ಶಿವಮೊಗ್ಗ | ಗಿಫ್ಟ್ ಆಸೆಗೆ 2.80 ಲಕ್ಷ ರೂ ಕಳೆದುಕೊಂಡ ವ್ಯಕ್ತಿ

ಈ ಹಂತದಲ್ಲಿ ದೂರುದಾರರಿಗೆ ಅನುಮಾನ ಬಂದಿದ್ದು, ಅಕ್ಕಪಕ್ಕದವರಲ್ಲಿ ವಿಚಾರಿಸಿದಾಗ ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಈ ಹಿಂದೆ ಶಿವಮೊಗ್ಗದ ಶ್ರೀರಾಮಪುರದ ಮಹಿಳೆಯೊಬ್ಬರಿಗೂ ಇದೇ ರೀತಿ ಗಿಫ್ಟ್ ಆಸೆ ತೋರಿಸಿ 2.35 ಲಕ್ಷ ರೂ. ವಂಚಿಸಲಾಗಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

Continue Reading

ಶಿವಮೊಗ್ಗ | ಶಾಸಕರ ವಿರುದ್ಧ ಡಿಎಸ್ಸೆಸ್ ತಮಟೆ ಚಳವಳಿಯ ಪ್ರತಿಭಟನೆ

ಶಿರುಪತಿ ಗ್ರಾಮದ ಸರ್ವೆ ನಂಬರ್ 11ರಲ್ಲಿ ಒಟ್ಟು 10 ದಲಿತ ಕುಟುಂಬಗಳಿಗೆ ಸರ್ಕಾರವು 18 ಎಕರೆ 10 ಗುಂಟೆ ಹೆಚ್ಚುವರಿ ಜಮೀನನ್ನು ಮಂಜೂರು ಮಾಡಿದ್ದರೂ ಸಹ, ಕಳೆದ 43 ವರ್ಷಗಳಿಂದ ಬಲಾಡ್ಯರು ಅಲ್ಲಿ ಕೃಷಿ ಚಟುವಟಿಕೆ ನಡೆಸಲು ಬಿಡುತ್ತಿಲ್ಲ ಎಂಬುದು ಪ್ರತಿಭಟನಾಕಾರರ ಪ್ರಮುಖ ಆಕ್ರೋಶವಾಗಿತ್ತು. ಜಮೀನಿನ ದಾಖಲೆಗಳನ್ನು ಪಕ್ಕಾ ಪೋಡಿ ಮಾಡಲು ಭೂ ಮಾಪನಾ ಇಲಾಖೆಯು ನೋಟಿಸ್ ಜಾರಿ ಮಾಡಿದ್ದರೂ, ಶಾಸಕರ ಸೂಚನೆಯ ಮೇರೆಗೆ ಸರ್ವೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಆರೋಪಿಸಿದರು. ನ್ಯಾಯಕ್ಕಾಗಿ ಹೋರಾಟ ಮಾಡುವವರ […]

Continue Reading

ಶಿವಮೊಗ್ಗ | ಬಸ್ ಸಂಚಾರಕ್ಕೆ ಸಚಿವ ಮಧುಬಂಗಾರಪ್ಪ ಚಾಲನೆ

ಹೀಗಾಗಿ ಸೊರಬ ಕ್ಷೇತ್ರಕ್ಕೆ ಅಭಿವೃದ್ಧಿ ಕಾರ್ಯಕ್ಕೆ ಬಿಡುಗಡೆ ಮಾಡಿರುವ ₹50 ಕೋಟಿಯಲ್ಲಿ ₹45 ಕೋಟಿಯನ್ನು ರಸ್ತೆ ಅಭಿವೃದ್ಧಿ ಗೆ ಬಳಕೆ ಮಾಡಲಾಗುತ್ತಿದ್ದು, ಈಗಾಗಲೇ ಕಾಮಗಾರಿ ಆರಂಭವಾಗಿದೆ ಎಂದರು.

Continue Reading

ಶಿವಮೊಗ್ಗ | ಬಂಗಾರ’ದ ಹಾದಿಯ ವೀಕ್ಷಣೆಗೆ ಡಿಜಿಟಲ್ ವ್ಯವಸ್ಥೆ : ಸಚಿವ ಮಧು ಬಂಗಾರಪ್ಪ ಹೇಳಿಕೆ

‘ಬಂಗಾರಪ್ಪ ಬರೀ ವ್ಯಕ್ತಿಯಲ್ಲ. ಅವರು ನಾಡಿನ ಎಲ್ಲ ಸಮುದಾಯಗಳ ಬಡವರಿಗೆ ಶಕ್ತಿ ತುಂಬಿದ್ದ ಜನನಾಯಕ. ವ್ಯಕ್ತಿಯಾಗಿ ಅವರು ಇಲ್ಲದಿದ್ದರೂ ಚಿಂತನೆಗಳ ಮೂಲಕ ಜನಮಾನಸದಲ್ಲಿ ಸದಾ ಜೀವಂತವಾಗಿರಲಿದ್ದಾರೆ. ಅವರ ವಿಚಾರಗಳು ಇಂದಿಗೂ ಪ್ರಸ್ತುತ. ಹೀಗಾಗಿಯೇ ಬಂಗಾರಧಾಮ ಶೋಷಿತರು ಹಾಗೂ ಬಡವರ ಚೈತ್ರಭೂಮಿಯಾಗಿ ಮಾರ್ಪಟ್ಟಿದೆ’ ಎಂದರು. ಮಧು ಬಂಗಾರಪ್ಪ ಪತ್ನಿ ಅನಿತಾ, ಪುತ್ರ ಸೂರ್ಯ, ಮಾವನೂ ಆದ ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರೊಂದಿಗೆ ಅಪ್ಪ-ಅಮ್ಮನ ಸಮಾಧಿ ಸ್ಥಳದ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ಬಂಗಾರಧಾಮಕ್ಕೆ ಮುಂಜಾನೆಯೇ ಸೊರಬ ಕ್ಷೇತ್ರ ಮಾತ್ರವಲ್ಲದೆ […]

Continue Reading

ಶಿವಮೊಗ್ಗ | ಮರ್ಯಾದ ಹತ್ಯೆ ಪ್ರಕರಣಗಳಿಗೆ ; “ಮಾನ್ಯಾ ಕಾಯ್ದೆ” ಎಂಬ ಪ್ರತ್ಯೇಕ ಹೆಸರಿನಲ್ಲಿ ಕಠಿಣ ಕಾಯ್ದೆ ರೂಪಿಸಬೇಕು : ಎನ್. ರವಿಕುಮಾರ್(ಟೆಲೆಕ್ಸ್), ಆಗ್ರಹ

ಅಂತರ್‌ಜಾತಿ ವಿವಾಹವಾದ ಮಕ್ಕಳನ್ನು, ಪರಸ್ಪರ ಪ್ರೀತಿಸಿದವರನ್ನು ತಮ್ಮ ಪೋಷಕರೇ ಕಾನೂನಿನ ಭಯವಿಲ್ಲದೆ ಮರ್ಯಾದೆಯ ಹೆಸರಲ್ಲಿ ನಿರ್ದಯವಾಗಿ ಹತ್ಯೆ ಮಾಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಮುಂದಿನ ದಿನಗಳಲ್ಲಿ ಜಾತಿವಾದಿಗಳು ಇಂತಹ ಕ್ರೌರ್ಯವನ್ನೇ ಸಾಮಾಜಿಕ ಘನತೆ/ ಮೌಲ್ಯ ಎಂಬಂತೆ ಪ್ರತಿಷ್ಠಾಪಿಸುವ ಅಪಾಯವೂ ಇದೆ. ಈ ಪಿಡುಗನ್ನು ಬುಡಸಮೇತ ಕಿತ್ತುಹಾಕಲು ಸರ್ಕಾರ ಇಚ್ಛಾಶಕ್ತಿ ತೋರಬೇಕು. ಜಾತಿ ದ್ವೇಷದಿಂದ ಪ್ರೇಮಿಗಳ ಅಥವಾ ದಂಪತಿಗಳ ಮೇಲೆ , ಅವರ ಕುಟುಂಬದ ಮೇಲೆ ನಡೆಯುವ ಹಲ್ಲೆ, ಹತ್ಯೆಯಂತಹ ಅಮಾನವೀಯ ಅಪರಾಧಗಳನ್ನು “ಘೋರ ಅಪರಾಧ” ಎಂದು ಪರಿಗಣಿಸಬೇಕು ಜಾತಿ […]

Continue Reading

ಶಿವಮೊಗ್ಗ | ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಕಳ್ಳತನ

ಇನ್ನೇನು ಸಮೀಪದಲ್ಲಿರುವ ಜಾತ್ರೆಗೆ ಲಕ್ಷಾಂತರ ಜನ ಅಮ್ಮನವರ ದರ್ಶನಕ್ಕೆ ಆಗಮಿಸುತ್ತಾರೆ.ಈ ವೇಳೆಯಲ್ಲಿ ಇಂತಃ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಮಾರಿಕಾಂಬ ದೇವಸ್ಥಾನ ಸಮಿತಿಯ ಸದಸ್ಯನೊಬ್ಬ ಕಳ್ಳತನ ಮಾಡಿರುವುದಾಗಿ ತಿಳಿದುಬಂದಿದೆ. ಸುಮಾರು 10 ಲಕ್ಷ ರೂಪಾಯಿ ಸಂಗ್ರಹವಾಗಿದ್ದು ಅದರಲ್ಲಿ 6 ಲಕ್ಷ ರೂಪಾಯಿ ಬ್ಯಾಂಕ್ ಗೆ ಹಣ ಕಟ್ಟಲು ಇಟ್ಟಿದ್ದರು. ಈ ವೇಳೆ ಸಮಿತಿ ಸಭೆ ನಡೆಯುತ್ತಿರುವಾಗ ಸಮಿತಿಯ ಸದಸ್ಯ ಪ್ರಭಾಕರ್ ಎಂಬಾತನು 50,000₹ ರೂಪಾಯಿಗು ಅಧಿಕ ಹಣವನ್ನು ಕವರ್ ಗೆ ಹಾಕಿಕೊಂಡು ತೆರಳಿದ್ದಾನೆ. ತದ ನಂತರ ಖಜಾಂಚಿ ತಿಮ್ಮಪ್ಪರವರು […]

Continue Reading

ಶಿವಮೊಗ್ಗ | ಸಿಲಿಂಡರ್ ಸ್ಪೋಟಗೊಂಡ ಮನೆಗಳಿಗೆ ಶಾಸಕ ಚನ್ನಬಸಪ್ಪ ಭೇಟಿ

ಈ ಭೇಟಿಯ ಸಮಯದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಜಗದೀಶ್, ಜಿಲ್ಲಾ ಉಪಾಧ್ಯಕ್ಷರುಗಳಾದ ಶ್ರೀ ಜ್ಞಾನೇಶ್ವರ್ ಹಾಗೂ ಶ್ರೀ ನಾಗರಾಜ್, ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ, ಪ್ರಮುಖರಾದ ಪ್ರಭಾಕರ್ ಹಾಗೂ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದು ಸಂತ್ರಸ್ತರಿಗೆ ಧೈರ್ಯ ತುಂಬಿದರು.

Continue Reading

ಶಿವಮೊಗ್ಗ | ವಿಕಲಚೇತನ ವ್ಯಕ್ತಿಗೆ ಸಹಾಯಹಸ್ತ ಚಾಚಿದ ಹರೀಶ್ ನಾಯ್ಕ್

ಸಮಾಜ ಸೇವಕ ಯುವ ನಾಯಕ ಹರೀಶ್ ನಾಯ್ಕ್ ನೊಂದ ಜೀವಕ್ಕೆ ಆಸರೆಯಾಗಿ, ಸಂಚರಿಸಲು ಮೂರು ಚಕ್ರದ ಸೈಕಲ್ ನೀಡಿ ಸಹಾಯಹಸ್ತ ಚಾಚಿದ್ದಾರೆ. ಇದು ಜನ ಮೆಚ್ಚುಗೆಗೆ ಪಾತ್ರವಾಗಿದೆ.. ಈ ಸಂದರ್ಭದಲ್ಲಿ ಶಶಿಕುಮಾರ್ ನಾಯ್ಕ್. ಕೆಂಚಪ್ಪ ರಘು ಹೇಮತ್ ಶಿವು ಸಿದ್ದು ಉಮೇಶ್ ಈಶಣ್ಣ ಗ್ರಾಮಸ್ಥರು ಉಪಸ್ಥಿತರಿದ್ದರು

Continue Reading