ಹೊಸನಗರ | ಸಚಿವ ಸ್ಥಾನಕ್ಕಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಪರ ಧರ್ಮಸ್ಥಳದಲ್ಲಿ ಮುಡಿ ಕೊಟ್ಟು ಪ್ರಾರ್ಥಿಸಿದ ಕಾಂಗ್ರೆಸ್ ಮುಖಂಡರು

ಅಲ್ಲದೆ ಕರಾವಳಿಯ ಆರಾಧ್ಯ ದೈವ ಸ್ವಾಮಿ ಕೊರಗಜ್ಜನಿಗೂ ವಿಶೇಷ ಪೂಜೆ ಸಲ್ಲಿಸಿ, ಬೇಳೂರು ಗೋಪಾಲಕೃಷ್ಣ ಅವರು ಈ ಬಾರಿ ಸಚಿವರಾಗುವಂತೆ ಪ್ರಾರ್ಥನೆ ಮಾಡಿದರು. ಸಾಗರ-ಹೊಸನಗರ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಸೇವೆ ಅಪಾರವಾಗಿದೆ. ಹಿಂದುಳಿದ ಸಮುದಾಯಗಳ ಧ್ವನಿಯಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸಚಿವ ಸ್ಥಾನ ದೊರೆಯಬೇಕು ಎಂಬುದು ಕ್ಷೇತ್ರದ ಜನರ ಬಹುದಿನಗಳ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ದೇವರ ಆಶೀರ್ವಾದಕ್ಕಾಗಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದೇವೆ. ಪಕ್ಷದ […]

Continue Reading

ಶಿವಮೊಗ್ಗ | ಹಾಲಪ್ಪ 5 ಕೋಟಿ ಅಲ್ಲ, 25 ಕೋಟಿ ಮಾನನಷ್ಟ ಮೊಕದ್ದಮೆ ಹಾಕಲಿ ಎದುರಿಸಲು ಸಿದ್ಧ : ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ

ಸಿಗಂದೂರು ದೇವಸ್ಥಾನದ ವಿಚಾರವಾಗಿ ನಾನು ಯಾವತ್ತೂ ರಾಜಕೀಯ ಮಾಡುವುದಿಲ್ಲ. ದೇವಿಯ ಸನ್ನಿಧಿಗೆ ನಮ್ಮ ಕುಟುಂಬ ತಲೆ ತಲಾಂತರಿಂದ ನಡೆದುಕೊಳ್ಳುತ್ತಿದೆ. ನಾನು ಸಿಗಂದೂರು ದೇವಿಯ ಭಕ್ತನಾಗಿದ್ದೇನೆ. ನಾನು ಸಿಗಂದೂರು ದೇವಸ್ಥಾನದ ಆಡಳಿತ ಮಂಡಳಿ ಅಥವಾ ಪೂಜೆ ಮಾಡುವಂತ ಭಟ್ಟರ ಪರವಾಗಿ ಇಲ್ಲ. ನಾನು ಸಿಗಂದೂರು ದೇವಸ್ಥಾನದ ಪರವಾಗಿ ನಿಂತಿದ್ದೇನೆ. ವಿನಾಕಾರಣ ಸಾಕ್ಷ್ಯಾಧಾರಗಳಿಲ್ಲದೇ ನನ್ನ ವಿರುದ್ಧ 5 ಕೋಟಿ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂಬುದಾಗಿ ಬಹಿರಂಗವಾಗಿ ಹೇಳುವುದು ಎಷ್ಟು ಸರಿ? 5 ಕೋಟಿಯಲ್ಲ 25 ಕೋಟಿ ಹಾಕಲಿ ನಾನು ಹೆದರೋದಿಲ್ಲ. […]

Continue Reading

SHIVAMOGGA BREAKING ನಾನು ಸಚಿವ ಸ್ಥಾನದ ಪ್ರಭಲ ಆಕಾಂಕ್ಷಿ : ಶಾಸಕ ಬೇಳೂರು ಗೋಪಾಲಕೃಷ್ಣ

ಹೊಸಬರಿಗೆ ಅವಕಾಶ ಕೊಡಬೇಕು ಆದಷ್ಟು ಬೇಗ ಆಗಬೇಕು ಎಂದು ಮಾತು ಮುಂದುವರೆಸಿದ ಶಾಸಕ ನಾನೇನು ಸನ್ಯಾಸಿನಾ? ಮೂರ್ನಾಲ್ಕು ಬಾರಿ ಎಂಎಲ್ಎ ಆಗಿದ್ದೇನೆ, ನನ್ನ ಹಕ್ಕುಗಳನ್ನು ರಾಜ್ಯ ಮತ್ತು ಕೇಂದ್ರದ ನಾಯಕರಲ್ಲಿ ಕೇಳಿದ್ದೇನೆ, ಮಂತ್ರಿ ಸ್ಥಾನ ಕೊಡುವ ನಿರ್ಧಾರ ಕೇಂದ್ರ ನಾಯಕರು ಮಾಡುತ್ತಾರೆ.ನಾನು ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾನೆ. ಎರಡುವರೆ ವರ್ಷ ಅವಧಿಯ ಹಂಚಿಕೆ ಬಗ್ಗೆ ನನಗೇನು ಗೊತ್ತಿಲ್ಲ ಈ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತೆ ನನ್ನನ್ನು ಯಾರು ಸಹಿ ಹಾಕಿ ಎಂದು ಕೇಳಿಲ್ಲ ನಾನು ಯಾವುದು ಸಹಿ […]

Continue Reading