ಸಿನಿಮಾ, ಕಿರುತೆರೆ ಸಂಭಾಷಣೆಕಾರ ಮಾಳೂರಿನ‌ ನಂದೀಶ್ ಹೃದಯಾಘಾತದಿಂದ ಮೃತ

ತೀರ್ಥಹಳ್ಳಿ ತಾಲೂಕಿನ ಮಾಳೂರಿನವರಾದ ನಂದೀಶ್​ ‘ಚಿತ್ತಾರ’ ಸಂಸ್ಥೆಯೊಡನೆ ಸೇರಿ ಅನೇಕ ಧಾರಾವಾಹಿಗಳು ಮತ್ತು ಚಿತ್ರಗಳಿಗೆ ಕಥೆ ಬರೆದಿದ್ದರು. ಮಾಳೂರಿನಲ್ಲಿದ್ದುಕೊಂಡೇ ಕಥೆಗಳನ್ನು ಬರೆಯುತ್ತಿದ್ದ ನಂದೀಶ್​ ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ.