ಶಿವಮೊಗ್ಗ, ಡಿಸೆಂಬರ್ 3ರಂದು ಅಶೋಕ ನಗರದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಡಿಸೆಂಬರ್ 3ರಂದು ಅಶೋಕ್ ನಗರ ಮುಖ್ಯ ರಸ್ತೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದೆಂದು ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಹೆಚ್.ಎಸ್. ತಿಳಿಸಿದ್ದಾರೆ
ಈ ಕಾರ್ಯಕ್ರಮದಲ್ಲಿ ರಾಜ್ಯ ಅಧ್ಯಕ್ಷರಾದ ಪಿ ಕೃಷ್ಣೇಗೌಡರು ಭಾಗವಹಿಸಲಿದ್ದು ರಾಜ್ಯ ನಾಯಕರು ಆಗಮಿಸಲಿದ್ದಾರೆ, ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯಾಧ್ಯಕ್ಷರಾದ ಪಿ ಕೃಷ್ಣೇಗೌಡರು ಹಾಗೂ ಕರವೇ ಸ್ವಾಭಿಮಾನಿ ಬಣದ ಮಾರ್ಗದರ್ಶಕರಾದ ಗಾರ ಶ್ರೀನಿವಾಸ್ ಅವರು ಹಾಗೂ ಕರವೇ ಸ್ವಾಭಿಮಾನಿ ಬಣದ ಕಾನೂನು ಸಲಹೆಗಾರರಾದ ಅನಿಲ್ ಕುಮಾರ್ ಟಿ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿರಣ್ ಕುಮಾರ್ ಎಚ್ಎಸ್ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಸಂಸದ ಬಿ ವೈ ರಾಘವೇಂದ್ರ. ಶಾಸಕರಾದ ಚನ್ನಬಸಪ್ಪ. ಮಾಜಿ ಶಾಸಕರು ಹಾಗೂ ಜೆಡಿಎಸ್ ನ ರಾಜ್ಯ ಉಪಾಧ್ಯಕ್ಷರಾದ ಕೆ ಬಿ ಪ್ರಸನ್ನ ಕುಮಾರ್ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರು ಹಾಗೂ ಕಾಂಗ್ರೆಸ್ ಮುಖಂಡರಾದ ಶ್ರೀಕಾಂತ್ ಎಂ ಹಾಗೂ ಹಾಪ್ ಕಾಮ್ಸ್ ನ ಅಧ್ಯಕ್ಷರಾದ ಶ್ರೀಯುತ ವಿಜಯಕುಮಾರ್ (ದನಿ) . ಜೆಂಕಾರ್ ಅಡ್ವಟೈಸಿಂಗ್ ನರೇಶ್ ಕುಮಾರ್ ಟಿ.ಎ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನ ಅಧ್ಯಕ್ಷರಾದ ಬಸವರಾಜ್ .ಬಿ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಮಂಜುಳ ಶಿವಣ್ಣ ಅಶೋಕ್ ನಗರ ಮುಖಂಡರಾದ ಮನೋಹರ್ ಹಾಗೂ ಸಮಾಜ ಸೇವಕರಾದ ಚಿತ್ರೇಶ್ ಜಿ ಇವರುಗಳು ಭಾಗವಹಿಸಲಿದ್ದಾರೆ ಹಾಗೂ ವಿಶೇಷ ಆಹ್ವಾನಿತರಾಗಿ ಟಿಎಸ್ ಆನಂದ್ ವಿಭಾಗೀಯ ಅಭಿಯಂತರರು ನೈರುತ್ಯ ರೈಲ್ವೆ ಇವರು ಭಾಗವಹಿಸಲಿದ್ದಾರೆ. ಕ
ಲಾವಿದರಾಗಿ ಪಂಚ ಭಾಷಾ ಚಲನಚಿತ್ರ ನಟ ರಘುರಾಜ್ ಮಲ್ನಾಡ್ ಭಾಗವಹಿಸಲಿದ್ದಾರೆ ಗೌರವಾನ್ವಿತ ಸನ್ಮಾನಿತರಾಗಿ ಡಾಕ್ಟರ್ ಮಹೇಶ್ ಮೂರ್ತಿ ಬಿ ಆರ್. ಡಿ.ಪಿ ಅರವಿಂದ್. ಚಂದ್ರಶೇಖರ್ ಜಿ. ರಾಮನಾಥ್. ರಘುರಾಜ್ ಎಚ್. ಕೆ.ಕರವೇ ಸ್ವಾಭಿಮಾನಿ ಬಣದ ಹೋರಾಟಗಾರರಿಗೆ ಸನ್ಮಾನ ಮಾಡಲಾಗುವುದು. ಸಾರ್ವಜನಿಕವಾಗಿ ಅನ್ನ ಸಂತರ್ಪಣೆ ಹಾಗೂ ಪ್ರೀತಮ್ ಮಲೋಡಿ ಆರ್ಕೆಸ್ಟ್ರಾ ಭದ್ರಾವತಿ ಮನೋರಂಜನ ಕಾರ್ಯಕ್ರಮ ನಡೆಸಲಾಗುವುದೆಂದು ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್ಎಸ್ ತಿಳಿಸಿದ್ದಾರೆ



