ಶಿವಮೊಗ್ಗ | ಮಹಿಷಿ ಉತ್ತರಾಧಿಮಠದ ಕೋಟ್ಯಾಂತರ ರೂ. ಮೌಲ್ಯದ ಬಂಗಾರದ ಹಲಗಾರತಿ ಕಳ್ಳತನ ಪ್ರಕರಣದ ಆರೋಪಿ ಬಂಧನ

ಶಿವಮೊಗ್ಗದ ಗಾಂಧಿನಗರದ ನಿವಾಸಿ ರಾಘವೇಂದ್ರ ಆಚಾರ್ಯ (25) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಜೂನ್ 17 ರ ರಾತ್ರಿ ಆರೋಪಿಯನ್ನು ಬಂಧಿಸಿ, ಆತನಿಂದ 1.01 ಕೋಟಿ ರೂ. ಮೌಲ್ಯದ 780 ಗ್ರಾಂ ತೂಕದ 16 ಬಂಗಾರದ ಹಲಗಾರತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಇಲಾಖೆಯು ಜೂನ್ 18 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.