Author: News E-Kannada
ಶಿವಮೊಗ್ಗ | ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ
ಇದರ ಜೊತೆಗೆ, ನಗರದ ವಾಜಪೇಯಿ ಬಡಾವಣೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನೂತನ ‘ಯೋಗ ಹಾಗೂ ಧ್ಯಾನ ಮಂದಿರ’ ನಿರ್ಮಾಣಕ್ಕೂ ಇಂದು ಗುದ್ದಲಿ ಪೂಜೆ ನೆರವೇರಿಸಲಾಯಿತು. ಇಂದಿನ ಒತ್ತಡದ ಜೀವನದಲ್ಲಿ ಸಾರ್ವಜನಿಕರಿಗೆ ಆಧ್ಯಾತ್ಮಿಕ ಚಿಂತನೆ, ಮಾನಸಿಕ ನೆಮ್ಮದಿ ಹಾಗೂ ಯೋಗಾಭ್ಯಾಸಕ್ಕೆ ಸೂಕ್ತ ವೇದಿಕೆ ಕಲ್ಪಿಸುವ ಸದುದ್ದೇಶವನ್ನು ಈ ಮಂದಿರ ಹೊಂದಿದೆ. ಈ ವೇಳೆ ಮಾಜಿ ಸುಡಾ ಅಧ್ಯಕ್ಷರಾದ ನಾಗರಾಜ್ ಅವರು, ಜ್ಞಾನೇಶ್ವರ್ ಅವರು, ನಗರ ಬಿಜೆಪಿ ಅಧ್ಯಕ್ಷರಾದ ಮೋಹನ್ ರೆಡ್ಡಿ ಅವರು, ಸಸ್ಯಹಾರಿ ಫುಡ್ ಕೋರ್ಟ್ […]
Continue Readingಶೈಕ್ಷಣಿಕ ವ್ಯವಸ್ಥೆ ಮತ್ತು ನೇಮಕಾತಿ ಪರೀಕ್ಷೆಯಲ್ಲಿ ಬದಲಾವಣೆ ಅಗತ್ಯ : ಸಚಿವ ಮಧು ಬಂಗಾರಪ್ಪ
ಪರೀಕ್ಷೆಗಳು ಮತ್ತು ನೇಮಕಾತಿಗಳ ಸಮಗ್ರತೆ. ಶಿಕ್ಷಣದ ವೆಚ್ಚ, ಶುಲ್ಕ ಹಾಗೂ ಕೋಚಿಂಗ್ ಕೇಂದ್ರಗಳ ನಿಯಂತ್ರಣ. ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಮತ್ತು ಗುಣಮಟ್ಟ. ಪಠ್ಯಕ್ರಮ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗ ಸಂಪರ್ಕ5. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ6 . ಪ್ರವೇಶಾವಕಾಶ ಮತ್ತು ಸಮಾನತೆ ತಜ್ಞರ ಅಭಿಪ್ರಾಯ ಸಂಗ್ರಹಿಸಲು ಮಧು ಬಂಗಾರಪ್ಪ ಸಲಹೆ : ಈ ಮಹತ್ವದ ಸಭೆಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, “ಶಿಕ್ಷಣ ಕ್ಷೇತ್ರದಲ್ಲಿ ಅಗತ್ಯ ಬದಲಾವಣೆಗಳನ್ನು ತರಲು ತಜ್ಞರ ಅಭಿಪ್ರಾಯ ಸಂಗ್ರಹಿಸುವುದು ಅತ್ಯಂತ […]
Continue Readingಶಿವಮೊಗ್ಗ | ವಿದ್ಯಾನಗರದ ಎಂ.ಆರ್.ಎಸ್. ವೃತ್ತಕ್ಕೆ “ಬ್ರಹ್ಮಶ್ರೀ ನಾರಾಯಣ ಗುರು” ವೃತ್ತವೆಂದು ನಾಮಕರಣವಾಗಬೇಕು : ಶ್ರೀ ನಾರಾಯಣಗುರು ಸೇವಾ ಸಮಿತಿಯಿಂದ (ರಿ). ಮತ್ತೊಮ್ಮೆ ಒತ್ತಾಯ..!
ಅದಕ್ಕಾಗಿ, ಶಿವಮೊಗ್ಗ ಜಿಲ್ಲಾ ಆಡಳಿತ ಮತ್ತು ನಗರಾಭಿವೃದ್ಧಿ ಪ್ರಾಧಿಕಾರವು ಸರ್ಕಾರದ ಮೂಲಕ ಕ್ರಮ ಕೈಗೊಂಡು, ಆ ವೃತ್ತಕ್ಕೆ “ಬ್ರಹ್ಮಶ್ರೀ ನಾರಾಯಣ ಗುರು ವೃತ್ತ” ಎಂದು ನಾಮಕರಣ ಮಾಡುವಂತೆ ತುರ್ತು ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇವೆ.ಈ ಮನವಿಯನ್ನು ಪುರಸ್ಕರಿಸಿ, ಸಮಾಜಕ್ಕೆ ಮಾದರಿಯಾದ ಈ ಮಹಾನ್ ಗುರುವರ್ಯರ ಹೆಸರಿನಲ್ಲಿ ನಾಮಕರಣ ಮಾಡುವ ಮೂಲಕ ಅವರ ಆದರ್ಶಗಳು ಮುಂದಿನ ಪೀಳಿಗೆಗೆ ಪರಿಚಿತರಾಗುವಂತೆ ಮಾಡುವುದೇ ಸರ್ಕಾರದ ಗೌರವಾನ್ವಿತ ಕರ್ತವ್ಯವೆಂದು ನಾವು ನಂಬುತ್ತೇವೆ ಎಂದು, ಶ್ರೀ ಶ್ರೀ ಶ್ರೀ ನಾರಾಯಣಗುರು ಸೇವಾ ಸಮಿತಿ (ರಿ). ದಿನಾಂಕ […]
Continue Readingಶಿವಮೊಗ್ಗ | ದೇವಸ್ಥಾನದ ಬಾಗಿಲು ಮುರಿದು ಕಳ್ಳತನ ಮಾಡಿದ್ದವನ್ನು ಎಳೆತಂದ ಗ್ರಾಮಸ್ಥರು
ಇನ್ನೊಂದೆಡೆ ಯುವಕನು ಗ್ರಾಮದ ಕೆಲವರ ವಿರುದ್ಧ ದೂರ ನೀಡಿದ್ದಾನೆ. ಸಿರಿಯೂರಿನಲ್ಲಿದ್ದ ತನ್ನ ಜೊತೆಗೆ ಮಾತನಾಡಬೇಕು ಎಂದು ಕೆಲವರು ನಿದಿಗೆ ಗ್ರಾಮಕ್ಕೆ ಕರೆದು ತಂದರು. ಅಲ್ಲಿ ಚೌಡಮ್ಮ ದೇವಸ್ಥಾನದ ಬಳಿ ಹಲ್ಲೆ ನಡೆಸಿದರು. ಕಳ್ಳತನ ಮಾಡಿದ ವಸ್ತುಗಳನ್ನು ಹಿಂತಿರುಗಿಸುವುದಾಗಿ ತಿಳಿಸಿದರೂ ದೊಣ್ಣೆಗಳಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ. ತನ್ನ ತಂದೆ ಸ್ಥಳಕ್ಕೆ ಬಂದಿದ್ದನ್ನ ಗಮನಿಸಿ ಅವರೆಲ್ಲ ಅಲ್ಲಿಂದ ಹೋದರು. ವಿಷಯ ತಿಳಿದು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನ್ನನ್ನು ವಶಕ್ಕೆ ಪಡೆದು, ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ […]
Continue Readingಶಿವಮೊಗ್ಗ | ಬಂಧನಕ್ಕೆ ತೆರಳಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಆರೋಪಿ, ಆತನ ಕುಟುಂಬದಿಂದ ಹಲ್ಲೆ, ಆರೋಪಿ ಪರಾರಿ
ಆರೋಪಿಯ ಕುಟುಂಬದವರು ಪೊಲೀಸ್ ಸಿಬ್ಬಂದಿ ಸಂತೋಷ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಸಿಬ್ಬಂದಿ ಆಯನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Continue Readingಶಿವಮೊಗ್ಗ | ದೊಣ್ಣೆ ಹಾಗೂ ಬಾಟಲಿಯಿಂದ ಹಲ್ಲೆ ನಡೆಸಿದ್ದ ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ
ಶಿವಮೊಗ್ಗದ ಮಲವಗೊಪ್ಪದ ಶುಗರ್ ಫ್ಯಾಕ್ಟರಿ ಹತ್ತಿರದ ವಾಸಿಯಾದ ಸಕ್ರೀಯ ಬಿನ್ ದಾದಾರ್ಪಿ ಎಂಬುವರ ಕೊನೆಯ ತಂಗಿಯ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ನಸೀನಾ ಬಾನು ಹಾಗೂ ಇನ್ನೊಬ್ಬರು (ಪ್ರಸ್ತುತ ಮೃತಪಟ್ಟಿದ್ದಾರೆ) ಜಗಳ ತೆಗೆದು, ಸಕ್ರೀಯ ಅವರ ಮೇಲೆ ದೊಣ್ಣೆ ಮತ್ತು ಬಾಟಲಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು. ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 473/2020 ರಂತೆ ದೂರು ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಕೈಗೊಂಡ ತನಿಖಾಧಿಕಾರಿ ರಾಮಕುಮಾರ್ ವಿ. ಅವರು ತನಿಖೆ ಪೂರ್ಣಗೊಳಿಸಿ […]
Continue Readingಸಾಗರ | ನೆಲ್ಲಿಬೀಡು ಅಪಘಾತ: ಗಾಯಳು ನೀಲಕುಮಾರ್ ಸಾವು
ಅರ್ಚನಾ ಜೈನ್ ಅವರನ್ನು ಕಳೆದುಕೊಂಡಿದ್ದ ಕುಟುಂಬವು ಇದೀಗ ನೀಲಕುಮಾರ್ ಜೈನ್ ಅವರನ್ನೂ ಕಳೆದುಕೊಂಡಿದೆ. ನೀಲಕುಮಾರ್ ಅವರಿಗೆ ಪತ್ನಿ ಮತ್ತು ಪುತ್ರ ಇದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Continue Readingಬೆಂಗಳೂರು | ನಾಲ್ಕು ತಿಂಗಳ ಅವಳಿ ಹೆಣ್ಣು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ತಾಯಿ..!
ಮಂಗಳವಾರ ಮನೆಗೆ ಹೋಗಿ ನೋಡಿದಾಗ ಮಕ್ಕಳು ಮೃತಪಟ್ಟಿದ್ದವು. ನೇಣು ಹಾಕಿಕೊಳ್ಳಲು ಪ್ರಯತ್ನಿಸಿದ ಉಮಾದೇವಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ರಾಮಲಿಂಗಪ್ಪ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ದೂರಿನ ಪ್ರಕಾರ, ರಾಮಲಿಂಗಪ್ಪ ಮಧ್ಯಾಹ್ನ ಮನೆಗೆ ಮರಳಿದಾಗ ಅವರ ಪತ್ನಿ ಕೋಣೆಯೊಳಗೆ ಬೀಗ ಹಾಕಿಕೊಂಡಿರುವುದು ಕಂಡುಬಂದಿದೆ. ಬಾಗಿಲು ತೆರೆದ ನಂತರ, ಉಮಾದೇವಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿರುವುದು ಕಂಡುಬಂದಿದೆ ಎಂದು ಆರೋಪಿಸಲಾಗಿದೆ. ಆಕೆಯನ್ನು ರಕ್ಷಿಸಿ ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು.
Continue Reading




