ಹಾವೇರಿ | ಫೀಸ್ ಕಟ್ಟದಿದ್ದಕ್ಕೆ ಪರೀಕ್ಷೆಗೆ ಅವಕಾಶ ಕೊಡದೇ ದರ್ಪ ತೋರಿದ್ದ ಶಿಕ್ಷಕಿ ಅಮಾನತು

ಸಾರಾ ಜೆಸ್ಸಿಕಾ ಎಂಬ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ರಾಣೆಬೆನ್ನೂರಿನ ಬಿಎಜೆಎಸ್‌ಎಸ್ ಕಾಲೇಜಿಗೆ ಬಂದಿದ್ದಳು. ಈ ವೇಳೆ ಶಿಕ್ಷಕಿ ಸುನೀತಾ ಬಿ ಶುಲ್ಕ ಕಟ್ಟಿಲ್ಲ ಅಂತ ಪರೀಕ್ಷೆಗೆ ಬಿಡದೇ ಸತಾಯಿಸಿದ್ದರು. 30 ಸಾವಿರ ರೂ. ಶುಲ್ಕ ಕಟ್ಟಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಹಾಲ್ ಟಿಕೆಟ್ ನೀಡಿಲ್ಲ. ಆದರೂ ವಿದ್ಯಾರ್ಥಿನಿ ಇಂದು (ಫೆ.28) ಕನ್ನಡ ಪರೀಕ್ಷೆ ಬರೆಯಲು ಬಂದಿದ್ದಳು. ಈ ವೇಳೆ ಶಿಕ್ಷಕಿ ಸುನೀತಾ ವಿದ್ಯಾರ್ಥಿನಿ ಸಾರಾಳನ್ನು ತಡೆದು, ಎಲ್ಲಾ ಕಾಲೇಜಿನವರೂ ಪುಗಸೆಟ್ಟೆ ಕಲಿಸ್ತಾರಾ? ಎಂದಿದ್ದರು.ಈ […]

Continue Reading

ಹಾವೇರಿ | ಶಾಲೆ ಆವರಣದಲ್ಲೇ ಪುಂಡರಂತೆ ಹೊಡೆದಾಡಿಕೊಂಡ ಅತಿಥಿ ಶಿಕ್ಷಕ, ಎಸ್‌ಡಿಎಂಸಿ ಅಧ್ಯಕ್ಷ

ಶಿಕ್ಷಣ ಸಂಸ್ಥೆಯಲ್ಲಿ ಮಾದರಿಯಾಗಬೇಕಾದ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರ ನಡುವೆಯೇ ಈ ರೀತಿಯ ಮಾರಾಮಾರಿ ನಡೆದಿರುವುದು ಪೋಷಕರು ಮತ್ತು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಇತ್ತ, ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಪರದಾಡುತ್ತಿರುವ ಸ್ಥಿತಿಯೂ ಬಹಿರಂಗವಾಗಿದೆ. ಶೌಚಾಲಯಗಳ ಹದಗೆಟ್ಟ ಸ್ಥಿತಿ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ಅಡಚಣೆಗಳು ಶಾಲೆಯನ್ನು ಕಾಡುತ್ತಿವೆ.

Continue Reading

ಹಾವೇರಿ | ಜಾಗದ ವಿವಾದ ; ಶಾಲೆ ಬೀಗ ಜಡಿದ ರೈತ

ನ್ಯಾಯಾಲಯದಲ್ಲಿ ವ್ಯಾಜ್ಯ ಈ ವಿಚಾರವನ್ನು ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದು, ಜಾಗ ಒತ್ತುವರಿ ಕುರಿತಂತೆ ಈಗಾಗಲೇ ವ್ಯಾಜ್ಯ ನಡೆಯುತ್ತಿದೆ. ಒತ್ತುವರಿ ಮಾಡಿಕೊಂಡಿರುವ ಹೆಚ್ಚುವರಿ ಜಾಗವನ್ನು ಬಿಟ್ಟುಕೊಡಬೇಕು ಎಂದು ಈರಪ್ಪ ಕುಲಕರ್ಣಿ ಪಟ್ಟು ಹಿಡಿದು ಬಂದಿದ್ದು, ಆಡಳಿತ ಮಂಡಳಿಯಿಂದ ಸ್ಪಷ್ಟ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಇಂದು ರೊಚ್ಚಿಗೆದ್ದು ಶಾಲೆಯ ಬಾಗಿಲಿಗೆ ಬೀಗ ಹಾಕಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬ್ಯಾಡಗಿ ತಹಶಿಲ್ದಾರ್ ಚಂದ್ರಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ (BEO) ಎಸ್.ಜಿ. ಕೋಟೆ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಿ, […]

Continue Reading

ಹಾವೇರಿ | ಸಚಿವ ಜಮಿರ್ ಅಹ್ಮದ್ ಪುತ್ರನಿಂದ ಸ್ಪೋಟಕ ಮಾಹಿತಿ ; ನಟ ದರ್ಶನ್ ಅವರಿಗೆ ಜನವರಿಯೊಳಗೆ ಜಾಮೀನು ದೊರೆಯತ್ತೆ

ಮನಸ್ಸಲ್ಲಿ ಸಾಕಷ್ಟು ವಿಚಾರವಿದೆ ಅದನ್ನೆಲ್ಲಾ ಈಗ ಹೇಳಲು ಆಗುವುದಿಲ್ಲವೆಂದರು.ಹಾಗಾಗಿ ನಾವು ಗೆದ್ದ ಮೇಲೆ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು. ಸಿನಿಮಾ ಪೈರಸಿ ಕುರಿತು ಮಾತನಾಡಿದ ಅವರು ಇದರ ಸಂಬಂಧ ಕಾಯ್ದೆ ರೂಪಿಸಬೇಕಾ ಎಂಬ ಪ್ರಶ್ನೆಗೆ ಮಾಡುವುದಾದರೆ ಮಾಡಲಿ ಸಂತೋಷ ಇಲ್ಲವಾದರೆ ಬಿಡಿ. ಆದರೆ ಅಪ್ಪಿತಪ್ಪಿ ಸಿಕ್ಕುಹಾಕಿಕೊಂಡರೆ ಬಿಡುವುದಿಲ್ಲ ಹಾಗಾಗಿ ಹುಷಾರು ಎಂದು ಪೈರಸಿ ಮಾಡುವವರಿಗೆ ಎಚ್ಚರಿಕೆ ನೀಡಿದರು.

Continue Reading

ಹಾವೇರಿ | ಕಾಂಗ್ರೆಸ್ ವರಿಷ್ಟರ ನಡೆಗೆ, ಎಂ.ಎಲ್ ಸಿ ಸಲೀಂ ಅಹ್ಮದ್ ಬೇಸರ

ಕಾಂಗ್ರೆಸ್ ವರಿಷ್ಟರ ನಡೆಗೆ ಕಾಂಗ್ರೆಸ್ ಎಂ.ಎಲ್ ಸಿ ಸಲೀಂ ಅಹ್ಮದ್ ಬೇಸರದ ಮಾತು ಅಷ್ಟು ವರ್ಷ ದುಡಿದಿದ್ದೇವೆ. ಯಾಕೆ ಮಾಡಿಲ್ಲ ಅನ್ನೋದು ಇನ್ನು ಗೊತ್ತಿಲ್ಲ,ಮುಂದಿನ ದಿನಗಳಲ್ಲಿ ಹೈಕಮಾಂಡ್ ತೀರ್ಮಾನ ಮಾಡುತ್ತೆ,ಯಾರನ್ನ ಮಾಡಬೇಕು , ಯಾರನ್ನ‌ ಮಾಡಬಾರದು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದರು.ನಾವು ಯಾರಿಗೆ ಹೇಳಬೇಕು, ಹೇಳಿದ್ದೇವೆ. ಅವರು ತೀರ್ಮಾನ ಮಾಡುತ್ತಾರೆ ಎಂದರು. ಕಾಂಗ್ರೆಸ್ ನಲ್ಲಿ ಯಾವ ಬಣ ಇಲ್ಲ. ಕಾಂಗ್ರೆಸ್ ಒಂದೇ ಬಣ. ಸಣ್ಣಪುಟ್ಟ ವ್ಯತ್ಯಾಸಗಳು ಇವೆ ಹೈಕಮಾಂಡ್ ಬಗೆಹರಿಸುತ್ತದೆ ಎಂದರು. ಹೈಕಮಾಂಡ್ ಮಾತನಾಡಬಾರದು ಅಂತಾ ಸೂಚನೆ […]

Continue Reading