ಶಿವಮೊಗ್ಗ | ರಸ್ತೆ ದುರಸ್ತಿಯಲ್ಲಿ ಪಾಲಿಕೆ ವಿಫಲ ; ನಜಿರ್ ಅಹ್ಮದ್ ನೇತೃತ್ವದಲ್ಲಿ ಪ್ರತಿಭಟನೆ

ಶಿವಮೊಗ್ಗ

ಶಿವಮೊಗ್ಗ ನಗರದ ವಾರ್ಡ್ ನಂ.28 ಮತ್ತು 31 ರ ಮಧ್ಯಭಾಗದಲ್ಲಿ ಬರುವ ಕಿದ್ವಾಯಿ ಶಾಲೆಯ ಮುಖ್ಯರಸ್ತೆಗೆ ಸೇರಿಕೊಂಡಂತೆ 3-4 ಶಾಲೆಗಳಿವೆ. ನಗರದ ಎಲ್ಲಾ ಶಾಲಾ-ಕಾಲೇಜಿನ ಬಸ್‌ಗಳು ಇದೇ ಮುಖ್ಯರಸ್ತೆಯ ಮೂಲಕ ಸಂಚರಿಸುತ್ತಿವೆ.ಈ ರಸ್ತೆಯಲ್ಲಿ ಸಾಕಷ್ಟು ಶಾಲಾಮಕ್ಕಳು, ಸಾರ್ವಜನಿಕರು, ಹಿರಿಯ ನಾಗರೀಕರು, ಮಹಿಳೆಯರು ದಿನನಿತ್ಯ ಓಡಾಡುವ ಪ್ರಮುಖ ರಸ್ತೆಯಾಗಿದೆ. ಆದರೆ ಈ ಆ‌ರ್.ಎಂ.ಎಲ್.ನಗರದಲ್ಲಿ ಸಾರ್ವಜನಿಕರು ಸಂಚಾರ ಯೋಗ್ಯವಲ್ಲದ ಹಾಳು ಬಿದ್ದ ರಸ್ತೆಯಲ್ಲಿ ಓಡಾಡುವ ದುಸ್ಥಿತಿ ದುರ್ಗತಿ ಒದಗಿ ಬಂದಿದೆ.

ರಸ್ತೆಯ ಅಕ್ಕಪಕ್ಕದ ಮನೆಗಳಿಗೆ ದಿನವಿಡೀ ಧೂಳು ಮತ್ತು ಮಣ್ಣಿನಿಂದ ಬದುಕುವ ಶೋಚನೀಯ ಪರಿಸ್ಥಿತಿಯಿಂದ ಜನರು ಪರಿತಪಿಸುವಂತಾಗಿದೆ. ಈ ಮೂಲಕ ಆರ್.ಎಂ.ಎಲ್.ನಗರದ ಸ್ಥಳೀಯ ನಿವಾಸಿಗಳು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುವಂತಾಗಿದೆ. ಈ ಮೂಲಕ ಶಿವಮೊಗ್ಗ ಜಿಲ್ಲಾ ಆಮ್ ಆದ್ಮಿ ಪಾರ್ಟಿಯು ಅನೇಕ ವರ್ಷಗಳಿಂದ ಹಲವಾರು ಬಾರಿ ಮನವಿಗಳನ್ನು, ಹೋರಾಟಗಳನ್ನು ದೂರುಗಳನ್ನು ನಿರಂತರವಾಗಿ ಮಾಡುತ್ತಲೇ ಬಂದಿದೆ.

ಪಾಲಿಕೆಯು ಇದುವರೆಗೂ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದರಲ್ಲಿ ವಿಫಲವಾಗಿದೆ. ಇದನ್ನು ಖಂಡಿಸಿ ಆಮ್‌ ಆದ್ಮಿ ಪಾರ್ಟಿಯು ಪುನಃ ರಸ್ತೆಗಿಳಿಯುವ, ಹೋರಾಟ, ಪ್ರತಿಭಟನೆ, ಧರಣಿ ಮಾಡುವ, ಸಾರ್ವಜನಿಕರ ಪರ ದನಿಯೆತ್ತುವ ಕಾರ್ಯದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದೆ.

oplus_0

ಇಂದು ಸಹ ಆಪ್ ಮುಖಂಡ ನಜಿರ್ ಅಹ್ಮದ್ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳನ್ನು ಒಳಗೊಂಡು ಪ್ರತಿಭಟನೆ ನಡೆಸಲಾಯಿತು ಹಾಗೂ ಈ ಸಂದರ್ಭದಲ್ಲಿ ವಾರ್ಡ್ ನ ಎಂಜಿನಿಯರಗಳಿಗೆ ಮನವಿ ಸಲ್ಲಿಸಲಾಯಿತು.

Author