ತೀರ್ಥಹಳ್ಳಿ | ಮೇಗರವಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ವಿಶೇಷ ಶಿಬಿರ ಯಶಸ್ವಿ

ಶಿಬಿರದ ಅವಧಿಯಲ್ಲಿ ಎನ್‌ಎಸ್‌ಎಸ್ ಸ್ವಯಂಸೇವಕರು ಗ್ರಾಮ ಸ್ವಚ್ಛತಾ ಕಾರ್ಯ, ಮೇಗರವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅವರಣ ಸ್ವಚ್ಛತೆ, ಗ್ರಾಮ ಪಂಚಾಯತಿ ಆವರಣ ಸ್ವಚ್ಛತೆ, ಗ್ರಾಮ ಪಂಚಾಯಿತಿ ಗ್ರಂಥಾಲಯ ಗೋಡೆಗೆ ಬಣ್ಣ ಹಚ್ಚುವುದು,ಗ್ರಾಮ ಪಂಚಾಯಿತಿ ಆವರಣ ಸ್ವಚ್ಛತೆ, ಶಾಲಾ ಆವರಣ ಸ್ವಚ್ಛತೆ, ದೇವಾಲಯದ ಆವರಣ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರು. ಜೊತೆಗೆ ಗ್ರಾಮ ಸಮೀಕ್ಷೆ, ಆರೋಗ್ಯ ಅರಿವು, ಸ್ವ ಉದ್ಯೋಗ ಪ್ರಾತ್ಯಕ್ಷಿಕೆ ಹಾಗೂ ಕೃಷಿ ಸಂಬಂಧಿತ ಉಪನ್ಯಾಸಗಳನ್ನು ಆಯೋಜಿಸಲಾಯಿತು.ಸಹ ಶಿಬಿರಾಧಿಕಾರಿಗಳಾಗಿ ಮಾರುತಿ, ಡಾ.ವಿಮಲಾ, .ನಿರಂಜನ್, ಮತ್ತು . ಅರುಣ್ […]

Continue Reading

ಶಿವಮೊಗ್ಗ | ಸಿಲಿಂಡರ್ ಬೆಲೆ ಏರಿಕೆ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

ಈ ಸಂದರ್ಬದಲ್ಲಿ ಶಿವಮೊಗ್ಗ ಯುವ ಕಾಂಗ್ರೆಸ್ ನಗರ ಅಧ್ಯಕ್ಷ ಚರಣ್ ಜೆ. ಶೆಟ್ಟಿ ಮಾತನಾಡಿ ಬಿಜೆಪಿ ಸರ್ಕಾರ ಬಡವರ ವಿರೋಧಿ ಸರ್ಕಾರವಾಗಿದೆ. ಪ್ರಧಾನಿ ಮೋದಿಯವರು ಡೊನಾಲ್ಡ್ ಟ್ರಂಪ್ ಅವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಹಣದುಬ್ಬರ ಮತ್ತು ನಿರುದ್ಯೋಗದಿಂದ ತತ್ತರಿಸಿರುವ ಸಾಮಾನ್ಯ ಜನರು, ದಿನಗೂಲಿ ನೌಕರರು, ರೈತರು ಹಾಗೂ ಮಹಿಳೆಯರಿಗೆ ಈ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಿ ಈ ನಿರ್ಧಾರವನ್ನು ಹಿಂಪಡೆಯುವಂತೆ ಕೇಂದ್ರಕ್ಕೆ ಸೂಚಿಸಬೇಕು, ಇಲ್ಲವೇ ಜನವಿರೋಧಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು. […]

Continue Reading

ಶಿವಮೊಗ್ಗ | KSRTC ಇಲಾಖೆಗೆ ಸರ್ಜರಿ ಮಾಡುವ ಮೂಲಕ ಪ್ರಯಾಣಿಕರಿಗೆ ಶಕ್ತಿ ಯೋಜನೆಯ ಸದುಪಯೋಗ ಮಾಡಿಕೊಡಲಿದ್ದಾರೆಯೇ? ಸಚಿವ ರಾಮಲಿಂಗ ರೆಡ್ಡಿ

KSRTC ಬಸ್ ಗಳು ಎಂದಿನಂತೆ ಪ್ರಯಾಣಿಕರು ಶಿವಮೊಗ್ಗ-ಭದ್ರಾವತಿ ದಿನ ನಿತ್ಯ ಸಂಚಾರ ಮಾಡುವ ನಗರ ಸಾರಿಗೆ KSRTC ಬಸ್ ಸ್ಟಾಪ್ ಗಳಲ್ಲಿ ಕಾಯುತ್ತಿದ್ದಾಗ ಸಮಯಕ್ಕೆ ಸರಿಯಾಗಿ ಬಸ್ ಗಳು ಬರುವುದಿಲ್ಲ. ಬಂದಂತ ಬಸ್ ಗಳು ಒಮ್ಮೆಲೇ ಎರಡು ಮೂರು ಒಟ್ಟಿಗೆ ಬಂದರೆ, ಗಂಟೆಗಟ್ಟಲೆ ಬಸ್ ಬಸ್ ಬರುವುದಿಲ್ಲ ಹಾಗೂ ಎಷ್ಟೋ ಹೊತ್ತು ಕಾಯುತ್ತ ನಿಂತಿದ್ದಾಗ ಬರುವಂತ ಬಸ್ ಗಳು ನಿಲ್ಲಿಸುವುದೇ ಇಲ್ಲ. ಈ ಬಿರು ಬೇಸಿಗೆಯಲ್ಲಿ ಮಹಿಳೆಯರು ಮಕ್ಕಳು ವಯೋ ವೃದ್ಧರು ಬಡ ಕೂಲಿ ಕಾರ್ಮಿಕರು ಬಾಣಂತಿಯರು, […]

Continue Reading

ಶಿವಮೊಗ್ಗ | ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಬೈಕ್ ರ‍್ಯಾಲಿ ; ಮನೆಯ ಕುಟುಂಬ ಸದಸ್ಯರಿಗಾಗಿ ಹೆಲ್ಮೆಟ್ ಧರಿಸಿ : ಎಸ್ಪಿ ನಿಖಿಲ್

ಅದರಲ್ಲೂ ಹೆಲ್ಮೆಟ್ ಕಡ್ಡಾಯವಾಗಿ ಎಲ್ಲಾ ವಾಹನ ಸವಾರರು ಧರಿಸಲೇಬೇಕಾಗಿದ್ದು, ಹಿಂದೆ ಕೂರುವವರು ಕೂಡ ಧರಿಸಲೇಬೇಕು. ನಿಮಗಾಗಿ ಅಲ್ಲದೇ, ನಿಮ್ಮ ಮನೆಯ ಕುಟುಂಬ ಸದಸ್ಯರಿಗಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದು ಸೂಕ್ತ ಎಂದರು. ನಿಮ್ಮ ಈ ಜನ ಜಾಗೃತಿ ರ್ಯಾಲಿ ನೋಡಿಯಾದರೂ, ಇತರರು ಹೆಲ್ಮೆಟ್ ಧರಿಸುವಂತಾಗಲಿ ಎಂದು ಹಾರೈಸಿದರು. ಇನ್ನು ಮಹಿಳಾ ದಿನಾಚರಣೆ ದಿನದಂದೇ ಹೆಲ್ಮೆಟ್ ಜಾಗೃತಿ ಅಭಿಯಾನ ನಡೆಸುತ್ತಿರುವುದಕ್ಕೆ ಶ್ಲಾಘಿಸಿದರು. ಅನೇಕ ಅಪಘಾತ ಪ್ರಕರಣಗಳಲ್ಲಿ ಹೆಲ್ಮೆಟ್ ಪ್ರಮುಖ ಪಾತ್ರ ವಹಿಸಿರುವುದು ನಮ್ಮ ಕಣ್ಣ ಮುಂದೆ ಇದೆ. ಜೀವ […]

Continue Reading

ಶಿವಮೊಗ್ಗ | ಬಿಟಿವಿ ಜಿಲ್ಲಾ ವರದಿಗಾರ ಅನಿಲ್ ಇನ್ನಿಲ್ಲ

ಮೃತ ಪತ್ರಕರ್ತ ಅನಿಲ್ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಮತ್ತೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಚಿಂತಾಜನಕ ಸ್ಥಿತಿ ತಲುಪಿದ್ದರು. ಅನಿಲ್ ಅವರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಈ ಮೊದಲು ಟಿವಿ9 ಚಿಕ್ಕಮಗಳೂರು ಜಿಲ್ಲಾ ಕ್ಯಾಮರಾಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅನಿಲ್ ನಂತರ ಬಿಟಿವಿಗೆ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅನಿಲ್ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಘಟಕ ಹಾಗೂ ಪತ್ರಕರ್ತರ ಬಳಗ ತೀವ್ರ ಸಂತಾಪ‌ […]

Continue Reading

ಶಿವಮೊಗ್ಗ | ಮಾ.15ರಂದು ಜಿಪಂ ನಿಂದ ಮಹಿಳೆಯರಿಗಾಗಿ ಚಿತ್ರಕಲಾ ಸ್ಪರ್ಧೆ : ಸಿಇಒ ಹೇಮಂತ್. ಎನ್

ಮಹಿಳಾ ದಿನದ ಮಹತ್ವವನ್ನು ಸಾರುವ ಜೊತೆಗೆ ಪರಿಸರ ಹಾಗೂ ಪ್ರಕೃತಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದೂ ಈ ಕಾರ್ಯಕ್ರಮದ ಪುಮುಖ ಉದ್ದೇಶವಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ಮಹಿಳಾ ಅಭ್ಯರ್ಥಿಗಳಿಗೆ ಉಚಿತ ಪ್ರವೇಶವಿದ್ದು, ಮುಂಚಿತವಾಗಿ ತಮ್ಮ ಹೆಸರನ್ನು Online ಮೂಲಕ (https://forms.gle/rgYDA7gTqo1KsUoJ8) ನೋಂದಾಯಿಸಿಕೊಳ್ಳಬೇಕು ಎಂದರು. ಸ್ಪರ್ಧೆಯಲ್ಲಿ ಉತ್ತಮ ಪುದರ್ಶನ ನೀಡಿದವರಿಗೆ ಕೆಳಕಂಡಂತೆ ಬಹುಮಾನಗಳನ್ನು ನೀಡಲಾಗುತ್ತದೆ:. ಪ್ರಥಮ ಬಹುಮಾನ : ರೂ. 8,000. ದ್ವಿತೀಯ ಬಹುಮಾನ : ರೂ. 6,000. ತೃತೀಯ ಬಹುಮಾನ : ರೂ. 4,000ಎರಡು ಪಶಂಸಾ ಬಹುಮಾನಗಳು […]

Continue Reading

ಶಿವಮೊಗ್ಗ | ಭದ್ರಾಪುರ ಸರ್ಕಾರಿ ಶಾಲೆಯಲ್ಲಿ ಪೋಷಕರ ಸಭೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನ

ನಿಕಟಪೂರ್ವ ಗ್ರಾಮ ಪಂಚಾಯಿತಿ ಸದಸ್ಯ ಬಿ.ಕೆ. ಕುಮಾರ್ ಮಾತನಾಡಿ, ಶಾಲೆಯಲ್ಲಿ ಏರ್ಪಡಿಸಿದ ವಿಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಿಸುವ ಅವಕಾಶ ದೊರೆಯಿತು. ವಿದ್ಯಾರ್ಥಿಗಳು ತಾವು ತಯಾರಿಸಿದ ವಿಜ್ಞಾನ ಮಾದರಿಗಳ ಬಗ್ಗೆ ಸ್ಪಷ್ಟವಾಗಿ ಮಾಹಿತಿ ನೀಡಿದ್ದು ಗಮನಾರ್ಹವಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ವಿಜ್ಞಾನ ಚಿಂತನೆ ಹಾಗೂ ಸೃಜನಶೀಲತೆಯನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು. ಮುಖ್ಯ ಶಿಕ್ಷಕರಾದ ರಮೇಶ್ ಪಿ.ಕೆ. ಮಾತನಾಡಿ, ಈ ತಿಂಗಳ ಅಂತ್ಯದ ವೇಳೆಗೆ ಎರಡನೇ ಸಂಕಲನಾತ್ಮಕ ಪರೀಕ್ಷೆಗಳು ನಡೆಯಲಿವೆ. ಪೋಷಕರು ತಮ್ಮ ಮಕ್ಕಳಿಗೆ ಮನೆಯಲ್ಲಿ ಓದಲು ಅನುಕೂಲಕರವಾದ […]

Continue Reading

ಬಜೆಟ್ ; ಮಾತಿಗೆ ತಪ್ಪಿಲ್ಲ, ಭರವಸೆಯಂತೆ ನಡೆ : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಅಭಿಪ್ರಾಯ

ವಿಕ್ಟೋರಿಯಾ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡರ ಹೆಸರನ್ನು ಇಡುವುದರ ಮೂಲಕ ಸಿದ್ಧರಾಮಯ್ಯನವರು ಸಾಮಾಜಿಕ ಚಳವಳಿಯ ಬದ್ಧತೆಯನ್ನು ಎತ್ತಿಹಿಡಿದಿದ್ದಾರೆ. ಬಡವರಿಗೆ, ರೈತರಿಗೆ ೩೦,೦೦೦ಕೋಟಿ ಬಡ್ಡಿರಹಿತ ಸಾಲಕ್ಕೆ ಮೀಸಲಿಡಲಾಗಿದೆ. ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿಲ್ಲ. ರೈತರ ಬೆಳೆಗೆ ಒಳ್ಳೆಯ ಬೆಲೆಯನ್ನೂ ನೀಡಿಲ್ಲ. ಅಡುಗೆ ಅನಿಲ ಸಿಲಿಂಡರ್ ಗೆ ಇಂದಿನಿಂದ ಕೇಂದ್ರ ೬೦ ರೂ. ಜಾಸ್ತಿ ಮಾಡಿದೆ. ಜಿಎಸ್‌ಟಿ ದರವನ್ನು ಇಳಿಸಿ ಅದರಿಂದಲೂ ರಾಜ್ಯ ಸರ್ಕಾರಕ್ಕೆ ೧೦ ಸಾವಿರ ಕೋಟಿ ರೂ. ನಷ್ಟವಾಗಿದೆ. ಒಟ್ಟಾರೆ ರಾಜ್ಯದ ಆದಾಯದಲ್ಲಿ ಜಿಎಸ್‌ಟಿಯಿಂದ ಶೇ.೫೩ರಷ್ಟು ಬರಬೇಕಾಗಿದ್ದು, […]

Continue Reading