ಕಾರವಾರ | ಗುಂಡು ಹಾರಿಸಿಕೊಂಡು ವ್ಯಕ್ತಿ ಸಾವು
ವಿಡಿಯೋ ವೈರಲ್ ಆದ ನಂತರ ರಾಜು ಪಿಕಳೆ ಅವರು ತೀವ್ರವಾಗಿ ನೊಂದಿದ್ದರು. ಇದು ಕೇವಲ ಕಣ್ತಪ್ಪಿನಿಂದ ಆದ ಪ್ರಮಾದ ಎಂದು ಅವರು ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದ್ದರು ಎನ್ನಲಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಟೀಕೆಗಳು ಮತ್ತು ತೇಜೋವಧೆಯಿಂದ, ಕಳೆದ ಎರಡು ವಾರಗಳಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಆಪ್ತ ಮೂಲಗಳು ತಿಳಿಸಿವೆ. ಶುಕ್ರವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ, ಅಂಗಳದ ತುಳಸಿಕಟ್ಟೆಯ ಮುಂಭಾಗವೇ ರಾಜು ಪಿಕಳೆ ಅವರು ಡಬಲ್ ಬ್ಯಾರಲ್ ಗನ್ನಿಂದ ಶೂಟ್ ಮಾಡಿಕೊಂಡು ಬದುಕನ್ನು […]
Continue Readingಮಗಳ ಮದುವೆಗೆ 25 ಲಕ್ಷ ರೂಪಾಯಿ ವೆಚ್ಚದಲ್ಲಿ 3 ಕೆಜಿ ಬೆಳ್ಳಿಯಿಂದ ವಿವಾಹ ಆಮಂತ್ರಣ ಪತ್ರಿಕೆ ಮಾಡಿಸಿದ ತಂದೆ
ಬೆಳ್ಳಿ ವಿವಾಹ ಆಮಂತ್ರಣ ಪತ್ರಿಕೆ ವಿನ್ಯಾಸಗೊಳಿಸಿದರು ಕೈಯಿಂದಲೇ 65 ದೇವರುಗಳ ಕಲಾಕೃತಿ ಕೆತ್ತನೆ: ಆಮಂತ್ರಣ ಪತ್ರಿಕೆ 8 ಇಂಚು ಉದ್ದ, 6.5 ಇಂಚು ಅಗಲ ಹಾಗೂ 3 ಇಂಚು ಆಳ ಇದೆ. ಕಲಾವಿದರು ಇಷ್ಟು ದೊಡ್ಡ ಬೆಳ್ಳಿ ಆಮಂತ್ರಣ ಪತ್ರಿಕೆ ತಯಾರಿಕೆಯಲ್ಲಿ ತಮ್ಮ ಕೌಶಲ್ಯವನ್ನು ಅನಾವರಣಗೊಳಿಸಿದ್ದಾರೆ. ಈ ಆಹ್ವಾನ ಪತ್ರಿಕೆ ಸಿದ್ಧಪಡಿಸಲು ಕಲಾವಿದರಿಗೆ ಒಂದು ವರ್ಷ ಹಿಡಿದಿದೆ. ಆಮಂತ್ರಣ ಪತ್ರಿಕೆಯನ್ನು 128 ಪ್ರತ್ಯೇಕ ಭಾಗಗಳನ್ನು ಜೋಡಿಸಿ ತಯಾರಿಸಲಾಗಿದೆ. ಬೆಳ್ಳಿ ಆಹ್ವಾನ ಪತ್ರಿಕೆಯು ಗಣೇಶ, ರಾಮ ದರ್ಬಾರ್, ಶಿವ-ಪಾರ್ವತಿ […]
Continue Readingಶಿವಮೊಗ್ಗ | ರಾಜ್ಯ ಸರ್ಕಾರದ ನಡೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ : ಸಂಸದ ಬಿ. ವೈ. ಆರ್
ರಾಜ್ಯದ ಅಭಿವೃದ್ಧಿ ಶೂನ್ಯವಾಗಿದ್ದು, ಗ್ಯಾರಂಟಿ ಯೋಜನೆಗಳ ವೈಫಲ್ಯವನ್ನು ಮುಚ್ಚಿಡಲು ಸರ್ಕಾರ ವಿಬಿ ರಾಮ್ ಜಿ ಯೋಜನೆಯ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ರಾಘವೇಂದ್ರ ದೂರಿದರು. ನರೇಗಾ ಯೋಜನೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕೇಂದ್ರ ತಂದಿರುವ ಬದಲಾವಣೆಗಳನ್ನು ಸಹಿಸಲಾಗದೆ ಕಾಂಗ್ರೆಸ್ ನಾಯಕರು ಸಾರ್ವಜನಿಕರನ್ನು ಹಾದಿ ತಪ್ಪಿಸುತ್ತಿದ್ದಾರೆ. ಈ ಕೂಡಲೇ ಅಸಭ್ಯವಾಗಿ ವರ್ತಿಸಿದ ಶಾಸಕರ ವಿರುದ್ಧ ಸ್ಪೀಕರ್ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
Continue Readingಶಿವಮೊಗ್ಗ | ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರಿಡುವಂತೆ ಸಂಸದರಿಗೆ ಮನವಿ
ಕುವೆಂಪುರವರು ಬಾವಗೀತೆ, ನಾಟಕ ಕ್ಷೇತ್ರಗಳಲ್ಲಿಯೂ ಸಹ ಕೃತಿಗಳನ್ನು ರಚಿಸಿದ್ದಾರೆ. ಕುವೆಂಪುರವರು ಮೈಸೂರಿನ ಮಹಾರಾಜ ಕಾಲೇಜ್ನಲ್ಲಿ ಮತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜ್ನಲ್ಲಿ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸಿರುತ್ತಾರೆ. ಮೈಸೂರು ವಿಶ್ವವಿದ್ಯಾಯಲದ ಉಪಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ ಹೆಗ್ಗಳಿಕೆ ಶ್ರೀಯುತರಿಗೆ ಇದೆ ಇವರ ಗೌರವಾರ್ಥ ಶಿವಮೊಗ್ಗದ ಹತ್ತಿರ ಶಂಕರಘಟ್ಟದಲ್ಲಿ ಕುವೆಂಪು ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲಾಗಿದೆ ಎಂದು ಸಂಸದರನ್ನ ಭೇಟಿಯಾಗಿ ಮನವಿ ಪತ್ರ ನೀಡಿದ ಸಂದರ್ಭದಲ್ಲಿ ಟ್ರಸ್ಟ್ನ ಮುಖಂಡ ಸಂಸದರಿಗೆ ವಿವರಿಸಿದರು. ಆದ್ದರಿಂದ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿ ಕೂಡಲೆ ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ […]
Continue Readingಬೆಂಗಳೂರು | ಪ್ರಸಿದ್ಧ ಸ್ವಾಮೀಜಿಗೆ 1 ಕೋಟಿ ನೀಡುವಂತೆ BlackMail ; ಚಿಕ್ಕಮಗಳೂರಿನ ಲೇಡಿ ಸಿಸಿಬಿಗೆ ಬಲೆಗೆ
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಈಕೆ ಕಳೆದ 4 ರಿಂದ 5 ತಿಂಗಳ ಹಿಂದೆ ಸ್ವಾಮೀಜಿಗೆ ದೂರವಾಣಿ ಕರೆ ಮಾಡಿ ಪರಿಚಯ ಮಾಡಿಕೊಂಡಿದ್ದಾಳೆ. ಆನಂತರ ಬ್ಲಾಕ್ಮೇಲ್ ಮಾಡಲು ಆರಂಭಿಸಿದ್ದಾಳೆ. ಭಯಬಿದ್ದ ಸ್ವಾಮೀಜಿ ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಆರೋಪಿಗೆ 4.5 ಲಕ್ಷ ರೂಪಾಯಿ ಹಣ ನೀಡಿದ್ದರು. ಹೀಗಿದ್ದರೂ ಇನ್ನೂ ಒಂದು ಕೋಟಿ ಕೊಡಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದರಿಂದ ಬೇಸತ್ತ ಸ್ವಾಮೀಜಿ ಪೊಲೀಸರ ಮೊರೆಹೋಗಿದ್ದರ. ಈ ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Continue Readingಶಿಕಾರಿಪುರ | ಜಮೀನಿನಲ್ಲಿ ಕೆಲಸ ಮಾಡಲು ಹೊರಟಾಗ ಏಕಏಕಿ ಕರಡಿ ದಾಳಿ
ಪ್ರಾಣಪಾಯದಿಂದ ಸೋಮ್ಲಾ ನಾಯಕ್ ಸ್ಥಳದಿಂದ ಓಡಿ ಬಂದು ಹಾರೆಗೊಪ್ಪದ ಬಸ್ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭ ಸಾರ್ವಜನಿಕರು ಶಿಕಾರಿಪುರದ ಸಾರ್ವಜನಿಕ ಪಟ್ಟಣದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ವಿಷಯ ತಿಳಿದು ಆಸ್ಪತ್ರೆಗೆ ಆಗಮಿಸಿದ ಫಾರೆಸ್ಟ್ ಅಧಿಕಾರಿ ಡಿ ಆರ್ ಎಫ್ ಓ ಹರೀಶ್ ಸಜ್ಜಪ್ಪ ಮಾಹಿತಿ ಸಂಗ್ರಹಿಸಿ ಅರಣ್ಯ ಇಲಾಖೆಯಿಂದ ಸಿಗುವ ಪರಿಹಾರ ಕೊಡಿಸುವ ಕುರಿತು ಭರವಸೆ ನೀಡಿದರು ಮತ್ತು ಇದೇ ಸಂದರ್ಭ ಆ ಭಾಗದಲ್ಲಿ ಮತ್ತೆ ಕರಡಿ ಕಂಡ ಪ್ರಸಂಗ ಬಂದಲ್ಲಿ ಸೆರೆ ಹಿಡಿಯಲು ಬೋನ್ ಗಳನ್ನು […]
Continue Readingಶಿವಮೊಗ್ಗ | ಜೆಪಿಎನ್ ಪ್ರೌಢಶಾಲೆಯಲ್ಲಿ ಗ್ರಂಥಾಲಯ ಪುನರಾರಂಭ ; ಪುಸ್ತಕ ನೀಡಲು ಮನವಿ
ಈ ಜ್ಞಾನದಾನದ ಅಭಿಯಾನಕ್ಕೆ ಶಿವಮೊಗ್ಗದ ನಾಗರಿಕರು ಕೈಜೋಡಿಸಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಬೇಕೆಂದು ಕೋರಲಾಗಿದೆ. ಪುಸ್ತಕಗಳನ್ನು ನೀಡಲು ಇಚ್ಛಿಸುವವರು ನೇರವಾಗಿ ಜೆಪಿಎನ್ ಪ್ರೌಢಶಾಲೆಯನ್ನು ಸಂಪರ್ಕಿಸಬಹುದಾಗಿದೆ
Continue Reading

