ಚಂಢಿಗಡ,ಸೈಬರ್ ವಂಚನೆಗೆ ಸಿಲುಕಿ 8 ಕೋಟಿ ರೂಪಾಯಿ ಕಳೆದುಕೊಂಡು ಅವಮಾನಕ್ಕೀಡಾದ ಪಂಜಾಬ್ ನ ಮಾಜಿ ಐಪಿಎಸ್ ಅಧಿಕಾರಿ ಅಮರ್ ಸಿಂಗ್ ಚಾಹಲ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಅವರ ಪರಿಸ್ಥಿತಿ ಗಂಭೀರವಾಗಿದೆ.
ಸದ್ಯ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.8 ಕೋಟಿ ರೂಪಾಯಿ ವಂಚನೆಗೆ ಬಲಿಯಾಗಿ ತೀವ್ರವಾಗಿ ನೊಂದು ಟಿಪ್ಪಣಿಯೊಂದು ಬರೆದು ನಂತರ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಮರ್ ಸಿಂಗ್ ಚಾಹಲ್ ಅವರ ನಿವಾಸದಲ್ಲಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಸ್ವತಃ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಪೊಲೀಸರು ವರದಿ ಮಾಡಿದ್ದಾರೆ.
ಪಟಿಯಾಲ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ವರುಣ್ ಶರ್ಮಾ ಅವರು ಮಾಜಿ ಅಧಿಕಾರಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಹೆಚ್ಚಿನ ವಿವರಗಳು ಹೊರಬಂದಿದ್ದು ಸಂಪತ್ತು ನಿರ್ವಹಣಾ ಸಲಹೆಗಾರರಂತೆ ನಟಿಸಿ ಸೈಬರ್ ವಂಚಕರು 8.10 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಚಾಹಲ್ ತಮ್ಮ ಟಿಪ್ಪಣಿಯಲ್ಲಿ ಬರೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಅವರು ಪ್ರಮುಖ ಆರ್ಥಿಕ ವಂಚನೆಗೆ ಬಲಿಯಾಗಿದ್ದಾರೆ ಎಂದು ಸೂಚಿಸುವ ಪತ್ರವನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ.DBS ಬ್ಯಾಂಕ್ ಮತ್ತು ಅದರ CEO ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಸುಳ್ಳು ಹೇಳಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಷೇರು ವ್ಯಾಪಾರ, IPO ಹಂಚಿಕೆಗಳು, OTC ವಹಿವಾಟುಗಳು ಮತ್ತು ಪರಿಮಾಣಾತ್ಮಕ ನಿಧಿಗಳು ಎಂದು ಕರೆಯಲ್ಪಡುವ ಮೂಲಕ ದುಪ್ಪಟ್ಟ ಆದಾಯದ ಭರವಸೆ ನೀಡುವ ಮೂಲಕ ಹೂಡಿಕೆದಾರರನ್ನು ಆಕರ್ಷಿಸಿತ್ತು.



