ಶಿವಮೊಗ್ಗ | “ಹಕ್ಕುಪತ್ರಕ್ಕಾಗಿ, ಸಚಿವ ಮಧು ಬಂಗಾರಪ್ಪ ಕಚೇರಿ ಎದುರು ನಾಳೆಯಿಂದ ಅಹೋರಾತ್ರಿ ಧರಣಿ” : ವಾಟಾಳ್ ಮಂಜುನಾಥ್

ಶಿವಮೊಗ್ಗ

ಶಿವಮೊಗ್ಗ, ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ವಾಟಾಳ್ ಮಂಜುನಾಥ್ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ವಾಟಾಳ್ ಮಂಜುನಾಥ, ಶಿವಮೊಗ್ಗ ತಾಲೂಕಿನ ರಾಮಿನಕೊಪ್ಪ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ವಯಸ್ಸಾದ ವೃದ್ಧರು ಬಡ ಕಾರ್ಮಿಕರು ಸರ್ಕಾರಿ ಗ್ರಾಮ ಠಾಣಾ ಜಾಗದಲ್ಲಿ ಸಣ್ಣಪುಟ್ಟ ಮನೆಗಳು ಮತ್ತು ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದು ಇವರಿಗೆ ನೀರಿನ ಸೌಕರ್ಯ ವಿದ್ಯುತ್ ಸೌಕರ್ಯ ರಸ್ತೆ ಸಂಪರ್ಕ ಮುಂತಾದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದು ಹಲವು ತಿಂಗಳಿಂದ ಹಲವಾರು ಬಾರಿ ಉಸ್ತುವಾರಿ ಮಂತ್ರಿಗಳಿಗೆ ಮನವಿ ಕೊಟ್ಟು ನಂತರ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಗಳಿಗೂ ಮನವಿ ನೀಡಿದರು ಇವರಿಗೆ ಯಾವುದೇ ಸ್ಪಂದನೆ ನೀಡಿಲ್ಲ ಎಂದರು.

ನಾಳೆ ಮಂಗಳವಾರ 7ರಂದು ಬೆಳಗ್ಗೆ 10 ಗಂಟೆಗೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದು ಎಂದು ವಾಟಾಳ್ ಮಂಜುನಾಥ್ ತಿಳಿಸಿದ್ದಾರೆ.

Author