ್ತೆ ಗುದ್ದಲಿಪೂಜೆ : ಎಚ್. ಸಿ. ಯೋಗೇಶ್ ವಾಗ್ದಾಳಿ

ಸೇತುವೆ ಮಂಜೂರಾತಿ ಜಟಾಪಟಿ: ವಿದ್ಯಾನಗರದ ಶಿಥಿಲಗೊಂಡಿರುವ ತುಂಗಾ ಸೇತುವೆ ಕುರಿತು ೨೦೧೮ ರಿಂದಲೇ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಕಾಂಗ್ರೆಸ್ ವತಿಯಿಂದ ಮಾಡಲಾಗಿದೆ. ಅಂದಿನ ಹಾಗೂ ಹಾಲಿ ಲೋ ಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದು, ಅದರ ಪರಿಣಾಮವಾಗಿ ಸೇತುವೆ ಕಾಮಗಾರಿಗೆ ೪೦ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಸೇತುವೆ ಮಂಜೂರಾತಿಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಅವರ ಶ್ರಮವೂ ಇದೆ. ಆದರೆ ಅನುದಾನ ಬಿಡುಗಡೆಯಾದ ನಂತರವೂ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಶಾಸಕರು […]

Continue Reading

ಬಿ.ಎಸ್. ಶಿವಣ್ಣನವರಿಗೆ ಹಂಸ ಮಹಾಯೋಗ : ಖ್ಯಾತ ಜ್ಯೋತಿಷಿ ಡಾ|| ಸಿ. ಕೊಟ್ರೇಶಯ್ಯ ಕಲ್ಯಾಣಮಠ

ಇವರ ಕುಂಡಲಿಯನ್ನು ಪರಿಶೀಲಿಸಿದಾಗ ಇವರ ಕುಂಡಲಿಯಲ್ಲಿ ಹಾಗೂ ಶೋಡಷ ವರ್ಗ ಪರಿಶೀಲಿಸಿದಾಗ, ಸಿಂಹಸನಾ ಯೋಗ ಪ್ರಬಲವಾಗಿದ್ದು 25-26ನೆ ಇಸವಿಯಲ್ಲಿ ವಿಧಾನ ಪರಿಷತ್ ಸದಸ್ಯರು (ಎಂ.ಎಲ್.ಸಿ.)ಯಾಗಿ ರಾಜ್ಯದ ಬಡವರಿಗೆ, ಶೋಷಿತರಿಗೆ ಜನಾಂಗದವರಿಗೆ ಸೂಕ್ತವಾಗಿರುವಂತಹ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ರಾಜ್ಯದಮಂತ್ರಿಯಾಗಿಯೂ, ಅನೇಕ ಮಹತ್ವರವಾಗಿವಂತಹ ಕಾರ್ಯಗಳನ್ನು ಜಾರಿಗೊಳಿಸುವುದರ ಮೂಲಕ ಜನಸಾಮಾನ್ಯರಿಗೆ ತಲುಪಿಸುವುದರ ಮೂಲಕ ಜನ ಮಾನಸದಲ್ಲಿ ನೆಲ್ಲೆ ನಿಲ್ಲಲಿದ್ದಾರೆ. ಇವರಿಗೆ 15-5-2025 ರಿಂದ 11 ನೇ ಗುರು ಉತ್ತಮವಾಗಿದ್ದು ವಿಧಾನ ಪರಿಷತ್ ಸದಸ್ಯರು (ಎಂ.ಎಲ್.ಸಿ.) ಪದವಿ ಪ್ರಾಪ್ತವಾಗಲಿದೆ. 29-3-2025 ರಿಂದ 8ನೇ […]

Continue Reading

ಹುಲಿಕಲ್ ಘಾಟ್‌ನಲ್ಲಿ ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ

ಘಾಟಿಯಲ್ಲಿ ಮತ್ತೊಮ್ಮೆ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರ ಸುರಕ್ಷತೆಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ: ಘಾಟಿ ರಸ್ತೆಯಲ್ಲಿ ತಡೆಗೋಡೆ ಹಾಗೂ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ.ಮಾಹಿತಿ ಮತ್ತು ಸೂಚನಾ ಫಲಕಗಳನ್ನು ಹಾಕಲಾಗಿದೆ.ರಾತ್ರಿ ವೇಳೆ ವಾಹನ ಸವಾರರ ಅನುಕೂಲಕ್ಕಾಗಿ ‘ಕ್ಯಾಟ್ ಐ’ ಹಾಗೂ ಸೋಲಾರ್ ಸ್ಟಡ್ಸ್‌ಗಳನ್ನು ಅಳವಡಿಸಿ ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದೆ. “ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ 116 ರನ್ವಯ ಈ ಹಿಂದೆ ವಿಧಿಸಲಾಗಿದ್ದ ಸಂಪೂರ್ಣ ವಾಹನ ಸಂಚಾರ ನಿಷೇಧದ ಆದೇಶವನ್ನು ರದ್ದುಗೊಳಿಸಲಾಗಿದೆ. ಜೂನ್ 12, […]

Continue Reading