ಶಿವಮೊಗ್ಗ | ಬಿಜೆಪಿ ನಾಯಕರು ದ್ವೇಷ ರಾಜಕಾರಣ ಬಿಟ್ಟು ಅಭಿವೃದ್ಧಿಯ ಕಡೆಗೆ ಗಮನ ಹರಿಸಲಿ : ಎಚ್. ಸಿ. ಯೋಗೇಶ್ ಹೇಳಿಕೆ

ಶಾಸಕ ಚೆನ್ನಬಸಪ್ಪ ಅವರು ಈ ವಿಧೇಯಕದ ವಿರುದ್ಧ ಪ್ರತಿಭಟನೆ ನಡೆಸಿರುವುದು ಹಾಗೂ ರಾಜ್ಯಪಾಲರಿಗೆ ಸಹಿ ಹಾಕದಂತೆ ಒತ್ತಾಯಿಸಿರುವುದು ಅವರ ದ್ವೇಷದ ಮನಸ್ಥಿತಿಯನ್ನು ತೋರಿಸುತ್ತದೆ. ಹಿಂದೆ ಸಿದ್ದರಾಮಯ್ಯನವರ ತಲೆ ಕಡಿಯುವ ಮಾತನಾಡಿದ್ದ ಚೆನ್ನಬಸಪ್ಪ ಹಾಗೂ ದಶಕಗಳ ಕಾಲ ಅಧಿಕಾರದಲ್ಲಿದ್ದೂ ಅಭಿವೃದ್ಧಿ ಮಾಡದ ಕೆ.ಎಸ್. ಈಶ್ವರಪ್ಪ ಅವರು ಕೇವಲ ದ್ವೇಷವನ್ನೇ ಬಿತ್ತುತ್ತಾ ಬಂದಿದ್ದಾರೆ. ಅವರು ಜಿಲ್ಲೆಯಲ್ಲಿ ಯಾವದೇ ಅಭಿವೃದ್ದಿಯನ್ನು ಮಾಡಲಿಲ್ಲ. ಅಬಿವೃದ್ದಿ ಮಾಡಿದ್ದರೆ ಅದರ ಕೈಪಿಡಿಯನ್ನು ಬಿಡುಗಡೆ ಮಾಡಲಿ ಎಂದರು. ಈ ಕಾನೂನು ಕೇವಲ ಒಂದು ಪಕ್ಷ ಅಥವಾ ಧರ್ಮಕ್ಕೆ […]

Continue Reading

ಕಲ್ಬುರ್ಗಿ | ಸೆಂಟ್ರಲ್ ಜೈಲಿನ ಅಧಿಕಾರಿ ಮೇಲೆ ಗಂಭೀರ ಆರೋಪ

ಈ ಹಿಂದೆ ಪಿಎಸ್ಐ ಪರೀಕ್ಷೆ ಹಗರಣದ ಆರೋಪಿಯಾಗಿದ್ದ ಆರ್. ಡಿ. ಪಾಟೀಲ್ ಈಗ ಡಾ. ಅನಿತಾ ಆರೋಪ ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿರುವ ಆರ್. ಡಿ. ಪಾಟೀಲ್ ಸದ್ಯ ಆರ್. ಡಿ. ಪಾಟೀಲ್, ರನ್ನ ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಪತ್ರ ಬರಿದೆರುವ ಜೈಲು ಅಧೀಕ್ಷಕಿ ಅನಿತಾ ವಿರುದ್ದವೇ ಈಗ ಆರೋಪ ಕೇಳಿಬಂದಿದೆ. ಕಳೆದ ಒಂದೇ ತಿಂಗಳಲ್ಲಿ ಆರ್. ಡಿ. ಪಾಟೀಲ್ ಮೇಲೆ ಎರಡು FIR ದಾಖಲಾಗಿದೆ.ಈ ಹಿನ್ನಲೆಯಲ್ಲಿ 10 ಲಕ್ಷ ಹಣ ಬೇಡಿಕೆ ಈಡೇರಸದಿದಕ್ಕೆ […]

Continue Reading

ಹುಬ್ಬಳ್ಳಿ | ಜೀರೋ ಟ್ರಾಫಿಕ್ ನಲ್ಲಿ ತಂದಿದ್ದ ನವಜಾತ ಶಿಶು ದುರ್ಮರಣ

ಕೊಪ್ಪಳ ಜಿಲ್ಲೆಯ ಕುಕುನೂರ ತಾಲೂಕಿನ ಬೂದಗುಂಪ ಗ್ರಾಮದ ವಿಜಯಲಕ್ಷ್ಮಿ ಎಂಬುವರ ಶಿಶು ಕುಕನೂರ ತಾಲೂಕಾ ಆಸ್ಪತ್ರೆಯಲ್ಲಿ 27ರ ರಾತ್ರಿ ಹನ್ನೊಂದು ಮೂವತ್ತಕ್ಕೆ ಹೆರಿಗೆಯಾಗಿತ್ತು. ಮಗುವಿನ ಕರಳು ಮತ್ತು ಕಿಡ್ನಿ ಹೊರಬಂದ ಹಿನ್ನೆಲೆ ಕೊಪ್ಪಳ ಜಿಲ್ಲಾಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಡಿ.28ರ ಬೆಳಗ್ಗೆ 10 ಗಂಟೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಈ ವೇಳೆ ಜೀರೋ ಟ್ರಾಫಿಕ್ ನಲ್ಲಿ ನವಜಾತ ಶಿಶುವನ್ನು ಕರೆತಲಾಗಿತ್ತು ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಿದರು ಸ್ಪಂದಿಸಿದೆ ನವಜಾತ ಶಿಶು ದುರ್ಮರಣವಾಗಿದೆ.

Continue Reading

ಶಿವಮೊಗ್ಗ | ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ

ನಾಗರಿಕ ಸಮಾಜಕ್ಕೆ ಮರ್ಯಾದೆಗೇಡು ಹತ್ಯೆ ಮಾರಕವಾಗಿದೆ‌. ತನ್ನದೇ ಸ್ವಂತ ಮಗಳನ್ನು ತಂದೆಯೊಬ್ಬ ಮೃಗೀಯವಾಗಿ ಕೊಂದಿದ್ದಾರೆ. ಇಂತಹ ಹೇಯ ಕೃತ್ಯವನ್ನ ಜಾತಿವಾದಿ ಸಮಾಜ ಸಮರ್ಥಿಸುತ್ತಿದೆ. ಜನಪ್ರತಿನಿಧಿಗಳು ಜಾತಿ ರಾಜಕಾರಣದಲ್ಲಿ ತೊಡಗಿದ್ದಾರೆ. ಜಾತಿ ದೌರ್ಜನ್ಯ, ಮರ್ಯಾದೆಗೇಡು ಹತ್ಯೆ ಹಾಗೂ ಜಾತೀಯತೆಯನ್ನು ತೊಡೆದು ಹಾಕಲು ಸರ್ಕಾರಗಳು ಬದ್ದತೆಯಿಂದ ಕೆಲಸ ಮಾಡಬೇಕು. ಜಾತಿ ವಿನಾಶಕ್ಕೆ ಅಂತರ್ಜಾತಿ ವಿವಾಹಗಳು ಮುಖ್ಯ. ಕುಟುಂಬಗಳನ್ನು ಎದುರು ಹಾಕಿಕೊಂಡು ಅಂತರ್ಜಾತಿ ವಿವಾಹವಾಗುವ ಜೋಡಿಗಳಿಗೆ ಸರ್ಕಾರ ರಕ್ಷಣೆ ಒದಗಿಸಬೇಕು. ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾನೂನು ರೂಪಿಸಬೇಕು ಎಂದರು. “ಮರ್ಯಾದೆಯ […]

Continue Reading

ಶಿವಮೊಗ್ಗ | ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ, ಕನಸು ನನಸು : ಎಸ್ಪಿ ಮಿಥುನ್ ಕುಮಾರ್ ಸಂತಸ

ಸಂಘದ ಕಟ್ಟಡ ನಿರ್ಮಾಣಕ್ಕೆ ಸಲ್ಲಿಸಿದ್ದ ಬೇಡಿಕೆ ಹಾಗೂ ಮನವಿಗೆ ಸ್ಪಂದಿಸಿ ಜಾಗ ಮಂಜೂರಾಗಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದರು. ನೂತನ ಕಟ್ಟಡ ನಿರ್ಮಾಣಕ್ಕೆ ಪೊಲೀಸ್ ಇಲಾಖೆಯಿಂದ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದ ಅವರು, ಅತ್ಯುತ್ತಮ ಸೌಲಭ್ಯಗಳೊಂದಿಗೆ ಬಹುಮಹಡಿ ಕಟ್ಟಡ ನಿರ್ಮಿಸುವಂತೆ ಶುಭಹಾರೈಸಿದರು. ನಿವೃತ್ತಿಯ ನಂತರ ನಾವು ಕೂಡ ಒಂದು ದಿನ ಇದೇ ಕಟ್ಟಡಕ್ಕೆ ಬಂದು ಸೇರಬೇಕಾಗುತ್ತದೆ. ಹೀಗಾಗಿ ಇದು ನಮ್ಮದೇ ಕನಸಿನ ಕಟ್ಟಡವಾಗಬೇಕು ಎಂದು ಹೇಳಿದರು. ಕಟ್ಟಡ ನಿರ್ಮಾಣದ ಹಂತದಲ್ಲಿ ಬೇಕಾಗುವ ಎಲ್ಲ […]

Continue Reading

ಶಿವಮೊಗ್ಗ | ಡಿಎಸ್ಪಿ ಬಾಬು ಅಂಜನಪ್ಪ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ ಪತ್ರಕರ್ತ ಚಿತ್ರಪ್ಪ

ನಗರದಲ್ಲಿ ಇಸ್ಪೀಟ್ ಜೂಜು ನಡೆಸುವ ಇಂತಃ ಸಮಾಜ ಘಾತುಕ ಶಕ್ತಿಗಳಿಗೆ ಕಡಿವಾಣ ಹಾಕಬೇಕಿದ್ದ ಪೊಲೀಸ್ ಇಲಾಖೆಯ ಅಧಿಕಾರಿ ಮೇಲೆ ನೇರವಾಗಿ ಆರೋಪ ಬಂದಿದೆ. ಮುಂದುವರೆದು ನಗರದಲ್ಲಿ ಪೊಲೀಸ್ ಇಲಾಖೆ ಮೇಲೆ ಪುಡಿ ರೌಡಿಗಳಿಗೆ, ಹಾಗೂ ಸಮಾಜಘಾತುಕ ಶಕ್ತಿಗಳಿಗೆ ಭಯವಿಲ್ಲದಾಗಿದೆ. ಡಿವೈಎಸ್ಪಿ ಕಚೇರಿಗಳಲ್ಲೇ ಈ ರೀತಿಯ ಸಮಾಜಘಾತುಕ ಶಕ್ತಿಗಳು ಕಾಣಸಿಗುತ್ತಿದ್ದಾರೆ ಎಂಬುದು ವಿಷಾದನೀಯದ ಸಂಗತಿಯಾಗಿದೆ! ಈ ಹಿಂದೆ ಡಿವೈಎಸ್ಪಿ ಆಗಿದ್ದ ಬಾಲರಾಜ್ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಮೂಲಕ ನಗರದಲ್ಲಿ ಕ್ರೈಂ ಕಡಿವಾಣ ಹಾಕಲು ಯಶಸ್ವಿಯಾಗಿದ್ದರು. ಪ್ರಸ್ತುತ ಇಂದಿನ ಪರಿಸ್ಥಿತಿ […]

Continue Reading

ಶಿವಮೊಗ್ಗ | ಯುವಕನ ಭೀಕರ ಕೊಲೆ

ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆಯಲು ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಎಸ್‌ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ತನಿಖೆ ಮುಂದುವರಿದಂತೆ ಹೊರಬೀಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

ಶಿವಮೊಗ್ಗ | ಡ್ರಗ್ಸ್ ದಂಧೆ ವಿರುದ್ಧ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತೀವ್ರ ವಾಗ್ದಾಳಿ

ಇದು ರಾಜ್ಯ ಸರ್ಕಾರದ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷತನಕ್ಕೆ ಕನ್ನಡಿ ಹಿಡಿದಂತಾಗಿದೆ ಎಂದು ತಿಳಿಸಿದ್ದಾರೆ.

Continue Reading