Author: News E-Kannada

ಶಿವಮೊಗ್ಗ | ರಾಷ್ಟ್ರೀಯ ಸೇವಾ ಯೋಜನೆ ಸಮಾಜ ಸೇವೆಯ ಮೂಲಕ ವ್ಯಕ್ತಿತ್ವ ರೂಪಿಸುತ್ತದೆ : ಡಾ. ರಂಗನಾಥ ರಾವ್ ಎಚ್ ಕರಾಡ್
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾದ ಮಂಜುನಾಥ ಟಿ ಮತ್ತು ಶ್ರೀಮತಿ ಜಯಶೀಲಾ ರವರು ಶಾಲೆಯ ಮುಖ್ಯೋಪಧ್ಯಾಯರಾದ ಹೇಮಾಂಜನಿರವರು ಹಾಗೂ ಎನ್ ಎಸ್.ಎಸ್ ಘಟಕ 1 ಮತ್ತು 2ರ ಅಧಿಕಾರಿಗಳಾದ ಉಮಾಶಂಕರ್ ಮತ್ತು ಡಾ ವರದರಾಜ್ ಹಾಗೂ ಸಹ ಶಿಬಿರಾಧಿಕಾರಿಗಳಾದ ಡಾ. ಬಸವಣ್ಯಪ್ಪ ಎಂ. ಮಹೇಂದ್ರ ಜಿ. ಹಾಗೂ ಅಧ್ಯಾಪಕರುಗಳಾದ ಡಾ. ಉಮಾಪತಿ ಡಾ. ಜಗದೀಶ್ ಬಿದರಕೊಪ್ಪ, ಅರುಣ್ ಕುಮಾರ್ ಆರ್.ಬಿ., ಡಾ. ಸೈಯದಾ ರಿಹಾನಾ ಬಾನುರವರು ಉಪಸ್ಥಿತಿರಿದ್ದರು.
Continue Readingಶಿವಮೊಗ್ಗ | ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ನೂತನ ಸ್ಮಾರ್ಟ್ ಕಾರ್ಡ್ ; ಅವೈಜ್ಞಾನಿಕ ಯೋಜನೆ ಕೈಬಿಡಿ ಕಲ್ಲೂರ್ ಮೇಘರಾಜ್ ಹೇಳಿಕೆ
ಈಗಾಗಲೇ ಕೇಂದ್ರ ಸರ್ಕಾರದ ಭಾರತೀಯ ವಿಶಿಷ್ಠ ಗುರುತು ಪ್ರಾಧಿಕಾರವು (Unique Identification Authority of India) ದೇಶಾದ್ಯಂತ ಎಲ್ಲಾ ರಾಜ್ಯಗಳ, ಎಲ್ಲಾ ಜಿಲ್ಲೆಗಳ, ಎಲ್ಲಾ ತಾಲ್ಲೂಕುಗಳ ಹಾಗೂ ಕುಗ್ರಾಮಗಳ ಜನತೆಗೆ ಈಗಾಗಲೇ ಆಧಾರ ಗುರುತಿನ ಚೀಟಿಯನ್ನ ವಿತರಿಸಿದೆ. ಅಲ್ಲದೆ ಕೇಂದ್ರದ ಚುನಾವಣಾ ಆಯೋಗ ಹಾಗೂ ರಾಜ್ಯದ ಚುನಾವಣಾ ಆಯೋಗಗಳು ಈಗಾಗಲೇ ರಾಜ್ಯಾದ್ಯಂತ ಪಟ್ಟಣ ಹಾಗೂ ಕುಗ್ರಾಮಗಳ ಜನತೆಗೆ ಚುನಾವಣಾ ಗುರುತಿನ ಚೀಟಿಯನ್ನ ನೀಡಿದೆ. ಈ ಆಧಾರ ಚೀಟಿ ಅಥವಾ ಚುನಾವಣಾ ಗುರುತಿನ ಚೀಟಿಗಳನ್ನು ಬಳಸಿಕೊಂಡು ರಾಜ್ಯದಲ್ಲಿ ಈಗಾಗಲೇ […]
Continue Readingಶಿವಮೊಗ್ಗ | ಅಮ್ಜದ್ ಕೊಲೆ ಪ್ರಕರಣ ; ಪ್ರಮುಖ ಆರೋಪಿ ಸೇರಿದಂತೆ ರೌಡಿಶೀಟರ್ಗಳು ಬೇರೆ ಬೇರೆ ಜೈಲ್ ಗೆ ಶಿಫ್ಟ್
ಈ ಪ್ರಕರಣದ ಪ್ರಮುಖ ಆರೋಪಿಯಾದ ಫೌಝಾನ್ ನನ್ನು ಇಂದು ಶಿವಮೊಗ್ಗದಿಂದ ಬೆಳಗಾವಿಯ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ಫೌಝಾನ್ ಜೊತೆಗೆ ಶಿವಮೊಗ್ಗದ ಕುಖ್ಯಾತ ರೌಡಿಶೀಟರ್ ಆಗಿರುವ ಕಡೆಕಲ್ ಅಬಿದ್ನನ್ನೂ ಸಹ ಸ್ಥಳಾಂತರಿಸಲಾಗಿದೆ. ಅಬಿದ್ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 20 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಈತನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ. ಅಮ್ಜದ್ ಕೊಲೆ ಹೇಗೆಲ್ಲ ಆಯಿತು.. ಅಮ್ಜದ್ ಪೊಲೀಸ್ ಇಲಾಖೆಯ ನೂರಾರು ಪ್ರಕರಣಗಳಲ್ಲಿ ಸಾಕ್ಷಿದಾರನಾಗಿದ್ದ. ಶಿವಮೊಗ್ಗದ ರೌಡಿಸಂ ಜಗತ್ತಿನ […]
Continue Readingದ್ವಿತೀಯ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ ಶಿಕ್ಷಣ ಸಚಿವರು
ದ್ವಿತೀಯ ಪಿಯುಸಿ ಪರೀಕ್ಷೆ 1 ವೇಳಾಪಟ್ಟಿ ಫೆಬ್ರವರಿ 28: ಕನ್ನಡ, ಅರೇಬಿಕ್, ಮಾರ್ಚ್ 2: ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ, ಮಾರ್ಚ್ 3: ಇಂಗ್ಲಿಷ್ ಮಾರ್ಚ್ 4: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಮಾರ್ಚ್ 5: ಇತಿಹಾಸ, ಮಾರ್ಚ್ 6: ಭೌತಶಾಸ್ತ್ರ, ಮಾರ್ಚ್ 7: ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭ ಶಾಸ್ತ್ರ, ಮಾರ್ಚ್ 9: ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ, ಮಾರ್ಚ್ 10: ಅರ್ಥಶಾಸ್ತ್ರ, ಮಾರ್ಚ್ 11: ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹ […]
Continue Readingಸಂಶೋಧನೆ ಎಂಬುದು ಕೇವಲ ಸಿದ್ಧಾಂತವಲ್ಲ, ಅದು ಸಾಂದರ್ಭಿಕ ವಾಸ್ತವ ; ಪ್ರೊ. ರಾಜೇಂದ್ರ ಚೆನ್ನಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, “ಇಂದಿನ ವಿಜ್ಞಾನ ಕ್ಷೇತ್ರದಲ್ಲಿ ‘ಕ್ವಾಂಟಮ್ ಮೆಕ್ಯಾನಿಕ್ಸ್’ ಪ್ರಭಾವ ಎಷ್ಟಿದೆಯೆಂದರೆ ಅದು ಎಲ್ಲ ವಿಜ್ಞಾನ ಶಾಖೆಗಳಿಗೂ ಆವರಿಸಿದೆ ಎಂದರು. ಇರಾನ್ ಮೂಲದ ಗಣಿತಜ್ಞೆ ಮರ್ಯಮ್ ಮಿರ್ಜಾಖಾನಿ ಅವರ ಸಾಧನೆಯನ್ನು ಉದಾಹರಿಸಿದ ಅವರು, ಅಮೆರಿಕಾದ ಶಿಕ್ಷಣ ಪದ್ಧತಿಯಲ್ಲಿರುವ ‘ಅನೌಪಚಾರಿಕತೆ’ ಮತ್ತು ಹೊಸ ಆಲೋಚನೆಗಳಿಗೆ ನೀಡುವ ಮನ್ನಣೆಯನ್ನು ಶ್ಲಾಘಿಸಿದರು. ಯುವ ಸಂಶೋಧಕರು ನವೀನ ಆಲೋಚನೆಗಳೊಂದಿಗೆ ಸಂಶೋಧನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರು […]
Continue Readingಶಿವಮೊಗ್ಗ | ರಾಷ್ಟ್ರೀಯ ಶಿಕ್ಷಣ ಸಮಿತಿಯಿಂದ ರಾಜಕಾಲುವೆ ಒತ್ತುವರಿ ; ಒತ್ತುವರಿ ತೆರವುಗೊಳಿಸಲು ಮಹಾನಗರ ಪಾಲಿಕೆ ಅಧಿಕಾರಿಗಳಿಂದ ಗಡುವು
ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ರಾಜಕಾಲುವೆ ಮೇಲೆ ಅಕ್ರಮವಾಗಿ, ಕಾನೂನು ಬಾಹಿರವಾಗಿ ಕಾಂಪೌಂಡ್ ಹಾಗೂ ಕಬ್ಬಿಣ ಗೇಟ್ ನಿರ್ಮಾಣ ಮಾಡುವಂತಿಲ್ಲ ತಕ್ಷಣವೇ ತೆರವುಗೊಳಿಸಬೇಕು ಈಗಾಗಲೇ ನೋಟೀಸ್ ಮೂಲಕ ತಮಗೆ ತಿಳಿಸಲಾಗಿದೆ ಎಂದರು. ನೀವೇ ತೆರವುಗೊಳಿಸಬೇಕು ತಪ್ಪಿದ್ದಲ್ಲಿ ಪಾಲಿಕೆ ತೆರವು ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆಯುತ್ತೇವೆ ಎಂದು ಸೂಚಿಸಿದರು. ನೀವು (NES ಸಂಸ್ಥೆ) ತೆರವುಗೊಳಿಸದಿದ್ದಲ್ಲಿ ಪಾಲಿಕೆ ವತಿಯಿಂದ ತೆರವು ಕಾರ್ಯಾಚರಣೆ ಮಾಡಲಾಗುತ್ತೆ ಹಾಗೂ ಇಲ್ಲಿರುವ ವಸ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು. ಇದೆ ಸಂದರ್ಭದಲ್ಲಿ ವರ್ತಕರ […]
Continue Readingವೃದ್ಧೆಯ 6 ಕೆಜಿ ಅಂಡಾಶಯ ಗೆಡ್ಡೆ ಯಶಸ್ವಿಯಾಗಿ ತೆರವುಗೊಳಿಸಿದ ವೈದ್ಯರು
ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ನೀಡಲಾಗಿದ್ದು, ರೋಗಿಯ ಕುಟುಂಬಕ್ಕೆ ಯಾವುದೇ ಆರ್ಥಿಕ ಭಾರವಾಗಿಲ್ಲ. ಶಸ್ತ್ರಚಿಕಿತ್ಸೆಯ ನಂತರ ರೋಗಿ ಚೇತರಿಸಿಕೊಳ್ಳುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
Continue Readingಟಿ-20 ಕ್ರಿಕೆಟ್ ಯುದ್ಧದಲ್ಲಿ ಭಾರತದ ವಿರುದ್ಧ ಹೀನಾಯವಾಗಿ ಸೋತ ಪಾಕಿಸ್ತಾನ
ಪಾಕಿಸ್ತಾನದ ಪತನಕ್ಕೆ ಮುನ್ನುಡಿ ಬರೆದವರು ಹಾರ್ದಿಕ್ ಪಾಂಡ್ಯ. ಮೊದಲ ಓವರ್ನಲ್ಲೇ ಸಾಹಿಬ್ಜಾದಾ ಫರ್ಹಾನ್ ಶೂನ್ಯಕ್ಕೆ ಔಟ್ ಆದರೆ ಬಂದ ಸೈಮ್ ಅಯೂಬ್ 6, ನಾಯಕ ಸಲ್ಮಾನ್ ಆಘಾ ಅವರನ್ನು ಬುಮ್ರಾ ಔಟ್ ಮಾಡುತ್ತಾರೆ. ತಂಡದ ಮೊತ್ತ 34 ಆಗಿದ್ದಾಗ 4 ವಿಕೆಟ್ ಕಳೆದುಕೊಂಡಿದ್ದಾಗ ಪಾಕ್ ಸೋಲು ಖಚಿತವಾಗಿತ್ತು.ಪಾಕ್ ಪರ ಉಸ್ಮಾನ್ ಖಾನ್ 44 ರನ್ (34 ಎಸೆತ, 6 ಬೌಂಡರಿ, 1 ಸಿಕ್ಸ್) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. ಭಾರತದ ಪರ ಪಾಂಡ್ಯ, ಬುಮ್ರಾ ಅಕ್ಷರ್ ಪಟೇಲ್, […]
Continue ReadingKSRTC ಬಸ್ಗೆ ಡಿಕ್ಕಿ ಹೊಡೆದ ಕಾರು ; ಐವರು ಸಾವು
ನಂತರ ಪಕ್ಷದ ರಸ್ತೆಯಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಬಸ್ಸಿನ ಮುಂಭಾಗವೂ ಹಾನಿಗೊಳಗಾಗಿದೆ. ಆದರೆ, ಬಸ್ಸಿನಲ್ಲಿದ್ದ ಎಲ್ಲಾ 43 ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
Continue Reading

