ಶಿವಮೊಗ್ಗ | ಬಡವರು ದುಡಿದು ಸಂತೋಷವಾಗಿದ್ರೆ, ಬಿಜೆಪಿಯವರಿಗೆ ಹೊಟ್ಟೆ ಉರಿ : ಸಚಿವ ಮಧು ಬಂಗಾರಪ್ಪ

ಇದು ಒಂದು ದುರಂತ, ಹೆಚ್ಚು ಕಮ್ಮಿ ಆದ್ರೆ ಜನರಿಗೆ ಕೆಲಸ ಸಿಗೋದೆ ಕಡಿಮೆ ಅಗುತ್ತದೆ. ಹೀಗಾಗಿ ನಾವು ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಬೇಕಾಗುತ್ತದೆ. ಬೇರೆ ಬೇರೆ ರಾಜ್ಯದಲ್ಲೂ ಸಹ ಇದನ್ನು ವಿರೋಧ ಮಾಡಲಾಗುತ್ತಿದೆ. ಈ ಬಗ್ಗೆ ಚರ್ಚೆ ಮಾಡುವುದು ತುಂಬ ಒಳ್ಳೇಯದು ಎಂದು ಸಚಿವರು ಹೇಳಿದರು. ಕಳೆದ ಎರಡೂವರೆ ವರ್ಷದಿಂದ ಬಿಜೆಪಿಯವರು ವಿರೋಧ ಮಾಡುತ್ತಲೇ ಇದ್ದಾರೆ. ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲೆ, ಅಭಿವೃದ್ಧಿ ಕುರಿತು ಚರ್ಚೆ ಮಾಡದೆ ಬೇರೆ ಏನ್​ ಮಾಡುತ್ತಾರೆಂದು ವಿರೋಧ ಪಕ್ಷದವರನ್ನು ಪ್ರಶ್ನಿಸಿದರು. ಗ್ಯಾರಂಟಿಗಳನ್ನು […]

Continue Reading

ಶಿವಮೊಗ್ಗ | ವಿಬಿಜಿ ರಾಮ್ ಜಿ ಹೆಸರು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಜಿಲ್ಲಾಧ್ಯಕ್ಷ ಆರ್ ಪ್ರಸನ್ನ ಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ, ಎಂ ಎಲ್ ಸಿ ಬಲ್ಕಿಸ್ ಬಾನು, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಸೂಡ್ಯಾಧ್ಯಕ್ಷ ಎಚ್ಎಸ್ ಸುಂದರೇಶ್, ಹಾಪ್ ಕಾಮ್ಸ್ ನ ವಿಜಯ ಕುಮಾರ್, ಜವಳಿ ನಿಗಮದ ಚೇತನ್ ಗೌಡ, ಮಾಜಿ ಕಾರ್ಪರೇಟರ್ ಗಳಾದ ಎಚ್ ಸಿ ಯೋಗೇಶ್, ಯಮುನಾರಂಗೇಗೌಡ, ರಂಗೇಗೌಡ, ಅರ್ಚನ ನಿರಂಜನ್, ರಮೇಶ್ ಹೆಗ್ಡೆ, ವಿಜಯಲಕ್ಷ್ಮಿ ಪಾಟೀಲ್, ಕಲೀಂ ಪಾಷ, ಎಂ ಎಸ್ ಶಿವಕುಮಾರ್ ಮೊದಲಾದವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.

Continue Reading

ಮಹಾರಾಷ್ಟ್ರ | ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಕಮಾಲ್!

2020 ರ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿಗೆ ಕೈಕೊಟ್ಟ ಶಿವಸೇನೆ ಕಾಂಗ್ರೆಸ್, ಎನ್ಸಿಪಿ ಜೊತೆ ಸೇರಿ ಮೈತ್ರಿ ಮಾಡಿಕೊಂಡಿತ್ತು. ನಂತರದ ಬೆಳವಣಿಗೆಯಲ್ಲಿ ಏಕನಾಥ್ ಶಿಂಧೆ ಬಣದ ಶಾಸಕರು ಶಿವಸೇನೆಯನ್ನು ತೊರೆದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಮಹಾಯುತಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಏಕನಾಥ್ ಶಿಂದೆ ಮುಖ್ಯಮಂತ್ರಿಯಾಗಿದ್ದರು. ಈ ಮೈತ್ರಿ ನಂತರ ಲೋಕಸಭೆ, ವಿಧಾನಸಭೆ, ಸ್ಥಳೀಯ ಚುನಾವಣೆಯಲ್ಲೂ ಅಬ್ಬರಿಸುತ್ತಿದೆ. ತಮ್ಮ ಎಕ್ಸ್‌ ಖಾತೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ “ರಾಜ್ಯದ ಉತ್ಸಾಹಭರಿತ ಜನರು ಎನ್‌ಡಿಎಯ ಸಾರ್ವಜನಿಕ ಕಲ್ಯಾಣ […]

Continue Reading

ಶಿವಮೊಗ್ಗ | ವಿಬಿ–ಜಿ ರಾಮ್‌ ಜಿ ಯೋಜನೆ ಕುರಿತು ಕಾಂಗ್ರೆಸ್ ಜನರ ದಾರಿ ತಪ್ಪಿಸುತ್ತಿದೆಯೇ? ; ವಾಸ್ತವಾಂಶ ತೆರದಿಟ್ಟ ಸಂಸದ ರಾಘವೇಂದ್ರ

ನೂತನ ಕಾಯ್ದೆ ಅಡಿ ಕೃಷಿ ಋತುವಿನಲ್ಲಿ ಕಾರ್ಮಿಕರಿಗೆ 60 ದಿನಗಳ ವಿರಾಮ ಕಡ್ಡಾಯವಾಗಿದೆ. ಇದರಿಂದ ರೈತರು ತಮ್ಮ ವೈಯಕ್ತಿಕ ಕೃಷಿ ಕಾರ್ಯಗಳನ್ನು ಮಾಡಿಕೊಳ್ಳಲು ಸಹಾಯವಾಗಲಿದೆ. ಈ 60 ದಿನದ ವಿರಾಮ ಅವಧಿ ಯಾವಾಗ ಇರಬೇಕು ಎನ್ನುವುದನ್ನು ಆಯಾ ಪ್ರದೇಶದ ಬಿತ್ತನೆ ಅಥವಾ ಕೊಯ್ದು ಅವಧಿ ನೋಡಿಕೊಂಡು ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸಲಿವೆ. ಪೂರೈಕೆ ಆಧಾರಿತ ಕೆಲಸ ಹಂಚಿಕೆ – ಕಾರ್ಮಿಕರಿಗೆ ಹೆಚ್ಚು ಶಕ್ತಿ ನೀಡಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಈ ಸಂದರ್ಭದಲ್ಲಿ ಸಂಸದರಾದ ಬಿ ವೈ […]

Continue Reading

ಬಳ್ಳಾರಿ | ಗೂಂಡಾಗಿರಿ ನಡೆಯುವುದಿಲ್ಲ ; ಬಿ. ವೈ. ವಿಜಯೇಂದ್ರ ರಣಕಹಳೆ

ಆದರೆ ರಾಜಕೀಯ ತೆವಲಿಗೆ ಈಗ ಕಾಂಗ್ರೆಸ್ ಅವರು ಬ್ಯಾನರ್ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾ. ರಾ. ಭರತ್ ರೆಡ್ಡಿ ನೇತೃತ್ವದಲ್ಲಿ ಜನಾರ್ಧನ ರೆಡ್ಡಿ ಮನೆ ಮುಂದೆ ಗಲಾಟೆ ಎಬ್ಬಿಸಿದ್ದಾರೆ ಅಷ್ಟೇ ಅಲ್ಲದೆ ಕಾಂಗ್ರೆಸ್ ಕಾರ್ಯಕರ್ತರು ಗೂಂಡಗಳನ್ನ ಕರೆತಂದು ಗೂಂಡಾಗರ್ದಿ ಮಾಡಿದ್ದಾರೆ ಎಂದು ಆರೋಪಿಸಿದರು. ಸಾವಿರಾರು ಗೂಂಡಗರ್ದಿ ಗಳನ್ನು ಕರೆದುಕೊಂಡು ಬರುವ ಮೂಲಕ, ನಿನ್ನೆ ದಿವಸ ಸತೀಶ್ ರೆಡ್ಡಿ ತನ್ನ ಖಾಸಗಿ ವ್ಯಕ್ತಿಗಳ ಬಳಸಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರದವರೇ ಮೊದಲು […]

Continue Reading

ಬಳ್ಳಾರಿ | ವಾಲ್ಮೀಕಿ ಪ್ರತಿಮೆ ಬ್ಯಾನರ್ ಗಲಾಟೆ ; ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು

ಗಲಾಟೆ ಹೆಚ್ಚುತ್ತಿರುವ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಬಿ. ಶ್ರೀರಾಮುಲು ಪರಿಸ್ಥಿತಿ ಶಾಂತಗೊಳಿಸಲು ಪ್ರಯತ್ನಿಸಿದರೂ, ಅವರ ಮಾತು ಯಾರೂ ಕೇಳದೆ ಕಲ್ಲು ತೂರಾಟಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ಮೊದಲು ಮಾತಿನ ಚಕಮಕಿ, ನಂತರ ಕಲ್ಲು ತೂರಾಟ, ದಬ್ಬಾಳಿಕೆ ನಡೆದಿದೆ. ಈ ನಡುವೆ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಅವರ ಖಾಸಗಿ ಅಂಗರಕ್ಷಕರು ಎರಡು ಸುತ್ತು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಆರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ […]

Continue Reading