ಹೋಳಿ ಹಬ್ಬ ನೆಪದಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಿದರೆ ಕಠಿಣ ಕ್ರಮ

ಹಬ್ಬದ ಸಂಭ್ರಮಾಚರಣೆಯ ನೆಪದಲ್ಲಿ ಬಣ್ಣ ಎರಚುವಾಗ ಅಥವಾ ಗುಂಪುಗಳಲ್ಲಿ ಸೇರುವಾಗ ಮಹಿಳೆಯರ ಅನುಮತಿ ಇಲ್ಲದೆ ಅವರೊಂದಿಗೆ ಅನುಚಿತವಾಗಿ ವರ್ತಿಸುವುದು, ಕಿಡಿಗೇಡಿತನ ತೋರುವುದು ಅಥವಾ ಮಹಿಳೆಯರಿಗೆ ಮುಜುಗರ ಉಂಟುಮಾಡುವುದು ಕಾನೂನುಬಾಹಿರ ಅಪರಾಧವಾಗಿದೆ. ಇಂತಹ ಕೃತ್ಯಗಳಲ್ಲಿ ಭಾಗಿಯಾಗುವ ವ್ಯಕ್ತಿಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡಲಿದೆ ಪೊಲೀಸ್ ಇಲಾಖೆಯ ಸೂಚನೆಗಳುಮಹಿಳೆಯರ ತೇಜೋವಧೆ ಮಾಡುವ ಅಥವಾ ಅವರ ಘನತೆಗೆ ಚ್ಯುತಿ ತರುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023 ರ ಸೆಕ್ಷನ್​ 79 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು. ಈ ಕಾಯ್ದೆಯನ್ವಯ […]

Continue Reading

ಸೊರಬ | ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಮಾನಯಾನ ಮಾಡಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ

ಸಚಿವ ಮಧು ಬಂಗಾರಪ್ಪ ಅವರು ವಿಮಾನದಲ್ಲಿ ಪ್ರತಿ ವಿದ್ಯಾರ್ಥಿಗೂ ಕಿಟಕಿ ಪಕ್ಕ ಸೀಟು ದೊರಕುವಂತೆ ಮಾಡಿ, ಪ್ರತಿಯೊಬ್ಬರನ್ನು ಮಾತನಾಡಿಸುತ್ತಾ, ಅವರ ಅಂಕಗಳನ್ನು ಕೇಳುತ್ತಾ ಗುಡ್ ಎನ್ನುತ್ತಾ ಹುರಿದುಂಬಿಸಿದರು. 30ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ವಿಮಾನಯಾನ: ತಮ್ಮ ಜನ್ಮದಿನದ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ಭಾನುವಾರ ಸೊರಬ ತಾಲೂಕಿನ 40 ಜನ ಪೌರ ಕಾರ್ಮಿಕರಿಗೂ ವಿಮಾನಯಾನ ಭಾಗ್ಯ ಕಲ್ಪಿಸಿದ್ದರು. ಸೊರಬ ಹಾಗೂ ಆನವಟ್ಟಿಯ ಪೌರ ಕಾರ್ಮಿಕರಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನಯಾನ ಮಾಡಿಸಿದ್ದರು. ಪೌರ ಕಾರ್ಮಿಕರು ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ […]

Continue Reading

ಕಾಗೋಡು ತಿಮ್ಮಪ್ಪ ಅವರಿಂದ ಜನ್ಮದಿನದ ಆಶೀರ್ವಾದ ಪಡೆದ ಮಧು ಬಂಗಾರಪ್ಪ

ಈಗಾಗಲೆ ನ್ಯಾಯಾಲಯ ಉತ್ತಮವಾಗಿ ಸ್ಪಂದಿಸುತ್ತಿದೆ, ಕೇಂದ್ರ ಸರ್ಕಾರ ಸಕಾರಾತ್ಮಕವಾಗಿದೆ. ಶರಾವತಿ, ಚಕ್ರ, ವರಾಹಿ ಎಲ್ಲರಿಗೂ ನ್ಯಾಯ ಸಿಗುತ್ತದೆ. ಈಗ ಭಾಷಣ ಹೊಡೆಯುವವರು ಹಿಂದೆ ಅಧಿಕಾರದಲ್ಲಿದ್ದಾಗ ಪರಿಭಾವಿತ ಅರಣ್ಯ ಕಾಯ್ದೆ ಜಾರಿಗೆ ತಂದಿದ್ದರು. ಡೀಮ್ಡ್ ಫಾರೆಸ್ಟ್ ಕಾಯ್ದೆ ತಿದ್ದುಪಡಿಗೆ ಸಹ ಅವಕಾಶ ಸಿಕ್ಕಿದೆ. ನ್ಯಾಯಾಲಯ ಆದೇಶ ಹೊರತುಪಡಿಸಿ ಇತರೆ ಸಂದರ್ಭದಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಇದೇ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಕಾಗೋಡು ತಿಮ್ಮಪ್ಪ ಅಭಿನಂದಿಸಿದರು. ಈ ಸಂದರ್ಭದಲ್ಲಿ ದೀಪಾ ಕಾಗೋಡು, ಅನಿತಾ […]

Continue Reading

ಭದ್ರಾವತಿ ಬಿಇಒ ನಾಗೇಂದ್ರಪ್ಪ ಲೋಕಾಯುಕ್ತ ಬಲೆಗೆ

ಈ ಕುರಿತು ಮಾ. 02,ರಂದು ಲೋಕಾಯುಕ್ತರ ಕಛೇರಿಗೆ ತೆರಳಿ ದೂರು ದಾಖಲಿಸಿದ್ದರು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ-2018)ರ ಕಲಂ 7(ಎ) ಅಡಿಯಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು. ಮಾ,3 ರ ಸಂಜೆ ಸುಮಾರು 7 ಗಂಟೆ ವೇಳೆಗೆ ಭದ್ರಾವತಿ ಬಿಇಒ ಕಚೇರಿಯ ಕೊಠಡಿಯಲ್ಲಿ, ಲಿಂಗರಾಜು ಅವರಿಂದ 1 ಲಕ್ಷ ರೂ. ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣವನ್ನು ಜಪ್ತಿಪಡಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿತರಾದ ನಾಗೇಂದ್ರಪ್ಪ ಎ.ಕೆ. ಮತ್ತು ಮಧ್ಯವರ್ತಿ ಮಂಜುನಾಥರನ್ನು […]

Continue Reading

ಶಿವಮೊಗ್ಗ | ರಂಜಾನ್ ದೇಣಿಗೆ ವಿಚಾರವಾಗಿ ಎರಡು ಗುಂಪುಗಳ ನಡುವೆ ಕಿರಿಕ್​​ ; 10 ಮಂದಿ ಬಂಧನ

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಶಿಕಾರಿಪುರ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದು ಗುಂಪುಗಳನ್ನು ಚದುರಿಸಿದರು. ಈ ಗಲಭೆಗೆ ಸಂಬಂಧಿಸಿದಂತೆ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಾಗಿದ್ದು, ಘಟನೆಯಲ್ಲಿ ಭಾಗಿಯಾದ ಆರೋಪದ ಮೇಲೆ 10 ಜನರನ್ನು ಬಂಧಿಸಲಾಗಿದೆ.

Continue Reading

ಇರಾನ್ ಮೇಲಿನ ದಾಳಿ ಖಂಡನೆ, ಖಮೇನಿ ಹತ್ಯೆ “ದೊಡ್ಡ ನಷ್ಟ” ಎಂದು ಧಾರ್ಮಿಕ ಗುರುಗಳ ಪ್ರತಿಕ್ರಿಯೆ ; ಶಿಯಾ ಮುಸ್ಲಿಮರ ಪ್ರತಿಭಟನೆ

ಅವರು ಆದರ್ಶ ವ್ಯಕ್ತಿಯಾಗಿದ್ದು, ಅವರ ಹತ್ಯೆ ನಿಜವಾಗಿಯೂ ದೊಡ್ಡ ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.

Continue Reading

ಸಚಿವ ಮಧು ಬಂಗಾರಪ್ಪ ಹುಟ್ಟುಹಬ್ಬದ ಪ್ರಯುಕ್ತ ಪೌರಕಾರ್ಮಿಕರಿಗೆ ವಿಮಾನಯಾನ ಭಾಗ್ಯ

‘ಶ್ರಮಿಕ ವರ್ಗದವರನ್ನು ಈ ರೀತಿಯಾಗಿ ಸನ್ಮಾನಿಸಿ, ಅವರಿಗೆ ವಿಮಾನಯಾನದಂತಹ ಅಪರೂಪದ ಅನುಭವ ಕಲ್ಪಿಸುವುದು ಶ್ಲಾಘನೀಯ ಕೆಲಸ’ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.ಇತ್ತ, ‘ನಮ್ಮ ಸೇವೆಯನ್ನು ಗುರುತಿಸಿ ಇಂತಹ ದೊಡ್ಡ ಅವಕಾಶ ನೀಡಿದ ಸಚಿವರಿಗೆ ನಾವು ಸದಾ ಋಣಿಯಾಗಿರುತ್ತೇವೆ’ ಎಂದು ಪೌರಕಾರ್ಮಿಕರು ಭಾವುಕರಾಗಿ ಪ್ರತಿಕ್ರಿಯಿಸಿದರು. ಸಾಮಾನ್ಯವಾಗಿ ಕೇಕ್ ಕತ್ತರಿಸಿ, ಸಮಾರಂಭ ನಡೆಸಿ ಜನ್ಮದಿನ ಆಚರಿಸುವ ರಾಜಕೀಯ ನಾಯಕರ ನಡುವೆ, ಕಾರ್ಮಿಕರಿಗೆ ವಿಮಾನಯಾನ ಅನುಭವ ನೀಡುವ ಮೂಲಕ ಮಧು ಬಂಗಾರಪ್ಪ ಅವರು ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದು ವಿಶೇಷವಾಗಿದೆ.

Continue Reading

ಶಿವಮೊಗ್ಗ | ಕೃಷಿ ಮಾರುಕಟ್ಟೆಯಲ್ಲಿ ಫಜಿಲತ್ ಪಾಷಾ ದರ್ಬಾರ್

ಆದ್ದರಿಂದ, ತಮ್ಮ ಮಳಿಗೆಯ ಅಕ್ಕಪಕ್ಕದ ಗ್ರಿಲ್ ಗಳಿಗೆ ಪ್ರೈ ವುಡ್ ಶೀಟ್ ಗಳನ್ನು ಅಳವಡಿಸಬಾರದಾಗಿ APMC ಮಾರುಕಟ್ಟೆ ಸಮಿತಿ ಅಧಿಕಾರಿಯವರು ತಿಳಿಸಲಾಗಿದ್ದರೂ, ಸಹ ಗ್ರಿಲ್ ಗಳಿಗೆ ಶೀಟ್ ಗಳನ್ನು ಅಳವಡಿಸಿರುತ್ತೀರಿ. ಆದ್ದರಿಂದ, ಈ ಕೂಡಲೇ ಸದರಿ ಶೀಟ್ ಗಳನ್ನು ತೆರವುಗೊಳಿಸಿ ಎಂದು ತಿಳಿಸಿದ್ದಾರೆ. ಮತ್ತು 03 ದಿನದೊಳಗಾಗಿ ಕಛೇರಿಗೆ ವರದಿ ಮಾಡಲು ಈ ಮೂಲಕ ತಿಳಿಯಪಡಿಸಿದೆ. ತಪ್ಪಿದಲ್ಲಿ ಆಸ್ತಿ ಹಂಚಿಕೆ ನಿಯಮ-2004 ರನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ತಿಳಿಯಿರಿ ಎಂದು ಎಚ್ಚರಿಕೆ ನೀಡಿದ್ದಾರೆ . ಹಾಗೂ ಈ […]

Continue Reading