KSRTC ಬಸ್​​ನಲ್ಲಿದ್ದ ಅರ್ಧ ಕೋಟಿ ಹಣ ಕಳವು ; ಸಿನೆಮಾ ಸ್ಟೈಲ್​ನಲ್ಲಿ ಆರೋಪಿ ವಶಕ್ಕೆ ಪಡೆದ ಪೊಲೀಸರು

ಇದೇ ತಿಂಗಳ 8ನೇ ತಾರೀಕು ಬೆಂಗಳೂರಿನಿಂದ ಹೈದರಾಬಾದ್​​ಗೆ ಹೊರಟಿದ್ದ KSRTC ಎಸಿ ಸ್ಲೀಪರ್​​ ಐಷಾರಾಮಿ ಬಸ್​​ನಲ್ಲಿ ವೆಂಕಟೇಶ್ವರ್​ ರಾವ್​ ಎಂಬವರು ಪ್ರಯಾಣಿಸುತ್ತಿದ್ದರು. ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಗ್ರಾಮದ ಬಳಿ ಇರುವ ಹೋಟಲ್​​ವೊಂದರಲ್ಲಿ ಪ್ರಯಾಣಿಕರಿಗೆ ಊಟ ಮಾಡಲು ಚಾಲಕ ಬಸ್​​ ನಿಲ್ಲಿಸಿದ್ದ. ಈ ವೇಳೆ ವೆಂಕಟೇಶ್ವರ್​ ರಾವ್ ತಮ್ಮ ಬಳಿ ಇದ್ದ ಹಣದ ಬ್ಯಾಗ್​​ನ ಬಸ್​​ನಲ್ಲೇ ಬಿಟ್ಟು ಊಟಕ್ಕೆ ತೆರಳಿದ್ದರು. ಆದರೆ ಹಿಂದಿರುಗಿ ಬಂದು ನೋಡುವಾಗ ಸೀಟ್​​ನಲ್ಲಿದ್ದ ಬ್ಯಾಗ್​​ ನಾಪತ್ತೆಯಾಗಿತ್ತು. ಕಾರಲ್ಲಿ ಬಂದ ವ್ಯಕ್ತಿ ಸೀದಾ ಬಸ್​​ಗೆ ನುಗ್ಗಿ […]

Continue Reading

ಚಿತ್ರದುರ್ಗ | ಭೀಕರ ಅಪಘಾತ ಸುಟ್ಟು ಕರಕಲಾದ ಸೀಬರ್ಡ್ ಬಸ್ ನಲ್ಲಿದ್ದ ಪ್ರಯಾಣಿಕರು ; ಶಿವಮೊಗ್ಗದ ಇಬ್ಬರು ಸುರಕ್ಷಿತ

ತುಮಕೂರು ಜಿಲ್ಲೆಯ ಶಿರಾ ಮತ್ತು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಡುವೆ ಬರುವ ಗೋರ್ಲತ್ತು ಗ್ರಾಮದ ಬಳಿ ಬೆಳಗಿನ ಜಾವ 3 ಗಂಟೆಗೆ ಈ ಘಟನೆ ನಡೆದಿದೆ. ಮೃತಪಟ್ಟವರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಮೃತಪಟ್ಟವರ ನಿಖರವಾದ ಮಾಹಿತಿಯನ್ನು ಪೊಲೀಸ್ ಇಲಾಖೆ ಇನ್ನಷ್ಟೇ ನೀಡಬೇಕಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್​ ಬಸ್​​ಗೆ ಹಿರಿಯೂರಿನಿಂದ ಬೆಂಗಳೂರು ಕಡೆ ಬರುತ್ತಿದ್ದ ಕಂಟೇನರ್​​ ಲಾರಿ ಮುಖಾಮುಖಿ ಡಿಕ್ಕಿಯಾದ ಕಾರಣ ಈ ದುರಂತ ಸಂಭವಿಸಿದೆ. ಲಾರಿ ಚಾಲಕನ ನಿರ್ಲಕ್ಷ್ಯವೇ ಇದಕ್ಕೆ ಕಾರಣ […]

Continue Reading

ಶಿವಮೊಗ್ಗ | ವ್ಯಕ್ತಿಗೆ 4.90 ಲಕ್ಷ ರೂ. ಸೈಬರ್ ವಂಚನೆ

ಹಣ ಹೂಡಿಕೆ ಮಾಡಿದ ನಂತರ ಅದನ್ನು ಹಿಂಪಡೆಯಲು ಹೋದಾಗ ವಂಚಕರ ಅಸಲಿ ಬಣ್ಣ ಬಯಲಾಗಿದೆ. ಹಣವು ಸೆಬಿಯ ನಿಯಂತ್ರಣದಲ್ಲಿದೆ, ಟ್ಯಾಕ್ಸ್ ಪಾವತಿಸಿ, ಆರ್.ಡಿ ಅಕೌಂಟ್‌ನಲ್ಲಿದೆ ಅಥವಾ ಬ್ರೋಕರ್ ಚಾರ್ಜ್ ಪಾವತಿಸಿ ಎಂದು ಬೇರೆ ಬೇರೆ ನೆಪಗಳನ್ನು ಹೇಳಿ ಹಣ ನೀಡದೆ ಸತಾಯಿಸಿದ್ದಾರೆ. ಕೊನೆಗೆ ಹಣ ವಿತ್‌ಡ್ರಾ ಮಾಡಲು ಸಾಧ್ಯವಾಗದಿದ್ದಾಗ ಮತ್ತು ಪರಿಚಿತರಲ್ಲಿ ವಿಚಾರಿಸಿದಾಗ ತಾವು ಮೋಸ ಹೋಗಿರುವುದು ಸಂತ್ರಸ್ತರಿಗೆ ಅರಿವಾಗಿದೆ. ಈ ಹಿನ್ನೆಲೆ ಶಿವಮೊಗ್ಗ ಸಿಇಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಶಿವಮೊಗ್ಗ | ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಯುವಕನಿಗೆ ಚಾಕು ಇರಿತ

ಭರ್ಕತ್ ಗೆ ಮೂರು ಕಡೆ ಚಾಕುವಿನಿಂದ ಇರಿಯಲಾಗಿದ್ದು ಕೈಗೂ ಸಹ ಗಾಯಗಳಾಗಿವೆ. ಈ ಪ್ರಕರಣದಲ್ಲಿ ಓರ್ವ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.

Continue Reading

ಶಿವಮೊಗ್ಗ | ಮಹಿಳೆಯ ಫೊಟೊ ಅಶ್ಲೀಲವಾಗಿ ಮಾರ್ಫ್ ಮಾಡಿ ಹರಿಬಿಟ್ಟ ದುರುಳರು

ಅಷ್ಟೇ ಅಲ್ಲದೆ, ಮಹಿಳೆ ಹಾಗೂ ಅವರ ಪತಿಯ ಫೋಟೋವನ್ನು ಸ್ಟೇಟಸ್ ಹಾಕಿಕೊಂಡು, ಅದರ ಕೆಳಗೆ ಅತ್ಯಂತ ಕೆಟ್ಟದಾದ ಹಾಗೂ ಅವಹೇಳನಕಾರಿ ಶಬ್ದಗಳನ್ನು ಬಳಸಿ ಬ್ಲಾಗ್ ಮಾದರಿಯಲ್ಲಿ ಸೃಷ್ಟಿಸಿ ಹರಿಬಿಟ್ಟಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

Continue Reading

ಉಡುಪಿ | ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ರವಾನಿಸುತಿದ್ದ ಮತ್ತೊಬ್ಬ ಆರೋಪಿ ಬಂಧನ

ಬಂಧಿತ ಆರೋಪಿ ಹಿತೇಂದ್ರ ಹಣ ಪಡೆದುಕೊಂಡು ರೋಹಿತ್ ಮತ್ತು ಸಂತ್ರಿಗೆ ಎಂಬ ಪ್ರಮುಖ ಆರೋಪಿಗಳಿಗೆ ಮೊಬೈಲ್ ಸಿಮ್ ಒದಗಿಸಿದ್ದ ಜೊತೆಗೆ, ಭಾರತದ ನೌಕಪಡೆಯ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಎಂದು ತಿಳಿದುಬಂದಿದೆ. ಇನ್ನು ಇದೆ ಪ್ರಕರಣ ಸಂಬಂಧ ನವೆಂಬರ್ 21 ರಂದು ಉತ್ತರ ಪ್ರದೇಶ ರೋಹಿತ್ ಮತ್ತು ಸಂತ್ರಿ ಎಂಬ ಪ್ರಮುಖ ಆರೋಪಿಗಳ.ಕೊಚ್ಚಿನ್ ಶಿಪ್ ಯಾರ್ಡ್ ಅಧಿಕಾರಿಗಳಿಗೆ ಈ ಮೇಲಿನ ಆರೋಪಿಗಳ ಮೇಲೆ ಸಂಶಯ ಬಂದು ಮಲ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಚಾರಣೆ ವೇಳೆ ಹಡಗುಗಳ ನಂಬರ್ […]

Continue Reading

ಚಿಕ್ಕಮಗಳೂರು | ಕುದುರೆಮುಖಕ್ಕೆ ತೆರಳುತ್ತಿದ್ದ ಬಸ್ ಮಗುಚಿ ಬಿದ್ದು ಹಲವರಿಗೆ ಗಾಯ

ಬಸ್ ನಿಯಂತ್ರಣ ತಪ್ಪಿ ಪಲ್ಟಿ ಆದುದರಿಂದ ಕೆಲವರಿಗೆ ಕೈಕಾಲುಗಳಿಗೆ ಹಾಗೂ ತಲೆಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.

Continue Reading

ಮಹೇಶ್​ ಶೆಟ್ಟಿ ತಿಮರೋಡಿ ಸೇರಿದಂತೆ ಐವರ ವಿರುದ್ದ ಜೀವ ಬೆದರಿಕೆ ಕೇಸ್​ ದಾಖಲಿಸಿದ ಚಿನ್ನಯ್ಯ

ಮೊದಲು ಧರ್ಮಸ್ಥಳ ಪೊಲೀಸ್ ಠಾಣೆಗೆ ರಕ್ಷಣೆ ಕೋರಿ ಹೋದಾಗ, ಅಲ್ಲಿನ ಪೊಲೀಸರು ಬೆಳ್ತಂಗಡಿ ಠಾಣೆಯಲ್ಲಿ ಮನವಿ ಸಲ್ಲಿಸುವಂತೆ ಸೂಚಿಸಿದರು. ಅದರಂತೆ ಚಿನ್ನಯ್ಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಐವರ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡು ಮುಂದಿನ ಕಾನೂನು ತನಿಖೆಯನ್ನು ಆರಂಭಿಸಿದ್ದಾರೆ.

Continue Reading