ದಾವಣಗೆರೆ ಉಪಚುನಾವಣೆ ; ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ್ ಕಣಕ್ಕೆ

ತಾತನ ಕಾರನ್ನು ಸ್ವಚ್ಛಗೊಳಿಸಿ ಪೂಜೆ ಮಾಡಿ, ಅದೇ ಕಾರಿನಲ್ಲಿ ಶುಭಗಳಿಗೆಯಲ್ಲಿ ತಾಯಿ ಪ್ರಭಾ ಮಲ್ಲಿಕಾರ್ಜುನ ಅವರ ಜೊತೆಗೆ ಅಜ್ಜಿ ಮನೆಗೆ ತೆರಳಿ ಅಜ್ಜಿಯ ಆಶೀರ್ವಾದ ಪಡೆದರು. ಬಳಿಕ ಅಲ್ಲಿಂದ ನೇರವಾಗಿ ಮಹಾನಗರ ಪಾಲಿಕೆ ಆವರಣದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿ, ಎಸಿ ಹಾಗೂ ಚುನಾವಣಾಧಿಕಾರಿ ಸಂತೋಷ್ ಅವರಿಗೆ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಕಟ್ಟಿರುವುದೇ ಅಪ್ಪಾಜಿ, ಕಾಂಗ್ರೆಸ್​​ನಿಂದಲೇ ನಾಮಪತ್ರ ಸಲ್ಲಿಕೆ: ತಾಯಿ ಪ್ರಭಾ ಮಲ್ಲಿಕಾರ್ಜುನ್ ಜೊತೆ ಸಮರ್ಥ್ ಶಾಮನೂರು ಅವರು ಅಪ್ಪಟ ದೇಸಿ ಸಾಂಪ್ರದಾಯಿಕ ಉಡುಗೆಯಲ್ಲಿ ನಾಮಪತ್ರ ಸಲ್ಲಿಸಲು ಹೊರಡುವ […]

Continue Reading

ದಾವಣಗೆರೆ ದಕ್ಷಿಣ ಶ್ರೀನಿವಾಸ ದಾಸ ಕರಿಯಪ್ಪ, ಬಾಗಲಕೋಟೆ ವೀರಣ್ಣ ಚರಂತಿಮಠ ; ಉಪಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿಗಳ ಘೋಷಣೆ

ಅಚ್ಚರಿ ತೀರ್ಮಾನ ಎಂಬಂತೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಎಸ್‌ಟಿ ಸಮುದಾಯದ ಶ್ರೀನಿವಾಸ ದಾಸ ಕರಿಯಪ್ಪ ಟಿಕೆಟ್ ನೀಡುವ ಮೂಲಕ ಬಿಜೆಪಿ ಹೈ ಕಮಾಂಡ್ ಅಚ್ಚರಿ ನಿರ್ಧಾರ ಕೈಗೊಂಡಿದೆ. ಕುರುಬ ಸಮುದಾಯದ ಜಿ.ಬಿ.ವಿನಯ್ ಕುಮಾರ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಬಲವಾದ ಮಾತುಗಳು ಕೇಳಿ ಬರುತ್ತಿತ್ತು. 2024 ರ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲು ಪ್ರಯತ್ನಿಸಿ ವಿಫಲರಾದ ವಿನಯ್, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 42,907 ಮತಗಳನ್ನು ಗಳಿಸಿದ್ದರು. ಆದರೆ, ಅಚ್ಚರಿ ಎಂಬಂತೆ ಬಿಜೆಪಿ ಹೈ ಕಮಾಂಡ್ ಸ್ಥಳೀಯ […]

Continue Reading

ದಾವಣಗೆರೆ | ಜಮೀರ್‌ ಬಳಿ ಕ್ಷಮೆ ಕೇಳಿ : ಎಸ್. ಎಸ್.ಮಲ್ಲಿಕಾರ್ಜುನ್ ಗೆ ಸಿರಾಜ್ ಅಹ್ಮದ್‌ ವಾರ್ನಿಂಗ್‌..!

ಶಾಮನೂರು ಶಿವಶಂಕರಪ್ಪ ಅವಧಿಯಿಂದ ನಾವು ಮನವಿ ಮಾಡುತ್ತಿದ್ದು, ಇಲ್ಲಿಯವರೆಗೂ ಅವರಿಗೆ ಬೆಂಬಲ ನೀಡುತ್ತಾ ಬಂದಿದ್ದೇವೆ. ಅವರ ಕಾಲವಾದ ನಂತರ ನಮಗೆ ಅವಕಾಶ ಕೇಳಿದ್ದೇವೆ. ಶಾಮನೂರು ನಮ್ಮ ಜೊತೆ ಚೆನ್ನಾಗಿದ್ದರು. ಆದರೆ ಎಸ್‌ಎಸ್‌ ಮಲ್ಲಿಕಾರ್ಜುನ್ ವರ್ತನೆ ಬೇರೆ ರೀತಿಯಲ್ಲಿ ಇದೆ. ಶಿವಶಂಕರಪ್ಪನವರ ಅವರ ಬುದ್ದಿ ಅವರ ಮಗನಲ್ಲಿ ಇಲ್ಲ ಎಂದು ದೂರಿದರು. ಜಮೀರ್ ಅಲ್ಪಸಂಖ್ಯಾತರಲ್ಲದೇ ಎಲ್ಲಾ ಅಹಿಂದ ಸಮುದಾಯಗಳ ನಾಯಕರಾಗಿದ್ದಾರೆ. ರಾಜ್ಯದಲ್ಲಿ ಚುನಾವಣೆ ಗೆಲುವಿಗೆ ಜಮೀರ್ ಅಹ್ಮದ್ ಖಾನ್ ಶ್ರಮ ಸಾಕಷ್ಟಿದೆ. ಅಂತವರಿಗೆ ಮಲ್ಲಿಕಾರ್ಜುನ್ ಏಕವಚನದಲ್ಲಿ ಮಾತನಾಡಿದ್ದಾರೆ. ಅದಕ್ಕೆ […]

Continue Reading

ದಾವಣಗೆರೆಯ ಜೈನ ಸಮಾಜದ ನಾಲ್ವರಿಂದ ಸನ್ಯಾಸ ದೀಕ್ಷೆ ಸ್ವೀಕಾರ

ಕ್ರುನಾಲಿ ಅವರು ಕಮಲೇಶ್ ಜೈನ್ ಮತ್ತು ಬಬಿತಾ ಜೈನ್ ಅವರ ಪುತ್ರಿ. ವಿಶೇಷವೆಂದರೆ, ಭರತ್ ಜೈನ್ ಹಾಗೂ ಆರತಿ ದಂಪತಿಯ ಇಬ್ಬರು ಪುತ್ರರು ಮೂರು ವರ್ಷಗಳ ಹಿಂದೆ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು. ಮಗ್ನಶೇಖರ್ ವಿಜಯ್ ಮಹಾರಾಜ್ (28) ಹಾಗೂ ಪೂರ್ಣಶೇಖರ್ ವಿಜಯ್ (25) ಈಗ ಧಾರ್ಮಿಕ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಪುತ್ರರ ಮಾರ್ಗವನ್ನು ಅನುಸರಿಸಿ ದಂಪತಿಗಳೂ ಈಗ ಗ್ರಹಸ್ಥಾಶ್ರಮ ತ್ಯಜಿಸಿ ಧರ್ಮ ಮಾರ್ಗವನ್ನು ಆರಿಸಿಕೊಂಡಿದ್ದಾರೆ.

Continue Reading

ದಾವಣಗೆರೆ | ರಾಜ್ಯಮಟ್ಟದ ಕೃಷಿ ಮೇಳ, ರೈತರ ಬದುಕು ಹಸನಾಗಬೇಕು ; ಶ್ರೀ ಒಡೆಯ‌ರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ

‘ರೈತರ ಬದುಕು ಅತಂತ್ರವಾಗಿದೆ. ಅವರ ಬದುಕು ಹಸನಾಗಬೇಕು ಎಂಬ ಉದ್ದೇಶದಿಂದ ರಾಜ್ಯಮಟ್ಟದ ಕೃಷಿಮೇಳ ಆಯೋಜನೆ ಮಾಡಿದ್ದು, ಕೃಷಿಗೆ ಸಂಬಂಧಿಸಿದ ಹೊಸ ಹೊಸ ವಿಷಯಗಳ ಚರ್ಚೆ, ಆವಿಷ್ಕಾರಗಳನ್ನು ಪರಿಚಯ ಮಾಡಿಕೊಡುವ ಉದ್ದೇಶವಿದೆ. ಕಡಿಮೆ ಸಮಯದಲ್ಲಿ ಎಲ್ಲರ ಸಹಕಾರದಿಂದ ಮೇಳ ಆಯೋಜಿಸಲಾಗಿದೆ’ ಎಂದು ಒಡೆಯ‌ರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ‘ಹಿರೇಕಲ್ಮಠದ ಸ್ವಾಮೀಜಿ ರೈತರ ಬದುಕು ಹಸನಾಗಬೇಕು ಎಂಬ ಉದ್ದೇಶದಿಂದ ಕೃಷಿಮೇಳ ನಡೆಸಲು ಮುಂದಾಗಿರುವುದು ಇಡೀ ದೇಶಕ್ಕೆಮಾದರಿ’ ಎಂದು ಶಾಸಕ ಡಿ.ಜಿ. ಶಾಂತನಗೌಡ ಅಭಿಪ್ರಾಯಪಟ್ಟರು. ‘ಹಾಲಿನ ದರ ನಿಗದಿ ಮಾಡಿದಂತೆ […]

Continue Reading

ದಾವಣಗೆರೆ | ಹಿರೇಕಲ್ಮಠದಲ್ಲಿ ರಾಜ್ಯಮಟ್ಟದ ಕೃಷಿ ಮೇಳ ಮತ್ತು ಶ್ರೀ ಒಡೆಯರ್ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯರಾಧನೆ ಕಾರ್ಯಕ್ರಮ

ಆದ್ದರಿಂದ ರೈತ ಕುಲದ ಬೆನ್ನೆಲುಬಾಗಿ ನಿಂತು ಸಹಕಾರಿಯಾಗೋಣ ರೈತಫಲವನ್ನು ಉಳಿಸೋಣ ಎಂದು ಡಾಕ್ಟರ್ ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀಗಳು ರೈತರ ಬಗ್ಗೆ ಮಾತನಾಡಿದರು.

Continue Reading

ದಾವಣಗೆರೆ ದಕ್ಷಿಣ ; ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಫೈಟ್ ; ಸರತಿ ಸಾಲಿನಲ್ಲಿ ಮುಸಲ್ಮಾನ್ ಆಕಾಂಕ್ಷಿಗಳು

ಆದರೆ ‘ನನ್ನ ನಂತರದಲ್ಲಿ ಮುಸ್ಲಿಮರಿಗೆ ಟಿಕೆಟ್ ಸಿಗಲು ಅವಕಾಶ ಇದೆ’ ಎಂದು ಈ ಹಿಂದೆ ಶಾಮನೂರು ಶಿವಶಂಕರಪ್ಪ ಅವರು ಬದುಕಿದ್ದಾಗ ಹೇಳಿಕೆ ನೀಡಿದ್ದರು ಎಂಬುವುದು ಮುಸ್ಲಿಂ ಟಿಕೆಟ್ ಆಕಾಂಕ್ಷಿಗಳ ವಾದವಾಗಿದೆ. ಹಾಗಾಗಿ ಟಿಕೆಟ್ ನೀಡುವಾಗ ಇದನ್ನು ಪರಿಗಣಿಸಬೇಕು ಎಂಬುವುದು ಬೇಡಿಕೆಯಾಗಿದೆ. ಚರ್ಚೆಗೆ ಎಡೆಮಾಡಿಕೊಡುತ್ತಿರು ಅಂಕಿ- ಅಂಶಗಳುದಾವಣಗೆರೆ ದಕ್ಷಿಣ (ಕ್ಷೇತ್ರ ನಂ. 107) ವಿಧಾನಸಭಾ ಕ್ಷೇತ್ರದ ಮತದಾರರ ಅಂಕಿಅಂಶಗಳು ಮತ್ತು ಜನಸಂಖ್ಯಾ ವಿವರಗಳನ್ನು ಗಮನಿಸಿದರೆ, 2025ರ ಆರಂಭದ ಮಾಹಿತಿಯಮತೆ , ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ […]

Continue Reading

ದಾವಣಗೆರೆ | ಎಸ್​ಎಸ್​ಎಲ್​ಸಿ ಓದುತ್ತಿರುವ ಮಗಳ ಪುಸ್ತಕಗಳನ್ನು ಸುಟ್ಟಾಕಿದ ತಂದೆ

ಈ ನಡುವೆ ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಆರುಂಡಿಯಲ್ಲಿ ಮದ್ಯ ವ್ಯಸನಿಯಾಗಿರುವ ತಂದೆ ಮಗಳ ಪುಸ್ತಕಗಳಿಗೆ ಬೆಂಕಿ ಹಚ್ಚಿ, ಅಮಾನವೀಯತೆ ಪ್ರದರ್ಶಿಸಿದ್ದಾನೆ. ಆತನ ಈ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆರುಂಡಿ ಗ್ರಾಮದ ನಿವಾಸಿ ತಂದೆ (ಹೆಸರು ಬೇಡ) ಮದ್ಯಪಾನದ ವ್ಯಸನಕ್ಕೆ ಜೋತುಬಿದ್ದು ದಿನನಿತ್ಯ ಮನೆಯಲ್ಲಿ ಗಲಾಟೆ ಮಾಡುತ್ತಾನೆ. ಅಲ್ಲದೆ ಪುತ್ರಿ (ಅಪ್ರಾಪ್ತ ಬಾಲಕಿ)ಗೂ ಶಾಲೆಗೆ ಹೋಗಬೇಡ ಎಂದು ಕಿರಿಕ್ ಮಾಡಿದ್ದಾನೆ.ಇದನ್ನು ಸಹಿಸಿಕೊಳ್ಳದ ಶಾಲಾ ಬಾಲಕಿ, ತನ್ನ ತಂದೆ ಕುಡಿದು ಬಂದು ಗಲಾಟೆ ಮಾಡುವುದಲ್ಲದೆ, ತನ್ನನ್ನು ಶಾಲೆಗೂ […]

Continue Reading

ದಾವಣಗೆರೆ | ಉಸಿರುಗಟ್ಟಿಸಿ ವೃದ್ದೆಯ ಕೊಲೆ ಮಾಡಿ ಚಿನ್ನ ದೋಚಿ ಪರಾರಿಯಾದ ದುಷ್ಕರ್ಮಿಗಳು

ಘಟನಾ ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ದಾವಣಗೆರೆ | ಪೊಲೀಸರ ಮೇಲೆ ಹಲ್ಲೆ ಪ್ರಕರಣ ; ನೇಕಾರ ಸಮುದಾಯದಿಂದ ಪ್ರತಿಭಟನೆ ; ಕಾಂಗ್ರೆಸ್ ನಿಂದ ಮುಸಲ್ಮಾನರು ಟಿಕೆಟ್ ಕೇಳಬಾರದೆಂದು ಷಡ್ಯಂತ್ರ : ಅಯೂಬ್ ಆಪ್ತರ ಹೇಳಿಕೆ

ಯುವಕರ ಗುಂಪಿನ ಮಧ್ಯೆ ಗಲಾಟೆ ಆಗಿರುವುದನ್ನು ಪೊಲೀಸರ ಮೇಲೆ ಹಲ್ಲೆ ಪ್ರಕರಣಕ್ಕೆ ರಾಜಕೀಯ ಬಣ್ಣ ತರಲಾಗಿದೆ ಎಂಬ ಆರೋಪವನ್ನು ಅಯೂಬ್ ಪರ ಆಪ್ತರು ಸಮರ್ಥನೆ ಮಾಡಿದ್ದಾರೆ. ಅಯೂಬ್ ಪೈಲ್ವಾನ್ ರಾಜಕೀಯವಾಗಿ ಬೆಳೆಯುತ್ತಿರುವದನ್ನ ಸಹಿಸದೆ ಕಾಣದ ಕೈಗಳು ಷಡ್ಯಂತ್ರ ನಡೆಸಿದ್ದಾರೆ ಎಂಬ ಆರೋಪ ಮಾಡುತಿದ್ದರೆ.ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಹಿನ್ನಲೆ ಈ ಷಡ್ಯಂತ್ರ ನಡೆದಿದೆ. ಅಯೂಬ್ ಪೈಲ್ವಾನ್ ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಹಾಗಾಗಿ ಮುಸಲ್ಮಾನರು ಟಿಕೆಟ್ ಕೇಳಬಾರದು ಎಂದು ಕಾಣದ ಕೈಗಳಿಂದ ಷಡ್ಯಂತ್ರವಾಗಿದೆ […]

Continue Reading