ಶಿವಮೊಗ್ಗ | ವೃದ್ದೆ ಕೊಲೆ ಪ್ರಕರಣ ; ಆರೋಪಿಗೆ ಜೀವಾವಧಿ ಶಿಕ್ಷೆ

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದಯಶವಂತ ಕುಮಾರ್ ಅವರು ಆರೋಪಿ ಕಿರಣ್ ವಿರುದ್ಧದ ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ, ಆರೋಪಿಗೆ ಜೀವಾವಧಿ ಕಾರಾವಾಸ ಶಿಕ್ಷೆ ಮತ್ತು 20,000 ದಂಡ ವಿಧಿಸಿ ಆದೇಶ ನೀಡಿದ್ದಾರೆ.

Continue Reading

ಬೆಂಗಳೂರು | ಎಐಎಸ್ಇಸಿ ಕರ್ನಾಟಕ ರಾಜ್ಯ ಸಮಿತಿಯಿಂದ ಕೆಪಿಎಸ್ ಮ್ಯಾಗ್ನೆಟಿಕ್ ಶಾಲೆ, ವಿರೋಧಿಸಿ ಸಮಾವೇಶ

ಶಿಕ್ಷಣ ಸಚಿವರು ಕೇವಲ ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡುತ್ತಿದ್ದಾರೆ ವಿನಃ ಸರ್ಕಾರಿ ಶಾಲೆಗಳನ್ನು ಉಳಿಸುವ ಮತ್ತು ಬಲಪಡಿಸುವ ಕಾರ್ಯಗಳನ್ನು ಮಾಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ವೇಳೆ ಸರ್ಕಾರಕ್ಕೆ ಹಾಗೂ ಸಚಿವರಿಗೆ ನಿಜವಾಗಿಯೂ ಕನ್ನಡ ಶಾಲೆಗಳ ಬಗ್ಗೆ, ಬಡವರು, ದಲಿತರು, ರೈತ-ಕಾರ್ಮಿಕರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಶಿಕ್ಷಣ ಇಲಾಖೆಯಿಂದ ಕೆ.ಪಿ.ಎಸ್.-ಮ್ಯಾಗ್ನೆಟ್ ಶಾಲೆಗಳ ಬಗ್ಗೆ ಹೊರಡಿಸಿರುವ ಆದೇಶಗಳನ್ನು ಹಿಂಪಡೆಯಬೇಕು ಹಾಗೂ ಯಾವುದೇ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಲಿಖಿತ ಆದೇಶಗಳನ್ನು ಹೊರಡಿಸಬೇಕೆಂದು ಆಗ್ರಹಿಸಿದರು. ಶಿಕ್ಷಣ ತಜ್ಞರಾಗಿರುವ ಪ್ರೊ. ನಿರಂಜನ ಆರಾಧ್ಯರವರು ಮಾತನಾಡುತ್ತಾ […]

Continue Reading

ಶಿವಮೊಗ್ಗ | ಸುಲ್ತಾನ್ ಡೈಮಂಡ್ & ಗೋಲ್ಡ್ ಜಾಗ ಪಾಲಿಕೆ ವಶಕ್ಕೆ ಪಡೆಯುವಂತೆ ಹೈಕೋರ್ಟ್ ಆದೇಶ

ಆದ್ದರಿಂದ, ಈ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಹೆಚ್ಚಿನ ಮೊಕದ್ದಮೆ ನಡೆಯದಂತೆ ನೋಡಿಕೊಳ್ಳಲು ಪಕ್ಷಗಳು ಷರತ್ತುಗಳನ್ನು ಹಾಕುವುದು ಅವಶ್ಯಕ. ಮೇಲೆ ತಿಳಿಸಲಾದ ಅಲ್ಪವಿರಾಮವನ್ನು ಗಮನದಲ್ಲಿಟ್ಟುಕೊಂಡು, ಈ ನ್ಯಾಯಾಲಯವು ಪ್ರತಿವಾದಿ ಸಂಖ್ಯೆ 4 ರ ಹೆಸರಿನಲ್ಲಿರುವ ಪ್ರಶ್ನಾರ್ಹ ಆಸ್ತಿಯ ಆಸ್ತಿ ರಿಜಿಸ್ಟರ್‌ನಲ್ಲಿ ಸೂಕ್ತ ವಿಚಾರಣೆಗಳನ್ನು ನಡೆಸುವಂತೆ ಮತ್ತು ಅರ್ಜಿದಾರರು ಸ್ವಾಧೀನದಲ್ಲಿದ್ದರೆ ಅವರಿಂದ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸುತ್ತದೆ. ಅರ್ಜಿದಾರರು ಮತ್ತು ಅವರ ಪೂರ್ವವರ್ತಿಗಳು ಯಾವುದೇ ನ್ಯಾಯಾಲಯ ಅಥವಾ ಇತರ ಪ್ರಾಧಿಕಾರದ ಮುಂದೆ ಈ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ […]

Continue Reading

ಬೆಳಗಾವಿ | ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಯಿಂದ ಪರಿಸರಕ್ಕೆ ಹಾನಿ ಇಲ್ಲ : ಸಚಿವ ಕೆ.ಜೆ. ಜಾರ್ಜ್

ಈ ಯೋಜನೆಯಲ್ಲಿ ಸುರಂಗ ಮಾರ್ಗವನ್ನು ಮಾಡಲಾಗುವುದಿಲ್ಲ, ಬದಲಿಗೆ ಪೈಪ್‍ಲೈನ್ ಅಳವಡಿಸಿ, ಆ ಪ್ರದೇಶವನ್ನು ಪುನಃ ಮೊದಲಿನ ಸ್ಥಿತಿಗೇ ತಂದು ಅರಣ್ಯೀಕರಣ ಮಾಡಲಾಗುವುದು. ಇದಕ್ಕಾಗಿ ಕೇವಲ 25 ಎಕರೆ ಭೂಮಿ ಮಾತ್ರ ಅಗತ್ಯವಿದ್ದು, ಹೀಗಾಗಿ ಪರಿಸರದ ಮೇಲೆ ಯಾವುದೇ ಹಾನಿಯಾಗುವ ಕೆಲಸ ಮಾಡುವುದಿಲ್ಲ ಎಂದರು. 1964 ರಲ್ಲಿ ಶರಾವತಿ ಜಲಾಶಯದ ಯೋಜನೆ ಮಾಡಿದಾಗ 1 ಲಕ್ಷ ಹೆಕ್ಟೇರ್​ ಪ್ರದೇಶ ಮುಳುಗಡೆಯಾಗಿತ್ತು. ಈಗ ವರಾಹಿಯೂ ಸೇರಿದಂತೆ 1400 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಆಗುತ್ತಿದೆ. ಇದೀಗ ಉಪಯೋಗಿಸಿದ ನೀರನ್ನೇ ಪುನಃ ಪಂಪ್ […]

Continue Reading

ಇಂಡಿಗೋ ವಿಮಾನ ರದ್ದು ; ಮಗನ ಪರೀಕ್ಷೆಗಾಗಿ 800 ಕಿ.ಮೀ. ಕಾರು ಚಲಾಯಿಸಿಕೊಂಡು ಬಂದ ತಂದೆ!

ಇಂಡಿಗೋ ವಿಮಾನಗಳ ರದ್ದಿನಿಂದ ಎಲ್ಲರಂತೆ ರೋಹ್ಟಕ್ ಜಿಲ್ಲೆಯ ಮೈನಾ ಗ್ರಾಮದ ವಿದ್ಯಾರ್ಥಿಯೊಬ್ಬ ತೊಂದರೆಗೆ ಸಿಲುಕಿದ್ದ. ಯುವ ಶೂಟರ್ ಆಗಿರುವ ಆಶಿಶ್ ಚೌಧರಿ ಪಂಘಲ್ ಎಂಬಾತ ಮಧ್ಯಪ್ರದೇಶದ ಇಂದೋರ್​​ನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಡಿಸೆಂಬರ್​ 8ರಂದು ಕಾಲೇಜಿನ ಪ್ರೀ ಬೋರ್ಡ್​ ಪರೀಕ್ಷೆಗಳು ನಿಗದಿಯಾಗಿದ್ದವು.ರಜೆಯ ಮೇಲೆ ತನ್ನೂರಿಗೆ ಆಗಮಿಸಿದ್ದ ಆಶಿಶ್​​ ಮರಳಿ ಇಂದೋರ್​ಗೆ ತೆರಳಲು ದೆಹಲಿಯಿಂದ ಡಿಸೆಂಬರ್​ 6ರಂದು ವಿಮಾನ ಬುಕ್​ ಮಾಡಿದ್ದ. ವಕೀಲರಾಗಿರುವ ಆತನ ತಂದೆ ಮಗನನ್ನು ಬಿಡಲು ದೆಹಲಿ ವಿಮಾನ ನಿಲ್ದಾಣಕ್ಕೆ ಹೋದರು. ನಿಲ್ದಾಣ ತಲುಪಿದ ನಂತರ, […]

Continue Reading

ಬೆಂಗಳೂರು | ಅಲೋಕ್ ಕುಮಾರ್, ಬಿ ದಯಾನಂದ್ ಸೇರಿ ಇಬ್ಬರು IPS, 3 IAS ಅಧಿಕಾರಿಗಳ ವರ್ಗಾವಣೆ

ಹಣಕಾಸು ಇಲಾಖೆಯ ಕಾರ್ಯದರ್ಶಿ ಮತ್ತು ಹಣಕಾಸು ನೀತಿ ಸಂಸ್ಥೆಯ ನಿರ್ದೇಶಕ ಹುದ್ದೆಗಳಿಗೆ ಪ್ರಭಾರಿ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ಮಂಜುಳಾ ಎನ್. ಅವರನ್ನು ಸಹ ಬಿಡುಗಡೆ ಮಾಡಲಾಗಿದೆ. 7 ಐಎಎಸ್‌ ಅಧಿಕಾರಿಗಳಿಗೆ ಬಡ್ತಿ ನೀಡಿದ ಸರ್ಕಾರ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರೀಗೌಡ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರ ಡಾ. ಶಿವಶಂಕರ ಎನ್ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತ ಬಸವರಾಜೇಂದ್ರ ಎಚ್ಕಾರ್ಮಿಕ ಇಲಾಖೆ ಆಯುಕ್ತ ಡಾ. ಎಚ್.ಎನ್. ಗೋಪಾಲ ಕೃಷ್ಣ,ಕೃಷಿ ಇಲಾಖೆ […]

Continue Reading