ಬೆಳಗಾವಿ | “ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು” ಸರಿಪಡಿಸಲು ವಿ.ಪ ಶಾಸಕ ಡಾ. ಧನಂಜಯ ಸರ್ಜಿ ಆಗ್ರಹ

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಸರ್ಜಿ ಅವರು ಕೇಳಿದ ಪ್ರಶ್ನೆ ವಾಸ್ತಿವಿಕವಾಗಿದೆ, ನಾನು ಒಪ್ಪುತ್ತೇನೆ. ಇತ್ತೀಚಿಗೆ ಮಾನದಂಡಗಳನ್ನು ಎ.ಐ.ಸಿ.ಟಿ.ಇ ಅವರು ಬದಲಾವಣೆ ಮಾಡಿದ್ದಾರೆ. ಹಿಂದೆ 1 : 4 ಇತ್ತು ಅಂದರೆ 4 ಜನ ವಿದ್ಯಾರ್ಥಿಗಳಿಗೆ 1 ಕಂಪ್ಯೂಟರ್ ಇತ್ತು ಈಗ ಬದಲಾವಣೆ ಮಾಡಿ 1 : 10 ಮಾಡಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಯೋಚನೆ ಮಾಡಿದ್ದೆ. ಯಥೇಚ್ಛವಾಗಿ ಸೀಟುಗಳನ್ನು ತೆಗೆದುಕೊಳ್ಳುವುದಕ್ಕೆ ನಿರ್ಬಂಧ ಹಾಕಬೇಕು ಎಂದು ತೀರ್ಮಾನ ಮಾಡಿದ್ದೇವೆ. ಎಲ್ಲೆಲ್ಲಿ ಸೀಟುಗಳು ಹೆಚ್ಚಿದೆ, ಒಂದು ವಿಷಯಕ್ಕೆ ಹೆಚ್ಚು […]

Continue Reading

ಶಿವಮೊಗ್ಗದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ 66ನೇ ಹುಟ್ಟುಹಬ್ಬದ ಸರಳ ಆಚರಣೆ

ಶಾಲೆಯ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಕೆ.ಬಿ. ಪ್ರಸನ್ನಕುಮಾರ್ ಅವರು ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳು ಗೋಪಾಲ್, ತ್ಯಾಗರಾಜ್, ಸಂಗಯ್ಯ, ರಮೇಶ್ ನಾಯಕ್, ನಾಗೇಶ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ರಘು, ಮಹೇಶ್, ದಯಾನಂದ್ ಸಾಲಗಿ, ಲೋಹಿತ್, ನರಸಿಂಹ ಗಂಧದಮನೆ, ಉಮಾಶಂಕರ್ ಉಪಾಧ್ಯಾಯ, ಗೋಪಿ, ಸಂಜಯ್ ಕಶ್ಯಪ್, ರಾಘವೇಂದ್ರ ಉಡುಪ, ವಾಜೀದ್, ವೆಂಕಟೇಶ್, ದೀಕ್ಷಿತ್, ಹರೀಶ್, ಶಂಕರ್, ರಾಜಮ್ಮ, ರೇಣುಕಾ, ರಾಜಲಕ್ಷ್ಮೀ, ಸುನಿಲ್ ಗೌಡ, ಚಂದ್ರಶೇಖರ್, ಮನೋಹರ್, ಗೋವಿಂದ, ವಿನಯ್ […]

Continue Reading

ಶಿವಮೊಗ್ಗ | ಲೋಕಾಯುಕ್ತ ದಾಳಿ, ದಾಖಲೆಗಳ ಪರಿಶೀಲನೆ

ರೂಪ್ಲಾ ನಾಯ್ಕ್ ಅವರ ಕುಟುಂಬ ನೆಲೆಸಿರುವ ಬೆಂಗಳೂರಿನ ನಿವಾಸ ಹಾಗೂ ರೂಪ್ಲಾ ನಾಯ್ಕ್ ಅವರ ಸಹಾಯಕ ತಾಂಬೆ ಅವರ ವಿದ್ಯಾನಗರದಲ್ಲಿರುವ ಮನೆ ಮೇಲೂ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ಒಟ್ಟು ಆರು ತಂಡಗಳಾಗಿ ಈ ದಾಳಿಯನ್ನು ನಡೆಸಲಾಗಿದೆ. ಬೆಳಿಗ್ಗೆಯಿಂದಲೇ ಅಧಿಕಾರಿಗಳು ದಾಖಲೆಗಳ ಪರಿಶೀಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

Continue Reading

ಶಿವಮೊಗ್ಗ | ಸ್ಪೋಕನ್ ಇಂಗ್ಲಿಷ್ ಕಲಿಯಲು ಹೋಗಿ ; ₹82 ಸಾವಿರ ಸೈಬರ್ ವಂಚನೆಗೆ ತುತ್ತಾದ ವ್ಯಕ್ತಿ

ನವೆಂಬರ್ 30, 2025 ರಂದು ಮಧ್ಯಾಹ್ನ 12:30 ಕ್ಕೆ ಡೆಮೊ ತರಗತಿ ತೆಗೆದುಕೊಳ್ಳಲು ಪ್ರೊಸೆಸಿಂಗ್ ಫೀಜ್ ಪಾವತಿಸಬೇಕು ಎಂದು ವಂಚಕರು ತಿಳಿಸಿದ್ದು, ಅದಕ್ಕಾಗಿ ನೀಡಿದ QR ಕೋಡ್‌ಗೆ ದೂರುದಾರರು 5,000 ಹಣವನ್ನು ಹಾಕಿರುತ್ತಾರೆ. ತದನಂತರ, ಅಪರಿಚಿತ ಮೊಬೈಲ್ ನಂಬರ್‌ನಿಂದ ಅವರ ಪತ್ನಿಯ ಮೊಬೈಲ್‌ಗೆ ಕರೆ ಮಾಡಿ ತರಗತಿಗಳ ಬಗ್ಗೆ ಮಾಹಿತಿ ನೀಡಲಾಗಿದೆ.ಆದರೆ, ತರಗತಿಗಳು ಇಷ್ಟವಾಗದ ಕಾರಣ ದೂರುದಾರರು ಕಂಪನಿಯ ಕಸ್ಟಮರ್ Gmail ಹಾಗೂ ಮೊಬೈಲ್ ನಂಬರ್‌ಗೆ ಕರೆ ಮಾಡಿ ಹಣವನ್ನು ವಾಪಸ್ಸು ನೀಡಬೇಕೆಂದು ಕೇಳಿದ್ದಾರೆ. ಆದರೆ ಅವರಿಗೆ […]

Continue Reading

ಶಿವಮೊಗ್ಗ | ಶಾಸಕ ಶ್ಯಾಮನೂರು ಶಿವಶಂಕರಪ್ಪ ನಿಧನಕ್ಕೆ ಸಚಿವ ಮಧು ಬಂಗಾರಪ್ಪ ಸಂತಾಪ

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಾ, ಸಚಿವ ಸಂಪುಟದ ಸಹೋದ್ಯೋಗಿ ಎಸ್.ಎಸ್ ಮಲ್ಲಿಕಾರ್ಜುನ್ ಅವರ ಕುಟುಂಬ ವರ್ಗದವರಿಗೆ, ಬಂಧು ಮಿತ್ರರಿಗೆ ಹಾಗೂ ಅವರ ಅಭಿಮಾನಿಗಳಿಗೆ ದುಖಃ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ

Continue Reading

ಶಿವಮೊಗ್ಗ | ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಾಮನೂರು ಶಿವಶಂಕರಪ್ಪರವರಿಗೆ ಶ್ರದ್ದಾಂಜಲಿ

ಈ ಸಂದರ್ಭದಲ್ಲಿ ಶಿವಮೊಗ್ಗ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಆರ್ ಪ್ರಸನ್ನ ಕುಮಾರ್, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡ ಎಚ್ ಸಿ ಯೋಗೇಶ್, ಶಿವಕುಮಾರ್, ಕಲೀಮುಲ್ಲಾ, ಹಾಗೂ ಮಹಿಳಾ ಮುಖಂಡರು ಹಾಗೂ ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯೆ ಅರ್ಚನಾ ನಿರಂಜನ್, ಸ್ಟೇಲ್ಲಾ ಮಾರ್ಟೀನ್, ಹಾಗೂ ಇನ್ನಿತರು ಉಪಸ್ಥಿತರಿದ್ದರು.

Continue Reading

ಶಿವಮೊಗ್ಗ | ವೀರಶೈವ ಲಿಂಗಾಯತ ಸಮಾಜದ ಅಗ್ರ ಗಣ್ಯ ನಾಯಕ ಶಾಮನೂರು ಶಿವಶಂಕರಪ್ಪ ನವರಿಗೆ – ಭಾವಪೂರ್ಣ ಶ್ರದ್ಧಾಂಜಲಿ : ಎಚ್ ಪಿ ಗಿರೀಶ್

ವೀರಶೈವ ಲಿಂಗಾಯತ ಸಮಾಜದ ಸಂಘಟನೆಯನ್ನು ಬಲಪಡಿಸಲು ಅವರು ಸಲ್ಲಿಸಿದ ಸೇವೆ ಸ್ಮರಣೀಯ.ಪರಮಾತ್ಮರು ಶಾಮನೂರು ಶಿವಶಂಕರಪ್ಪ ನವರ ಆತ್ಮಕ್ಕೆ ಶಾಂತಿ ನೀಡಲಿ. ಈ ದುಃಖದ ಸಮಯದಲ್ಲಿ ಶಾಮನೂರು ಕುಟುಂಬದ ಎಲ್ಲ ಸದಸ್ಯರಿಗೆ ಹಾಗೂ ಅವರ ಅಭಿಮಾನಿಗಳಿಗೆ ಈ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸುವುದಾಗಿ ಶಿವಮೊಗ್ಗ ಕಾಂಗ್ರೆಸ್ ಮುಖಂಡ ಹಾಗೂ ಬಸವ ಯುವ ಸೇನೆ, ಶಿವಮೊಗ್ಗದ ಅಧ್ಯಕ್ಷರಾದ ಹೆಚ್‍.ಪಿ. ಗಿರೀಶ್ ಶಾಂತಿ ಕೋರಿರುತ್ತಾರೆ.

Continue Reading