ಶಿವಮೊಗ್ಗ | ಓಲೈಕೆಗೋಸ್ಕರ ಮಕ್ಕಳ ವಿಷಯದಲ್ಲೂ ಕಾಂಗ್ರೆಸ್ ರಾಜಕೀಯ,ಸರ್ಕಾರದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ : ಸಂಸದ BYR ಕಿಡಿ

ಇದು ವ್ಯವಸ್ಥೆಯನ್ನು ಸುಧಾರಿಸುವ ಬದಲಿಗೆ, ಶಾಂತವಾಗಿರುವ ಶೈಕ್ಷಣಿಕ ವಾತಾವರಣವನ್ನು ಕುಲಗೆಡಿಸುತ್ತಿರುವ ಅಪ್ಪಟ ಶಿಕ್ಷಣ ವಿರೋಧಿ ನಿರ್ಧಾರವಾಗಿದೆ. ಇದಲ್ಲದೆ, ಈ ಪ್ರಕರಣ ನ್ಯಾಯಾಲಯದಲ್ಲಿ ಇರುವಾಗಲೇ ಕಾಂಗ್ರೆಸ್ ಸರ್ಕಾರ, ಶಾಲಾ ಮಕ್ಕಳಲ್ಲಿ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವ ಆದೇಶ ಹೊರಡಿಸಿರುವುದು ಸರಿಯಲ್ಲ. ಈಗಾಗಲೇ ಹಲವು ಉಚ್ಚ ನ್ಯಾಯಾಲಯಗಳು ಮಕ್ಕಳ ವೈಯಕ್ತಿಕತೆಗಿಂತಲೂ ಶೈಕ್ಷಣಿಕ ಸಂಸ್ಥೆಯ ಶಿಸ್ತು ಹಾಗೂ ಸಮವಸ್ತ್ರ ನಿಯಮವೇ ಮುಖ್ಯ ಎನ್ನುವ ರೀತಿಯಲ್ಲಿ ಸ್ಪಷ್ಟ ತೀರ್ಪು ನೀಡಿವೆ.