ಶಿವಮೊಗ್ಗ | 15 ದಿನದಲ್ಲಿ ಮೆಗ್ಗಾನ್ ಆಸ್ಪತ್ರೆಯ ಹೈಟೆಕ್ ಶವಾಗಾರ ಉದ್ಘಾಟಿಸದಿದ್ದಲ್ಲಿ, ಜೆಡಿಎಸ್ ನಿಂದ ಧರಣಿ ಸತ್ಯಾಗ್ರಹ : ಮಾಜಿ ಶಾಸಕ ಪ್ರಸನ್ನಕುಮಾರ್ ಎಚ್ಚರಿಕೆ..!

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶವ ಪರೀಕ್ಷೆಗೆ ಸುಮಾರು ಎರಡು ಗಂಟೆ ಬೇಕಾಗುತ್ತದೆ. ದುಃಖತಪ್ತ ಮೃತರ ಸಂಬಂಧಿಗಳು ಸ್ನೇಹಿತರಿಗೆ ಸರಿಯಾದ ವಿಶ್ರಾಂತಿಯ ವ್ಯವಸ್ಥೆ ಇಲ್ಲದೆ ಮರದ ಕೆಳಗೆ ನಿಲ್ಲಬೇಕಾಗಿದೆ. ಒಂದು ವೇಳೆ ಮಳೆ ಬಂದರೆ ಮರಗಳ ಆಶ್ರಯ ಪಡೆಯಬೇಕಾಗುತ್ತದೆ. ಮರದ ಕೊಂಬೆಗಳು ಬಿದ್ದರೆ ಅವರ ಶವ ಪರೀಕ್ಷೆಯೂ ಕೂಡ ಅಲ್ಲಿಯೇ ಎದುರಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.